Posts

Showing posts from January, 2018

ರಥಸಪ್ತಮಿ

Image
    ಹಿಂದೂಗಳು ಆಚರಿಸುವ ಹಬ್ಬಗಳಲ್ಲಿ ಪ್ರತಿವರ್ಷವೂ ಚಾಂದ್ರಮಾನರೀತಿಯಾಗಿ ಮಾಘಶುಕ್ಲ ಸಪ್ತಮಿ ದಿನ ಆಚರಿಸುವ 'ರಥಸಪ್ತಮಿ' ಹಬ್ಬವು ಒಂದಾಗಿರುವರು. ಆ ದಿನ ನದಿಯಲ್ಲಿ ಸ್ನಾನಮಾಡುವಾಗ ಏಳು ಎಕ್ಕದ ಎಲೆಗಳನ್ನು ಮೈಮೇಲೆ ಧಿರಿಸಿ ನೀರಿನಲ್ಲಿ ಮುಳುಗಿ ಏಳುತ್ತಾರೆ. ಅನಂತರ ತುಳಸೀಕಟ್ಟೆಯ ಮುಂದೆ ರಂಗವಲ್ಲಿಯಿಂದ 'ರಥ'ವನ್ನು ಬರೆದು ಸೂರ್ಯನನ್ನು ಪೂಜಿಸುತ್ತಾರೆ. ದೇವಾಲಯಗಳಲ್ಲಿ ದೇವರಿಗೆ 'ಸೂರ್ಯಮಂಡಲೋತ್ಸವ'ವನ್ನು ನಡೆಯಿಸುತ್ತಾರೆ. ರಥಸಪ್ತಮಿ ದಿನ ನಡೆಯಬೇಕಾದ ವ್ರತವಿಧಾನವೂ ಕಥೆಯೂ ಪುರಾಣಗಳಲ್ಲಿವೆ. ಪದ್ಮಕಯೋಗವೆನಿಸಿದ ಈ ದಿನವು ಸಾವಿರಸೂರ್ಯಗ್ರಹಣಗಳಿಗೆ ಸಮವಾದ ಪುಣ್ಯ ಕಾಲವೆಂದೂ ವಿಶೇಷವಾಗಿ ಸೂರ್ಯನನ್ನು ಪೂಜಿಸಬೇಕೆಂದೂ ದೀಪಗಳನ್ನು ಬೆಳಗಿ ನದಿಯಲ್ಲಿ ಬಿಡಬೇಕೆಂದೂ ಮಕರಶುಕ್ಲಸಪ್ತಮಿಯೆನಿಸಿದ ಈ ದಿನವು ಸಕಲಪಾಪಗಳನ್ನೂ ಕಳೆಯುವ ಶಕ್ತಿಯುಳ್ಳದ್ದೆಂದೂ ಧರ್ಮಶಾಸ್ತ್ರಗಳಲ್ಲಿ ವಿವರಿಸಿದೆ. ಆದ್ದರಿಂದ ಈ ಹಬ್ಬದ ವಿಚಾರವಾಗಿ ಸ್ವಲ್ಪ ತಿಳಿಯೋಣ.     ವೇದೇತಿಹಾಸಪುರಾಣಗಳಲ್ಲಿ ಸೂರ್ಯನನ್ನು ಸ್ತುತಿಸುವ ಮಂತ್ರಗಳೂ, ಸೂಕ್ತಗಳೂ, ಸ್ತೋತ್ರಪಾಠಗಳೂ ವಿಪುಲವಾಗಿವೆ. ಮಾನವನಿಗೆ ಆರೋಗ್ಯವನ್ನು ಕೊಡುವವನೇ ಸೂರ್ಯನು. ಸೂರ್ಯನು ಎಲ್ಲಾ ಪ್ರಾಣಿವರ್ಗ, ಸಸ್ಯವರ್ಗ, ಮನುಷ್ಯ್ರು, ದೇವತೆಗಳಿಗೂ 'ಮಿತ್ರ'ನೆನಿಸಿದ್ದಾನೆ. ಆತನ ಬೆಳಕು, ಶಾಖಗಳಿಲ್ಲೆ ಜೀವನವೇ ಇಲ್ಲ. ಅವನೇ 'ಅನ್ನದಾತ'ನೆಂದೂ ಶಾಸ್ತ್ರಗಳಲ್