Posts

Showing posts from February, 2018

ಜೀವನ್ಮುಕ್ತಿಯೂ ವಿದೇಹಮುಕ್ತಿಯೂ

    ಮುಕ್ತಿ ಎಂದರೇನು? ಎಂಬ ವಿಷಯದಲ್ಲಿಯೂ ವಾದವಿವಾದಗಳಿಲ್ಲದೆ ಇಲ್ಲ, ಜೀವನು ಸಂಸಾರದಲ್ಲಿ ಧರ್ಮಾಧರ್ಮಾಗಳಿಂದ ಶರೀರವನ್ನು ಒಂದೊಂದಾಗಿ ಧರಿಸುತ್ತಾ ಸುಖದುಃಖಗಳನ್ನು ಅನುಭವಿಸುತ್ತಿರುವನು. ಈ ಸುಖ ದುಃಖಗಳಿಂದಲೂ ಇವಕ್ಕೆ ಕಾರಣವಾಗಿರುವ ರಾಗದ್ವೇಷಾದಿಗಳಿಂದಲೂ ಬಿಡುಗಡೆಯನ್ನು ಹೊಂದುವದೇ ಮುಕ್ತಿ ಎಂದು ಸಾಮಾನ್ಯವಾಗಿ ಎಲ್ಲಾವಾದಿಗಳೂ ಒಪ್ಪುತ್ತಾರೆ. ಈ ಮುಕ್ತಿಯು ನಿತ್ಯವಾಗಿರುತ್ತದೆ ಎಂಬುದೂ ಎಲ್ಲಾ ವಾದಿಗಳಿಗೂ ಸಮ್ಮತವಾಗಿರುತ್ತದೆ ಎಂದಿಟ್ಟುಕೊಳ್ಳಬಹುದು.     ಶ್ರೀ ಶಂಕರಾಚಾರ್ಯರವರಿಗೆ ಸಮ್ಮತವಾದ ಅದ್ವೈತಸಿದ್ದಾಂತದಲ್ಲಿ ಮಾತ್ರ ಒಂದು ವಿಶೇಷರೀತಿಯ ಅಭ್ಯುಪಗಮವಿದೆ. ಬಂಧವು ಪರಮಾರ್ಥವಾಗಿದ್ದರೆ ಅದು ಎಂದಿಗೂ ಹೋಗಲಾರದು; ಏಕೆಂದರೆ ನಿತ್ಯವಾಗಿರುವ ಬಂಧವು ಜೀವನ ಸ್ವಭಾವವಾಗಿದ್ದರೆ ಸೂರ್ಯನಿಗೆ ಸ್ವಭಾವವಾಗಿರುವ ಬಿಸಿ ಬೆಳಕುಗಳು ಹೇಗೆ ತೊಲಗಲಾರವೋ ಹಾಗೆ ಬಂಧವೊ ತೊಲಗಲಾರದೆಂದೇ ಒಪ್ಪಬೇಕಾಗುತ್ತದೆ. ಇದೂ ಅಲ್ಲದೆ ನಿತ್ಯವಾದ ವೋಕ್ಷವು ಸಾಧನದಿಂದ ಉಂಟಾಗುತ್ತದೆ ಎಂದು ಕಲ್ಪಿಸುವದೂ ದೃಷ್ಟವಿರುದ್ಧವಾಗಿರುತ್ತದೆ. ಯಾವದು ಕೃತಕವೋ, ಯಾವದು ಸಾಧನದಿಂದ ಹೊಸದಾಗಿ ಉಂಟಾಗತಕ್ಕದ್ದೋ, ಅದು ಆದಿಯುಳ್ಳದ್ಧಾದ್ದರಿಂದ ಕೊನೆಯುಳ್ಳದ್ದೂ ಆಗಿರಬೇಕು ಎಂಬುದು ಸ್ಪಷ್ಟ. ಆದ್ದರಿಂದ ವೋಕ್ಷವು ಹೊಸದಾಗಿ ಉಂಟಾಗತಕ್ಕದ್ದಲ್ಲ ಎಂಬುದು ಈ ಸಿದ್ದಾಂತದ ಮುಖ್ಯೋಪದೇಶವಾಗಿರುತ್ತದೆ.     ಹಾಗಾದರೆ ಬಂಧಮೋಕ್ಷಗಳ ವ್ಯವಹಾರವನ್ನು ಹೇಗೆ ಹೊಂದಿಸಬೇಕು? ಶಾಸ್ತ್ರದ ಬ

ಯಾವ ಹೆಸರಿನಿಂದ ಕರೆಯಲಿ ?

Image
    ಪರಮೇಶ್ವರನಿಗೆ ಯಾವ ಹೆಸರು ಸಲ್ಲುವದು? ಆತನನ್ನು ಯಾವ ಹೆಸರಿನಿಂದ ಕರೆಯುವದು ಸರಿ? ಶಿವನೆಂದು ಶೈವರು, ವಿಷ್ಣುವೆಂದು ವೈಷ್ಣವರು, ಶಕ್ತಿಯೆಂದು ಶಾಕ್ತೇಯರು, ಸೂರ್ಯನೆಂದು ಸೌರರು, ಗಣಪತಿಯೆಂದು ಗಾಣಾಪತ್ಯರು, ಅರ್ಹಂತನೆಂದು ಜೈನರು, ಬುದ್ಧನೆಂದು ಬೌದ್ಧರು, ಅಹುರಮಜ್ದನೆಂದು ಪಾರ್ಸಿಯರು, ಅಲ್ಲಾಹನೆಂದು ಮುಸಲ್ಮಾನರು, ಯಹೋವನೆಂದು ಯಹೋದಿಯರು, ತಂದೆ ಅಥವಾ ಕರ್ತ ಎಂದು ಕ್ರೈಸ್ತರು - ಹೀಗೆ ಬಗೆಬಗೆಯಾಗಿ ಕರೆದಿರುತ್ತಾರೆ ಇವುಗಳಲ್ಲಿ ಯಾವದನ್ನು ಇಟ್ಟುಕೊಳ್ಳುವದು ಸರಿ ?     ಈ ಪ್ರಶ್ನೆಗೆ ಉತ್ತರವನ್ನು ಹೇಳುವದರಲ್ಲಿ ಕೆಲವರು ತಮ್ಮ ತಮ್ಮ ಧರ್ಮವನ್ನು ಎತ್ತಿಹಿಡಿದು ನಾವು ಇಟ್ಟುಕೊಂಡಿರುವ ಹೆಸರೇ ಸರಿ, ಮಿಕ್ಕವರದು ಸರಿಯಲ್ಲ ಅಥವಾ ನಮ್ಮ ಹೆಸರಿನಷ್ಟು ಉತ್ತಮವಲ್ಲ ಎಂಬ ಅಭಿಪ್ರಾಯವನ್ನು ಹೊರಡಿಸಿರುತ್ತಾರೆ. ಆದರೆ ಪ್ರಪಂಚದಲ್ಲಿರುವ ಧಾರ್ಮಿಕವಾಙ್ಮಯದಲ್ಲೆಲ್ಲ ಅತ್ಯಂತ ಪುರಾತನವಾದ ಋಗ್ವೇದದಲ್ಲಿ ಒಂದು ಋಷಿವಾಕ್ಯವು ಕಂಡುಬರುತ್ತದೆ. "ಏಕಂ ಸದ್ವಿಪ್ರಾ ಬಹುಧಾ ವದನ್ತಿ " ಇರುವದು ಒಂದು¯ ಅರಿತವರು ಅದನ್ನು ಹಲವು ಬಗೆಯಾಗಿ ಕರೆಯುತ್ತಿರುವರು. ಇಂದ್ರ, ಮಿತ್ರ, ವರುಣ, ಅಗ್ನಿ, ಸುಪರ್ಣ, ಯಮ, ಮಾತರಿಶ್ವ ಎಲ್ಲಾ ಆತನ ಹೆಸರುಗಳೇ (ಋ.ಮಂ 1-23-164). ಈ ಋಷಿವಾಕ್ಯದ ಅಭಿಪ್ರಾಯವನ್ನು ಸ್ವಲ್ಪ ಒಳಹೊಕ್ಕು ನೋಡುವದಕ್ಕೆ ಪ್ರಯತ್ನಿಸೋಣ.     ಇರವದೆಲ್ಲ ಒಂದೇ, ನಮ್ಮ ಇಡಿಯ ಜಗತ್ತಿಗೆ ಕಾರಣವಾಗಿ, ಇದರ ತಿರುಳಾಗಿ, ಇದಕ್ಕೆ ಆಸರ

ಮಹಾಮಸ್ತಕಾಭಿಷೇಕ

Image
    ಜಗತ್ತಿನಲ್ಲಿ ಪ್ರತಿಮೆಗಳು ಪ್ರತೀಕಗಳು ಹಲವಾರು ನ್ಯೂಯಾರ್ಕಿನ ಸ್ವಾತಂತ್ರ್ಯ ದೇವಿ, ಜಪಾನಿನ ಬುದ್ಧ, ಇವುಗಳ ಮಧ್ಯೆ ಶ್ರವಣ ಬೆಳಗೊಳದ ಬಾಹುಬಲಿ ವಿಗ್ರಹವೂ ಇದೆ ಎಂದರೆ ಇಲ್ಲಿನ ಪ್ರಾಚೀನತೆ ಪಾವಿತ್ರ್ಯಗಳಿಂದಾಗಿ ಇದಕ್ಕೆ ಪ್ರಾಮುಖ್ಯ ಪ್ರಾಧಾನ್ಯ ಹೆಚ್ಚು.     ಬಾಹುಬಲಿ ವಿಗ್ರಹಗಳೇ ಹಲವಾರು, ಕಾರ್ಕಳ, ವೇಣೂರು, ಮೂಡಬಿದಿರೆ, ಧರ್ಮಸ್ಥಳ - ಮೊದಲಾದವೆಲ್ಲ ಕಂಡುಬರುವ ವಿಗ್ರಹಗಳೂ ಐತಿಹಾಸಿಕವೇ ಆದ್ರೂ ಶ್ರವಣಬೆಳಗೊಳದ ಬಾಹುಬಲಿ ವಿಗ್ರಹದ ಹಿನ್ನೆಲೆಯೇ ಬೇರೆ, ಅದರ ಎತ್ತರವೇ ಬೇರೆ. ಔನ್ನತ್ಯಮುಂ ನುತಸೌಂದರ್ಯಮುಂ, ಊರ್ಜಿತ ಅತಿಶಯಮುಂ ತನ್ನಲ್ಲಿ ನಿಂದಿರ್ದುದೇಂ ಕ್ಷಿತಿ ಸಂಪೂಜ್ಯವೋ ಗೊಮ್ಮಟೇಶ್ವರ ಜಿನ ಶ್ರೀ ರೂಪಂ - ಬೊಪ್ಪಣ್ಣ ಪಂಡಿತನಿಂದ ಈ ರೀತಿಯಾಗಿ ಕೀರ್ತಿಸಲ್ಪಟ್ಟ ಮೂರ್ತಿಯನ್ನು ಗಂಗ ರಾಚಮಲ್ಲನ ಸೇನಾಧಿಪತಿ ಚಾವುಂಡರಾಯ ಕ್ರಿ.ಶ. 981ನೇ ವರ್ಷದಲ್ಲಿ ಪ್ರತಿಷ್ಠಾಪಿಸಿದ್ದಾಗಿ ಜಗತ್ಪ್ರಸಿದ್ಧವಾಗಿದೆ. ಇಂದ್ರಗಿರಿಯ ಬೆಟ್ಟದ ತುದಿಯಲ್ಲಿ ನಲವತ್ತು ಕಿಲೋಮೀಟರಿಗೂ ಹೆಚ್ಚು ದೂರಕ್ಕೂ ಬರಿಕಣ್ಣಿಗೆ ಕಾಣುವ ವಿಗ್ರಹ, ತನ್ನ ಸೌಂದರ್ಯದಿಂದ, ಸಮತೂಕದ ಅವಯವ ವಿವರದಿಂದ, ತ್ಯಾಗ ವೈರಾಗ್ಯಗಳ ವಿಪುಲ ಪರಿಪುಷ್ಟಿಯಿಂದ ಮನಸ್ಸಿನಲ್ಲೂ ಪಡಿಮೂಡುತ್ತವೆ. (ಬಾಹುಬಲಿ ಮನ್ಮಥನೇ ಎಂಬುದು ಬೇರೆಯೇ ವಿಷಯ)     ಬಾಹುಬಲಿ ಆದಿ ತೀರ್ಥಂಕರ ವೃಷಭದೇವನ ದ್ವಿತೀಐ ಪುತ್ರ. ಭರತ ಚಕ್ರಿಯ ತಮ್ಮ ಚಕ್ರರತ್ನ ಹುಟ್ಟಿದ ಭಂಡಾರವನ್ನು ಹೊಂದಿದ ಭರ

ರುದ್ರಾಕ್ಷಿ

Image
ರುದ್ರಾಕ್ಷಮೂಲಮ್ ತತ್ ಬ್ರಹ್ಮಾ ತನ್ನಾಲಮ್ ವಿಷ್ಣುಃ ಏವ ಚ | ತನ್ಮುಖಮ್ ರುದ್ರಃ ಇತಿ ಆಹುಃ ತದ್ಬಿಂದುಃ ಸರ್ವದೇವತಾಃ || ರುದ್ರಾಕ್ಷಿಯ ಬುಡದಲ್ಲಿ ಬ್ರಹ್ಮನು, ರಂಧ್ರದಲ್ಲಿ ವಿಷ್ಣುವು, ಮುಖಗಳಲ್ಲಿ ರುದ್ರನೂ ಇರುತ್ತಾರೆ. ಮುಳ್ಳಿನ ತುದಿಯಲ್ಲಿ ಎಲ್ಲ ದೇವತೆಗಳು ಇರುತ್ತಾರೆ. ಗ್ರಹಣೇ ವಿಷುವೇ ಚ ಏವಮ್ ಅಯನೇ ಸಂಕ್ರಮೇ ಅಪಿ ಚ | ದರ್ಶೇಷು ಪೂರ್ಣಮಾಸೇ ಚ ಪೂರ್ಣೇಷು ದಿವಸೇಷು ಚ | ರುದ್ರಾಕ್ಷಧಾರಣಾತ್ ಸದ್ಯಃ ಸರ್ವಪಾಪೈಃ ಪ್ರಮುಚ್ಯತೇ || ಅಮಾವಸೆ, ಹುಣ್ಣಿಮೆ, ಉತ್ತರಾಯಣ ಮತ್ತು ದಕ್ಷಿಣಾಯನಗಳ ಪ್ರಾರಂಭದ ದಿನ ಸಂಕ್ರಮಣ,ವಿಷುವ ಸಂಕ್ರಮಣ, ಗ್ರಹಣದ ದಿನಗಳಲ್ಲಿ ರುದ್ರಾಕ್ಷಿಯನ್ನು ಧರಿಸುವುದರಿಂದ ಎಲ್ಲ ಪಾಪಗಳಿಂದ ಮುಕ್ತನಾಗುತ್ತಾನೆ. ಚತುರ್ದಶಮುಖಮ್ ಚ ಅಕ್ಷಮ್ ರುದ್ರನೇತ್ರಸಮುದ್ಭವಮ್ | ಸರ್ವವ್ಯಾಧಿಹರಮ್ ಚ ಏವ ಸರ್ವದಾ ಆರೋಗ್ಯಮ್ ಆಪ್ನುಯಾತ್ || ಹದಿನಾಲ್ಕು ಮುಖದ ರುದ್ರಾಕ್ಷಿಯು ರುದ್ರನ ನೇತ್ರದಿಂದಲೇ ಉಂಟಾಗುತ್ತದೆ. ಇದನ್ನು ಧರಿಸುವುದರಿಂದ ಎಲ್ಲ ರೋಗಗಳು ನಾಶಾವಾಗಿ ಆರೋಗ್ಯವು ಸಿದ್ಧಿಸುತ್ತದೆ. ತ್ರಯೋದಶಮ್ ತು ಮುಖಮ್ ತು ಅಕ್ಷಮ್ ಕಾಮದಮ್ ಸಿದ್ಧಿದಮ್ ಶುಭಮ್ | ತಸ್ಯಾಃ ಧಾರಣಮಾತ್ರೇಣ ಕಾಮದೇವಃ ಪ್ರಸೀದತಿ || ಹದಿಮೂರು ಮುಖದ ರುದ್ರಾಕ್ಷಿಯು ಮನಸ್ಸಿನ ಕಾಮನೆಗಳನ್ನು ಮತ್ತು ಸಿದ್ಧಿಗಳನ್ನು ಉಂಟುಮಾಡುತ್ತದೆ. ಇದನ್ನು ಧರಿಸುವವರು ಕಾಮದೇವನ ಅನುಗ್ರಹವನ್ನು ಹೊಂದುತ್ತಾರೆ. ರುದ್ರಾಕ್ಷಮ್ ದ್ವಾದಶಮುಖಮ್ ಮಹಾವಿಷ್ಣುಸ್ವರೂಪಕಮ್