Posts

Showing posts with the label ದೇವಿಮಹಾತ್ಮ್ಯ

ಲಲಿತಾ ತ್ರಿಶತೀ - 14 ಓಂ ಕರ್ಪೂರವೀಟೀಸೌರಭ್ಯಕಲ್ಲೋಲಿತ ಕಕುಪ್ತಟಾಯೈ ನಮಃ

Image

ಲಲಿತಾ ತ್ರಿಶತೀ -12 ಓಂ ಕಂದರ್ಪವಿದ್ಯಾಯೈ ನಮಃ

    ಕಂದರ್ಪನಲ್ಲಿರುವ ಪ್ರತ್ಯಗಾತ್ಮ ಪರಮಾತ್ಮರ ಐಕ್ಯಜ್ಞಾನ ಸ್ವರೂಪಳು ಅಥವಾ ತತ್ತ್ವಜ್ಞಾನವನ್ನು ಕೊಡುವ ಕಾಮದೇವನಿಂದ ಉಪಾಸನೆ ಮಾಡಲ್ಪಟ್ಟ ಮೂಲಮಂತ್ರ ವರ್ಣ ಸಮುದಾಯವು ವಿದ್ಯಾ ಶಬ್ದದಿಂದ ಕರೆಯಲ್ಪಡುವುದು. ಆ ವಿದ್ಯೆಗೆ ದೇವಿಯು ವಾಚ್ಯಾರ್ಥ ಸ್ವರೂಫಳು. ಉಪನಿಷತ್ ಶಬ್ದಕ್ಕೆ ಬ್ರಹ್ಮ ವಿದ್ಯೆಯು ಮುಖ್ಯಾರ್ಥವಾಗಿದ್ದರೂ ಬ್ರಹ್ಮ ವಿದ್ಯಾ ಸಾಧನವನ್ನು ವಿದ್ಯಾ ಎಂದು ಕರೆಯುವುದು ಸಮಂಜಸವಾಗಿರುವುದು ಕಂದರ್ಪಸ್ಯ + ವಿದ್ಯಾ ಎಂದು ವಿಗ್ರಹವು.

ಶ್ರೀ ಲಲಿತಾ ಸಹಸ್ರನಾಮ ಮಹಿಮೆ

    ಶ್ರೀ ಲಲಿತಾಸಹಸ್ರನಾಮಸ್ತೋತ್ರವು ಬ್ರಹ್ಮಾಂಡಪುರಾಣದ ಉತ್ತರಖಂಡದ ಹಯಗ್ರೀವ-ಅಗಸ್ತ್ಯಸಂವಾದದಲ್ಲಿದೆ. ಇದರಲ್ಲಿ ಪೀಠಿಕೆ, ಸಹಸ್ರನಾಮ ಮತ್ತು ಫಲಶ್ರುತಿ ಎಂಬ ಮೂರು ಭಾಗಗಳಿವೆ. ಆ ಪರಬ್ರಹ್ಮಸ್ವರೂಪಿಣಿಯೇ ಉದ್ಯದ್ಭಾನುವಿಗೆ ಸಮನಾದ ಕಾಂತಿಯಿಂದೊಡಗೂಡಿ, ದಾಳಿಂಬೆ ಬಣ್ಣದ ಸೀರೆಯನ್ನುಟ್ಟು, ಸರ್ವಾಭರಣ ಭೂಷಿತೆಯಾಗಿ, ಪಾಶಾಂಕುಶ-ಇಕ್ಷುಕೋದಂಡಬಾಣಗಳಿಂದೊಡಗೂಡಿ ಆನಂದ ಸಾಗರಳಾದ ಶ್ರೀ ಲಲಿತಾತ್ರಿಪುರಸುಂದರಿಯಾಗಿ ಹದಿನಾರು ವರುಷದ ಯುವತಿಯಾಗಿ ಇಂದ್ರಾದಿದೇವತೆಗಳು ಮಾಡಿದ ಮಹಾಯಜ್ಞದ ಚಿದಗ್ನಿಕುಂಡದಿಂದ ಭಂಡಾಸುರನೆಂಬ ದುಷ್ಟದೈತ್ಯನನ್ನು ಸಂಹರಿಸಲು ಲೋಕಾನುಗ್ರಹಕ್ಕಾಗಿ ದೇವತೆಗಳ ಪ್ರಾರ್ಥನೆಯಂತೆ ಆವಿರ್ಭವಿಸಿದಳು.     ಬ್ರಹ್ಮಾದಿಗಳ ಇಚ್ಛೆಯಂತೆ ಲಾವಣ್ಯವತಿಯಾದ ದೇವಿಯು ಕಾಮೇಶ್ವರನ ರೂಪದಲ್ಲಿದ್ದು ಶಿವನನ್ನು ವರಿಸಿ ಶಿವಕಾಮೇಶ್ವರಾಂಕಸ್ಥಾಯಿಯಾದಳು. ಬ್ರಹ್ಮನೇ ಮಾತೆಗೆ ಕಾಮಾಕ್ಷಿಯೆಂದೂ, ಕಾಮೇಶ್ವರಿಯೆಂದೂ ಬಿರುದುಗಳನ್ನು ಸಮರ್ಪಿಸಿದನು. ಅನಂತರ ಪರಾಶಕ್ತಿಯಾದ ಶ್ರೀಮಾತೆಯು ಭಂಡಾಸುರನೇ ಆದಿಯಾಗಿ ಸಕಲದೈತ್ಯರನ್ನೂ ಕೊಮದು ಅವನ ರಾಜಧಾನಿಯಾದ ಶ್ರೋಣಿತಪುರವನ್ನು ನಾಶಮಾಡಿದಳು.     ಅನಂತರ ದೇವಶಿಲ್ಪಿಗಳಾದ ವಿಶ್ವಕರ್ಮ ಮತ್ತು ಮಯರು ಸುಮೇರು ಮಧ್ಯಶೃಂಗದಲ್ಲಿ ಶ್ರೀ ದೇವಿಗಾಗಿ ಶ್ರೀಪುರವೆಂಬ ಪಟ್ಟಣವನ್ನು ನಿರ್ಮಿಸಿ, ಅದರಲ್ಲಿ ಚಿಂತಾಮಣಿ ಎಂಬ ಅರಮನೆಯ ಮಧ್ಯದಲ್ಲಿ ಪಂಚಪ್ರೇತವೆಂಬ ಮ...

ದೇವಿ ಸ್ಮರಣೆ

    ಪುರಾಣಗಳ ಅಭಿವ್ಯಕ್ತಿ ಮೊದಲು ವೇದಗಳಲ್ಲಿಯೇ ಆಗಿದೆ ಛಾಂದೋಗ್ಯೋಪನಿಷತ್ತಿನಲ್ಲಿ ಸನತ್ಕುಮಾರನಾರದ ಸಂವಾದದಲ್ಲಿ "ಋಗ್ವೇದಂ ಭಗವೋಧ್ಯೇಮಿ. ಇತಿಹಾಸಂ ಪುರಾಣಂ ಪಂಚಮಂ ವೇದಾನಾಂ ವೇದಮ್" || (ಛಾಂ 7-1-2)ರಲ್ಲಿ ಅಕಾಲದಲ್ಲಿ ಪ್ರಚಲಿತವಿದ್ದು ಶಾಸ್ತ್ರಗಳು ನಿರ್ದಿಷ್ಟವಾಗಿವೆ. "ಋಚಃ ಸಾಮಾನಿ ಛಂದಾಂಸಿ ಪುರಾಣಂ ಯಜುಷಾಸಹ|" (ಉಚ್ಛಿಷ್ಟನೆಂಬ ಋಷಿಯಿಂದ ನಾಲ್ಕು ವೇದಗಳ ನಂತರ ಪುರಾಣಗಳು ಉತ್ಪನ್ನವಾದವೆಂದು ಉಕ್ತವಾಗಿದೆ. ಆದರೆ ಮೂಲಪುರಾಣಗಳು ಈಗ ಉಪಲಬ್ದವಿಲ್ಲ. ಇವು ಯಾವದೋ ಒಂದು ಶತಮಾನಗಳ ನಿರ್ದಿಷ್ಟ ರಚನೆಗಳೂ ಅಲ್ಲ. ಯಾವಾಗ ವೇದಗಳ ಭಾಷೆಯು ಸಾಧಾರಣ ಜನತೆಗೆ ಅರ್ಥವಾಗದಾಯಿತೋ, ಆಗ ಅದರ ತತ್ತ್ವಗಳನ್ನು ಜನತೆಗೆ ತಿಳಿಸಲು ಪುರಾಣಗಳ ರಚನೆಯಾಯಿತು. ನಮಗೆ ಅರ್ಥವಾಗುವ ಭಾಷೆಯಲ್ಲಿ ರಚಿತವಾಗಿರುವದರಿಂದ ಅವು ಬೇಗ ನಮ್ಮ ಹೃದಯಕ್ಕೆ ಮುಟ್ಟುತ್ತವೆ. ಧಾರ್ಮಿಕದೃಷ್ಟಿಯಿಂದ ಪುರಾಣಗಳು ಅತ್ಯಂತ ಮಹತ್ತ್ವವಾದವುಗಳು ಆದ್ದರಿಂದಲೇ ಮಹಾಭಾರತದಲ್ಲಿ. ಇತಿಹಾಸ ಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್ | ಭಿಭೇತ್ಯಲ್ಪಶ್ರುತಾದ್ವೇದೋ ಮಾಮಯಂ ಪ್ರಹರಿಷ್ಯತಿ || ಎಂದಿರುವದು. ಆದ್ದರಿಂದ ಈ ಗ್ರಂಥಗಳ ಅಧ್ಯಯನ ಅತ್ಯಂತ ಅವಶ್ಯಕವಾಗಿದೆ.     ಪುರಾಣಗಳು ಮಹರ್ಷಿಗಳಿಂದ ಪರಂಪರೆಯಾಗಿ ನಮಗೆ ಬಂದು ಸೇರಿದ ಆಸ್ತಿ ಅವುಗಳಲ್ಲಿ ಭಾಗವತವು ತುಂಬ ಆದರಕ್ಕೆ ಪಾತ್ರವಾದ ಗ್ರಂಥ ಭಾಗವತದ ವಿಭಿನ್ನಸ್ವರೂಪದ ಎರಡು ಗ್ರಂಥಗಳು ದೊರೆಯುತ್ತವೆ. ಅಷ...

ನವರಾತ್ರೆಯ ಮಹತ್ತ್ವ

    ನವರಾತ್ರೆಯಲ್ಲಿ ಜಪ, ಪಾರಾಯಣ, ಪೂಜೆ ಮುಂತಾದವುಗಳ ಅನುಷ್ಠಾನವನ್ನು ಮಾಡದೆ ಇರುವವರು ಆಸ್ತಿಕರಾದ ಸನಾತನಧರ್ಮಿಗಳಲ್ಲಿ ಬಹು ವಿರಳ. ಈ ದಿನಗಳಲ್ಲಿ ನಡೆಯಿಸುವ ಕರ್ಮವು ವೀರ್ಯವತ್ತರವಾಗುವದೆಂಬ ನಂಬಿಕೆಯು ನಮ್ಮಲ್ಲಿ ಅನೇಕರಿಗೆ ಇರುತ್ತದೆ. ದಿನಶುದ್ಧಿಯ ವಿಮರ್ಶೆಯನ್ನು ಕೂಡ ಮಾಡದೆ ವಿಜಯದಶಮಿಯ ದಿನ ಕೆಲವು ಕರ್ಮಗಳನ್ನು ಮಾಡಬಹುದೆಂಬ ಶ್ರದ್ಧೆಯು ಹಲವರಲ್ಲಿ ಬೇರೂರಿಕೊಂಡು ಬಿಟ್ಟಿರುತ್ತದೆ. ನವರಾತ್ರೆಯ ರಾಮನಿಗೆ ಪ್ರಿಯ ದರ್ಶನವನ್ನು ತಂದಿತು. ಅರ್ಜುನನಿಗೆ ಪೂರ್ಣವಿಜಯಕ್ಕೆ ಸೂಚಕವಾದ ಮೊಟ್ಟಮೊದಲನೆಯ ಗೆಲುವನ್ನು ಕೊಟ್ಟಿತು - ಎಂಬರ್ಥದ ಶ್ಲೋಕವನ್ನು ಜನರು ಈಗಲೂ ಹೇಳಿಕೊಳ್ಳುವರು. ರಾಮಾಯಣಭಾರತಗಳ ಧರ್ಮಯುದ್ಧದಿಂದ ಆದ ಜಗನ್ಮಂಗಲವನ್ನು ನೆನಪಿಗೆ ತಂದುಕೊಳ್ಳುವದಕ್ಕೆಂದು ಈಗಲೂ ಆಯುಧಪೂಜೆ, ಬನ್ನಿಯನ್ನು ಮುಡಿಯುವದು ಮುಂತಾದ ಆಚಾರಗಳು ನಡೆವಳಿಕೆಯಲ್ಲಿರುತ್ತವೆ. ಶರನ್ನವರಾತ್ರಿಯು ರಾಜರಿಗೆ, ಅದರಲ್ಲಿಯೂ ನಮ್ಮ ಕರ್ನಾಟಕದ ರಾಜರುಗಳಿಗೆ ಒಂದು ಗೆಲುವಿನ ಹಬ್ಬವಾಗಿತ್ತು.     ಧಾರ್ಮಿಕ ದೃಷ್ಟಿಯಿಂದಲೂ ನವರಾತ್ರೆಗೆ ಹೆಚ್ಚಿನ ಮಹತ್ತ್ವವಿರುತ್ತದೆ. ತಂತ್ರಶಾಸ್ತ್ರದಲ್ಲಿ ನಂಬಿಕೆಯಿರುವವರು ಇದನ್ನು ದೇವೀನವರಾತ್ರೆಯೆಂದು ಕರೆಯುತ್ತಾರೆ. ಪರಮೇಶ್ವರನ ಶಕ್ತಿಯಾದ ದೇವಿಯನ್ನು ಆವಾಹನೆಮಾಡಿ ಪೂಜಿಸುವ ವಿಧಾನವು ಈ ನವರಾತ್ರೆಯಲ್ಲಿ ವಿಶೇಷವಾದ ಆಚರಣೆಯಲ್ಲಿರುತ್ತದೆ. ಪರಮೇಶ್ವರನು ತನ್ನ ಸ್ವರೂಪದಲ್ಲಿರುವದಲ್...

ದೇವಿಮಹಾತ್ಮ್ಯೆ ತತ್ವ

    ತಮೋಗುಣಾತ್ಮಕ ವಿಷ್ಣುವಿನ(ಸಮಾಧಿ)ಯ ರೂಪವಾದ ತಾರ್ಕಿಕ ಗುರುಗಳ ಉಪದೇಶ ಶ್ರವಣದಿಂದ ಪ್ರಮಾಣಗತ, ಪ್ರಮೇಯಗತ ಸಂಶಯಗಳೆಂಬ ಮಧುಕೈಟಭರು ಕಿವಿಯಿಂದ ಹುಟ್ಟಿದರು. ಅವರು ಹುಟ್ಟಿದೊಡನೆಯೇ ಚತುರ್ಮುಖಬ್ರಹ್ಮನೆಂಬ ಸಾಧನ ಚತುಷ್ಟಯ ಸಂಪನ್ನನಾದ (ವೋಕ್ಷಸಾಧಕನಾದ) ಅಧಿಕಾರಿಯನ್ನು ಪೀಡಿಸಿದರು. ಆತ ಬ್ರಹ್ಮನೆಂಬ ಅಧಿಕಾರಿಯು ಗುರುರ್ವಿಷ್ಣುಃ ಎಂಬಂತೆ ತಮೋಗುಣದಿಂದೆಚ್ಚೆತ್ತ ಶುದ್ಧಸತ್ವಗುಣವೆಂಬ ಸದ್ಗುರುನಾಥನಿಗೆ ಶರಣುಹೋಗಿ ಉಪಕ್ರಮೋಪಸಂಹಾರ, ಅಭ್ಯಾಸ, ಅಪೂರ್ವತ, ಫಲ, ಅರ್ಥವಾದ, ಉಪಪತ್ತಿಗಳೆಂಬ ಷಡ್ಲಿಂಗಗಳ ಸಹಾಯದಿಂದ ಶ್ರುತಿ (ಉಪನಿಷತ್ತು)ಗಳನ್ನು ಶ್ರವಣಮಾಡಲು, ಸದ್ಗುರುರೂಪ ವಿಷ್ಣುವಿನ ಉಪದೇಶದಂತೆ ಭೇದಬಾಧಕ ಅಭೇದಕಸಾಧಕ ಮುಕ್ತ, ಮನನವೆಂಬ ಸುದರ್ಶನಚಕ್ರದಿಂದ ಆ ಪ್ರಮಾಣ, ಪ್ರಮೇಯ, ಸಂಶಯಗಳೆಂಬ ಮಧುಕೈಟಭರು ಹತರಾದರು ಆಗ ಬ್ರಹ್ಮನೆಂಬ ಅಧಿಕಾರಿಯೂ ಸಂತುಷ್ಟನಾದನು.     ಮಹಿಷಾಸುರನು ರಾಜ್ಯಲೋಭದಿಂದ ಮೃತನಾದನು. ಅಹಂಸ್ಪೂರ್ತಿಯೇ ಮಹಿಷಾಸುರನು. ಈ ವೃತ್ತಿಯ ನೇತ್ರಕ್ಕೆ ಸಂಬಂಧಪಡುವದೇ ಚಿಕ್ಷುರಾಖ್ಯನು. ಜಿಹ್ವೇಂದ್ರಿಯದ್ವಾರ ರಸವನಾಸ್ವಾದಿಸುವದೇ ರಸಿಲೋಮ. ಸಂಕಲ್ಪವಿಕಲ್ಪಾತ್ಮಕ ಮನಸ್ಸೇ ಬಿಡಾಲನು. ಕ್ರೋಧವೇ ರುದಾಗ್ರನು. ಈ ವೃತ್ತಿಗಳು ದೈವೀಸಂಪತ್ತುಳ್ಳ ಮುಮುಕ್ಷುಗಳೆಂಬ ದೇವತೆಗಳನ್ನು ಪೀಡಿಸಲು, ಆಗ ಜ್ಞಾನಶಕ್ತಿಸ್ವರೂಪನಾದ ಗುರುವೆಂಬ ದೇವಿಗೆ ಶರಣು ಹೋಗಲು, ಆ ದೇವಿಯು ಆ ವೃತ್ತಿಗಳೆಂಬ ರಾಕ್ಷಸರನ್ನು...

ದೇವಿಮಹಾತ್ಮ್ಯ - ಮೂರನೆಯ ಅಧ್ಯಾಯ

ಧ್ಯಾನಮ್ - ಉದ್ಯದ್ಬಾನುಸಹಸ್ರಕಾಂತಿಮರುಣಕ್ಷೌಮಾಂ ಶಿರೋಮಾಲಿಕಾಂ ರಕ್ತಾಲಿಪ್ತ ಪಯೋಧರಾಂ ಜಪವಟೀಂ ವಿದ್ಯಾಮಭೀತಿಂ ವರಮ್ | ಹಸ್ತಾಬ್ಜೈರ್ದಧತೀಂ ತ್ರಿನೇತ್ರ ವಿಲಸದ್ವಕ್ತ್ರಾರವಿಂದಶ್ರಿಯಂ ದೇವೀಂ ಬದ್ಧಹಿಮಾಂಶುರತ್ನಮಕುಟಾಂ ವಂದೇರವಿಂದಸ್ಥಿತಾಮ್ || 1. ಉದಯಿಸುತ್ತಿರುವ ಸಾವರಿ ಸೂರ್ಯರ ಕಾಂತಿಗೆ ಸಮಾನವಾದ ಕೆಂಪುರೇಷ್ಮೆಯ ವಸ್ತ್ರವನ್ನುಟ್ಟಿರುವ, (ರಾಕ್ಷಸರ) ಶಿರಸ್ಸುಗಳನ್ನೇ ಮಾಲೆಯಾಗಿ ಧರಿಸಿದ್ದರಿಂದ ಕೆಂಪಾದ ಸ್ತನಗಳುಳ್ಳವಳಾದ, ಜಪಮಾಲೆ, ವಿದ್ಯಾಮುದ್ರೆ, ಅಭಯಮುದ್ರೆ, ವರದಾನಮುದ್ರೆಗಳನ್ನು ಕಮಲದಂತಿರುವ ಕೈಗಳಿಂದ ಧರಿಸಿರುವ, ಮೂರುಕಣ್ಣುಗಳಿಂದ ಅಲಂಕೃತವಾದ ಮುಖಾರವಿಂದದ ಕಾಂತಿಯುಳ್ಳ, ಚಂದ್ರನೊಡಗೂಡಿದ ರತ್ನಕಿರೀಟಧಾರಣೆಯಾದ ಕಮಲದಲ್ಲಿ ಕುಳಿತಿರುವಳಾದ ದೇವಿಯನ್ನು ನಮಸ್ಕರಿಸುತ್ತೇನೆ. ಓಂ ಋಷಿರುವಾಚ - ನಿಹನ್ಯಮಾನಂ ತತ್ಸೈನ್ಯಮವಲೋಕ್ಯ ಮಹಾಸುರಃ | ಸೇನಾನೀಶ್ಚಿಕ್ಷುರಃ ಕೋಪಾದ್ ಯಯೌ ಯೋದ್ಧುಮಥಾಂಬಿಕಾಮ್ ||1|| ಸ ದೇವೀಂ ಶರವರ್ಣೇಣ ವವರ್ಷ ಸಮರೇಸುರಃ ಯಥಾ ಮೇರುಗಿರೇಃ ಶೃಂಗಂ ತೋಯವರ್ಷೇಣ ತೋಯದಃ ||2||     ಋಷಿಯಿಂತೆಂದನು : ಮಹಾಸುರನೂ ಸೇನಾಪತಿಯೂ ಆದ ಚಿಕ್ಷುರನು ಕೊಲ್ಲಲ್ಪಡುತ್ತಿರುವ ಆ ಸೈನ್ಯವನ್ನು ನೋಡಿ ಕೋಪದಿಂದ ದೇವಿಯೊಡನೆ ಯುದ್ಧಮಾಡಲು ಹೊರಟನು ಆ ಯುದ್ಧದಲ್ಲಿ ಬಾಣಗಳ ಮಳೆಯಿಂದ ಅವನು ಹೇಗೆ ದೊಡ್ಡ ಮೇಘವು ಧಾರಾಕಾರವಾದ ಮಳೆಯಿಂದ ಮೇರುಗಿರಿಯನ್ನು ತೋಯಿಸುವುದೋ ಹಾಗೆ-ಮಳೆಗರೆದನು. ತಸ್ಯ ಚ್ಛಿತ್ವಾ ತತೋ ...