Posts

Showing posts from 2018

ನರಸಿಂಹ ದೇವಾ...

Image
ಶ್ರೀ ನರಸಿಂಹದೇವ ಶರಣರಕ್ಷಕ ದಾನವಾರಿ ಸುಭಕ್ತಾಧೀನ ಮೂರುತಿಯನೆ ಹರಿ ತನ್ನ ಗುರುವೆಂದು ಸ್ಮರಿಸುತಿರಲು ಬಾಲ ನಿರವಕಾಣದೆ ದುಷ್ಟ ಹಿರಣ್ಯಕಾಸುರನನು ಪರಿಯ ಭಂಜಿಸುತಿರೆ ಮೊರೆದು ಕೋಪದಳೆದ್ದು ತರಳಗೊಲಿದೆ ಬಹು ಕರುಣಾನಿಧಿಯೆ ಛಿಟಿ ಛಿಟಿಲ್ ಭುಗಿ ಭುಗಿಲ್ ಆರ್ಭಟಿಸಿ ಗರ್ಜಿಸಿ ಕಂಭ ಕಿಡಿಯು ಉಗ್ರದಿ ನಿಸ್ಫುಟದಿಯುಬ್ಬಿಸಿದಡೆ ಕಟಿಕಟಿಮಸದಗ್ನಿ ಕಿಟ ಅಗಿವುತ  ನಿಂದ ಕಠಿಣ ಮೂರುತಿಯೇ ಕೊಬ್ಬಿದ ಹಿರಣ್ಯಕನುಬ್ಬಮುರಿವೆನೆಂದು ಹೆಬ್ಬಾಗಿಲೊಳು ಸಂಜೆ ಮಬ್ಬಿಲಿ ದನುಜನ ಗರ್ಭವ ನಖದಿಂದ ಇಬ್ಬಾಗವನ್ನು ಮಾಡಿ ಹಬ್ಬಿದ ಕರುಳನು ಹರುಷದಿ ಧರಿಸಿದೆ ಬೀತನಾಗಿ ತನ್ನ ತಾತನ ತೊಡೆದಾ ಘಾತಕ ಹರಿಯು ಮಾತನು ಮನ್ನಿಸಿ ಅತಿ ಶಾಂತನಾಗಿ ಪ್ರೀತಿಲಿ ಶಿಷ್ಯನ ಸಲಹಿದ ಅನಾಥ ರಕ್ಷಕನೆ ಖಳನ ಮರ್ದಿಸಿ ಬಹು ಇಳೆಯಿಂದ ಅಜನಿಗೆ ಬಲು ಹರುಷನಿತ್ತ ಅಕ್ಕಿಹೆಬ್ಬಾಳು ನೆಲವಾಸ ಲಕ್ಷ್ಮೀನರಸಿಂಹ ದೇವಾ...

ನೃಸಿಂಹ ದೇವ ನಿನ್ನ ಮರೆತಿದ್ದಕ್ಕೆ

Image
ನೃಸಿಂಹ ದೇವ ನಿನ್ನ ಮರೆತಿದ್ದಕ್ಕೆ, ನಾನು ಸರಿಯಾದ ಶಿಕ್ಷೆಗೆ ಗುರಿಯಾದೆ ದೊರೆಯೇ  ||ಪ|| ಕಾಮವೆಂಬ ಮಾಯೆಯು ನನಗೆ, ನಿನ್ನ ಕಾಣುವ ಕಣ್ಣನ್ನು ಕೆಡಿಸಿತು ಪ್ರಭುವೇ | ಮಣ್ಣೆಂಬ ಮಾಯೆಯು ನನಗೆ, ನಿನ್ನ ತಿಳಿಯುವ ತಿಳಿವನ್ನು ಅಳಿಸಿತು ತಂದೇ | ಸಿರಿಯೆಂಬ ಮಾಯೆಯು ನನಗೆ, ನಿನ್ನ ಅರಿಯುವ ಅರಿವಿಗೆ ಉರಿಯಾಯ್ತು ಹರಿಯೇ | ಮೂಜಗದೊಡೆಯ ನೃಸಿಂಹನೇ ನಿನ್ನ ಸರಿಸರಿ ಬೇಡುವೆ ಕಡೆ ಹಾಯಿಸೋ ದೊರೆಯೇ ||

ಮಾನವ ಜನಾಂಗದ ಮೊಟ್ಟಮೊದಲ ತಾಯಿ "ಶತರೂಪ"

Image
    ಶತರೂಪಾಳು ಮಾನವ ಜನಾಂಗದ ಮೊಟ್ಟಮೊದಲ ತಾಯಿಯಾಗಿ, ಆದಿಮಾತೆಯಾಗಿದ್ದಾಳೆ. ಈಕೆಯು ಸ್ವಯಂಭು ಮನುವಿನ ಪತ್ನಿ. ಮನು ಮತ್ತು ಶತರೂಪಾರವರುಗಳಿಂದಲೆ ಮಾನವ ಸೃಷ್ಟಿಯ ಆರಂಭವಾಯಿತು. 'ತತೋ ಮನುಷ್ಯಾ ಅಜಾಯಂ ತಾಃ' ಎಂದ ಶ್ರುತಿಯು ಹೇಳುತ್ತದೆ.     ಮನು ಮತ್ತು ಶತರೂಪಾ ಇವರಿಬ್ಬರು ಬ್ರಹ್ಮನ ಶರೀರದಿಂದ ಹುಟ್ಟಿದವರು. ಅವನ ಎಡಭಾಗದಿಂದ ಮನು ಮತ್ತು ಬಲ ಭಾಗದಿಂದ ಶತರೂಪಾರವರುಗಳು ಪ್ರಾದುರ್ಭಾವಗೊಂಡರು. ಕೇವಲ ಮಾನವನೇ ಅಲ್ಲ, ನೂರಾರು ಸಾವಿರಾರು ಪ್ರಾಣಿಗಳೂ ಕೂಡ ಇವರಿಬ್ಬರುಗಳ ಸಂತಾನವಾಗಿದೆ - ಎಂದು ಬೃಹದಾರಣ್ಯಕ ಉಪನಿಷತ್ತು ಹೇಳುತ್ತದೆ.     ಶತರೂಪಾಳು ಬಹಳ ಮುಗ್ಧ ಸ್ವಭಾವದ, ಲಜ್ಜೆಯನ್ನು ಹೊಂದಿದ್ದ ಹೆಣ್ಣಾಗಿದ್ದಳು, ಮುಂದೆ ಜಗತ್ತಿನಲ್ಲಿ ಹೆಣ್ಣು ಎಂಬುವಳು ಹೀಗೆಯೇ ಇರಬೇಕು ಎನ್ನುವುದನ್ನು ತೋರಿಸಿಕೊಟ್ಟಳು.     ಶತರೂಪಾಳು ತನ್ನ ಇಷ್ಟದಂತೆ ಯಾವ ರೂಪವನ್ನು ಬೇಕಾದರೂ ಪಡೆಯುವವಳಾಗಿದ್ದಳು. ಮನುವನ್ನು ಸಂಧಿಸಬೇಕಾದ ಪ್ರಥಮ ಸಮಾಗಮದ ಸಮಯದಲ್ಲಿ ಆಕೆಯು ನೂರಾರು ರೂಪಗಳನ್ನು ಧರಿಸಿದಳು. ಈ ರೀತಿಯಲ್ಲಿ ಆಕೆ ಮನುವಿನ ದೃಷ್ಟಿಯಿಂದ ಬಚ್ಚಿಟ್ಟಕೊಳ್ಳಲು ಪ್ರಯತ್ನಿಸಿದಳು ಆದರೆ ಮನುವು ಅವಳನ್ನು ಎಲ್ಲ ರೂಪಗಳಲ್ಲಿಯೂ ಕಂಡುಹಿಡಿದು, ಅವಳು ಯಾವ ರೂಪವನ್ನು ಪಡೆಯುವಳೋ ಅದೇ ರೂಪವನ್ನು ತಾನೂ ಪಡೆದು ಅವಳನ್ನು ಸಂಧಿಸಿದನು.     ಈ ರೀತಿಯಲ್ಲಿ ನೂರಾರು ರೂಪಗಳನ್ನು ಧರಿಸಿದ ಕಾರಣದಿಂದಲೆ ಈಕೆಯ ಹೆಸರು ಶತರೂಪಾ ಎಂದಾಗಿರಬೇಕು.     ಯಾವ ಯ

ಪರಶುರಾಮನ 41 ಅಸ್ತ್ರಗಳು

ವಿಷ್ಣುಧರ್ಮೋತ್ತರ ಪುರಾಣದಲ್ಲಿ ಹೇಳಿರುವಂತೆ ಪರಶುರಾಮನ 41 ಅಸ್ತ್ರಗಳು. 1) ಬ್ರಹ್ಮಾಸ್ತ್ರ 2) ವೈಷ್ಣವಾಸ್ತ್ರ 3) ರೌದ್ರಾಸ್ತ್ರ 4) ಆಗ್ನೇಯಾಸ್ತ್ರ 5) ವಾಸವಾಸ್ತ್ರ 6) ನೈಋತ್ಯಾಸ್ತ್ರ 7) ಯಾಮ್ಯಾಸ್ತ್ರ 8) ಕೌಬೇರಾಸ್ತ್ರ 9) ವಾರುಣಾಸ್ತ್ರ 10) ವಾಯವ್ಯಾಸ್ತ್ರ 11) ಸೌಮ್ಯಾಸ್ತ್ರ 12) ಸೌರಾಸ್ತ್ರ 13) ಪಾರ್ವತಾಸ್ತ್ರ 14) ಚಕ್ರ 15) ವಜ್ರ 16) ಪಾಶ 17) ಸರ್ಪಾಸ್ತ್ರ 18) ಗಾಂಧರ್ವಾಸ್ತ್ರ 19) ಸ್ವಾಪನಾಸ್ತ್ರ 20) ಭೌತಾಸ್ತ್ರ 21) ಪಾಶುಪತಾಸ್ತ್ರ 22) ಐಶಿಕಾಸ್ತ್ರ 23) ತರ್ಜನಾಸ್ತ್ರ 24) ಪ್ರಾಸಾಸ್ತ್ರ 25) ಗಾರುಡಾಸ್ತ್ರ 26) ನರ್ತನಾಸ್ತ್ರ 27) ಅಸ್ರರೋಧನ 28) ಆದಿತ್ಯಾಸ್ತ್ರ 29) ರೈವತಾಸ್ತ್ರ 30) ಮಾನವಾಸ್ತ್ರ 31) ಅಕ್ಷಿಸಂತರ್ಜನಾಸ್ತ್ರ 32) ಭೀಮಾಸ್ತ್ರ 33) ಜುಂಭ್ರಣಾಸ್ತ್ರ 34) ರೋಧನಾಸ್ತ್ರ 35) ಸೌಪರ್ಣಾಸ್ತ್ರ 36) ಪರ್ಜನ್ಯಾಸ್ತ್ರ 37) ರಾಕ್ಷಸಾಸ್ತ್ರ 38) ಮೋಹನಾಸ್ತ್ರ 39) ಕಾಲಾಸ್ತ್ರ 40) ದಾನವಾಸ್ತ್ರ 41) ಬ್ರಹ್ಮಶಿರಸಾಸ್ತ್ರ

ಸೆರಗಿನಲ್ಲಿ ಗಂಟುಹಾಕಿ

    ಒಮ್ಮೆ ಸಾತ್ಯಕಿ, ಅರ್ಜುನ, ಕೃಷ್ಣ ಈ ಮೂವರೂ ಸೇರಿ ಒಂದು ಕಾಡಿನಲ್ಲಿ ಸಂಚರಿಸುತ್ತಿರುವಲ್ಲಿ ದಾರಿ ತಪ್ಪಿದರೂ. ಕಗ್ಗತ್ತಲೆಯಲ್ಲಿ ತಂಗುವದಕ್ಕೆ ಮತ್ತೆಯಾವ ಸ್ಥಲವೂ ಸಿಕ್ಕದೆ ಒಮದು ಮರದ ಮೇಲೆಯೇ ಮಲಗಿರಬೇಕಾಯಿತು. ಹಿಂಸ್ರಮೃಗಗಳ ಭೀತಿಯಿರುವದೆಂಬ ಕಾರಣದಿಂದ ತಮ್ಮೊಳಗೆ ಇಬ್ಬರು ನಿದ್ರಿಸುತ್ತಿರುವಲ್ಲಿ ಮೂರನೆಯವನೊಬ್ಬನು ಎಚ್ಚರವಾಗಿರಬೇಕೆಂದು ಏರ್ಪಡಿಸಿಕೊಂಡರು.     ಸಾತ್ಯಕಿಉ ಮೊದಲನೆಯ ಕಾವಲುಗಾರನಾದನು. ಅವನು ತನ್ನ ಸರದಿಯು ಮುಗಿದಕೂಡಲೆ ಅರ್ಜುನನ್ನು ದಡಕ್ಕನೆ ಎಬ್ಬಿಸಿದನು "ಯಾವದಾದರೂ ಪ್ರಾಣಿಯು ಬಂದಿತ್ತೇನು?" ಎಂದು ಅರ್ಜುನನು ಕೇಳಿದ್ದಕ್ಕೆ ಸಾತ್ಯಕಿಯು ಪಿಸುಮಾತಿನಲ್ಲಿ "ದೆವ್ವ ದೆವ್ವ! " ಎಂದನು. ಅರ್ಜುನನು " ಛೇ! ಹುಚ್ಚ, ಎಂಥ ಮಾತಿದು!" ಎನ್ನಲು, "ಹಾಸ್ಯದ ಮಾತಲ್ಲವಯ್ಯ, ನಾನು ಎಷ್ಟೇ ಪ್ರಯತ್ನಮಾಡಿದರೂ ಅದನ್ನು ಓಡಿಸುವದಾಗಲಿಲ್ಲ. ಹೇಗಾದರೂ ಆಗಲಿ, ಈಗ ನೀನೇ ನೋಡುವೆಯಲ್ಲ!" ಎಂದು ಸಾತ್ಯಕಿಯು ಮಲಗಿಕೊಂಡುಬಿಟ್ಟನು.     ಅರ್ಜುನನು ಧನುರ್ಧಾರಿಯಾಗಿ ಕಾವಲಿಗೆ ನಿಂತನು. ಸ್ವಲ್ಪ ಹೊತ್ತಿನಲ್ಲಿಯೇ ಒಂದು ಭಯಂಕರವಾದ ಕುಳ್ಳ ಆಕೃತಿಯು ಕಾಣಿಸಿಕೊಂಡಿತು, ಅರ್ಜುನನನ್ನು ಕೆಳಗೆ ಇಳಿಯುವಂತೆ ಸನ್ನೆಮಾಡಿತು. "ಎಲಾ, ಯಾರೋ ನೀನು? ಏನಾಗಬೇಕು ನಿನಗೆ ?" ಎಂದು ಅರ್ಜುನನು ಗರ್ಜಿಸಿದನು. "ನಾನು ಈ ಮರದಲ್ಲಿರುವ ದೆವ್ವವು, ಇಲ್ಲಿ ನೀವಿರಬಾರದು. ಕೂಡಲೆ ಹೊರಡಿರಿ

ಕಣ್ಣೀರಿನ ಅಳತೆಯಿಂದ ದುಃಖದ ಪ್ರಮಾಣ ಅಳೆಯಲು ಸಾಧ್ಯವೇ?

Image
    ಭೌತಿಕವಿಜ್ಞಾನದ ಪ್ರಯೋಜನಗಳನ್ನು ಪ್ರತ್ಯಕ್ಷವಾಗಿ ಪಡೆದುಕೊಂಡು ನವನಾಗರಿಕತೆಯ ಹೆಸರಿನಲ್ಲಿ ದೇಹಾತ್ಮಬುದ್ಧಿಯನ್ನೇ ದೃಢಪಡಿಸಿಕೊಂಡು ಇಂದ್ರಿಯಲೋಲುಪರಾಗಿ ಬಾಳುತ್ತಿರುವ ಈಗಿನ ಜನರಿಗೆ ವೇದಾಂತವೆಂದರೆ ಒಂದು ಬಗೆಯ ಔದಾಸೀನ್ಯವುಂಟಾಗುವದರಲ್ಲಿ ಆಶ್ಚರ್ಯವೇನಿಲ್ಲ, ಆದರೆ ಭೋಗಾಸಕ್ತಿ, ಪ್ರಾಪಂಚಿಕಸುಖಗಳಲ್ಲಿ ಭಾರತೀಯರನ್ನು ಹಿಂದಕ್ಕೆ ಹಾಕಿ ಉತ್ತುಂಗಶಿಖರವನ್ನೇರಿರುವ ಪಾಶ್ಚಾತ್ತ್ಯರೂ ಇತ್ತೀಚಿಗೆ ಅದೇಕೋ, ವೇದಾಂತದಕಡೆಗೆ ತಿರುಗುತ್ತಿರುವದನ್ನು ನೋಡಿದರೆ ವಿಚಾರವಂತರಾದವರಿಗೆ ಭೌತಿಕವಿಜ್ಞಾನದಲ್ಲಿ ಏನೋ ಕೊರತೆಯಿರಬೇಕು; ಅದರಿಂದ ಸಿಗಲಾರದ ಸುಖವು ವೇದಾಂತದಿಂದ ದೊರಕಬಹುದು - ಎಂದು ಅನಿಸಿರಬೇಕು. ಈ ಸಂದರ್ಭದಲ್ಲಿ ಭೌತಿಕವಿಜ್ಞಾನದ ಪರಿಮಿತಿಯನ್ನೂ ಅದರ ಶೋಧಗಳ ಪರಿಣಾಮವನ್ನೂ ಕುರಿತು ವಿಚಾರಮಾಡುವದು ವೇದಾಂತದಕಡೆಗೆ ಅಭಿರುಚಿಯನ್ನು ಹೆಚ್ಚಿಸಲು ಸಹಾಯಕವಾಗಿರುತ್ತದೆ ಎಂದು ಭಾವಿಸಬಹುದು.     ಮೇಲುನೋಟಕ್ಕೆ ಭೌತಿಕವಿಜ್ಞಾನವು ಮಾನವನಿಗೆ ಬಹಳ ಉಪಕಾರಿಯಾಗಿರುವದರಲ್ಲಿ ಸಂಶಯವಿಲ್ಲ. ಈ ವಿಜ್ಞಾನದ ಬಲದಿಂದ ಮಾನವನು ತನ್ನ ಆಹಾರ, ವಿಹಾರ, ವಿಚಾರ, ಸಮಾಜ, ಆರೋಗ್ಯ, ವಿದ್ಯಾಭ್ಯಾಸ, ಆರ್ಥಿಕ, ರಾಜಕೀಯವೇ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಗತಿಯನ್ನು ಸಾಧಿಸಿದ್ದಾನೆ ಮತ್ತು ಈ ವಿಜ್ಞಾನವು ಬರಿಯ ಆಕಾಶಪುರಾಣದಂತಲ್ಲ ಇದು ತನ್ನ ಶೋಧಗಳ ಫಲವನ್ನು ಮಾನವನ ಜೀವಿತಕಾಲದಲ್ಲಿಯೇ ಒದಗಿಸಿಕೊಟ್ಟಿದೆ. ಇಷ್ಟೇ ಅಲ್ಲ ಇದರ ಪ್ರಯೋಜನವು ವೈಯಕ್ತಿಕವಾಗ

ಶ್ರೀ ಯದುಗಿರಿನಾಯಿಕಾ ಸುಪ್ರಭಾತಂ

Image
ಶ್ರೀಯಾದವಕ್ಷಿತಿಭೃದೀಶವಿಶಾಲವಕ್ಷಃ ಸೌಢಾಂತರೋಜ್ಜ್ವಲಮನೋಹರದಿವ್ಯಮೂರ್ತೇ | ಕ್ಷೀರಾಂಬುಧಿಪ್ರಿಯಸುತೇ! ಪ್ರಣತೇಷ್ಟದಾತ್ರಿ ! ಯದ್ವದ್ರಿನಾಥದಯಿತೇ ! ತವ ಸುಪ್ರಭಾತಂ ||1|| ಕಲ್ಯಾಣತೀರ್ಥಮವಗಾಹ್ಯ ಸುತೀರ್ಥಪೂರ್ಣ ಸೌವರ್ಣಭದ್ರಕಲಶಾನ್ ಶಿರಸಾ ವಹಂತಃ | ತಿಷ್ಠಂತಿ ವೈದಿಕಶಿಖಾಮಣಯಃ ಪ್ರಹೃಷ್ಟಾ ಯದ್ವದ್ರಿನಾಥದಯಿತೇ! ತವ ಸುಪ್ರಭಾತಂ ||2|| ಏತೇಪಿ ನಾರದಮುಖಾಸ್ಸುರವೈಣಿಕಾಶ್ಚ ತ್ವತ್ಪಾದಪಂಕಜವಿಲೀನನಿಜಾಂತರಂಗಾಃ | ಗಾಯಂತಿ ತೇ ಗುಣಗಣಾನ್ನಿಗಮಾಂತಗಮ್ಯಾನ್ ಯದ್ವದ್ರಿನಾಥದಯತೇ! ತವ ಸುಪ್ರಭಾತಂ ||3|| ಇಂದ್ರಾನಲಾಂತಕಮುಖಾಶ್ಚ ದಿಶಾಮಧೀಶಾಃ ಸಂಪ್ರಾಪಿತೋನ್ನತಪದಾಸ್ತ್ವದಪಾಂಗಲೇಶೈಃ | ತ್ವಾಂ ಸಂಸ್ತುವಂತಿ ವಿಹಿತಾಂಜಲಯಃ ಪ್ರಕಾಮಂ ಯದ್ವದ್ರಿನಾಥದಯಿತೇ! ತವ ಸುಪ್ರಭಾತಂ ||4|| ದೇವಿ! ತ್ವಯಾ ಸುಚರಿತಸ್ಯ ಸುತೇ ಪ್ರಸಾದಾ- ದ್ಯಾದೃಗ್ವಿಧಾಃ ಪ್ರಕಟಿತಾಃ ಕರುಣಾತರಂಗಾಃ | ತಾದೃಗ್ವಿಧಾನಿಹ ತರಂಗಯ ಮಯ್ಯಪಾಂಗಾನ್ ಯದ್ವದ್ರಿನಾಥದಯಿತೇ! ತವ ಸುಪ್ರಭಾತಂ ||5|| ಯೈರುನ್ನತಿಂ ಸಮಗಮನ್ನ ಚ ಶಂಕರಾದ್ಯಾಃ ಯಾನೀಹತೇ ಹರಿರಪಿ ತ್ರಿಜಗದ್ವಿಧಾನೇ | ಮಾತಸ್ತ್ವಮದ್ಯ ಸಮುದಂಚಯ ತಾನಪಾಂಗಾನ್ ಯದ್ವದ್ರಿನಾಥದಯಿತೇ! ತವ ಸುಪ್ರಭಾತಂ ||6|| ಸದ್ಯಃ ಪ್ರಫುಲ್ಲಕರಪದ್ಮಗಳನ್ಮಧೂಲ- ಪಾನೋನ್ಮುಖಾ ಮಧುಕರಾಸ್ತವ ಸುಪ್ರಭಾತಂ | ಶಂಸಂತಿ ಝಂಕೃತಿಮಿಷೇಣ ಕಿಲಾದ್ಯ ದೇವಿ! ಯದ್ವದ್ರಿನಾಥದಯಿತೇ! ತವ ಸುಪ್ರಭಾತಂ ||7|| ಕರ್ಣಾವತಂಸಿತಸರೋಜಯುಗೇ ಪ್ರಫುಲ್ಲೇ ಸದ್ಯಸ್ಸಮುನ್ಮಿಷ

ಪ್ರದಕ್ಷಿಣೆಯ ರಹಸ್ಯ

Image
    "ಮರವ ಕಂಡಲ್ಲಿ ಸುತ್ತುವರಯ್ಯಾ" ಎಂದು ಬಸವಣ್ಣನವರು ತಮ್ಮದೊಂದು ವಚನದಲ್ಲಿ ಹೇಳಿದ್ದಾರೆ. ಪ್ರತಿನಿತ್ಯ ಬೆಳಗಿನ ಸಮಯದಲ್ಲಿ ಎಷ್ಟೋ ಜನ ಮಹಿಳೆಯರು, ಮಹನೀಯರು ಯಾವುಯಾವುದೋ ಮಂತ್ರವನ್ನು ಹೇಳಿಕೊಳ್ಳುತ್ತಾ ಮರವನ್ನೋ, ದೇವಾಲಯವನ್ನೋ ಅಥವಾ ಕಲ್ಲನಾಗರಗಳನ್ನೋ ಸುತ್ತುವುದನ್ನು ಸಾಮಾನ್ಯವಾಗಿ ಎಲ್ಲರೂ ಕಂಡಿರುತ್ತಾರೆ. ಈ 'ಸುತ್ತುವುದೇ' ಸಂಸ್ಕೃತದಲ್ಲಿ ಪ್ರದಕ್ಷಿಣೆಯಾಗಿದೆ 'ದಕ್ಷಿಣ' ಎಂದರೆ ಬಲಭಾಗ. ಪೂಜ್ಯ ವಸ್ತುಗಳನ್ನು ಅಂದರೆ ಅಶ್ವತ್ಥವೃಕ್ಷ, ದೇವಸ್ಥಾನ, ದೇವಮುರ್ತಿ ಮುಂತಾದವುಗಳನ್ನು ಬಲಗೊಂಡು ಸುತ್ತುವುದಕ್ಕೆ ಪ್ರದಕ್ಷಿಣೆ ಎಂದು ಹೆಸರು. ನವವಿಧ ಭಕ್ತಿಗಳಲ್ಲಿ ಒಂದಾದ 'ವಂದನಾ' ಭಕ್ತಿಯಲ್ಲಿ ಇದೂ ಒಂದು ಪ್ರಭೇದವೆನ್ನಬಹುದು. ಅವರವರ ಉದ್ದೇಶ, ಆರಾಧ್ಯ ದೇವತೆ ಇವುಗಳಿಗೆ ತಕ್ಕಂತೆ ಭಕ್ತರು ಒಂದು ಸಲ, ಮೂರು ಸಲ ಅಥವಾ ನೂರೆಂಟು ಸಲ ಇತ್ಯಾದಿಯಾಗಿ ಪ್ರದಕ್ಷಿಣೆ ಹಾಕುತ್ತಾರೆ. 'ಕರ್ಮಲೋಚನ'ವೆಂಬ ಗ್ರಂಥದಲ್ಲಿ ದೇವಿಗೆ ಒಂದು ಸಲ, ಸೂರ್ಯನಿಗೆ ಏಳು ಸಾರಿ, ವಿನಾಯಕನಿಗೆ ಮೂರು ಸಾರಿ, ವಿಷ್ಣುವಿಗೆ ನಾಲ್ಕುಸಾಲ, ಶಿವನಿಗೆ ಅರ್ಧಸಾರಿ, ಹೀಗೆ ಪ್ರದಕ್ಷಿಣೆ ಹಾಕಬೇಕೆಂದು ಹೇಳಲಾಗಿದೆ. ಒಬ್ಬೊಬ್ಬ ದೇವರಿಗೆ ಇಂತಿಷ್ಟು ಸಾರಿ ಪ್ರದಕ್ಷಿಣ ಹಾಕಬೇಕೆಂಬ ನಿಯಮ. ಇನ್ನು ಈ ಪ್ರದಕ್ಷಿಣೆಯನ್ನು ಹೇಗೆ ಹಾಕಬೇಕೆಂಬುದರ ಬಗ್ಗೆ 'ಕಾಲಿಕಾಪುರಾಣದಲ್ಲಿ' ವರ್ಣನೆಯಿದೆ.     ಬಲಗೈಯನ್ನು ಇಳಿ

ಶ್ರೀಬ್ರಹ್ಮಚೈತನ್ಯಾಷ್ಟಕ (ಕುರ್ತಕೋಟಿಯ ಶ್ರೀಮಹಾಭಗವತರವರ ಅನುಗ್ರಹಿಸಿರುವ ಗ್ರಂಥದಿಂದ )

Image
ಜನ್ಮಾದ್ಯಸ್ಯ ಯತಸ್ತಥಾಪಿ ಯ ಇಹ ಗ್ರಾಮೇ ತು ಗೋನ್ದಾವಲೌ ಸಂಭೂತಃ ಖಲು ಭೂಸುರೀಯಸುಕುಲೇ ಲೋಕೋದ್ದಿಧೀರ್ಷಾ ವಶಾತ್ || ಯಶ್ಚಾನನ್ದಮಯೋಪಿ ಮೂರ್ತಕೃಪಯಾ ದೇಹೀವ ಮೂರ್ತ್ಯಾನಯಾ | ಸಾಷ್ಟಾಂಗಂ ಪ್ರಣಿಪತ್ಯ ಸದ್ಗುರುಮಹಾರಾಜಂ ತಮೇನಂ ಭಜೆ ||1|| ಈ ಪ್ರಪಂಚದ ಜನ್ಮಸ್ಥಿತಿಲಯಗಳು ಯಾವಾತನಿಂದಲೇ ಆಗುವವೋ, ಆದರೂ ಯಾವಾತನು ಲೋಕವನ್ನು ಉದ್ಧಾರಮಾಡಬೇಕೆಂಬ ಇಚ್ಛೆಯಿಂದ ಗೋಂದಾವಲಿಯೆಂಬ ಗ್ರಾಮದಲ್ಲಿ ಬ್ರಾಹ್ಮಣಕುಲದಲ್ಲಿ ಹುಟ್ಟಿದನೋ, ಯಾವಾತನು ಆನಂದ ಸ್ವರೂಪನೇ ಆದರೂ ದೇಹಿಗಳ ಮೇಲಿನ ಕೃಪೆಯಿಂದ ಈ ಶರೀರವನ್ನು ತೆಗೆದುಕೊಂಡು ದೇಹಿಯಂತೆ ತೋರಿಕೊಳ್ಳುತ್ತಿರುವನೋ ಆ ಸದ್ಗುರುಮಹಾರಾಜನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ ಭಜಿಸುತ್ತೇನೆ. ಗತ್ವಾನಿರ್ವಚನೀಯಮೇಕಮಪಿ ಯಂ ಶ್ರೀಬ್ರಹ್ಮಚೈತನ್ಯಸ- ನ್ನಾಮಾಪಾರಮರಪಣ್ಡಿತಾನ್ತಮಮಿತೈಃ ಸಪ್ರೇಮ ಸಂಗೀಯತೇ | ಯಶ್ಚಶ್ರೀ ಪುರುಷೋತ್ತಮೋಪಿ ವಿದಿತಃ ಸತ್ಪೂರುಷಃ ಸಾಂಪ್ರತಂ ಸಾಷ್ಟಾಂಗ ಪ್ರಣಿಪತ್ಯ ಸದ್ಗುರುಮಹಾರಾಜಂ ತಮೇನಂ ಭಜೆ ||2|| ಇಂಥ ಸ್ವರೂಪದವನೆಂದು ಹೇಲಲಿಕ್ಕೆ ಬಾರದಿರುವ ಯಾವ ಒಬ್ಬನನ್ನು ಪಾಮರರಿಂದ ಹಿಡಿದು ಪಂಡಿತರವರೆಗೂ ಲೆಕ್ಕವಿಲ್ಲದಷ್ಟು ಜನರು ಸೇರಿ, ಶ್ರೀಬ್ರಹ್ಮ ಚೈತನ್ಯನೆಂಬ ಒಂದು ನಾಮವನ್ನೇ ಪ್ರೇಮದಿಂದೂಡಗೂಡಿ ಗಾನಮಾಡುತ್ತಿರುವರೋ, ಯಾವಾತನು ಶ್ರೀ ಪುರುಷೋತ್ತಮನಾದ ಶ್ರೀಮಹಾವಿಷ್ಣುವೇ ಆದರೂ ಈಗ ಸತ್ಪುರುಷನೆಂಬ ಹೆಸರಿಂದ ಪ್ರಖ್ಯಾತಿಯನ್ನು ಹೊಂದಿರುವನೋ, ಆ ಸದ್ಗುರುಮಹಾರಾಜನಿಗೆ ಸಾಷ್ಟಾಂಗ ನಮಸ್

ಕಾವ್ಯಸಾಹಿತ್ಯದಲ್ಲಿ ನಿರ್ವಿಘ್ನಕಾರಕ

Image
      ಇಡೀ ಭರತ ಖಂಡದಲ್ಲಿ ಆಚರಣೆಯಲ್ಲಿಟ್ಟುಕೊಂಡು ಭಕ್ತಿಯಿಂದ ಸೇವಾಕೈಂಕರ್ಯಾದಿಗಳನ್ನು ನಡೆಸಿಕೊಂಡು ಬರುತ್ತಿರುವ ಉತ್ಸವಾದಿಗಳಲ್ಲಿ ಶ್ರೀ ಗಣಪತಿಯ ಮಹೋತ್ಸವವು ಬಹು ಪ್ರಸಿದ್ಧಿಗೆ ಬಂದಿರುವ ವಿಚಾರ ಸಕಲರಿಗೂ ವೇದ್ಯವಾಗಿದೆ. ಈ ಜಗತ್ತಿನ ಯಾವ ಭಾಗದಲ್ಲೇ ಇರಲಿ ಸಕಲ ಭಾರತೀಯರೂ ಕಡ್ಡಾಯವಾಗಿ ಶ್ರೀಗಣಪತಿಯನ್ನು ಪೂಜಿಸುತ್ತಲಿರುತ್ತಾರೆ. ಭರತಖಂಡದ ಆಸ್ತೀಕರನ್ನು ಮುಖ್ಯವಾಗಿ ನಾಲ್ಕು ಗುಂಪನ್ನಾಗಿ ಮಾಡಬಹುದು : 1. ವಿಷ್ಣುವಿನ ಆರಾಧಕರು 2. ಶೈವಾರಾಧಕರು 3. ಶಕ್ತಿ ಆರಾಧಕರು 4. ಶೂನ್ಯೋಪಾಸಕರು ಇವರಲ್ಲಿ ಕೆಲವರು ವೇದಗಳನ್ನು ಒಪ್ಪುವವರು, ಕೆಲವರು ಒಪ್ಪರು. ಕೆಲವು ವೈಷ್ಣವರು ಶೈವಾರಾಧನೆಯನ್ನು ಮಾಡುವುದಿಲ್ಲ ಮತ್ತೆ ಕೆಲವು ಶೈವರು ವಿಷ್ಣುವನ್ನು ಪೂಜಿಸುವುದಿಲ್ಲ ಆದರೆ ಪ್ರತಿ ಒಬ್ಬರೂ ಯಾವ ಮತವನ್ನೇ ಅವಲಂಬಿಸಿರಲಿ ಇಂದಿನ ಕಥಾನಾಯಕನಾದ ನಮ್ಮ ಗಣಪತಿಯನ್ನು ಸ್ವಪ್ರೇರಣೆಯಿಂದ ಆರಾಧಿಸುತ್ತಾರೆ ಅಂದಮೇಲೆ ಈ ಗಣಪತಿಯ ಮಹಿಮೆಯನ್ನು ತಿಳಿಯಬೇಕಾದುದು ಆದ್ಯಕರ್ತವ್ಯವಾಗಿದೆ.     ಹಿಂದೆ ನೈಮಿಶಾರಣ್ಯದಲ್ಲಿ ಮಹರ್ಷಿಗಳು ಮಾಡುತ್ತಿದ್ದ ಸಾತ್ವಿಕ ಕರ್ಮಗಳಿಗೆ ಅಡ್ಡಿಬರಲು, ಸೂತರು ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿ ತಿಥಿಯಲ್ಲಿ ಈ ಗಣಪತಿಯನ್ನು ಆರಾಧಿಸಿದರೆ ಎಲ್ಲಾ ಕಾರ್ಯಗಳೂ ಸುಗಮವಾಗುವುದೆಂದರು.     ಉತ್ತಮಕಾರ್ಯಾದಿಗಳಲ್ಲಿ ಸುಜನರಿಗೆ ಅನುಕೂಲನಾಗಿ ದುಷ್ಟರಿಗೆ ವಿಘ್ನಕಾರಿಯಾಗಿಯೂ ಇದ್ದು ತನ್ಮುಖಾಂತರ ಭಗವದಾರಾಧನ ಮಾಡುವವನೇ ನಮ್ಮ

ನಕ್ಷತ್ರ ಫಲಂ ಜ್ಯೋತಿಷ್ಯ

Image
ಪ್ರಿಯ ಭೂಷಣಸ್ಸು ರೂಪಃ | ಸುಭಗೋದಕ್ಷೋಶ್ವಿನೀಷು ಮತಿಮಾಂಶ್ಚ || ಕೃತ ನಿಶ್ಚಯ ಸತ್ಯಾರು | ಗ್ದಕ್ಷಸ್ಸುಖಿತಶ್ಚ ಭರಣೀಷು || ಅಶ್ವಿನೀ ನಕ್ಷತ್ರದಲ್ಲಿ ಹುಟ್ಟಿದವನು ಅಲಂಕಾರ ಪ್ರಿಯನೂ ಸುಂದರನೂ ಮನೋಹರನೂ ಸಮರ್ಥನೂ ಬುದ್ಧವಂತನೂ ಆಗುತ್ತಾನೆ. ಭರಣಿ ನಕ್ಷತ್ರದಲ್ಲಿ ಹುಟ್ಟಿದವನು ಧೃಡಸಂಕಲ್ಪವುಳ್ಳವನೂ ಸತ್ಯವಂತನೂ ರೋಗವರ್ಜಿತನೂ ದಕ್ಷನೂ ಚಾತುರ್ಯವುಳ್ಳವನೂ ಸುಖವಂತನೂ ಆಗುತ್ತಾನೆ. ಬಹುಭುಕ್ಪರದಾರರತ | ಸ್ತೇಜಸ್ವೀ ಕೃತ್ತಿಕಾಸು ವಿಖ್ಯಾತಃ || ರೋಹಿಣ್ಯಾಂ ಸತ್ಯಶುಚಿಃ ಪ್ರಿಯಂ ವದಸ್ಥಿರಮತಿಸ್ಸು ರೂಪಶ್ಚ || ಕೃತ್ತಿಕಾ ನಕ್ಷತ್ರದಲ್ಲಿ ಹುಟ್ಟಿದವನು, ಹೆಚ್ಚು ಊಟ ಮಾಡುವವನೂ ಪರದಾರರತನೂ ತೇಜಸ್ವಿಯೂ ಪ್ರಸಿದ್ಧನೂ ಆಗುತ್ತಾನೆ. ರೋಹಿಣಿಯಲ್ಲಿ ಹುಟ್ಟಿದವನು ಸತ್ಯವಂತನೂ ಶುಚಿಯೂ ಪ್ರಿಯವಾದ ಮಾತುಗಳನ್ನಾಡುವವನೂ ದೃಡಮತಿಯೂ ಸುಂದರನೂ ಆಗುತ್ತಾನೆ. ಚಪಲ ಶ್ಚತುರೋಭೀರುಃ | ಪಟುರುತ್ಸಾಹೀ ಧನೀಮೃಗೇ ಭೋಗೀ || ಶಠಗರ್ವಿತೋ ಕೃತಘ್ನೋ | ಹಿಂಸ್ರಃ ಪಾಪಶ್ಚ ರೌದ್ರರ್ಕ್ಷೇ || ಮೃಗಶಿರ ನಕ್ಷತ್ರದಲ್ಲಿ ಹುಟ್ಟಿದವನು ಚಪಲನೂ ಚತುರನೂ ಭಯಶೀಲನೂ ಚಟುವಟಿಕೆಯುಳ್ಳವನೂ ಉತ್ಸಾಹವುಳ್ಳವನೂ ಧನವಂತನೂ ಭೋಗಿಯು ಆಗುತ್ತಾನೆ. ಆರ್ದ್ರ ನಕ್ಷತ್ರದಲ್ಲಿ ಹುಟ್ಟಿದವನು ಶರನೂ ಗರ್ವಿತನೂ ಮಾಡಿದ ಉಪಕಾರವನ್ನು ಸ್ಮರಿಸದವನೂ ಹಿಂಸಾಶೀಲನೂ ಪಾಪಿಯೂ ಆಗುತ್ತಾನೆ. ದಾಂತಃ ಸುಖೀ ಸುಶೀಲೋ | ದುರ್ಮೇಧಾ ರೋಗಭಾ ಕ್ಪಿಪಾಸುಶ್ಚ || ಅಲ್ಪೇನ ಚ ಸಂತುಷ್ಟಃ ಪುನರ್ವಸೌ | ಜಾಯತೇ ಮನುಜ

ಜೀವನ್ಮುಕ್ತಾನಂದ ಲಹರಿ

ಪುರೇ ಪೌರಾನ್ ಪಶ್ಯನ್ನರಯುವತಿನಾಮಾಕೃತಿಮಯಾನ್ ಸುವೇಷಾನ್ ಸ್ವರ್ಣಾಲಂಕರಣಕಲಿತಾಂಶ್ಚಿತ್ರಸದೃಶಾನ್ | ಸ್ವಯಂ ಸಾಕ್ಷೀ ದ್ರಷ್ಟೇತ್ಯಪಿ ಚ ಕಲಯಂಸ್ತೈಃ ಸಹ ರಮನ್ ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||1|| ಪುರದಲ್ಲಿ ಸ್ತ್ರೀಪುರುಷರೆಂಬ ನಾಮರೂಪಗಳಿಂದೊಡಗೂಡಿ ಉತ್ತಮ ವೇಷಗಳಿಂದಲೂ ಚಿನ್ನದ ಭೂಷಣಗಳಿಂದಲೂ ಕೂಡಿರುವ ಚಿತ್ರದಂತೆ ಕಾಣುತ್ತಿರುವ ಪುರಜನರನ್ನು ಕಾಣುತ್ತಾ, ತಾನು ಸಾಕ್ಷಿಯಾದ ದ್ರಷ್ಟೃವೆಂದು ತಿಳಿದುಕೊಂಡು ಅವರೊಡನೆ ಆಡುತ್ತಿರುವ, ಗುರುರೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ. ವನೇ ವೃಕ್ಷಾನ್ ಪಶ್ಯನ್ ದಲಫಲಭರಾನ್ನಮ್ರಸುಶಿಖಾನ್ ಘನಚ್ಛಾಯಾಚ್ಛನ್ನಾನ್ ಬಹುಲಕಲಕೂಜದ್ದ್ವಿಜಗಣಾನ್ | ಭಜನ್ ಘಸ್ರೇ ರಾತ್ರಾವವನಿತಲತಲ್ಪೈಕಶಯನೋ ಮುನಿರ್ವ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||2|| ಅರಣ್ಯದಲ್ಲಿ ಎಲೆ, ಹಣ್ಣು - ಇವುಗಳಿಂದ ತುಂಬಿ, ಬಾಗಿರುವ ಕೊಂಬೆಗಳುಳ್ಳವಾಗಿ, ದಟ್ಟವಾದ ನೆರಳಿನಿಂದ ಮರೆಯಾಗಿರುವ, ಮರಗಳನ್ನು ಕಾಣುತ್ತಾ ಬಹಳ ಇಂಪಾಗಿ ದನಿಗೈಯುತ್ತಿರುವ ಪಕ್ಷಿಗಳ ಗುಂಪುಗಳನ್ನು ಸೇವಿಸುತ್ತಾ, ಹಗಲಲ್ಲೂ ರಾತ್ರೆಯಲ್ಲಿಯೂ ಭೂತಲವೆಂಬ ಒಂದೇ ಹಾಸಿಗೆಯಲ್ಲಿ ಮಲಗುತ್ತಿರುವನಾಗಿದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ. ಕದಾಚಿತ್ ಪ್ರಾಸಾದೇ ಕ್ವಚಿದಪಿ ಚ ಸೌಧೇಷು ಧನಿನಾಂ ಕದಾ ಕಾಲೇ ಶೈಲೇ ಕ್ವಚಿದಪಿ ಚ ಕೂಲೇಷು ಸರಿತಾಮ್

ಶ್ರೀರಾಮಹೃದಯ

ಯಃ ಪೃಥ್ವೀಭರವಾರಣಾಯ ದಿವಿಜೈಃ ಸಂಪ್ರಾರ್ಥಿತಶ್ಚಿನ್ಮಯಃ ಸಂಜಾತಃ ಪೃಥವೀತಲೇ ರವಿಕುಲೇ ಮಾಯಾಮನುಷ್ಯೋವ್ಯಯಃ ನಿಶ್ಚಕ್ರಂ ಹತರಾಕ್ಷಸಃ ಪುನರಗಾದ್ ಬ್ರಹ್ಮತ್ವಮಾದ್ಯಂ ಸ್ಥಿರಾಂ ಕೀರ್ತಿಂ ಪಾಪಹರಾಂ ವಿಧಾಯ ಜಗತಾಂ ತಂ ಜಾನಕೀತಂ ಭಜೇ ||1|| ಭೂಮಿಯ ಭಾರವನ್ನು ಇಳಿಸಿಕೊಡಬೇಕೆಂದು ದೇವತೆಗಳು ಪ್ರಾರ್ಥಿಸಲಾಗಿ ಯಾವ ಚಿತ್ಸ್ವರೂಪನಾದ ಪರಮಾತ್ಮನು ತಾನು ಅವ್ಯಯನಾಗಿದ್ದರೂ ಮಾಯೆಯಿಂದ ಮನುಷ್ಯನಾಗಿ ಈ ಭೂಮಂಡಲದಲ್ಲಿ ಸೂರ್ಯವಂಶದಲ್ಲಿ ಅವತರಿಸಿ ಚಕ್ರಾಯುಧವಿಲ್ಲದೆಯೇ ರಾಕ್ಷಸರನ್ನು ಕೊಂದು, ಲೋಕದ ಜನಗಳ ಪಾಪವನ್ನೆಲ್ಲ ಪರಿಹರಿಸುವಂಥ ಶಾಶ್ವತವಾದ ಕೀರ್ತಿಯನ್ನು ಇಲ್ಲಿಟ್ಟು ಮತ್ತೆ ಮೊದಲಿನ ತನ್ನ ಸ್ವರೂಪವನ್ನು ಹೊಂದಿದನೋ ಆ ಜಾನಕೀಶನನ್ನು ಭಜಿಸುತ್ತೇನೆ. ವಿಶ್ವೋದ್ಭವಸ್ಥಿತಿಲಯಾದಿಷು ಹೇತುಮೇಕಂ ಮಾಯಾಶ್ರಯಂ ವಿಗತಮಾಯಮಚಿನ್ತ್ಯಮೂರ್ತಿಮ್ | ಆನನ್ದಸಾನ್ದ್ರಮಮಲಂ ನಿಜಬೋಧರೂಪಂ ಸೀತಾಪತಿಂ ವಿದಿತತತ್ತ್ವಮಹಂ ನಮಾಮಿ ||2|| ಪ್ರಪಂಚದ ಹುಟ್ಟು, ಇರುವಿಕೆ, ಪ್ರಲಯ - ಮುಂತಾದ ಎಲ್ಲಾ ಆಗುಹೋಗುಗಳಿಗೂ ತಾನೊಬ್ಬನೇ ಕಾರಣವಾಗಿಯೂ ಮಾಯೆಗೆ ಆಸರೆಯನ್ನಿತ್ತಿದ್ದರೂ ಯಾವ ಮಾಯೆಯ ಸಂಬಂಧವೂ ತನ್ನಲ್ಲಿಲ್ಲದವನಾಗಿಯೂ ಇಂತೆಂದು ಮನಸ್ಸಿನಿಂದ ಆಲೋಚಿಸುವದಕ್ಕೆ ಕೂಡ ಆಗದಂಥ ಸ್ವರೂಪವುಳ್ಳವನಾಗಿಯೂ ಪರಮಾನಂದಸ್ವರೂಪವಾಗಿ, ನಿರ್ಮಲವಾಗಿ, ಸ್ವಾಭಾವಿಕವಾದ ಜ್ಞಾನಸ್ವರೂಪವಾಗಿರುವ ಸುಪ್ರಸಿದ್ಧ ತತ್ತ್ವವಾದ ಸೀತಾಪತಿಯನ್ನು ನಮಸ್ಕರಿಸುತ್ತೇನೆ. ಪಠನ್ತಿ ಯೇ ನಿತ್ಯಮನನ್ಯಚೇತಸಃ ಶೃ

ವಿಜ್ಞಾನನೌಕಾಸ್ತುತಿ - (ಶ್ರೀಶಂಕರಾಚಾರ್ಯರವರ ಕೃತಿ)

Image
ತಪೋಯಜ್ಞದಾನಾದಿಭಿಃ ಶುದ್ಧ ಬುದ್ಧಿ- ರ್ವಿರಕ್ತೋ ನೃಪಾದೌ ಪದೇ ತುಚ್ಛಬುದ್ಧ್ಯಾ | ಪರಿತ್ಯಜ್ಯ ಸರ್ವಂ ಯದಾಪ್ನೋತಿ ತತ್ತ್ವಂ ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ  ||1|| ತಪಸ್ಸು, ಯಜ್ಞ, ದಾನ- ಮುಂತಾದವುಗಳಿಂದ ಚಿತ್ತಶುದ್ಧಿಯನ್ನು ಪಡೆದು ದೊರೆತನವೇ ಮುಂತಾದ ಪದವಿಯಲ್ಲಿ ಕೂಡ ತುಚ್ಛಬುದ್ಧಿಯುಳ್ಳವರಾಗಿ ವೈರಾಗ್ಯದಿಂದ ಎಲ್ಲವನ್ನೂ ಬಿಟ್ಟು ಯಾವ ತತ್ತ್ವವನ್ನು ಪಡೆಯುವರೋ ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುವೆನು. ದಯಾಲುಂ ಗುರುಂ ಬ್ರಹ್ಮನಿಷ್ಠಂ ಪ್ರಶಾನ್ತಂ ಸಮಾರಾಧ್ಯ ಮತ್ಯಾ ವಿಚಾರ್ಯ ಸ್ವರೂಪಮ್ | ಯದಾಪ್ನೋತಿ ತತ್ತ್ವಂ ನಿದಿಧ್ಯಾಸ್ಯ ವಿದ್ವಾನ್ ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ  ||2|| ಕರುಣಾಳುವೂ ಪರಮಶಾಂತಿಯುಳ್ಳಾತನೂ ಆಗಿರುವ ಬ್ರಹ್ಮನಿಷ್ಠನಾದ ಗುರುವನ್ನು ಸೇವಿಸಿ ಮಾಡಿದ ಮನನದಿಂದ ತನ್ನ ಸ್ವರೂಪವನ್ನು ಕುರಿತು ವಿಚಾರಮಾಡಿ ನಿದಿಧ್ಯಾಸನದಿಂದ ಜ್ಞಾನಿಯಾಗಿ ಯಾವ ತತ್ತ್ವವನ್ನು ಪಡೆದುಕೊಳ್ಳುತ್ತಾನೋ ಆ ನಿತ್ಯವಾದ ಪರಬ್ರಹ್ಮನೇ ನಾನಾಗಿರುವೆನು. ಯದಾನನ್ದರೂಪಂ ಪ್ರಕಾಶಸ್ವರೂಪಂ ನಿರಸ್ತಪ್ರಪಞ್ಚಂ ಪರಿಚ್ಛೇದಶೂನ್ಯಮ್ | ಅಹಂಬ್ರಹ್ಮವೃತ್ತ್ಯೈಕಗಮ್ಯಂ ತುರೀಯಂ ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ  ||3|| ಯಾವದು ಅನಂದಸ್ವರೂಪವಾಗಿಯೂ ಪ್ರಕಾಶರೂಪವಾಗಿಯೂ ಪ್ರಪಂಚರಹಿತವಾಗಿ ಯಾವ ಎಲ್ಲೆಕಟ್ಟೂ ಇಲ್ಲದೆ 'ನಾನು ಬ್ರಹ್ಮವು' ಎಂಬ ವ್ಯಕ್ತಿಯಿಂದಲೇ ಅರಿಯುವದಕ್ಕೆ ತಕ್ಕದ್ದಾಗಿರುವದೋ ಅವಸ್ಥಾತ್ರಯವನ್ನು ಮಿರಿದ ನಾಲ್ಕನೆ

ಶ್ರೀ ವೆಂಕಟೇಶ ಭುಜಂಗ ಪ್ರಯಾತ ಸ್ತೋತ್ರ

ಶ್ರೀ ವೆಂಕಟೇಶ ಭುಜಂಗ ಪ್ರಯಾತ ಸ್ತೋತ್ರ (ಶ್ರೀ ಶಂಕರಾಚಾರ್ಯರಿಂದ ವಿರಚಿತವಾಗಿರುವ) ಮುಖೇ ಚಾರುಹಾಸಂ ಕರೇ ಶಂಖಚಕ್ರಂ ಗಲೇ ರತ್ನಮಾಲಾಂ ಸ್ವಯಂ ಮೇಘವರ್ಣಮ್ ತಥಾ ದಿವ್ಯಶಸ್ತ್ರಂ ಪ್ರಿಯಂ ಪೀತವಸ್ತ್ರಂ ಧರಂತಂ ಮುರಾರಿಂ ಭಜೇ ವೇಂಟೇಶಮ್ ||1|| ಸದಾಭೀತಿಹಸ್ತಂ ಮುದಾಜಾನುಪಾಣಿಂ ಲಸನ್ಮೇಖಲಂ ರತ್ನಶೋಭಾ ಪ್ರಕಾಶಮ್ ಜಗತ್ಪಾದಪದ್ಮಂ ಮಹತ್ಪದ್ಮನಾಭಂ ಧರತಂ ಮುರಾರಿ ಭಜೇ ವೇಂಕಟೇಶಮ್ ||2|| ಅಜಂ ನಿರ್ಮಲಂ ನಿತ್ಯಮಾಕಾಶರೂಪಂ ಜಗತ್ಕಾರಣಂ ಸರ್ವವೇದಾಂತ ವೇದ್ಯಮ್ ವಿಭುಂ ತಾಪಸಂ ಸಚ್ಚಿದಾನಂದರೂಪಂ ಧರಂತಂ ಮುರಾರಿಂ ಭಜೇ ವೇಕಮಟೇಶಮ್ ||3|| ಶ್ರಿಯಾವಿಷ್ಟಿತಂ ವಾಮವಕ್ಷಪ್ರಕಾಂತಂ ಸುರೈರ್ವಂದಿತಂ ಬ್ರಹ್ಮರುದ್ರಸ್ತುತಂ ತಮ್ ಶಿವಂ ಶಂಕರಂ ಸ್ವಸ್ತಿನಿರ್ವಾಣರೂಪಂ ಧರಂತಂ ಮುರಾರಿಂ ಭಜೇ ವೇಂಕಟೇಶಮ್ ||4|| ಮಹಾಯೋಗಸಾಧ್ಯಂ ಪರಿಭ್ರಾಜಮಾನಂ ಚಿರಂ ವಿಶ್ವರೂಪಂ ಸುರೇಶಂ ಮಹೇಶಮ್ ಅಹೋ! ಶಾಂತರೂಪಂ ಸದಾ ಧ್ಯಾನಗಮ್ಯಂ ಧರಂತಂ ಮುರಾರಿಂ ಭಜೇ ವೇಂಕಟೇಶಮ್ ||5|| ಅಹೋ! ಮತ್ಸ್ಯರೂಪಂ ತಥಾ ಕೂರ್ಮರೂಪಂ ಮಹಾ ಕ್ರೋಡರೂಪಂ ತಥಾ ನಾರಸಿಂಹಮ್ ಭಜೇ ಕುಬ್ಜರೂಪಂ ವಿಭುಂ ಜಾಮದಗ್ನ್ಯಂ ಧರಂತಂ ಮುರಾರಿಂ ಭಜೇ ವೇಂಕಟೇಶಮ್ ||6|| ಅಹೋ ಬುದ್ಧರೂಪಂ ತಥಾ ಕಲ್ಕಿರೂಪಂ ಪ್ರಭುಂ ಶಾಶ್ವತಂ ಲೋಕರಕ್ಷಾವಹಂತಮ್ ಪೃಥಕ್ಕಾಲಲಬ್ದಾತ್ಮ ಲೀಲಾವತಾರಂ ಧರಂತಂ ಮುರಾರಿಂ ಭಜೇ ವೇಂಕಟೇಶಮ್ ||7|| ಇತಿ ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಶ್ರೀಮಚ್ಚಂಕರಾಚಾರ್ಯ ವಿರಚಿತಂ ವೇಂಕಟೇಶ್ವರ (ಭುಜಂಗ ಪ್ರಯಾತ)

ಕಲಿಗಾಲ ಕಂಡ್ಯಾ

ಕೃಷ್ಣ ಕೃಷ್ಣಯೆಂದು ಕಾಮಿನಿ ಕರೆಯಲು ಅಕ್ಷಯ ವಸನಾಗಿ ಒದಗಿಯೊ ಅಂದು ||ಪ|| ದುಷ್ಟ ದುಶ್ಯಾಸನರ ಹಿಂಡುಹಿಂಡೇ ಇಂದು ಶಿಷ್ಟ ಮಾನಿನಿಯರ ಮಾನಗಳೆಯುತಿಹುದು ||ಅ.ಪ|| ಕಣ್ಮುಚ್ಚಿ ಬಾಯ್ಬಿಗಿದು ಹಾವಿನ್ಹಾಸಿನಲಿ ತಣ್ಣಗೆ ಕೈಕಟ್ಟಿ ಕುಳಿತಿಹೆಯಲ್ಲೋ ಬಣ್ಣನೆಯ ಮಾತಾಯೋ ಕಾಮಿಕೀಚಕರ ನಿಜ ಬಣ್ಣವನು ಬಯಲು ಮಾಡದೆ ನೀನು ||1|| ಗದ್ದೆ ಬಯಲು ಶಾಲೆ ಕಾಲೇಜುಗಳು ಶುದ್ಧ ಹಸುಮಗುವಿನ ಮೊದಲ ಶಾಲೆ ಹದ್ದುಮೀರಿದೆ ಅಲ್ಲೂ ಕಾಮುಕರ ಕಾಟ ನಿದ್ದೆ ಬಂದಿದೆಯೆ ನಿನಗೆ ಎದ್ದು ಬಾರದಷ್ಟು ||2|| ಬೇಡಿದರೆ ಕಾಡಿದರೆ ಬರುವನಲ್ಲ ನೀನು ನೋಡುತಿರು ಎಬ್ಬಟ್ಟಿ ಎಳೆತರುವೆ ನಾನು ಆಡುವೆಯ ಆಟಗಳ ನರಸಿಂಹಾವತಾರಿ ಮಾಡುವೆನು ತಕ್ಕುದು ಕಲಿಗಾಲ ಕಂಡ್ಯಾ ||3||

ವೃಕ್ಷರಾಜಃ ಅಶ್ವತ್ಥಃ

ಶ್ರೀಕೃಷ್ಣ ಪರಮಾತ್ಮ ಶ್ರೀಮದ್ಭಗವದ್ಗೀತೆಯ 10ನೇ ಅಧ್ಯಾಯವಾದ ವಿಭೂತಿ ಯೋಗದ ಇಪ್ಪತ್ತಾರನೇ ಶ್ಲೋಕದಲ್ಲಿ ಹೀಗೆ ಹೇಳಿದ್ದಾನೆ. ಅಶ್ವತ್ಥಃ ಸರ್ವವೃಕ್ಷಾಣಾಂ ದೇವರ್ಷೀಣಾಂ ಚ ನಾರದಃ | ಗಂಧರ್ವಾಣಾಂ ಚಿತ್ರರಥಃ ಸಿದ್ದಾನಾಂ ಕಪಿಲೋ ಮುನಿಃ || ಅಂದರೆ ಎಲ್ಲಾ ವೃಕ್ಷಗಳಲ್ಲಿ ಅಶ್ವತ್ಥವೃಕ್ಷವೂ, ದೇವರ್ಷಿಗಳಲ್ಲಿ ನಾರದಮುನಿಯೂ, ಗಂಧರ್ವರಲ್ಲಿ ಚಿತ್ರರಥನು ಮತ್ತು ಸಿದ್ದರಲ್ಲಿ ಕಪಿಲಮುನಿಯೂ ಆಗಿದ್ದೇನೆ ಎಂದಿದ್ದಾನೆ ಕೃಷ್ಣಪರಮಾತ್ಮ. ಕಾರಣ - ಅಶ್ವತ್ಥವೃಕ್ಷವು ಸಮಸ್ತ ವನಸ್ಪತಿಗಳಲ್ಲಿ ರಾಜನಾಗಿದೆ ಮತ್ತು ಪೂಜನೀಯವೆಂದು ತಿಳಿಯಲಾಗಿದೆ. ಅದಕ್ಕಾಗಿ ಭಗವಂತನು ಅಶ್ವತ್ಥವೃಕ್ಷವನ್ನು ತನ್ನ ಸ್ವರೂಪವೆಂದ ಹೇಳಿದ್ದಾನೆ. ಪುರಾಣಗಳಲ್ಲಿ ಅಶ್ವತ್ಥದ ಮಹಾತ್ಮೆಯು ಹೇರಳವಾಗಿ ಸಿಗುತ್ತದೆ. ಸ್ಕಂದ ಪುರಾಣದಲ್ಲಿ ಹೀಗ ಹೇಳಿದೆ - ಮೂಲೇ ವಿಷ್ಣುಃ ಸ್ಥಿತೋ ನಿತ್ಯಂ ಸ್ಕಂಧೇ ಕೇಶವ ಏವ ಚ | ನಾರಾಯಣಸ್ತು ಶಾಖಾಸು ಪತ್ರೇಷು ಭಗವಾನ್ ಹರಿಃ || ಫಲೇಚ್ಯುತೋ ನ ಸಂದೇಹಃ ಸರ್ವದೇವೈಃ ಸಮನ್ವಿತಃ | ಸ ಏವ ವಿಷ್ಣುರ್ದ್ರುಮ ಏವ ಮೂರ್ತೌ ಮಹಾತ್ಮಭಿಃ ಸೇವಿತಪುಣ್ಯಮೂಲಃ | ಯಸ್ಯಾಶ್ರಮ ಪಾಪಸಹಸ್ರಹಂತಾ ಭವೇನ್ನೃಣಾಂ ಕಾಮದುಘೋ ಗುಣಾಢ್ಯಃ || ಅಶ್ವತ್ಥದ ಮೂಲದಲ್ಲಿ ವಿಷ್ಣುವು, ಕಾಂಡದಲ್ಲಿ ಕೇಶವನೂ, ರೆಂಬೆಗಳಲ್ಲಿ ನಾರಾಯಣನೂ, ಎಲೆಗಳಲ್ಲಿ ಭಗವಾನ್ ಶ್ರೀಹರಿಯು ಮತ್ತು ಫಲದಲ್ಲಿ ಎಲ್ಲ ದೇವತೆಗಳೊಂದಿಗೆ ಅಚ್ಚುತನು ಸದಾ ವಾಸಮಾಡುತ್ತಾರೆ. ಇದರಲ್ಲಿ ಯಾವ ಸಂ

ವೈಕುಂಠದವರೂ ಕೈಲಾಸದವರೂ

# ವೇದಾಂತ_ಸಣ್ಣ_ಕಥೆ ಪರೋಕ್ಷಾಸತ್ಫಲಂ ಕರ್ಮ ಜ್ಞಾನಂ ಪ್ರತ್ಯಕ್ಷಸತ್ಫಲಮ್ | ಜ್ಞಾನಮೇವಾಭ್ಯಸೇತ್ತಸ್ಮಾದಿತಿ ವೇದಾನ್ತಡಿಣ್ಡಿಮಃ || ಹಿಂದೆ ನಗರವೆಂಬ ರಾಜ್ಯದಲ್ಲಿ ಶಿವಪ್ಪನಾಯಕನೆಂಬ ಒಬ್ಬ ಅರಸ ಆಳುತ್ತಿದ್ದನು. ಆತನ ರಾಜ್ಯದಲ್ಲಿ ವೀರಶೈವರಿಗೆ ಹೆಚ್ಚಿನ ಆಶ್ರಯವಿರುತ್ತಿದ್ದದ್ದರಿಂದ ಕೆಲವು ಜನ ಮೂಢರು ವೈಷ್ಣವಮತನಿಂದೆಯನ್ನು ಮಾಡುವದು ಅರಸನ ಮೆಚ್ಚುಗೆಗೆ ಕಾರಣವೆಂದು ಭಾವಿಸಿದ್ದರು. ಒಂದು ದಿನ ಒಬ್ಬ ಜಂಗಮಯ್ಯನ ಸಭೆಯಲ್ಲಿ ದೊರೆಯನ್ನು ಏಕವಚನದಿಂದಲೇ ಸಂಬೋಧಿಸುವದಕ್ಕೆ ಪ್ರಾರಂಭಿಸಿ "ಶಿವಗಾ, ಕೈಲಾಸದ ವರ್ಣನೆಯನ್ನು ಹೇಳುತ್ತೇನೆ, ಕೇಳು - ಅಲ್ಲಿ ಶ್ರೀಮಹಾದೇವನ ಪಾದಗಳನ್ನು ವಿಷ್ಣುವೇ ಒತ್ತುತ್ತಿರುವನು; ಲಕ್ಷ್ಮಿಯೇ ಆತನಿಗೆ ಬೀಸಣಿಗೆ ಹಾಕುತ್ತಿರುವಳು; ಬ್ರಹ್ಮಾದಿಗಳು 'ನಮಗೇನಾದರೂ ಊಳಿಗವು ಸಿಕ್ಕೀತೇ?' ಎಂದು ಕಾದುಕೊಂಡಿರುವರು. ಸಣ್ಣ ಪುಣ್ಣ ದೇವತೆಗಳ ಪಾಡಂತೂ ಹೇಳತೀರದು, ಅವರೆಲ್ಲ ಅಲ್ಲಿ ಅಡಿಯಾಳುಗಳಾಗಿ ಮಹಾದ್ವಾರದ ಹೊರಗೆ ಇರುವರು. ಇನ್ನು ವಿಷ್ಣುವನ್ನು ನಂಬಿಕೊಂಡಿರುವ ಹಾರುವರಿಗೆ ಆ ಲೋಕಕ್ಕೆ ಪ್ರವೇಶವೇ ಇಲ್ಲವೆಂಬುದನ್ನು ಮತ್ತೆ ಹೇಳಬೇಕೆ?" ಎಂದು ವೀರಾವೇಷದಿಂದ ಹೇಳುತ್ತಿದ್ದನು. ದೊರೆಯು ನಿಜವಾಗಿ ಶಿವಭಕ್ತನಾದರೂ ದುರಭಿಮಾನಿಯಲ್ಲವಾದ್ದರಿಂದ ಇದನ್ನು ಕೇಳುವದಕ್ಕೂ ಮನಸ್ಸೊಪ್ಪದೆ, ಅಯ್ಯನ ಶಿವಭಕ್ತನೆಂಬುದರ ಮೇಲೆ ಇಂಥ ಮಾತನಡಬೇಡವೆಂದು ಹೇಳುವದಕ್ಕೂ ನಾಲಗೆ ಬರದೆ ಚಿಂತಿಸುತ್ತಿ

ಮನವೆಂಬ ರಣರಂಗ

ಸತ್ಯಯುಗದಲ್ಲಿ ದೇವತೆಗಳ ಲೋಕಕ್ಕೂ ರಾಕ್ಷಸರ ಲೋಕಕ್ಕೂ ಜಗಳ ನಡೆಯುತ್ತಲೇ ಇತ್ತಂತೆ. ಮುಂದೆ ಕೃತಯುಗದಲ್ಲಿ ಒಂದೇ ಲೋಕದಲ್ಲಿ ಎರಡು ದೇಶಗಳ ನಡುವೆ ಜಗಳವಿದ್ದು ಯುದ್ದಗಳು ನಡೆಯುತ್ತಿದ್ದವಂತೆ. ದ್ವಾಪರಯುಗದಲ್ಲಿ ಒಂದೇ ವಂಶದಲ್ಲಿಯ ವಿವಿಧ ವ್ಯಕ್ತಿಗಳ ನಡುವೆ ಜಗಳ ನಡೆಯುತ್ತಿದ್ದುದನ್ನು ಪುರಾಣಗಳು ನಮಗೆ ತಿಳಿಸುತ್ತವೆ. ಈಗ ಕಲಿಯುಗದಲ್ಲಿ ಆಗಿರುವುದಾದರೂ ಏನು? ಒಂದೇ ಮನೆಯಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಪರಸ್ಪರ ಜಗಳ. ಇಂದು ಎಲ್ಲಾ ಟಿ.ವಿ ಚಾನೆಲ್ ಗಳಲ್ಲಿ ಮೂಡಿ ಬರುತ್ತಿರುವ ಧಾರವಾಹಿಗಳು ಬಿಂಬಿಸುತ್ತಿರುವುದೂ - ವೈಭವೀಕರಿಸುತ್ತಿರುವುದೂ ಇದನ್ನೇ - ಅಲ್ಲವೇ? ಸ್ವಲ್ಪ ಅವ ಲೋಕಿಸಿದರೆ ವ್ಯಕ್ತಿ - ವ್ಯಕ್ತಿಗಳ ನಡುವೆ ಮಾತ್ರ ಹೋರಾಟ ನಡೆಯುತ್ತಿರದೆ ವ್ಯಕ್ತಿ ತನ್ನೊಂದಿಗೆ ತಾನೇ ಹೋರಾಟ ಮಾಡುತ್ತಿರುವುದನ್ನೂ ಇಂದಿನ ವೈಜ್ಞಾನಿಕಯುಗದಲ್ಲಿ ಕಾಣಬಹುದಾಗಿದೆ. ಬೇರೊಬ್ಬ ವ್ಯಕ್ತಿಯೊಂದಿಗೆ ಕಾದಾಟ ಮಾಡುವುದನ್ನೇನೋ ಸಹಜ ಎಂದುಕೊಳ್ಳಬಹುದಾದರೂ ವ್ಯಕ್ತಿ ತನ್ನೊಂದಿಗೆ ತಾನೇ ಕಾದಾಡುತ್ತಾನೆ ಎಂಬುದು ನಂಬಲು ಕಷ್ಟವೇನಿಸಿದರೂ ಸತ್ಯವೇ ಆಗಿದೆ. ಈ ಕಾದಾಟ ನಡೆದಿರುವುದಾದರೂ ಎಲ್ಲಿ? ಆತನ ಮನಸ್ಸಿನಲ್ಲಿಯೇ. ಈ ಕಾದಾಟಕ್ಕೆ ಕಾರಣವಾದರೂ ಏನು? ಅದಕ್ಕೆ ಕಾರಣ ಒಂದಲ್ಲ, ಎರಡಲ್ಲ - ಹಲವಾರು! ಅದು ಕೀಳರಿಮೆಯಿಂದಾಗಿರಬಹುದು, ಪಾಪಪ್ರಜ್ಞೆಯಿಂದಾಗಿರಬಹುದು, ಅಹಂಕಾರದಿಂದಾಗಿರಬಹುದು, ಮನದಲ್ಲಿ ಮನೆ ಮಾಡಿಕೊಂಡು ಕುಳಿತಿರುವ ಆರುಜನ ವ

'ಓಂ' ಕಾರ ಮಹಿಮೆ

ಓಂ ಕಾರವ ಜಪಿಸೋ ಮನುಜಾ ಓಂಕಾರವ ಜಪಿಸೋ... ||ಪಲ್ಲವಿ|| ಓಂಕಾರವೆಂದರೆ ಶಬ್ದಬ್ರಹ್ಮನು | ಶುದ್ಧಬ್ರಹ್ಮನು ಜ್ಞಾನಸ್ವರೂಪನು ||1|| ಓಂಕಾರ ಮಂತ್ರವೆ ವೇದದ ಸಾರಾ | ಪ್ರಣವಸ್ವರೂಪಾ ಜಗದಾಧಾರಾ ||2|| ಅಮೃತಸ್ವರೂಪನು ಭಲೆ ಓಂಕಾರಾ | ತ್ರಿಗುಣಾತೀತಾ ನಿರ್ವಿಕಾರಾ ||3|| ಚಿತ್ತದಿ ನೆಲೆಗೊಳ್ಳಲು ಓಂಕಾರಾ | ಥಳಥಳಿಸುವದೈ ನಿನ್ನಾ ಕಾರಾ ||4|| ಓಂ ಎಂದೆನ್ನಲು ಮನಸಿಗೆ ಶಾಂತಿ | ಅದು ಕಳೆವುದು ಸಂಸಾರದ ಭ್ರಾಂತಿ ||5|| ಪರಮಪುರುಷನಾತನು ಓಂಕಾರಾ | ಧ್ಯಾನಿಸಿ ಪಡೆಯೋ ಸಾಕ್ಷಾತ್ಕಾರಾ ||6|| ಓಂಕಾರವೆ ನಾನೆಂಬುವ ರೂಪಾ | ಹೃದಯದಿ ರಾಜಿಪ ಸತ್ಯಸ್ವರೂಪಾ ||7|| ಹೃದಯದಿ ಝೇಂಕರಿಸಲು 'ಓಂ' ನಾದ | ದೊರೆವುದು ಆತ್ಮಾನಂದದ ಸ್ವಾದಾ ||8|| ಓಂಕಾರ ಬಿಲ್ಲಿಗೆ ಆತ್ಮವೆ ಬಾಣವು | ಗುರಿಯನು ಸೇರಲು ಬ್ರಹ್ಮಾಕಾರವು ||9|| ನಾರಸಿಂಹ ಮೆಚ್ಚಿದ ಓಂಕಾರವು | ಜೀವನ್ಮುಕ್ತಿಗು ಘನಸಾಧನವು ||10||

ಏಳೇಳು ಆತ್ಮನೇ

ಏಳೇಳು ಆತ್ಮನೇ, ನಿನ್ನ ನಿದ್ರೆಯ ಮುಗಿಸಿ, ಎದ್ದೇಳು ಆತ್ಮನೇ || ನೀ ಸರ್ವಾತೃ, ನೀ ಪರಮಾತ್ಮ, ನೀನೆ ಸರ್ವರ ಅಂತರಾತ್ಮ ನಿನ್ನನು ನೀನೇ ಮರೆತಿಹೆ ಏಕೆ? || ನೀ ಸರ್ವಜ್ಞ, ನೀನೇ ಪೂರ್ಣ, ಎಚ್ಚರಗೊಳ್ಳೊ ನೀನೇ ದೇವ ನಿನ್ನನ್ನು ನೀನೆ ಮರೆತಿಹೆ ಏಕೆ? ನೀನೇ ದೇವ, ನೀ ದೇವನುದೇವ, ನಿನ್ನಯ ಇಂದ್ರಿಯ ನಿನ್ನಯ ದಾಸರು | ಇದ ನೀನೇಕೆ ಮರೆತಿಹೆಯಲ್ಲ? ಇಂದ್ರಿಯಗಳಿಗೆ ಪ್ರಭುವಾಗಿ ಮೆರೆ ಮೂರು ಗುಣಗಳ ಅಧಿಪತಿಯಾಗಿರೆ ನಿನ್ನನ್ನು ನೀನು ಅರಿತುಕೊಂಡರೆ ನೀನೇ ಎಲ್ಲರ ಅಂತರಾತ್ಮನು.

ಶ್ರೀರಾಮಕರ್ಣಾಮೃತಮ್ (ಶ್ರೀಶಂಕರಾಚಾರ್ಯಕೃತ)

ಶ್ರೀರಾಮಃ ಸಕಲೇಶ್ವರೋ ಮಮ ಪಿತಾ ಮಾತಾ ಚ ಸೀತಾ ಮಮ ಭ್ರಾತಾ ಬ್ರಹ್ಮ ಸಖಾ ಪ್ರಭಂಜನಸುತಃ ಪತ್ನೀ ವಿರಕ್ತಿಃ ಪ್ರಿಯಾ | ವಿಶ್ವಾಮಿತ್ರವಿಭೀಷಣಾದಿವಶಗಾ ಮಿತ್ರಾಣಿ ಬೋಧಸ್ಸುತೋ ಭಕ್ತಿಃ ಶ್ರೀಹರಿಸಂಗತಾ ರತಿಸುಖಂ ವೈಕುಂಠಮಸ್ಮತ್ಪದಮ್ ||1||     ಎಲ್ಲರಿಗೂ ಒಡೆಯನಾದ ಶ್ರೀರಾಮನು ತನ್ನ ತಂದೆ, ಸೀತೆಯು ನನ್ನ ತಾಯಿ. ಬ್ರಹ್ಮನು ಸೋದರನು. ವಾಯುಪುತ್ರನಾದ(ಹನುಮಂತನು) ಸ್ನೇಹಿತನು. ವೈರಾಗ್ಯಳೆಂಬುವಳೇ ಪ್ರಿಯಳಾದ ಹೆಂತಿಯು. ವಿಶ್ವಾಮಿತ್ರ, ವಿಭೀಷಣರೇ ಮುಂತಾದ ಅನುಯಾಯಿಗಳೇ ನನ್ನ ಮಿತ್ರರು. ಜ್ಞಾನವೇ ಪುತ್ರನು. ಶ್ರೀಹರಿಯಲ್ಲಿ ಅನುರಕ್ತವಾದ ಭಕ್ತಿಯೇ ರತಿಸುಖವು, ವೈಕುಂಠವೇ ನಮ್ಮ ಊರು. ರಾಮಂ ಶ್ಯಾಮಾಭಿರಾಮಂ ರವಿಶಶಿನಯನಂ ಕೋಟಿಸೂರ್ಯಪ್ರಕಾಶಂ ದಿವ್ಯಂ ದಿವ್ಯಾಸ್ತ್ರಪಾಣಿಂ ಶರಮುಖಶರಧಿಂ ಚಾರುಕೋದಂಡಹಸ್ತಮ್ | ಕಾಲಂ ಕಾಲಾಗ್ನಿರುದ್ರಂ ರಿಪುಕುಲದಹನಂ ವಿಘ್ನವಿಚ್ಛೇದದಕ್ಷಂ ಭೀಮಂ ಭೀಮಾಟ್ಟಹಾಸಂ ಸಕಲಭಯಹರಂ ರಾಮಚಂದ್ರಂ ಭಜೇಹಮ್ ||2||         ಕಪ್ಪಾದ ದೇಹಕಾಂತಿಯುಳ್ಳ, ಸೂರ್ಯಚಂದ್ರರೇ ಕಣ್ಣಾಗಿ ಉಳ್ಳ, ಕೋಟಿ ಸೂರ್ಯರಂತೆ ಹೊಳೆಯುವ, ಪ್ರಕಾಶರೂಪನಾದ, ದಿವ್ಯವಾದ ಅಸ್ತ್ರಗಳನ್ನು ಹಿಡಿದಿರುವ, ಸಮುದ್ರದೋಪಾದಿಯ ಬಾಣಸಮೂಹವುಳ್ಳ, ಬಿಲ್ಲನ್ನು ಹಿಡಿದ ಸುಂದರವಾದ ಕೈಯುಳ್ಳ, (ರಾಕ್ಷಸರಿಗೆ) ಮೃತ್ಯುರೂಪನಾದ, ಕಾಲಾಗ್ನಿಯಂತೆ ಭಯಂಕರನಾದ, ಶತ್ರುಗಳ ಗುಂಪನ್ನು ಸುಡುವ, ಅಡ್ಡಿಗಳನ್ನು ತುಂಡುಮಾಡುವದರಲ್ಲಿ ಸಮರ್ಥನಾದ, ಭೀಮನೂ, ಅಂಜಿಕೆಯುಂಟುಮಾಡುವ ಭಾರಿಯ