Posts

Showing posts with the label ಸ್ಥಳ ಪುರಾಣ

ಶಬರಿಮಲೆಯ ಆ 18 ಮೆಟ್ಟಿಲುಗಳ ವಿಶೇಷತೆಗಳು

Image
1. ಕಾಮವೆಂಬ ಮೊದಲನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಪೂರ್ವಜನ್ಮದ ಪುಣ್ಯ ಕರ್ಮದ ಜ್ಞಾನ ದೊರೆತು ಮನುಷ್ಯ ಮಾನಸಿಕವಾಗಿ ಶುದ್ಧಿ ಆಗುತ್ತಾನೆ. ಈ ಮೆಟ್ಟಿಲಿನ ಅಧಿದೇವತೆ ಗೀತಾದೇವಿ. 2. ಕ್ರೋಧವೆಂಬ ಎರಡನೇ ಮೆಟ್ಟಿಲುನ್ನು ಸ್ಪರ್ಶಿಸುವುದರಿಂದ ತನ್ನ ಕೋಪವೇ ತಾನೇ ಶತ್ರು ಎಂಬ ಸತ್ಯವೂ ತನ್ನ ಅರಿವಿಗೆ ಬರುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಗಂಗಾದೇವಿ. 3. ಲೋಭವೆಂಬ ಮೂರನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ತನ್ನೊಳಗಿನ ಪಿಶಾಚತ್ವ ನಾಶವಾಗುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಗಾಯತ್ರಿ ದೇವಿ 4. ಮೋಹವೆಂಬ ನಾಲ್ಕನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಜ್ಞಾನ ಯೋಗ ತನ್ನದಾಗಿಸಿಕೊಳ್ಳುತ್ತಾನೆ. ಈ ಮೆಟ್ಟಿಲಿನ ಅಧಿದೇವತೆ ಸೀತಾದೇವಿ. 5. ಮದವೆಂಬ ಐದನೇ ಮೆಟ್ಟಿಲು ಕರ್ಮ ಸನ್ಯಾಸ ಯೋಗದ ಪ್ರತೀಕವಾಗಿದೆ. ಈ ಮೆಟ್ಟಿಲಿನ ಅಧಿದೇವತೆ ಸತ್ಯವತಿ ದೇವಿ. 6. ಮಾತ್ಸರ್ಯವೆಂಬ ಆರನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ದಾನ ಫಲ ದೊರೆಯುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಸರಸ್ವತಿ ದೇವಿ. 7. ದಂಬವೆಂಬ ಏಳನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ವಿಜ್ಞಾನ ಯೋಗದ ಫಲ ದೊರೆತು ಪುನರ್ಜನ್ಮ ಇರುವುದಿಲ್ಲ. ಈ ಮೆಟ್ಟಿಲಿನ ಅಧಿದೇವತೆ ಬ್ರಹ್ಮ ವಿದ್ಯಾ ದೇವಿ. 8. ಅಹಂಕಾರವೆಂಬ ಎಂಟನೇ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಸ್ವಾರ್ಥ ರಾಕ್ಷಸತ್ವ ನಾಶವಾಗುತ್ತದೆ. ಈ ಮೆಟ್ಟಿಲಿನ ಅಧಿದೇವತೆ ಬ್ರಹ್ಮವಲ್ಲಿ ದೇವಿ. 9. ನೇತ್ರವೆಂಬ ಒಂಬತ್ತನೇ ಮೆಟ್ಟಿಲನ್ನು ಸ್ಪರ್...

ಶ್ರೀ ಹಿಮವದ್ ಗೋಪಾಲಸ್ವಾಮಿ

ಮೈಸೂರಿನ ದಕ್ಷಿಣಕ್ಕೆ ಸುಮಾರು 80 ಕಿ. ಮೀ. ದೂರದಲ್ಲಿದೆ ಹಿಮವದ್‌ ಗೋಪಾಲಸ್ವಾಮಿ ಬೆಟ್ಟ. ಊಟಿ ಹೆದ್ದಾರಿಯ ಅಂಚಿನಲ್ಲಿರುವ ಈ ಪ್ರಕೃತಿ ಸೌಂದರ್ಯ ತಾಣ ಪ್ರವಾಸಿಗರ, ಚಾರಣಪ್ರಿಯರ ಸ್ವರ್ಗವಾಗಿಯೂ ಖ್ಯಾತಿಗೊಂಡಿದೆ. ಪ್ರಚಾರದಿಂದ ಸ್ವಲ್ಪ ದೂರ ಉಳಿದಿದ್ದರೂ ದಟ್ಟವಾಗಿರುವ ಪ್ರಾಕೃತಿಕ ವೈಭವ, ಹಸಿರಿನ ಸಿರಿಸಂಪತ್ತಿನ ನಡುವೆ ಬೃಹದಾಕಾರವಾಗಿ ಚಾಚಿರುವ ಬಂಡೆಕಲ್ಲುಗಳು, ಕೊಳಗಳು, ಚಿಲಿಪಿಲಿಗುಟ್ಟುವ ಹಕ್ಕಿಗಳ ನಿನಾದ, ಮೈಸೋಕುವ ತಂಗಾಳಿಯ ಹಿತಾನುಭವ, ಆಗಸದ ಮರೆಯಿಂದ ಚಿತ್ರವಿಚಿತ್ರವಾಗಿ ಕಾಣುವ ಮೋಡಗಳ ಆಟ. ಸ್ವರ್ಗವೇ ಕೈವಶವಾದಂಥ ಅವಿಸ್ಮರಣೀಯ ಅನುಭವ ಇಲ್ಲಿಗೆ ತೆರಳಿದರೆ ಸಿಗದಿರದು. ಪ್ರಕೃತಿಯ ಜೊತೆ ಒಂದಾಗಿ ಫೋಟೋ ತೆಗೆಸಿಕೊಳ್ಳಲು ಇಲ್ಲಿನ ಪ್ರಾಕೃತಿಕ ಸೊಬಗು ಹೇಳಿ ಮಾಡಿಸಿದ ತಾಣವಾಗಿದೆ.  ಬೆಟ್ಟದ ಮಡಿಲಲ್ಲಿ ಕಾಡಿನ ಗರ್ಭದಲ್ಲಿ ಲೀನವಾಗಿ ಬಿಡಬೇಕೆಂಬ ಉತ್ಕಟ ಬಯಕೆಯಾಗುವುದಂತೂ ಸಹಜ. ದಕ್ಷಿಣ ಗೋವರ್ಧನಗಿರಿಗೆ ಇನ್ನೊಂದು ಹೆಸರು ಕಮಲಾಚಲ. ಈ ಗಿರಿಕ್ಷೇತ್ರದಲ್ಲಿಯೇ ಶ್ರೀ ಹಿಮವದ್ ಗೋಪಾಲಸ್ವಾಮಿ ನೆಲೆಸಿರುವದು ಈ ಕ್ಷೇತ್ರದ ಮಹಿಮೆ ಸಂಕ್ಷಿಪ್ತವಾಗಿ ಹೀಗಿದೆ. ದ್ವಾಪರ ಯುಗದಲ್ಲಿ ಹಿಮವಂತ ಪರ್ವತನ ಕುಮಾರಿಯಾದ ಗಿರಿಜೆಯ ಕಲ್ಯಾಣ ಮಹೋತ್ಸವಕ್ಕೆ ಉತ್ತರ ದೇಶದ ಕಾಶೀ ಪಟ್ಟಣಕ್ಕೆ ಮುವ್ವತ್ತ ಮೂರು ಕೋಟಿ ದೇವತೆಗಳು ಬ್ರಹ್ಮ ರುದ್ರಾದಿಗಳು, ವ್ಯಾಸಪರಾಶರಾದಿ ಮುಖ್ಯವಾದ ಮಹಾ ಋಷಿಗಳು ಆಗಮಿಸಿದ್ದರು. ಸಕಲ ದೇವಾನುದೇವಾದಿ ದೇವತೆಗಳೆಲ್ಲ...