Posts

ಭಗವಾನ್ ಎಂದರೇನು?

    'ಭಗವಾನ್' ಎನ್ನುವ ಪದವನ್ನು ನಮ್ಮ ವ್ಯವಹಾರದಲ್ಲಿ ನಿತ್ಯವೂ ಹೇರಳವಾಗಿ ಬಳಸುತ್ತೇವೆ. ಪರಮಾತ್ಮನನ್ನು 'ಹೇ ಭಗವಾನ್' ಎಂದು ಸಂಬೋಧಿಸುತ್ತೇವೆ. ಇದೇ ಶಬ್ದವನ್ನು ಕೆಲವು ಜ್ಞಾನಿಗಳ ನಾಮಧೇಯಗಳ ಹಿಂದೆ ಗೌರವಪೂರ್ವಕವಾಗಿ ಉಪಯೋಗಿಸುತ್ತೇವೆ ಉದಾ ಭಗವಾನ್ ಶಂಕರಾಚಾರ್ಯರು, ಭಗವಾನ್ ರಮಣಮಹರ್ಷಿಗಳು ಇತ್ಯಾದಿ.     ಧನವುಳ್ಳವನು ಧನವಾನ್, ವಿದ್ಯಾವಂತನು ವಿದ್ಯಾವಾನ್, ಗುಣವುಳ್ಳವನು ಗುಣವಾನ್ ಮುಂತಾದ ಶಬ್ದಗಳ ಉತ್ಪತ್ತಿಯಂತೆಯೇ ಭಗವುಳ್ಳವನು ಭಗವಾನ್ ಎನ್ನಬಹುದು, ಹಾಗಾದರೆ ಭಗವಾನ್ ಎಂಬ ಶಬ್ದದ ಅರ್ಥವನ್ನು ತಿಳಿಯಲು ವಿಷ್ಣುಪುರಾಣದಲ್ಲಿ (6-5-78,79) ಎರಡು ಶ್ಲೋಕಗಳಿವೆ. 1. ಉತ್ಪತ್ತಿಂಚ ವಿನಾಶಂಚ ಭೂತಾನಾಮಾಗತಿಂ ಗತಿಂ |     ವೇತ್ತಿ ವಿದ್ಯಾಮವಿದ್ಯಾಂಚ ಸ ವಾಚ್ಯೋ ಭಗವಾನಿತಿ || ಪ್ರಾಣಿಗಳ ಉತ್ಪತ್ತಿಯನ್ನೂ ಪ್ರಲಯವನ್ನೂ ಆಗು-ಹೋಗುಗಳನ್ನೂ ವಿದ್ಯೆಯನ್ನು ಅವಿದ್ಯೆಯನ್ನೂ ಅರಿತಿರುವಾತನನ್ನು ಭಗವಂತನೆನ್ನಬೇಕು. 2. ಐಶ್ವರ್ಯಸ್ಯ ಸಮಗ್ರಸ್ಯ ಧರ್ಮಸ್ಯ ಯಶಸಃ ಶ್ರಿಯಃ |     ಜ್ಞಾನವೈರಾಗ್ಯಯೋಶ್ಚೈವ ಷಣ್ಣಾಂ ಭಗ ಇತೀರಣಾ || ಸಮಗ್ರವಾದ ಐಶ್ವರ್ಯ (ಬೇಕಾದಂತೆ ಆಳುವ ಸಾಮರ್ಥ್ಯ, ಸ್ವಾತಂತ್ರ್ಯ), ಧರ್ಮ, ಯಶಸ್ಸು, ಸಂಪತ್ತು ಜ್ಞಾನ ಮತ್ತು ವೈರಾಗ್ಯ ಈ ಆರು ಗುಣಗಳನ್ನು 'ಭಗ'ವೆಂದು ಹೇಳಲಾಗುತ್ತದೆ. ಇವು ಯಾವಾಗಲೂ ಭಗವಂತನ ಸ್ವರೂಪವೇ ಆಗಿದೆ ಆದುದರಿಂದ ಮೇಲೆ ಹೇಳಿದ...

ವೇದ ಗಣಿತ ನಿರೂಪಕ : ಶ್ರೀ ಶ್ರೀ ಶ್ರೀ ಭಾರತೀ ಕೃಷ್ಣ ತೀರ್ಥ ಸ್ವಾಮಿಗಳು

 ಆದಿ ಶಂಕರರಿಂದ ಪೂರ್ವ ಭಾರತದ ಪುರಿಯಲ್ಲಿ ಸ್ಥಾಪಿತವಾದ ಆಮ್ನಯ ಪೀಠವಾದ ಗೋವರ್ಧನ ಪೀಠದ ಜಗದ್ಗುರುಗಳಾಗಿದ್ದ ಶ್ರೀ ಶ್ರೀ ಶ್ರೀ ಭಾರತೀ ಕೃಷ್ಣ ತೀರ್ಥ ಮಹಾರಾಜರ ಬಗ್ಗೆ  ಸನಾತನ ವೇದ  ವಿಜ್ಞಾನದ ಬಗ್ಗೆ ಆಸಕ್ತರೆಲ್ಲರೂ  ತಿಳಿಯುವುದು ಉಚಿತ. ವೇದಗಳೆಂದರೆ ಅಗೆದಷ್ಟು ದೊರಕುವ ಚಿನ್ನದ ಗಣಿಯಂತೆ ಮನುಕುಲದ ಏಳಿಗೆಗೆ ಬೇಕಾದ ಎಲ್ಲಾ ಜ್ಞಾನಗಳ ಸಂಗ್ರಹವಾಗಿದೆ ಎಂದೇ ನಂಬಿದ್ದ ಮಹಾಪುರುಷರಿವರು. ಇಪ್ಪತ್ತನೇ ಶತಮಾನದಲ್ಲಿ ನಮ್ಮೆಲ್ಲರ ನಡುವೆ ಇಂತಹ ಮಹಾ ಮೇದಾವಿಗಳು ಬದುಕಿ ವೇದ ಗಣಿತವನ್ನು ಆಧುನಿಕ ಜಗತ್ತಿಗೆ ನೀಡಿದರೆಂಬುದೇ ನಮಗೆಲ್ಲಾ ಹೆಮ್ಮೆ. ಶ್ರೀಗಳವರು ದಿನಾಂಕ ೧೪/೦೩/೧೮೮೪ರಂದು ಮದ್ರಾಸ್ ಪ್ರಾಂತ್ಯದ ತಿನ್ನಿವೇಲಿಯಲ್ಲಿ ಜನಿಸಿದರು.  ಅವರ ಪೂರ್ವಾಶ್ರಮದ ಹೆಸರು ವೆಂಕಟರಮಣ ಎಂದು.  ಚಿಕ್ಕಂದಿನಲ್ಲೇ ವಿಶೇಷ ಬುದ್ದಿ ಶಕ್ತಿಯನ್ನು ಹೊಂದಿದ್ದರು. ೧೮೯೯ರಲ್ಲಿ ಮದ್ರಾಸ್ ವಿಶ್ವವಿಧ್ಯಾನಿಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮೊದಲ ಸ್ಥಾನವನ್ನು ಪಡೆದ ಇವರು ಎಲ್ಲರ ಗಮನ ಸೆಳೆದರು.  ಇವರಲ್ಲಿದ್ದ ಅಪಾರವಾದ ಸಂಸ್ಕೃತ ಜ್ಞಾನ ಮತ್ತು ಬಾಷಣ ಕಲೆಯಲ್ಲಿದ್ದ ಪ್ರಾವೀಣ್ಯತೆಯನ್ನು ಗುರುತಿಸಿ ಮದ್ರಾಸ್ ಸಂಸ್ಕೃತ ಸಂಘದವರು ೧೮೯೯ರಲ್ಲಿ "ಸರಸ್ವತಿ" ಎಂಬ ಬಿರುದನ್ನು ನೀಡಿ ಗೌರವಿಸಿದರು. ಆಗಿನ್ನೂ ಇವರಿಗೆ ೧೬ ವರ್ಷ ವಯಸ್ಸು.  ಇವರ ಸಂಸ್ಕೃತ ಗುರು ಶ್ರೀ ವೇದಂ ವೆಂಕಟರಾಯ ಶಾಸ್ತ್ರಿಯವರ...

ಗರ್ಭ

ಉಪನಿಷತ್ :- ಮಂಗಲಮ್--ಓಂ ಸಹನಾವವತು | ಸಹನೌ ಭುನಕ್ತು | ಸಹ ವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ,ಓಂ ಶಾಂತಿಃ, ಶಾಂತಿಃ ಶಾಂತಿಃ ||  ಪದವಿಭಾಗ:- ಸಹ, ನೌ, ಅವತು ,ಸಹ ,ನೌ ,ಭುನಕ್ತು, ಸಹವೀರ್ಯಂ ಕರವಾವಹೈ,ತೇಜಸ್ವಿನೌ, ಅಧೀತಮ್, ಅಸ್ತು,ಮಾ, ವಿದ್ವಿಷಾವಹೈ,ಓಂ ಶಾಂತಿಃ, ಶಾಂತಿಃ ,ಶಾಂತಿಃ, ಅರ್ಥ:- --ಉಪದೇಶಗಳಲ್ಲಿ ಪ್ರತಿಪಾದಿಸುವ ತತ್ವವು ನಮ್ಮಿಬ್ಬರನ್ನೂ(ಗುರು ಮತ್ತು ಶಿಷ್ಯರನ್ನು ) ರಕ್ಷಿಸಲಿ.ನಮ್ಮಿಬ್ಬರಿಗೆ ನಿತ್ಯ ಸುಖವನ್ನು ಉಂಟುಮಾಡಲಿ.ನಾವಿಬ್ಬರೂ ಜ್ಞಾನವನ್ನು ಬೆಳೆಸುತ್ತೇವೇ. ನಾವಿಬ್ಬರೂ ಮಾಡಿದ ,ಅರ್ಥ ಸಹಿತವಾದ ಕಲಿಕೆಯು ನಮಗೆ ಜ್ಞಾನದ ಪ್ರಕಾಶವನ್ನು ಹೆಚ್ಚಿಸಲಿ. ನಮ್ಮಿಬ್ಬರಲ್ಲಿ ದ್ವೇಷವು ಆಗದಿರಲಿ. ನಮ್ಮ ತಾಪತ್ರಯಗಳು ಶಾಂತವಾಗಲಿ ಉಪನಿಷತ್ :- ಶುಕ್ಲಃ ರಕ್ತಃ ಧೂಮ್ರಃ ಪೀತಃ ಕಪಿಲಃ ಪಾಂಡರಃ ಇತಿ | ಸಪ್ತಧಾತುಕಮ್ ಇತಿ ಕಸ್ಮಾತ್ | ಯದಾ ದೇವದತ್ತಸ್ಯ ದ್ರವ್ಯಾದಿ ವಿಷಯಾಃ ಜಾಯಂತೆ | ಪರಸ್ಪರ ಸೌಮ್ಯಗುಣತ್ವಾತ್ ಷಡ್ವಿಧಃ ರಸಃ ರಸಾತ್ ಶೋಣಿತಮ್ ಶೋಣಿತಾತ್ ಮಾಂಸಮ್ ಮಾಂಸಾತ್ ಮೇಧಃ ಮೇಧಸಃ ಸ್ನಾಯವಃ ಸ್ನಾಯುಭ್ಯಃ ಅಸ್ಥೀನಿ ಅಸ್ಥಿಭ್ಯಃ ಮಜ್ಜಾ ಮಜ್ಜಾತಃ ಶುಕ್ರಮ್ ಶುಕ್ರಶೋಣಿತಸಂಯೋಗಾತ್ ಆವರ್ತತೆ ಗರ್ಭಃ ಹೃದಿ ವ್ಯವಸ್ಥಾಮ್ ನಯತಿ ಹೃದಯೆ ಅಂತರಾಗ್ನಿಃ ಅಗ್ನಿಸ್ಥಾನೆ ಪಿತ್ತಮ್ ಪಿತ್ತಸ್ಥಾನೆ ವಾಯುಃ ವಾಯುತಃ ಹೃದಯಮ್ಪ್ರಾಜಾಪತ್ಯಾತ್ ಕ್ರಮಾತ್ ||೨||  ...

ಗೋದಾಸ್ತುತಿಃ (ಸಂಗ್ರಹ) - 8

ಭೋಕ್ತುಂ ತವ ಪ್ರಿಯತಮಂ ಭವತೀವ ಗೋದೇ ಭಕ್ತಿಂ ನಿಜಾಂ ಪ್ರಣಯ ಭಾವನಯಾ ಗೃಣಂತಃ | ಉಚ್ಚಾವಚೈಃ ವಿರಹಸಂಗಮಚೈರುದಂತೈಃ ಶೃಂಗಾರಯಂತಿ ಹೃದಯಂ ಗುವಸ್ತ್ವದೀಯಾಃ ||8|| ಗೋದೇ = ಎಲೈ ಗೋದಾದೇವಿಯೇ, ತವ = ನಿನ್ನ, ಪ್ರಿಯತಮಂ = ಆಪ್ತಪ್ರಿಯನಾದ ಶ್ರಿಯಃಪತಿಯನ್ನು ಭವತೀ ಇವ = ನಿನ್ನಂತೆಯೇ ಭೋಕ್ತುಂ = ಅನುಭವಿಸಬೇಕೆಂದು ಗುರವಃ = ಆಳ್ವಾರಾಚಾರ್ಯರುಗಳು, ನಿಜಾಂ = ತಮ್ಮ ಭಕ್ತಿಂ = ಭಕ್ತಿಯನ್ನು ಪ್ರಣಯಭಾವನಯಾ = ಪ್ರೇಮ ಭಾವನೆಯಿಂದ ಗೃಣಂತಃ = ತೋಡಿಕೊಳ್ಳಬೇಕೆಂಬ ಆಸೆಯಿಂದ ಕೂಡಿದವರಾಗಿ ಹೃದಯಂ = ತಮ್ಮ ಮನಸ್ಸನ್ನು ತ್ವದೀಯಾಃ = ನಿನ್ನ ಉಚ್ಚಾ ವಚೈಃ = ಉನ್ನತವಾದ ಸ್ಥಿತಿಯಲ್ಲಿರುವ ವಿರಹಸಂಗಮಜೈಃ = ಪ್ರಿಯನ ವಿರಹದಿಂದುತ್ಪನ್ನವಾದ ಉದಂತೈಃ = ಭಾವನೆಗಳಿಂದ ಶೃಂಗಾರಯಂತಿ = ಅಲಂಕರಿಸಿಕೊಳ್ಳುತ್ತಾರೆ (ಪ್ರಿಯಪ್ರೇಯಸಿಯರ ಪ್ರೇಮಭಾವನೆಯಿಂದುದಯಿಸುವ ಶೃಂಗಾರರಸಕ್ಕೆ ಪಾತ್ರರನ್ನಾಗಿಸಿಕೊಳ್ಳುತ್ತಾರೆ).     'ಪೂ ಸಂಜ್ಞೇ ತು ಪುರೇ ತಸ್ಮಿನ್ ಶಯನಾತ್ ಪುರುಷೋ ಹರೀಃ' - 'ಪೂ' ಎಂಬ ಹೆಸರಿನಿಂದ ಕೂಡಿದ ಎಲ್ಲ ವ್ಯಷ್ಟಿ ಶರೀರದಲ್ಲಿಯೂ ಅಂದರೆ, ಎಲ್ಲ ಚೇತನಾ ಚೇತನಗಳಲ್ಲಿಯೂ ಯಾರು ವಾಸಿಸುತ್ತಿರುತ್ತಾನೆಯೋ ಅವನು 'ಪುರುಷ', ಮತ್ತು 'ಸಃ ಯತ್ ಪೂವಃ ಆಸ್ಮಾತ್ ಸರ್ವಸ್ಮಾತ್, ಸರ್ವಾನ್ ಪಾಪ್ಮನಃ ಔಷತ್ ತಸ್ಮಾತ್ ಪುರುಷಃ' ಎಂಬ ವ್ಯುತ್ಪತ್ತಿಯಿಂದ ಎಲ್ಲ ಚೇತನಾಚೇತನಗಳಿಗಿಂತಲೂ ಪೂರ್ವದಲ್ಲಿಯೂ ಇ...

ಅರ್ಧನಾರೀಶ್ವರತತ್ತ್ವ

ಅರ್ಧನಾರೀಶ್ವರಂ ವಂದೇ ಜಗತ್ಕಾರಣಮಚ್ಯುತಮ್ | ನಿರ್ವಿಕಾರಂ ಸದಾನಂದಂ ಮಾಯಾಜಗದಧಿಷ್ಠಿತಮ್ ||     ಶ್ರೀ ವೇದವ್ಯಾಸರು ರಚಿಸಿರುವ ಬ್ರಹ್ಮಸೂತ್ರಗಳಲ್ಲಿ "ಅಥಾತೋ ಬ್ರಹ್ಮ ಜಿಜ್ಞಾಸಾ" ಎಂಬಿದು ಮೊದಲನೆಯ ಸೂತ್ರವು. ಇಲ್ಲಿ ಬಾಷ್ಯಕಾರರು ಜಿಜ್ಞಾಸ್ಯವಾದ ಬ್ರಹ್ಮವು ನಿತ್ಯಶುದ್ಧಬುದ್ಧಮುಕ್ತಸ್ವಭಾವವೂ ಸರ್ವಜ್ಞವೂ ಸರ್ವಶಕ್ತಿಸಮನ್ವಿತವೂ ಆಗಿರುವದೆಂದೂ ಅದನ್ನೇ ವಿಚಾರಮಾಡಬೇಕೆಂದೂ ಹೇಳಿದ್ದಾರೆ. ಹೀಗೆ ಜಿಜ್ಞಾಸ್ಯವೆಂದು ಹೇಳಿರುವ ಬ್ರಹ್ಮದ ಲಕ್ಷಣವೇನು? ಎಂಬ ಪ್ರಶ್ನೆಗೆ ಉತ್ತರವಾಗಿ "ಜನ್ಮಾದ್ಯಸ್ಯ ಯತಃ" ಎಂಬ ಎರಡನೆಯ ಸೂತ್ರವು ಬಂದಿರುತ್ತದೆ. ಇಲ್ಲಿಯೂ ಭಾಷ್ಯಕಾರರು ನಾಮರೂಪಗಳಿಂದ ವಿಂಗಡವಾಗಿರುವ, ಅನೇಕ ಕರ್ತೃಭೋಕ್ತೃಗಳಿಂದ ತುಂಬಿರುವ ಗೊತ್ತುಮಾಡಲ್ಪಟ್ಟ ಖಚಿತವಾದ ದೇಶಕಾಲಗಳಲ್ಲಿ ಮಾಡಿದ ಕರ್ಮಗಳಿಗೆ ಖಚಿತವಾಗಿ ಫಲವನ್ನು ಕೊಡುವ ವ್ಯವಸ್ಥೆಯುಳ್ಳ ಹಾಗೂ ಎಂಥ ಜಾಣನಿಗೂ ಯೋಚಿಸಲಸಾಧ್ಯವಾದ ರೀತಿಯಲ್ಲಿ ಜೋಡಿಸಲ್ಪಟ್ಟಿರುವ ರಚನಾ ಕೌಶಲ್ಯವುಳ್ಳ ಈ ಪ್ರಪಂಚದ ಹುಟ್ಟು ಇರುವಿಕೆ-ವಿನಾಶಗಳು ಯಾವ ಸರ್ವಜ್ಞವೂ ಸರ್ವಶಕ್ತವೂ ಆಗಿರುವ ಕಾರಣವಸ್ತುವಿನಿಂದಲೇ ಆಗಿರುವವೋ ಅದೇ ಬ್ರಹ್ಮವು ಎಂದು ಜಗತ್ಕಾರಣತ್ವವನ್ನು ಬ್ರಹ್ಮಲಕ್ಷಣವೆಂದು ಪ್ರತಿಪಾದಿಸಿದ್ದಾರೆ ಮತ್ತು ಅಲ್ಲಿಯೇ ಕಡೆಯಲ್ಲಿ "ಹೀಗೆಯೇ ಯತೋ ವಾ ಎಂಬೀ ಜಾತಿಯ ಜಗತ್ಕಾರಣ ವಸ್ತುಪ್ರತಿಪಾದಕವಾದಂಥ ವಾಕ್ಯಗಳೆಲ್ಲವನ್ನೂ ಇಲ್ಲಿ ಉದಾಹರಣೆಯಾಗಿ ತೆಗೆದುಕೊಳ್ಳತಕ್ಕದ್ದು...

ಗೋದಾಸ್ತುತಿಃ (ಸಂಗ್ರಹ) - 7

ವಲ್ಮೀಕತಃ ಶ್ರವಣತೋ ವಸುಧಾತ್ಮನಸ್ತೇ ಜಾತೋ ಬಭೂವ ಸ ಮುನಿಃ ಕವಿಸಾರ್ವಭೌಮಃ | ಗೋದೇ ಕಿಮದ್ಬುತಮಿದಂ ಯದಮಿ ಸ್ವದನ್ತೇ ವಕ್ತ್ರಾರವಿಂದ ಮಕರಂದನಿಭಾಃ ಪ್ರಬಂಧಾಃ ||7|| ಗೋದೇ = ಎಲೈ ಗೋದಾದೇವಿಯೇ, ವಸುಧಾತ್ಮನಃ = ಭೂಮಿಯ ರೂಪದಲ್ಲಿರುವ, ತೇ = ನಿನ್ನ, ಶ್ರವಣತಃ = ಕಿವಿಯಾದ, ವಲ್ಮೀಕತಃ = ಹುತ್ತದಿಂದ, ಜಾತಃ = ಹುಟ್ಟಿದ, ಸಃ ಮುನಿಃ = ಆ ವಾಲ್ಮೀಕಿ ಮಹರ್ಷಿಗಳು, ಕವಿಸಾರ್ವಭೌಮಃ = ಕವಿಗಳಲ್ಲಿಯೇ ಶ್ರೇಷ್ಟರಾಗಿ (ಆದಿಕವಿಯೆಂಬ ಬಿರುದಾಂಕಿತರಾಗಿ) ಬಭೂವ = ಅದರು (ಈ ರೀತಿಯಿರಲು, ಇನ್ನು) ಯಾತ್ = ಯಾವ ನಿನ್ನಿಂದ ರಚಿಸಲ್ಪಟ್ಟ, ಅಮಿ ಪ್ರಬಂಧಾಃ = ದಿವ್ಯಸೂಕ್ತಿಗಳು, ವಕ್ತ್ರಾರವಿಂದ ಮಕರಂದ ನಿಭಾಃ = ಮುಖಕಮಲದಿಂದ ಹೊರಹೊಮ್ಮಿದ ಮದುವಿನಂತೆ, ಸ್ವದನ್ತೇ = ಭೋಗ್ಯವಾಗಿರುತ್ತದೆ, ಇದಂ = ಎಂಬ ಈ ವಿಷಯವು, ಅದ್ಭುತಂ ಕಿಮ್ = ಆಶ್ಚರ್ಯವಾದುದೇನು? (ಖಂಡಿತ ಇಲ್ಲ).     ಭೂದೇವಿಯ ಅವತಾರವೇ ಗೋದಾದೇವಿ. ಭೂದೇವಿಯು ಭೂಮಿಯ ಸ್ವರೂಪದಲ್ಲಿಯೂ ಇದ್ದಾಳೆ. ಈ ಸ್ವರೂಪದಲ್ಲಿ, ವಾಲ್ಮೀಕಿಯು ಹುಟ್ಟಿದ 'ವಲ್ಮೀಕ' ಅಥವಾ ಹುತ್ತವು, ಆಕೆಯ ಕಿವಿಯಂತಿದ್ದಿತು. ಆದುದರಿಂದ ಆ ಭೂದೇವಿಯ ಕಿವಿಯಿಂದ ಉತ್ಪನ್ನವಾದ ಆ ವಾಲ್ಮೀಕಿ ಮುನಿಯೇ, ಲೋಕದಲ್ಲೆಲಾ ಶ್ರೇಷ್ಟವಾದ ಕವಿಯಾಗಿ 'ಕವಿಸಾರ್ವಭೌಮ', 'ಆದಿಕವಿ' ಇತ್ಯಾದಿ ಹೆಸರನ್ನು ಪಡೆದಿರುವಲ್ಲಿ, ಇನ್ನು ಆಕೆಯ ಮುಖಾರವಿಂದದಿಂದ ಉತ್ಪನ್ನವಾದ ಆಕೆಯ ಶ್ರೀ ಸೂಕ್ತಿಗಳಾ...

ವಿಜ್ಞಾನನೌಕಾಸ್ತುತಿ - (ಶ್ರೀಶಂಕರಾಚಾರ್ಯರವರ ಕೃತಿ)

ತಪೋಯಜ್ಞದಾನಾದಿಭಿಃ ಶುದ್ಧ ಬುದ್ಧಿ- ರ್ವಿರಕ್ತೋ ನೃಪಾದೌ ಪದೇ ತುಚ್ಛಬುದ್ಧ್ಯಾ | ಪರಿತ್ಯಜ್ಯ ಸರ್ವಂ ಯದಾಪ್ನೋತಿ ತತ್ತ್ವಂ ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ  ||1|| ತಪಸ್ಸು, ಯಜ್ಞ, ದಾನ- ಮುಂತಾದವುಗಳಿಂದ ಚಿತ್ತಶುದ್ಧಿಯನ್ನು ಪಡೆದು ದೊರೆತನವೇ ಮುಂತಾದ ಪದವಿಯಲ್ಲಿ ಕೂಡ ತುಚ್ಛಬುದ್ಧಿಯುಳ್ಳವರಾಗಿ ವೈರಾಗ್ಯದಿಂದ ಎಲ್ಲವನ್ನೂ ಬಿಟ್ಟು ಯಾವ ತತ್ತ್ವವನ್ನು ಪಡೆಯುವರೋ ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುವೆನು. ದಯಾಲುಂ ಗುರುಂ ಬ್ರಹ್ಮನಿಷ್ಠಂ ಪ್ರಶಾನ್ತಂ ಸಮಾರಾಧ್ಯ ಮತ್ಯಾ ವಿಚಾರ್ಯ ಸ್ವರೂಪಮ್ | ಯದಾಪ್ನೋತಿ ತತ್ತ್ವಂ ನಿದಿಧ್ಯಾಸ್ಯ ವಿದ್ವಾನ್ ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ  ||2|| ಕರುಣಾಳುವೂ ಪರಮಶಾಂತಿಯುಳ್ಳಾತನೂ ಆಗಿರುವ ಬ್ರಹ್ಮನಿಷ್ಠನಾದ ಗುರುವನ್ನು ಸೇವಿಸಿ ಮಾಡಿದ ಮನನದಿಂದ ತನ್ನ ಸ್ವರೂಪವನ್ನು ಕುರಿತು ವಿಚಾರಮಾಡಿ ನಿದಿಧ್ಯಾಸನದಿಂದ ಜ್ಞಾನಿಯಾಗಿ ಯಾವ ತತ್ತ್ವವನ್ನು ಪಡೆದುಕೊಳ್ಳುತ್ತಾನೋ ಆ ನಿತ್ಯವಾದ ಪರಬ್ರಹ್ಮನೇ ನಾನಾಗಿರುವೆನು. ಯದಾನನ್ದರೂಪಂ ಪ್ರಕಾಶಸ್ವರೂಪಂ ನಿರಸ್ತಪ್ರಪಞ್ಚಂ ಪರಿಚ್ಛೇದಶೂನ್ಯಮ್ | ಅಹಂಬ್ರಹ್ಮವೃತ್ತ್ಯೈಕಗಮ್ಯಂ ತುರೀಯಂ ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ  ||3|| ಯಾವದು ಅನಂದಸ್ವರೂಪವಾಗಿಯೂ ಪ್ರಕಾಶರೂಪವಾಗಿಯೂ ಪ್ರಪಂಚರಹಿತವಾಗಿ ಯಾವ ಎಲ್ಲೆಕಟ್ಟೂ ಇಲ್ಲದೆ 'ನಾನು ಬ್ರಹ್ಮವು' ಎಂಬ ವ್ಯಕ್ತಿಯಿಂದಲೇ ಅರಿಯುವದಕ್ಕೆ ತಕ್ಕದ್ದಾಗಿರುವದೋ ಅವಸ್ಥಾತ್ರಯವನ್ನು ಮಿರಿದ ನಾಲ್...