ಉತ್ಥಾನದ್ವಾದಶಿ

    ಕಾರ್ತಿಕಮಾಸದಲ್ಲಿ ಬರುವ ಹಬ್ಬಗಳ್ಲಲ್ಲಿ ಉತ್ಥಾನದ್ವಾದಶಿಗೆ ಒಂದು ವೈಶಿಷ್ಟ್ಯವಿದೆ. ಸಾಂಪ್ರದಾಯಿಕರು ಕಾರ್ತಿಕ ಶುಕ್ಲ ದ್ವಾದಶಿಯಂದು ಈ ಹಬ್ಬವನ್ನು ಆಚರಿಸುತ್ತಾರೆ. ಆ ದಿನ ಭಗವಾನ್ ಮಹಾವಿಷ್ಣುವು ಕ್ಷೀರಸಾಗರದಲ್ಲಿ ಮಲಗಿದ್ದವನು ಎದ್ದು ಬೃಂದಾವನಕ್ಕೆ ದಯಮಾಡಿಸಿದನೆಂದೂ ಭಕ್ತರಿಗೆಲ್ಲ ದರ್ಶನವನ್ನಿತ್ತನೆಂದೂ ಪುರಾಣಗಳಲ್ಲಿ ಬರೆದಿದೆ. ವಿಶೇಷವಾಗಿ ಆ ದಿನ ತುಳಸೀಗಿಡದ ಬುಡದಲ್ಲಿ ನೆಲ್ಲಿಯ ಮರದ ರೆಂಬೆಯನ್ನು ನೆಟ್ಟು ಶ್ರೀಕೃಷ್ಣಭಗವಂತನನ್ನು ಸ್ಥಾಪಿಸಿ ಹಗಲು ತುಲಸೀ-ಧಾತ್ರೀಸಹಿತನಾದ ಭಗವಂತನಿಗೆ ಪೂಜೆಯನ್ನು ಮಾಡುವದು, ರಾತ್ರಿಯಲ್ಲಿ ಪುನಃ ಅರ್ಚನೆಮಾಡಿ ಕ್ಷೀರಾಬ್ಧಿಪೂಜೆಯೆಂಬ ವಿಶೇಷೋತ್ಸವವನ್ನೂ ನಡೆಸುವದು ರೂಢಿಯಲ್ಲಿದೆ.
    ಭಗವಂತನಿಗೆ ಎಚ್ಚರವಾಗಲಿ, ನಿದ್ರೆಯಾಗಲಿ ಇಲ್ಲವೆಂದು ಅವಸ್ಥಾನತ್ರಯಗಳನ್ನೂ ಮೀರಿದ ತುರೀಯನೆಂದೂ ಅವಸ್ಥೆಯೆಂದೂ ಉಪನಿಷತ್ತುಗಳಲ್ಲಿ ವರ್ಣಿಸಿರುತ್ತದೆ. ಆದ್ದರಿಂದ ಆಷಾಢ ಶುಕ್ಲ ದ್ವಾದಶಿ (ಶಯನದ್ವಾದಶಿ)ಯಂದು ಮಲಗಿದ್ದ ಭಗವಂತನನ್ನು ಈ ದಿನ ಎಬ್ಬಿಸುವದೆಂಬ ಪುರಾಣಗಳ ಕಲ್ಪನೆಗೆ ನಿಜವಾದ ಅಭಿಪ್ರಾಯವೇನು? ಎಂದು ಈಗ ಆಲೋಚಿಸಬಹುದಾಗಿದೆ. ವೇದಗಳ ಅರ್ಥವನ್ನು ಇತಿಹಾಸಪುರಾಣಗಳಿಂದಲೇ ವಿವರವಾಗಿ ತಿಳಿಯಬೇಕೆಂಬ ನಿಯಮದಂತೆ ಏನೋ ಒಂದು ವಿಶೇಷವನ್ನಿಟ್ಟೇ ಋಷಿಗಳು ಈ ಹಬ್ಬವನ್ನು ಆಚರಿಸಿರಬೇಕು.
    ನಮಗೆ ತಿಳಿದಂತೆ ಉಪನಿಷತ್ಪ್ರತಿಪಾದ್ಯನಾದ ಭಗವಂತನಿಗೆ ನಿದ್ರೆಯೆಂದರೆ ಈ ದೇಹೇಂದ್ರಿಯಗಳ ಸಂಘಾತದಲ್ಲಿ ಬೆರೆತು ಯೋಗಮಾಯಾಸಮಾವೃತನಾಗಿರುವದೇ ಆಗಿದೆ. ಆತನನ್ನು ಪ್ರಬೋಧಗೊಳಿಸುವದೆಂದರೆ ಅವನ ತತ್ತ್ವವನ್ನು ಶಾಸ್ತ್ರದಲ್ಲಿಯೂ ಇದ್ದುಕೊಂಡಿರುವ ಆತನನ್ನು ಗುಣತ್ರಯರೂಪವಾದ ತುಲಸಿ-ಮಾಲತೀ-ಧಾತ್ರೀದೇವಿಯರಿಗಿಂತ ವಿಲಕ್ಷಣನನ್ನಾಗಿ ತಿಳಿಯುವದೇ ಪ್ರಬೋಧ ಇದೇ ಉತ್ಥಾನವು ಭಗವಂತನ ಎದ್ದ ಮೇಲೆ ಪ್ರಕೃತಿಯೆಲ್ಲವೂ ಅವನ ಮಹಿಮೆಯಾಗಿ ಕಾಣುವದರಿಂದ ತುಲಸೀಧಾತ್ರೀಸಹಿತನಾದ ಆ ಮಹಮಾನ್ವಿತನಾದ ದೇವನ ಪೂಜೆಯು ಉತ್ಥಾನದ್ವಾದಶಿಯಂದು ಆಚರಣೆಗೆ ಬಂದಿರಬೇಕು.

    ಭಗವಂತನು ನಮ್ಮೆಲ್ಲರ ಹೃದಯದಲ್ಲಿಯೇ ಇದ್ದರೂ ನಾವು ಆತನನ್ನು ಕಾಣದೆ ಇರುವೆವು; ಏಕೆಂದರೆ ಭಗವದ್ಬುದ್ಧಿಯು ನಮ್ಮಲ್ಲನೇಕರಲ್ಲಿ ಎಚ್ಚರವಾಗಿರುವದಿಲ್ಲ. ಭಗವಂತನು ಪುರುಷನು, ಎಂದರೆ ಹೃದಯವೆಂಬ ಪುರದಲ್ಲಿ ಶಯನಮಾಡಿರುವವನು, ಎಂದು ಶಾಸ್ತ್ರದಲ್ಲಿ ವರ್ಣಿಸಿರುತ್ತದೆ. ಜನರಿಗೆ ಅನುಗ್ರಹಮಾಡಬೇಕೆಂಬಕಾಂಕ್ಷೆಯಿಂದ ಭಗವಂತನು ನಮ್ಮ ಹೃದಯದಲ್ಲಿಯೇ ಮಲಗಿರುತ್ತಾನೆ. ಮಾನವರಲ್ಲೆಲ್ಲ ಭ್ರಾತೃಪ್ರೇಮ, ಕೀಳುಪ್ರಾಣಿಗಳಲ್ಲಿ ಕೂಡ ಕರುಣಾಯುತವಾದ ಪ್ರೇಮ, ಅಹಿಂಸೆ ಸತ್ಯ - ಮುಂತಾದ ಸಾಧನಗಳಿಂದ ಯಾರ ಅಂತಃಕರಣವು ಪರಿಶುದ್ಧವಾಗಿ ಅನಾದಿನಿದ್ರೆಯಿದೆಚ್ಚತ್ತಂತೆ ಭಗವದ್ಭಾನವನ್ನು ಪಡೆದು ಎಚ್ಚರುವದೋ ಅವರ ಹೃದಯದಲ್ಲಿ ಭಗವಂತನು ಎಚ್ಚತ್ತಂತೆ ಆ ಎಚ್ಚತ್ತ ಭಗವಂತನು ಆ ಭಕ್ತನಿಗೂ ಅವನ ಸುತ್ತು ನಳಯಕ್ಕೂ ಮಂಗಲವನ್ನುಂಟುಮಾಡುತ್ತಾನೆ. "ಭಗವಂತನೆ, ಏಳು! ಎಲ್ಲರಿಗೂ ಮಂಗಲವನ್ನುಂಟುಮಾಡು!" ಎಂಬರ್ಥವುಳ್ಳ ಈ ಶ್ಲೋಕವನ್ನು ಭಾವಪೂರಿವಾಗಿ ಗಾನಮಾಡಿರಿ. ನಿಮ್ಮ ಹೃದಯದಲ್ಲಿ ಉತ್ಥಾನದ್ವಾದಶಿಯಾಗುವದು. "ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ ಉತ್ತಿಷ್ಠಕಮಲಾಕಾನ್ತ ತ್ರೈಲೋಕ್ಯಂ ಮಙ್ಗಲಂ ಕುರು."

ಶ್ರೀ ತುಲಸೀ ಅಷ್ಟೋತ್ತರ ಶತನಾಮಾವಳಿ

1. ಓಂ ಹ್ರೀಂ ತುಲಸೀದೇವ್ಯೈ ನಮಃ
2. ಓಂ ಸಖ್ಯೈ ನಮಃ
3. ಓಂ ಭದ್ರಾಯೈ ನಮಃ
4. ಓಂ ಮನೋಜ್ಞಾನ ಪಲ್ಲವಾಯೈ ನಮಃ
5. ಓಂ ಪುರಂದರ ಸತೀಪೂಜ್ಯಾಯೈ ನಮಃ
6. ಓಂ ಪುಣ್ಯದಾಯೈ ನಮಃ
7. ಓಂ ಪುಣ್ಯರೂಪಿಣ್ಯೈ ನಮಃ
8. ಓಂ ಜ್ಞಾನವಿಜ್ಞಾನಜನನ್ಯೈ ನಮಃ
9. ಓಂ ತತ್ವಜ್ಞಾನ ಸ್ವರೂಪಿಣ್ಯೈ ನಮಃ
10. ಓಂ ಜಾನಕೀ ದುಃಖಶಮನ್ಯೈ ನಮಃ
11. ಓಂ ಜನಾರ್ಧನಪ್ರಿಯಾಯೈ ನಮಃ
12. ಓಂ ಸರ್ವಕಲ್ಮಷ ಸಚಿಹರ್ತ್ಯೈ ನಮಃ
13. ಓಂ ಸರ್ವಕೋಟಿ ಸಮಪ್ರಭಾಯೈ ನಮಃ
14. ಓಂ ಗೌರೀ ಶಾರದಾ ಸಂಸೇವಿತಾಯೈ ನಮಃ
15. ಓಂ ವಂದಾರುಜನಮಂದಾರಾಯೈ ನಮಃ
16. ಓಂ ನಿಲಿಂಪಾಭರಣಾಸಕ್ತಾಯೈ ನಮಃ
17. ಓಂ ಲಕ್ಷ್ಮೀಚಂದ್ರ ಸಹೋದರ್ಯೈ ನಮಃ
18. ಓಂ ಸನಕಾದಿ ಮುನಿಧ್ಯೇಯಾಯೈ ನಮಃ
19. ಓಂ ಕೃಷ್ಣಾನಂದ ಜನೀತ್ಯೈ ನಮಃ
20. ಓಂ ಚಿದಾನಂದ ಸ್ವರೂಪಿಣ್ಯೈ ನಮಃ
21. ಓಂ ನಾರಾಯಣ್ಯೈ ನಮಃ
22. ಓಂ ಸತ್ಯರೂಪಾಯೈ ನಮಃ
23. ಓಂ ಮಾಯಾತೀತಾಯೈ ನಮಃ
24. ಓಂ ಮಹೇಶ್ವರ್ಯೈ ನಮಃ
25. ಓಂ ಶುಭಪ್ರದಾಯೈ ನಮಃ
26. ಓಂ ವದನಚ್ಚವಿನಿರ್ಧೂತರಾಕಾಪೂರ್ಣನಿಶಾಕರಾಯೈ ನಮಃ
27. ಓಂ ರೋಚನಾಪಂಕ ತಿಲಕಲಸನ್ನಿಟಲಭಾಸುರಾಯೈ ನಮಃ
28. ಓಂ ಶುದ್ಧಾಯೈ ನಮಃ
29. ಓಂ ಪಲ್ಲವೋಷ್ಟ್ಯೈ ನಮಃ
30. ಓಂ ಪದ್ಮಮುಖ್ಯೈ ನಮಃ
31. ಓಂ ಪುಲ್ಲಪದ್ಮದಳೇಕ್ಷಣಾಯೈ ನಮಃ
32. ಓಂ ಚಾಂಪೇಯಕಲಿಕಾಕಾರನಾಸಾದಮ್ಡವಿರಾಜಿತಾಯೈ ನಮಃ
33. ಓಂ ಮಂದಸ್ಮಿತಾಯೈ ನಮಃ
34. ಓಂ ಮಂಜುಲಾಂಗ್ಯೈ ನಮಃ
35. ಓಂ ಮಾಧವಪ್ರಿಯ ಭಾವಿನ್ಯೈ ನಮಃ
36. ಓಂ ಮಾಣಿಕ್ಯಕಂಕಣಾರಾಯೈ ನಮಃ
37. ಓಂ ಮನಿಕುಂಡಲ ಮಂಡಿತಾಯೈ ನಮಃ
38. ಓಂ ಇಂದ್ರಸಂಪತ್ಕರ್ಯೈ ನಮಃ
39. ಓಂ ಶಕ್ತ್ಯೈ ನಮಃ
40. ಓಂ ಇಂದ್ರಗೋಪನಿಭಾಂಶುಕಾಯೈ ನಮಃ
41. ಓಂ ಇಂದ್ರಗೋಪನಿಭಾಂಶುಕಾಯೈ ನಮಃ
42. ಓಂ ಕ್ಷೀರಸಾಗರ ಸಂಭವಾಯೈ ನಮಃ
43. ಓಂ ಶಾಂತಿಕಾಂತಿಗುಣೋಪೇತಾಯೈ ನಮಃ
44. ಓಂ ಬೃಂದಾಮರಗುಣ ಸಂಪತ್ಯೈ ನಮಃ
45. ಓಂ ಪೂತಾತ್ಮನಾಯೈ ನಮಃ
46. ಓಂ ಪೂತನಾದಿ ಸ್ವರೂಪಿಣ್ಯೈ ನಮಃ
47. ಓಂ ಯೋಗಧ್ಯೇಯಾಯೈ ನಮಃ
48. ಓಂ ಯೋಗಾನಂದ ವಿದಾಯೈ ನಮಃ
49. ಓಂ ಚತುರ್ವರ್ಗ ಪ್ರದಾರಾಮಾಯೈ ನಮಃ
50. ಓಂ ತ್ರಿಲೋಕ ಜನನ್ಯೈ ನಮಃ
51. ಓಂ ಗೃಹಮೇಧಿಸಮಾರಾಧ್ಯಾಯೈ ನಮಃ
52. ಓಂ ಸದನಾಂಗಣಪಾವನಾಯೈ ನಮಃ
53. ಓಂ ಮುನೀಂದ್ರ ಹೃದಯವಾಸಾಯೈ ನಮಃ
54. ಓಂ ಮೂಲಪ್ರಕೃತಿ ಸಂಜ್ಞಿಕಾಯೈ ನಮಃ
55. ಓಂ ಬ್ರಹ್ಮರೂಪಿಣ್ಯೈ ನಮಃ
56. ಓಂ ಪರಂಜ್ಯೋತಿಷೇ ನಮಃ
57. ಓಂ ಅವಾಜ್ಞಾನಸಗೋಚರಾಯೈ ನಮಃ
58. ಓಂ ಪಂಚಭೂತಾತ್ಮಿಕಾಯೈ ನಮಃ
59. ಓಂ ಯೋಗಾಚ್ಯುತಾಯೈ ನಮಃ
60. ಓಂ ಯಜ್ಞರೂಪಿಣ್ಯೈ ನಮಃ
61. ಓಂ ಸಂಸಾರದುಃಖಶಮನ್ಯೈ ನಮಃ
62. ಓಂ ಸೃಷ್ಟಿಸ್ಥಿತ್ಯಂತರಕಾರಿಣ್ಯೈ ನಮಃ
63. ಓಂ ಸರ್ವಪ್ರಪಂಚನಿರ್ಮಾತ್ರ್ಯೈ ನಮಃ
64. ಓಂ ವೈಷ್ಣವ್ಯೈ ನಮಃ
65. ಓಂ ಮಧುರಸ್ವರಾಯೈ ನಮಃ
66. ಓಂ ನಿರೀಶ್ವರಾಯೈ ನಮಃ
67. ಓಂ ನಿರ್ಗುಣಾಯೈ ನಮಃ
68. ಓಂ ನಿತ್ಯಾಯೈ ನಮಃ
69. ಓಂ ನಿರಾತಂಕಾಯೈ ನಮಃ
70. ಓಂ ದೀನಜನಪಾಲನತತ್ಪರಾಯೈ ನಮಃ
71. ಓಂ ಕ್ವಣತ್ಮಿಂಕಿಣಿಕಾಜಾಲರತ್ನಕಾಂಚೀಲಸತ್ಕಜ್ಯೈ ನಮಃ
72. ಓಂ ಚಲನ್ಮಂಜೀರಚರಣಾಯೈ ನಮಃ
73. ಓಂ ಚತುರಾವಲಿಸೇವಿತಾಯ್ತೈ ನಮಃ
74. ಓಂ ಅಹೋರಾತ್ರಕಾರಿಣ್ಯೈ ನಮಃ
75. ಓಂ ಯುಕ್ತಾಹಾರಭರಾಕ್ರಾಂತಾಯೈ ನಮಃ
76. ಓಂ ಮುದ್ರಿಕಾರತ್ನಭಾಸುರಾಯೈ ನಮಃ
77. ಓಂ ಸಿದ್ಧಪ್ರದಾಯೈ ನಮಃ
78. ಓಂ ಅಮಲಾಯೈ ನಮಃ
79. ಓಂ ಕಮಲಾಯೈ ನಮಃ
80. ಓಂ ಲೋಕಸುಂದರ್ಯೈ ನಮಃ
81. ಓಂ ಹೇಮಕುಂಭಕುಚಧ್ವಯಾಯೈ ನಮಃ
82. ಓಂ ಲಸಿತಕುಂಭಕುಚದ್ವಯೈ ನಮಃ
83. ಓಂ ಚಂಚಲಾಯೈ ನಮಃ
84. ಓಂ ಲಕ್ಷ್ಮ್ಯೈ ನಮಃ
85. ಓಂ ಶಂಕರ್ಯೈ ನಮಃ
86. ಓಂ ಶಂಕರ್ಯೈ ನಮಃ
87. ಓಂ ಶಿವಶಂಕರ್ಯೈ ನಮಃ
88. ಓಂ ತುಲಸ್ಯೈ ನಮಃ
89. ಕುಂದಲಕುಟ್ಮಿಲರದನಾಯೈ ನಮಃ
90. ಓಂ ಪಕ್ವಬಿಂಬೋಷ್ಟ್ಯೈ ನಮಃ
91. ಓಂ ಶರಶ್ಚಂದ್ರಿಕಾಯೈ ನಮಃ
92. ಓಂ ಚಾಂಪೇಯನಾಸಿಕಾಯೈ ನಮಃ
93. ಓಂ ಕಂಬುಸುಂದರಗಳಾಯೈ ನಮಃ
94. ಓಂ ತಟಿಲ್ಲತಾಂಗ್ಯೈ ನಮಃ
95. ಓಂ ಮತ್ತಬಂಭರಕುಂತಲಾಯೈ ನಮಃ
96. ಓಂ ನಕ್ಷತ್ರನಿಭನಖಾಯೈ ನಮಃ
97. ಓಂ ರಂಭಾನಿಭೋರುಯುಗ್ಮಾಯೈ ನಮಃ
98. ಓಂ ಸೈಕತಶ್ರೋಣ್ಯೈ ನಮಃ
99. ಓಂ ಮಂದಕಂಠೀರವಮಧ್ಯೈ ನಮಃ
100 ಓಂ ಕೀರವಾಣ್ಯೈ ನಮಃ
101. ಓಂ ಶ್ರೀ ಮಹಾತುಲಸ್ಯೈ ನಮಃ

ಇತಿ ಶ್ರೀ ತುಲಸೀ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಂ

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ