Posts

save chamundi hill

Image
ಇಂದಿನ ವಿಶ್ನವಾಣಿಯಲ್ಲಿ ನನ್ನ ಪುಟ್ಟ ಲೇಖನ. (24-5-16) https://www.vishwavani.news/the-beauty-of-the-chamundi-hil…/ ‪#‎ ಚಾಮುಂಡಿ_ಬೆಟ್ಟ_ಉಳಿಸಿ‬

ಗೋದಾಸ್ತುತಿಃ (ಸಂಗ್ರಹ) - 27

ಜಾತಾಮಪರಾಧಮಪಿ ಮಾಮನುಕಂಪ್ಯ ಗೋದೇ ಗೋಪ್ತ್ರೀಯದಿ ತ್ವಮಸಿ ಯುಕ್ತಮಿದಂ ಭವತ್ಯಾಃ | ವಾತ್ಸಲ್ಯನಿರ್ಭರತಯಾ ಜನನೀ ಕುಮಾರಂ ಸ್ತನ್ಯೇನ ವರ್ಧಯತಿ ದಷ್ಟಪಯೋಧರಾಪಿ ||27|| ಗೋದೇ = ಎಲೈ ಗೋದಾದೇವಿಯೇ, ಜಾತಾಪರಾಧಂ = ಅಪರಾಧವನ್ನೇ ಎಸಗುತ್ತಿರುವ, ಮಾಂ ಅಪಿ = ನನ್ನನ್ನೂ ಕೂಡ, ಯದಿ = ಒಂದು ವೇಳೆ, ಅನುಕಂಪ್ಯ = ದಯತೋರಿ, ಗೋಪ್ತ್ರೀ = ರಕ್ಷಿಸುವವಳಾಗಿರುವ, ಇದಂ = ಈ ನಿನ್ನ ಗುಣವು, ಭವತ್ಯಾಃ - ನಮಗೆ, ಯುಕ್ತಂ = ಯೋಗ್ಯವಾಗಿಯೇ ಇದೆ. (ಏಕೆಂದರೆ), ಜನನೀ = ತಾಯಿಯಾದರೋ, ದಷ್ಟಪಯೋಧರಾಪಿ = ಕಚ್ಚಲ್ಪಟ್ಟ ಮೊಲೆಯುಳ್ಳವಳಾದರೂ, ಕುಮಾರಂ = (ಕಚ್ಚಿದ) ತನ್ನ ಶಿಶುವನ್ನು, ವಾತ್ಸಲ್ಯನಿರ್ಭರತಯಾ = ಅತ್ಯಧಿಕವಾದ ವಾತ್ಸಲ್ಯ ಗುಣದಿಂದ, ಸ್ತನ್ಯೇನ = ತನ್ನ ಮೊಲೆಹಾಲನ್ನುಣಿಸಿಯೇ, ವರ್ಧಯತಿ - ಪೋಷಿಸುತ್ತಾಳೆ.     ಎಲೈ! ಗೋದಾದೇವಿಯೇ, ಅಪರಾಧವನ್ನೇ ಎಸಗುತ್ತಿರುವ, ನನ್ನನ್ನೂ ಒಂದು ವೇಳೆ ನೀನು ಕೃಪೆತೋರಿ ರಕ್ಷಿಸುವವಳಾದರೆ, ಈ ನಿನ್ನ ಗುಣವಾದರೋ ನಿನಗೆ ಉಚಿತವಾದುದೇ ಆಗಿದೆ. ಏಕೆಂದರೆ, ತಾಯಿಯಾದವಳು ತನ್ನ ಶಿಶುವು ಸ್ತನ್ನಪಾನ ಮಾಡುವಲ್ಲಿ ಕೆಲವೇಳೆಯ್ಲಲ್ಲಿ ಸ್ತನಗಳನ್ನು ಕಚ್ಚಿದರೂ, ತನ್ನ ಸ್ತನವನ್ನು ಅದು ಕಚ್ಚಿತೆಂದು ಅದರ ದೋಷವನ್ನು ಗ್ರಹಿಸಿ ಅದರ ಮೇಲೆ ಕೋಪತೋರದೆ, 'ದೋಷ ಅದರ್ಶಿತ್ವಂ ವಾತ್ಸಲ್ಯಂ' - ಎಂದು ಹೇಳುವಂತೆ, ಆ ಶಿಶುವಿನ ದೋಷವನ್ನು ಲೆಕ್ಕಿಸದೆ ವಾತ್ಸಲ್ಯಪೂರ್ಣಳಾಗಿ ಮತ್ತೆ ಅದಕ್ಕೆ ತನ್ನ ಸ್ತನ್ಯಪಾನ ಮಾಡಿಸಿ ಅದನ್ನ...

ಗೋದಾಸ್ತುತಿಃ (ಸಂಗ್ರಹ) - 26

ರಂಗೇ ತಟತ್ ಗುಣವತೋರಮಯೈವ ಗೋದೇ ಕೃಷ್ಣಾಂಬುದಸ್ಯ ಘಟಿಕಾಂ ಕೃಪಯಾ ಸುವೃಷ್ಟ್ಯಾ | ದೌರ್ಗತ್ಯದುರ್ವಿಷವಿನಾಶ ಸುಧಾನದೀಂ ತ್ವಾಂ ಸನ್ತಃ ಪ್ರಪದ್ಯ ಶಮಯನ್ತ್ಯಚಿರೇಣ ತಾಪಾನ್ ||26|| ಗೋದೇ = ಎಲೈ! ಗೋದಾದೇವಿಯೇ, ರಂಗೇ = ಶ್ರೀರಂಗದಲ್ಲಿ, ತಟಿತ್ ಗುಣವತಃ = ಮಿಂಚಿನ ಬಳ್ಳಿಯ ಗುಣದಿಂದ ಕೂಡಿದ, ರಮಯಾ = ಮಹಾಲಕ್ಷ್ಮಿಯಿಂದ ಕೂಡಿದ, ಕೃಷ್ಣಾಂಬುದಸ್ಯ = (ನೀಲಮೇಘಶ್ಯಾಮನಾದ) ಕೃಷ್ಣವಾದ ಮೋಡದಿಂದ, ಕೃಪಯಾ = ದಯೆಯಿಂದ, ಸುವೃಷ್ಟ್ಯಾ = ಚೆನ್ನಾಗಿ ಮಳೆಯಾದುದಿರಿಂದ, ಘಟಿತಾಂ = ಉಂಟಾದ, ದೌರ್ಗತ್ಯ=ದುರ್ಗತಿಯಿಂದ ಉಂಟಾದ, ದುರ್ವಿಷ=ಕೆಟ್ಟ ವಿಷವನ್ನು, ವಿನಾಶ=ನಾಶಪಡಿಸುವ, ಸುಧಾನದೀಂ = ಅಮೃತದ ನದಿಯಂತಿರುವ, ತ್ವಾಂ=ನಿನ್ನನ್ನು, ನಸ್ತಃ = ಸತ್ಪುರುಷರು, ಪ್ರಪದ್ಯ= ಆಶ್ರಯಿಸಿ, ಅಚಿರೇಣ=ಕೆಲವೇ ಸಮಯದಲ್ಲಿ, ತಾಪಾನ್ = ಆಧಿಭೌತಿಕ, ಆಧಿದೈವಿಕ ಆಧ್ಯಾತ್ಮಿಕ ತಾಪಗಳನ್ನು, ಶಮಯಂತಿ = ಶಮನಮಾಡಿಕೊಳ್ಳುತ್ತಾರೆ.     ಎಲೈ! ಗೋದಾದೇವಿಯೇ ರಂಗನಾಥನು ನೀರುಂಡ ಮೇಘದಂತೆ ನೀಲಮೇಘಶ್ಯಾಮನಾಗಿದ್ದಾನೆ. ಅವನ ವಕ್ಷಸ್ಥಲದಲ್ಲಿರುವ ಲಕ್ಷ್ಮಿಯು "ನೀಲತೋಯದ ಮಧ್ಯಸ್ಥಾವಿದ್ಯುಲ್ಲೇಖೇವ ಭಾಸ್ಪರಾ" ಎಂದು ಹೇಳುವಂತೆ ಮಿಂಚಿನ ಬಳ್ಳಿಯಂತಿದ್ದಾಳೆ ಅವನ ಕೃಪೆಯೆಂಬ ಮಳೆಯಿಂದಾದ ಅಮೃತ ರಸನದಿಯ ಪ್ರವಾಹದಂತೆ ನೀನಿದ್ದೀಯೇ, ಆದುದರಿಂದಲೇ, ಸತ್ಪುರುಷರು, ದುರ್ಗತಿಯಿಂದುಂಟಾದ ಕೆಟ್ಟ ವಿಷದಂತಿರುವ ಜನ್ಮ ಮರಣ ಚಕ್ರದಿಂದ ಕೂಡಿದ ಸಂಸಾರವನ್ನು ನಾಶಪಡಿಸುವ, ಅಮೃತರಸ...

ದೇಶ ಮತ್ತು ಧರ್ಮರಕ್ಷಕ ಶ್ರೀ ವಿದ್ಯಾರಣ್ಯರು

ಕಲಿಕೆಯ ಕೊನೆಯ ಹಂತದಲ್ಲಿದ್ದಾಗ ಗುರು ವಿದ್ಯಾತೀರ್ಥರು ಇತರ ಶಿಷ್ಯರಿಗೆ ಕೇಳಿದಂತೆ ಪ್ರಿಯ ಶಿಷ್ಯ ಮಾಧವನಿಗೂ ಕೇಳಿದರು: "ಮಾಧವ, ನೀನು ಮುಂದೆ ಏನಾಗಬೇಕೆಂದಿರುವೆ?" ಮಾಧವ ಉತ್ತರಿಸಿದ್ದ: "ಗುರುಗಳೇ, ಮನುಷ್ಯನಲ್ಲಿ ನಾನು ಎಂಬ ಅಹಮಿಕೆ ಇರುವವರೆಗೆ, ಏನನ್ನಾದರೂ ಸಾಧಿಸುವುದು ಕಷ್ಟ. ದೇವರ ಇಚ್ಛೆ ಇದ್ದರೆ, ಕಾಣುವ ದೇವರಾದ ಮನುಕುಲದ ಸೇವೆಗಾಗಿ, ಮೌಢ್ಯದ ಕಾರಣದಿಂದ ಮಲಗಿರುವ ದೇಶದ ಜಾಗೃತಿಗಾಗಿ ನನ್ನ ಜೀವನವನ್ನು ಉಪಯೋಗಿಸುವೆ. ನನ್ನ ದೇಶ ಮತ್ತು ಧರ್ಮದ ರಕ್ಷಣೆಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ನನ್ನ ಜೀವನ ಮುಡುಪಿಡಬೇಕೆಂದಿದ್ದೇನೆ." ಈ ಉತ್ತರದಿಂದ ಆನಂದಿತರಾದ ಗುರುಗಳು ಅವನನ್ನು ಆಲಂಗಿಸಿಕೊಂಡು, "ಮಗು, ಇತರರ ಒಳಿತಿಗೆ ಕೆಲಸ ಮಾಡುವುದು, ದೇಶ, ಧರ್ಮ, ಸ್ವಾತಂತ್ರ್ಯದ ಸಲುವಾಗಿ ಜೀವನ ಮೀಸಲಿಡುವುದು ಪವಿತ್ರವಾದುದು. ನಿನ್ನ ಆದರ್ಶದ ಪಾಲನೆಯಲ್ಲಿ ಯಶಸ್ವಿಯಾಗು. ನಿನ್ನ ಸೇವೆಯಿಂದ ಜಗತ್ತಿಗೆ ಒಳಿತಾಗಲಿ" ಎಂದು ಹೃತ್ಪೂರ್ವಕವಾಗಿ ಆಶೀರ್ವದಿಸಿದರು. ಆ ಮಾಧವನೇ ಮುಂದೆ ವಿದ್ಯಾರಣ್ಯರೆಂಬ ಹೆಸರಿನಿಂದ ಪ್ರಸಿದ್ಧನಾಗಿ ವಿಜಯನಗರ ಸಂಸ್ಥಾನದ ಸ್ಥಾಪಕನೆನಿಸಿದ್ದು ಈಗ ಇತಿಹಾಸ. ಮಾಧವನ ಈ ನಿರ್ಧಾರಕ್ಕೆ ದೇಶದ ಅಂದಿನ ಸ್ಥಿತಿ ಗತಿಗಳೇ ಪ್ರಮುಖ ಕಾರಣವಾಗಿದ್ದಿರಬಹುದು. ಪಂಪಾಕ್ಷೇತ್ರದಲ್ಲಿ (ಈಗಿನ ಹಂಪೆ) ಮಾಯನಾಚಾರ್ಯ ಮತ್ತು ಶ್ರೀಮತೀದೇವಿಯವರ ಪುತ್ರನಾಗಿ ಕ್ರ...

ಶಂಕರ-ರಾಮಾನುಜ-ಮಧ್ವರ ಬೋಧನೆಗಳ ಮಹತ್ವ

ಆಚಾರತ್ರಯರಾದ ಶ್ರೀ ಶಂಕರ ಶ್ರೀ ರಾಮಾನಜರ ಹಾಗೂ ಶ್ರೀ ಮಧ್ವರ ಬೋಧನೆಗಳು ಅತ್ಯಂತ ಪ್ರಸ್ತುತ ಅವರ ಸಂದೇಶದ ಮಹತ್ವವೇನು? ತನ್ನ ಸುತ್ತಮುತ್ತ ಆವರಿಸಿರುವ ನಿಗೂಢ ವಿಶ್ವವನ್ನು ನೋಡಿ ಮಾನವ ಚಕಿತನಾಗಿದ್ದಾನೆ. ಈ ವಿಶ್ವಕ್ಕೆ ಒಂದು ಮೂಲವಿರಬೇಕು. ಅದು ಯಾವುದು? ಆ ಮೂಲದ ಬಗ್ಗೆ ಅವನಿಗಿರುವ ತಾತ್ವಿಕಜಿಜ್ಞಾಸೆ ಸಹಜವಾದುದು. ವಿಶ್ವದಲ್ಲಿ ಸುಖಭೋಗ-ದುಃಖಾದಿಗಳನ್ನು ಅನುಭವಿಸಿ, ಸಂಸಾರದ ಜಂಜಾಟದಿಂದ ಹೊರಬರಲು ಪ್ರಯತ್ನಿಸುತ್ತಿರುವ ನಾನು ಯಾರು? ನಾನು ಎಲ್ಲಿಂದ ಬಂದೆ ನನ್ನ ಗುರಿ ಯಾವುದು? ಅದರ ಮಾರ್ಗವೇನು? ಮುಂತಾದ ಅಂತರಿಕ ರೂಢಮೂಲ ಸಮಸ್ಯೆ-ಸಂದೇಹಗಳು ಅವನನ್ನು ಕಾಡುತ್ತಿವೆ. ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯಲು ವೇದಾಂತಗಳು ಹೊರಟಿವೆ. ಅವುಗಳೇ ಅದ್ವೈತ, ವಿಶಿಷ್ಟಾದ್ವೈತ, ದ್ವೈತ, ದ್ವೈತಾದ್ವೈತ, ಶುದ್ಧ ಅದ್ವೈತ, ಶಕ್ತಿವಿಶಿಷ್ಟಾದ್ವೈತ ಇತ್ಯಾದಿ. ಆದಿ ಶಂಕರಾಚಾರ್ಯರು ಅದ್ವೈತವೇದಾಂತದ ಪ್ರಭಾವೀಪೂರ್ಣ ಪ್ರತಿಪಾದಕರು. ಜಗದ್ವಿಖ್ಯಾತ ತಾತ್ವಿಕರು; ಪ್ರಚಂಡ ಪಂಡಿತರು ಹಾಗೂ ಧರ್ಮದೀಪಕರು. ಶ್ರೀ ಗಾಯತ್ರೀ ಮಂತ್ರವಿಹಾರಿಗಳು. ಖಂಡ ತುಂಡವಾಗಿದ್ದ ಭಾರತೀಯ ಸಮಾಜವನ್ನು ಒಗ್ಗೂಡಿಸಿದವರು. ವೇದೋಪನಿಷತ್ತುಗಳ ದಿವ್ಯಬೋಧನೆಗಳನ್ನು ಜನಮನದಲ್ಲಿ ನಾಟಿಸಿದವರು. ಶ್ರೀ ಶಿವಗುರು ಶ್ರೀಮತಿ ಆರ್ಯಾಂಬ ದಂಪತಿಗಳಿಗೆ ಮಗನಾಗಿ ಕೇರಳದ ಕಾಲಟಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು ಅವರ ಕಾಲ ಕ್ರಿ.ಶ ಸುಮಾರು 8ನೇ ಶತಮಾನ...

ಆಪಸ್ತಂಬ ಸ್ಮೃತಿ

    ಆಪಸ್ತಂಭರು ತನ್ನ ಸ್ಮೃತಿಯ ಪ್ರಾರಂಭದಲ್ಲಿ ಸಂಸಾರಿಗಳಿಗೆ ಹಸುಗಳನ್ನು ಸಾಕುವುದು ಉತ್ತಮ ಕಾರ್ಯ ಎಂದು ತಿಳಿಸಿದ್ದಾರೆ. ಗೋಹತ್ಯೆಯು ಮಹಾ ಪಾಪವೆಂದೂ ತಿಳಿಸಿದ್ದಾರೆ. ರೋಗ ಬಂದಾಗ, ಅಂತಹ ಗೋವುಗಳಿಗೆ ಚಿಕಿತ್ಸೆ ಮಾಡುವುದು, ಮಾಡಿಸುವುದು, ತನ್ಮೂಲಕ ಅವುಗಳ ರಕ್ಷಣೆ, ಶುಶ್ರೂಷೆಗಳನ್ನು ಮಾಡುವುದು ಮಹಾನ್ ಪುಣ್ಯಕಾರ್ಯವೆಂದು ತಿಳಿಸಿದ್ದಾರೆ. ಅದು ಗೋವುಗಳ ಬಗೆಗೆ ಉತ್ತಮ ನಿಯತ್ತನ್ನು ತೋರಿಸುವುದು ಇದು ಪುಣ್ಯ ಕಾರ್ಯವೇ ಆಗಿರುತ್ತದೆ ಅನಾರೋಗ್ಯದ ಕಾರಣ ಹಸುವಿಗೆ ಶಸ್ತ್ರಚಿಕಿತ್ಸೆ, ಆಯುಧದ ಪ್ರಯೋಗ ಮಾಡಿದ್ದೇ ಆದರೆ ಅದು ಪಾಪವಾಗುತ್ತದೆ ಎಂಬ ನಂಬಿಕೆ ಅನೇಕರಲ್ಲಿದೆ ಹೀಗೆ ಔಷಧೋಪಚಾರಗಳು ಮಾಡುವಾಗ ಗೋವು ಮರಣಿಸಿದಲ್ಲಿ ಅದರ ಪಾಪವು (ಗೋಹತ್ಯಾ ದೋಷವು) ಪ್ರಾಪ್ತವಾಗುತ್ತದೆ ಎಂದು ನಂಬುವವರೂ ಕೆಲವರಿದ್ದಾರೆ. ಆದುದರಿಂದ ಕಾಯಿಲೆ ಬಿದ್ದ ಗೋವುಗಳನ್ನು ಪಶು ವೈದ್ಯ ಶಾಲೆಗೆ ತೋರಿಸುವುದೇ ಇಲ್ಲ. ಇದು ತಪ್ಪು ಎನ್ನುತ್ತಾರೆ ಆಪಸ್ತಂಭರು. ಯಂತ್ರೇಣ ಗೋಚಿಕಿತ್ಸಾಥೇ ಮೃತಗರ್ಭ ವಿಮೋಚನ | ಯತ್ರೇ ಕೃತೆ ವಿಪನ್ನಿಚ್ಚೇತ್ ಪ್ರಾಯಶ್ಚಿತ್ತೇನ ವಿದ್ಯತೆ ||1-3||     ಗೋ-ಚಿಕಿತ್ಸೆ ಮಾಡುವಾಗ ಅಥವಾ ಅದರ ಗರ್ಭದಿಂದ ಸತ್ತ ಕರುವನ್ನು ಹೊರ ತೆಗೆಯುವಾಗ ಏನಾದರೂ ಅಪಾಯ ಸಂಭವಿಸಿದರೆ, ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾದ ಅವಶ್ಯಕತೆಯಿಲ್ಲ.     ಇದೇ ರೀತಿಯಲ್ಲಿ ಪ್ರಾಣಿಗಳಿಗೆ ಅವು...

Sundara Kanda - Chapter [Sarga] 1

Introduction This first chapter of Sundara Kanda describes Hanuma's preparations to cross the ocean in search of Seetha. Mighty Hanuma's flight over the ocean is described in a glorious detail. Hanuma's encountering of Mainaka, Surasa and Simhika form important phases of His flight.  ततो रावणनीतायाः सीतायाः शत्रुकर्शनः | इयेष पदमन्वेष्टुं चारणाचरिते पथि ||५-१-१ 1. tataH = after that; shatrukarshanaH = the destroyer of foes (Hanuma); iyeshha = desired to (travel in); pathi = the path; chaaraNaa charite = tread by chaaranas; anveshhTum = to search for; siithayaaH padam = Seetha's place; raavaNa niitaayaaH = taken away by Ravana. After that, Hanuma, the destroyer of foes, desired to travel in the sky where celestials like chaaranas tread, to search for Seetha, who was taken away by Ravana. दुष्करं निष्प्रतिद्वन्द्वं चिकीर्षन् कर्म वानरः | समुदग्रशिरोग्रीवो गवांपतिरिवाबभौ || ५-१-२ 2. vaanaraH = The monkey (Hanuma); chikiirshhan = who desired to perform; karma = a deed; du...