Posts

ಶೃಂಗಾರ ಬೇಕಾಯಿತೆ ಶ್ರೀಕಾಂತ ನಿನಗೆ

ವೈಕುಂಠದಾಸರ ಭಕ್ತಿಯ ಶಕ್ತಿಯನ್ನು ಇದರಲ್ಲಿ ಕಾಣಬಹುದು. ಭಕ್ತನೊಬ್ಬ ತನ್ನ ಭಕ್ತಿಯನ್ನೇ ಶಕ್ತಿಯನ್ನಾಗಿ ರೂಪಿಸಿಕೊಳ್ಳುವ ಸ್ಥಿತಿ; ಉತ್ಕೃಷ್ಟವಾದ ಸಾಧನೆಯ ಸ್ಥಿತಿ; ಈ ಸ್ಥಿತಿಯಲ್ಲಿ ದೈವ-ಭಕ್ತರ ಅಂತರ ದೂರವಾಗಿ ಅತ್ಯಂತ ಸಮೀಪವರ್ತಿಯಾಗುತ್ತದೆ. ದೈವದಲ್ಲಿರುವ ಹುಳುಕುಗಳನ್ನು (ಗುಣವಿಶೇಷಗಳನ್ನೇ ಹುಳುಕುಗಳನ್ನಾಗಿಸಿಕೊಂಡು) ಅತ್ಯಂತ ಸಲಿಗೆಯಿಂದ ಜರಿಯುವ, ಸಂಭಾಷಣೆಯ ರೂಪದಲ್ಲಿ ಜಗ್ಗಿಸಿ ಕೇಳುವ ಸ್ಥಿತಿಯನ್ನು ಪಡೆಯುತ್ತದೆ. ಇದನ್ನೇ ನಿಂದಾಸ್ತುತಿ ಎಂದೂ ಗುರುತಿಸುತ್ತಾರೆ. ಇಂತಹ ಒಂದು ನಿಂದಾಸ್ತುತಿ ಇದಾಗಿದೆ ಶ್ರೀಹರಿಯ ಶೃಂಗಾರವನ್ನೇ ಇಲ್ಲಿ ಅವಗುಣವಾಗಿಸಿ ಜಗ್ಗಿಸುವ ಪರಿ ವಿಶೇಷವಾಗಿದೆ. 'ಬಾಲಬ್ರಹ್ಮಚಾರಿ' ನುಡಿಗಟ್ಟನ್ನು ಅಣಕಿಸುವ ಪರಿಭಾಷೆಯಲ್ಲಿ ಬಳಸಲಾಗಿದೆ. (ಮುಖಾರಿ,   ಝಂಪೆ) ಶೃಂಗಾರ ಬೇಕಾಯಿತೆ ಶ್ರೀಕಾಂತ ನಿನಗೆ ಶೃಂಗಾರವಾರ್ಧಿ ವೇಲಾಪುರದ ಚೆನ್ನಾ ಕರದಲ್ಲಿ ದಂಡಕೋಲು ಕಮಂಡಲವನೀವ ಪರಿಹೇಗೆ ದಾಸಾನುದಾಸನಲ್ಲ ಇರಲಿಯಂತದುವೆ ಶ್ರೀಧರನೆಂಬ ಪೆಸರು ಬಿ ಟ್ಟುರದ ಲಕ್ಷ್ಮಿಯನು ಕಡೆಗಿರಿಸು ನೋಡುವೆನೊಮ್ಮೆ  ||1|| ಎನ್ನ ಬಿನ್ನಪವೊಂದುಂಟು ಕೇಳೆಲೋ ಸ್ವಾಮೀ ನಿನ್ನ ಬಾಲಬ್ರಹ್ಮಚಾರಿಯೆಂದು ಸನ್ನುತಿಸುತಿದೆ ವೇದಶಾಸ್ತ್ರಗಮಗಳೆಲ್ಲ ಇನ್ನದಕುಪಾಯವೇನಯ್ಯಾ ಚೆನ್ನಿಗರಾಯ ||2|| ಶೃಂಗಾರಗಳನು ತತ್ವಂಗಳನು ಪೇಳುವಡೆ ಗುಂಗುರುಹಿನೊಳಲ್ಪ ಮನುಜನಲ್ಲ ಮಂಗಳಾತ್ಮಕನೆ ಆಡಿಸಿದೊಡಾಡುವೆ ಎನಗೆ ಭಂಗವೇಕಯ್ಯ ವೈಕುಂಠಚಿನ್ನಿಗರಾಯ...

ವಸುಮತಿಯ ಸುರರ ಮಧೆ ಘನವಾಯಿತಲ್ಲ

ವೈಕುಂಠದಾಸರ ಈ ಕೃತಿ ಸಾಮಾಜಿಕವಾಗಿ ಮುಖ್ಯವೆನಿಸುತ್ತದೆ. ಇಲ್ಲಿ ಬರುವ 'ವಸುಮತಿಯ ಸುರರ ಮಧೆ ಘನವಾಯಿತಲ್ಲ' ಎಂಬ ಸಾಲು ವಿಜಯನಗರದರಸರ ಅವನತಿಯ ಕಾಲದ ಸಾಮಾಜಿಕ ಏಳುಬೀಳುಗಳತ್ತ ಈ ಕೃತಿ ಬೆಳಕು ಚೆಲ್ಲುತ್ತಿದೆ ಬಯಲ ಮಮತೆ ಬಾಯಿಬಡುಕರು ಮುಂತಾದ ವಿಶಿಷ್ಟ ಪದಪ್ರಯೋಗದಿಂದ ಈ ಕೃತಿ ಅತ್ಯಂತ ಮಹತ್ವವಾದ ಸಾಮಾಜಿಕ ಮೌಲ್ಯವನ್ನು ಪ್ರತಿಪಾದಿಸುವಂತಿದೆ. (ಮುಖಾರಿ     ಝಂಪೆ) ಕಟಕಟಾ ಕಂಡೆವಲ್ಲ ಈ ಕುಟಿಲವರ್ತನ ಕೆಲಕೆಲವು ಕಲಿಯುಗದೀ  ||ಪ|| ಮಳೆಯಿಲ್ಲ ಬಂದರಿಳೆ ಬೆಳೆಯದು ಬೆಳೆಯೆ ಧರಣಿ ಹುಲುಸಲ್ಲ ಹುಲುಸಾದರಿಲ್ಲ ಪ್ರಜೆಗೆ ಸಲುವ ಕೋರಲ್ಪವನು ಬಿಡರು ರಾಜರುಗಳ ಹಾ ವಳಿಯಲುಳಿಹಿಲ್ಲ ಇನ್ನೆಂತು ಕೃಷಿಕರಿಗೆ      ||1|| ಧನವ ಗಳಿಸಿಯೆ ಪಡುವುದನ್ಯಾಯವೇ ಮೊದಲು ಮನವರಿತು ಪಾತಕಂಗಳ ಮಾಡುತಿಹರು ಇತಿತು ಗಳಿಸಿದ ಕೃತ್ಯದರ್ಥಕ್ಕೆ ಚೋರರು ಜನಪರೊಡಯರು ಬಯಲ ಮಮತೆಗಳ ಬಿಡರು  ||2|| ಹುಸಿ ನುಸುಳು ಕಳೆವು ಕಕ್ಯುಲತೆ ಪರನಿಂದೆ ರಾ ಕ್ಷಸಕೃತ್ಯ ಹಿಂಸೆ ಮತ್ಸರ ಅನಾಚಾರಾ ಪಿಸುಣತೆ ಕುಹಕ ಕುಟಿಲ ಕುಮದ ಸ್ಮಾಮಿದ್ರೋಹ ವಸುಮತಿಯ ಸುರರ ವಧೆ ಘನವಾಯಿತಲ್ಲ    ||3|| ತೋಡುವಡವೆಗಳ ಬೇಡಲೊಡನೆರಡು ಕಂಗಳಲಿ ಕಿಡಿಸೂಸಿ ಬಾಯಿಸೊರೆಸುತ್ತಿ ಗರ್ಜಿಸುತಾ ಜಡಿವಕೋಪದಿ ಮಧುಪರಂತೆ ಜರೆವೀ ಬಾಯ ಬಡುಕರೇ ಮೇದಿನಿಗೆ ಹೊರೆಯಾದರಲ್ಲಾ  ||4|| ರಸನ ಬಿಡುವರು ಕಸವ ಪಿಡಿವರೊರೆಯನು ಪಿಡಿದು ಬಿ...

ಸ್ಕಂದಪುರಾಣ ಅಧ್ಯಾಯ 8

ವಾಯುರುವಾಚ | ಏವಮೇಷಾ ಭಗವತೀ ಬ್ರಹ್ಮಲೋಕಾನುಸಾರಿಣೀ | ಯುಷ್ಮಾಕಂ ಧರ್ಮಸಿದ್ಧ್ಯರ್ಥಂ ವೇದೀಮಧ್ಯಾದ್ವ್ಯವರ್ತತ || ಸನತ್ಕುಮಾರ ಉವಾಚ | ಏವಂ ತೇಷಾ ಸಮಾಪ್ತೇಥ ಸತ್ತ್ರೇ ವರ್ಷಸಹಸ್ರಿಕೇ | ಪ್ರವೃತ್ತಾಯಾಂ ಸರಸ್ವತ್ಯಾಮಗಾತ್ತತ್ರ ಪಿತಾಮಹಃ || ಬ್ರಹ್ಮೋವಾಚ | ಭೂಯೋನ್ಯೇನ ಹ ಸತ್ತ್ರೇಣ ಯಜಧ್ವಂ ದೇವಮೀಶ್ವರಮ್ | ಯದಾ ವೋ ಭವಿತಾ ವಿಘ್ನಂ ತದಾ ನಿಷ್ಕಲ್ಮಷಂ ತಪಃ || ವಿಘ್ನಂ ತಚ್ಚೈವ ಸಂತೀರ್ಯ ತಪಸ್ತಪ್ತ್ವಾ ಚ ಭಾಸ್ವರಮ್ | ಯೋಗಂ ಪ್ರಾಪ್ಯ ಮಹದ್ಯುಕ್ತಾಸ್ತತೋ ದ್ರಕ್ಷ್ಯಥ ಶಂಕರಮ್ || ತಥೇತ್ಯುಕ್ತ್ವಾ ಗತೇ ತಸ್ಮಿನ್ಸತ್ತ್ರಾಣ್ಯಾಜಹ್ರಿರೇ ತದಾ | ಬಹೂನಿ ವಿವಿಧಾಕಾರಾನ್ಯಭಿಯುಕ್ತಾ ಮಹಾವ್ರತಾಃ || ನಿಃಸೋಮಾಂ ಪೃಥಿವೀಂ ಕೃತ್ವಾ ಕೃತ್ಸ್ನಾಮೇತಾಂ ತತೋ ದ್ವಿಜಾಃ | ರಾಜಾನಂ ಸೋಮಮಾನಾಯ್ಯ ಅಭಿಷೇಕ್ತುಮಿಯೇಷಿರೇ || ಅಥ ಸೋಪಿ ಕೃತಾತಿಥ್ಯಃ ಅದೃಶ್ಯೇನ ದುರಾತ್ಮನಾ | ಸ್ವರ್ಭಾನುನಾ ಹೃತಃ ಸೋಮಸ್ತತಸ್ತೇ ದುಃಖಿತಾಭವನ್ || ತೇ ಗತ್ವಾ ಮುನಯಃ ಸರ್ವೇ ಕಲಾಪಗ್ರಾಮವಾಸಿನಃ | ಪುರೂರವಸಮಾನೀಯ ರಾಜಾನಂ ತೇಭ್ಯಷೇಚಯನ್ || ಊಚುಶ್ಚೈನಂ ಮಹಾಭಾಗಾ ಹೃತಃ ಸೋಮೋ ಹಿ ನಃ ಪ್ರಭೋ | ಕೇನಾಪಿ ತದ್ಭವಾನ್ಕ್ಷಿಪ್ರಮಿಹಾನಯತು ಮಾ ಚಿರಮ್ || ಸ ಏವಮುಕ್ತೋ ಮೃಗಯನ್ನ ತಮಾಸಾದಯತ್ಪ್ರಭುಃ | ಉವಾಚ ಸ ತದಾ ವಿಪ್ರಾನ್ಪ್ರಣಮ್ಯ ಭಯಪೀಡಿತಃ || ಪರಮಂ ಯತ್ನಮಾಸ್ಥಾಯ ಮಯಾ ಸೋಮೋಭಿಮಾರ್ಗಿತಃ | ನ ಚ ತಂ ವೇದ್ಮಿ ಕೇನಾಸೌ ಕ್ವ ವಾ ನೀತ ಇತಿ ಪ್ರಭುಃ || ತಮೇವಂವಾದಿನಂ ಕ್ರುದ್ಧಾ ಋಷಯಃ ...

ರುದ್ರಭಾಷ್ಯಪ್ರಕಾಶ - 4ನೇ ಅನುವಾಕ (ಸಂಪೂರ್ಣ)

ನಮೋ ಗಣೇಭ್ಯೋ ಗಣಪತಿಭ್ಯಃ ನಾಲ್ಕನೆಯ ಅನುವಾಕವನ್ನು ಈಗ ವಿಚಾರಮಾಡೋಣ : ನಮ ಆವ್ಯಾಧಿನೀಭ್ಯೋ ವಿವಿಧ್ಯಂತೀಭ್ಯಶ್ಚ ವೋ ನಮೋ ನಮ ಉಗಣಾಭ್ಯಸ್ತೃಗ್ಂಹತೀಭ್ಯಶ್ಚ ವೋ ನಮೋ ನಮೋ ಗೃತ್ಸೇಭ್ಯೋ ಗೃತ್ಸಪತಿಭ್ಯಶ್ಚ ವೋ ನಮೋ ನಮೋ ವ್ರಾತೇಭ್ಯೋ ವ್ರಾತಪತಿಭ್ಯಶ್ಚ ವೋ ನಮೋ ನಮೋ ಗಣೇಭ್ಯೋ ಗಣಪತಿಭ್ಯಶ್ಚ ವೋ ನಮಃ ||     'ಅವ್ಯಾಧಿನಿಯರೂ ವಿವಿಧ್ಯಂತಿಯರೂ ಆದ, ಹಿಂಸೆಮಾಡಲು ಸಮರ್ಥರಾದ ಉತ್ಕೃಷ್ಟಗಣದೇವತೆಗಳಿಗೂ ಗೃತ್ಸರಿಗೂ ಗೃತ್ಸಪತಿಗಳಿಗೂ ವ್ರಾತರಿಗೂ ವ್ರಾತಪತಿಗಳಿಗೂ ಗಣಗಳಿಗೂ ಗಣಪತಿಗಳಿಗೂ ನಮಸ್ಕಾರವು!'     ಮೂರನೆಯ ಅನುವಾಕದಂತೆಯೇ ಇಲ್ಲಿಯೂ ಸರ್ವಾತ್ಮಕನಾದ ಭಗವಂತನನ್ನು ನಮಸ್ಕರಿಸಲಾಗಿದೆ ಮೊದಲನೆಯ ನಾಲ್ಕು ವಿಶೇಷಗಳು ಸ್ತ್ರೀವಾಚಕಗಳಾಗಿವೆ ಸ್ತ್ರೀರೂಪದಲ್ಲಿಯೂ ಇರುವವನು ಪರಮೇಶ್ವರನೇ ಎಂದಭಿಪ್ರಾಯ ಅವ್ಯಾಧಿನಿಯರು ಎಂದರೆ ಯುದ್ಧದಲ್ಲಿ ಸುತ್ತಲೂ ಎಲ್ಲಾ ದಿಕ್ಕುಗಳಿಗೂ ಬಾಣಗಳನ್ನು ಎಸೆಯಲು ಸಮರ್ಥರಾದವರು ಎಂದರ್ಥ ಮತ್ತು ವಿವಿಧ್ಯಂತಿಯರು ಎಂದರೆ ನಾನಾವಿಧವಾಗಿ ಆಯುಧಗಳನ್ನು ಉಪಯೋಗಿಸಿ ಶತ್ರುಗಳನ್ನು ಹೊಡೆಯುವಂಥವರು ಎಂದರ್ಥ ಹೀಗೆ ಜಗತ್ತಿನಲ್ಲಿ ಶಕ್ತಿರೂಪಿಣಿಯರಾಗಿ ಎಷ್ಟುಸಂಖ್ಯೆಯ ದೇವಿಯರು ರಾಕ್ಷಸರನ್ನು ನಿಗ್ರಹ ಮಾಡುತ್ತಾ ಭಕ್ತರನ್ನು ಅನುಗ್ರಹಿಸುತ್ತಾ ಪರಮೇಶ್ವರನಿಗೆ ಅಧೀನರಾಗಿ ಎಲ್ಲೆಲ್ಲಿಯೂ ಇದ್ದುಕೊಂಡಿರುವರೋ ಅವರಿಗೆಲ್ಲ ನಮಸ್ಕಾರ! ಎಂದು ತಿಳಿಸಿದೆ ಹಾಗೆಯೇ ತೃಹಂತಿಯಾದ ಉಗಣಗಳಿಗೂ ನಮಸ್ಕಾರ. ಉ- ...

ಸ್ಕಂದಪುರಾಣ ಅಧ್ಯಾಯ 7

ವಾಯುರುವಾಚ | ಬ್ರಹ್ಮಲೋಕಂ ಸಮಾಸಾದ್ಯ ಭಗವಾನ್ಸರ್ವಲೋಕಪಃ | ಭೈಕ್ಷ್ಯಂ ಭೈಕ್ಷ್ಯಮಿತಿ ಪ್ರೋಚ್ಯ ದ್ವಾರೇ ಸಮವತಿಷ್ಠತ || ತಂ ದೃಷ್ಟ್ವಾ ವಿಕೃತಂ ಬ್ರಹ್ಮಾ ಕಪಾಲಕರಭೂಷಣಮ್ | ಜ್ಞಾತ್ವಾ ಯೋಗೇನ ಮಹತಾ ತುಷ್ಟಾವ ಭುವನೆಶ್ವರಮ್ || ತಸ್ಯ ತುಷ್ಟಸ್ತದಾ ದೇವೋ ವರದೋಸ್ಮೀತ್ಯಭಾಷತ | ವೃಣೀಷ್ವ ವರಮವ್ಯಗ್ರೋ ಯಸ್ತೇ ಮನಸಿ ವರ್ತತೇ || ಬ್ರಹ್ಮೋವಾಚ | ಇಚ್ಛಾಮಿ ದೇವದೇವೇಶ ತ್ವಯಾ ಚಿಹ್ನಮಿದಂ ಕೃತಮ್ | ಯೇನ ಚಿಹ್ನೇನ ಲೋಕೋಯಂ ಚಿಹ್ನಿತಃ ಸ್ಯಾಜ್ಜಗತ್ಪತೆ || ತಸ್ಯ ತದ್ವಚನಂ ಶ್ರುತ್ವಾ ಭಗವಾನ್ವದತಾಂ ವರಃ | ಸರ್ವಶ್ರುತಿಮಯಂ ಬ್ರಹ್ಮ ಓಮಿತಿ ವ್ಯಾಜಹಾರ ಹ || ಶಂಬೋರ್ವ್ಯಾಹಾರಮಾತ್ರೇಣ ವಾಗಿಯಂ ದಿವ್ಯರೂಪಣೀ | ನಿಃಸೃತಾ ವದನಾದ್ದೇವೀ ಪ್ರಹ್ವಾ ಸಮವತಿಷ್ಠತ || ತಾಮುವಾಚ ತದಾ ದೇವೋ ವಾಚಾ ಸಂಜೀವಯನ್ನಿವ | ಯಸ್ಮಾತ್ತ್ವಮಕ್ಷರೋ ಭೂತ್ವಾ ಮಮ ವಾಚೋ ವಿನಿಃಸೃತಾ | ಸರ್ವವಿದ್ಯಾಧಿದೇವೀ ತ್ವಂ ತಸ್ಮಾದ್ದೇವಿ ಭವಿಷ್ಯಸಿ || ಯಸ್ಮಾದ್ಬ್ರಹ್ಮಸರಶ್ಚೇದಂ ಮುಖಂ ಮಮ ಸಮಾಶ್ರಿತಾ | ತಸ್ಮಾತ್ಸರಸ್ವತೀತ್ಯೇವ ಲೋಕೇ ಖ್ಯಾತಿಂ ಗಮಿಷ್ಯಸಿ || ಇಮಂ ಲೋಕಂ ವರಾಂಭೋಭಿಃ ಪಾವಯಿತ್ವಾ ಚ ಸುಪ್ರಭೇ | ಸರ್ವಾ/ಲ್ಲೋಕಾಂಸ್ತಾರಯಿತ್ರೀ ಪುನಸ್ತ್ವಂ ನಾತ್ರ ಸಂಶಯಃ || ಯಜ್ಞಭಾಗಂ ಚ ದೇವಾಸ್ತೇ ದಾಸ್ಯಂತಿ ಸಪಿತಾಮಹಾಃ | ಪುಣ್ಯಾ ಚ ಸರ್ವಸರಿತಾಂ ಭವಿಷ್ಯಸಿ ನ ಸಂಶಯಃ || ತತಃ ಸಾ ಸಮನುಜ್ಞಾತಾ ಶಂಕರೇಣ ವಿಭಾವಿನೀ | ಚಕ್ರೇ ಬ್ರಹ್ಮಸರಃ ಪುಣ್ಯಂ ಬ್ರಹ್ಮಲೋಕೇತಿಪಾವನಮ್ || ತೋಯಾಮೃತಸು...

ಬೇಲೂರು ವೈಕುಂಠದಾಸ, ಬೇಲೂರು (ಕ್ರಿ.ಶ 1500)

ಬೇಲೂರಿನಲ್ಲೇ ಇದ್ದುಕೊಂಡು ಕನ್ನಡದ ಅನ್ನಮಾಚಾರ್ಯರಾಗಿ ಎಲ್ಲರಿಂದಲೂ ಗೌರವಾನ್ವಿತರಾದ 'ದಾಸೋತ್ತಮನು ನೀನೇ ವೈಕುಂಠದಾಸೋತ್ತಮನು ನೀನೇ'. ವಿಶಿಷ್ಟಾದ್ವೈತ ತತ್ವದಲ್ಲಿ ಕೀರ್ತನೆಗಳನ್ನು ರಚಿಸಿದ್ದರೂ ಈವರೆಗೆ ಸಾಹಿತ್ಯ ಚರಿತ್ರೆಯಲ್ಲಿ ಹೆಚ್ಚಿನ ಚರ್ಚೆಗಳು ಆಗದೇ ಇರುವುದು ಬೇಸರದ ಸಂಗತಿ. ಶ್ರೀವೈಷ್ಣವ ಕಲ್ಪನೆಯಾದ ಲಕ್ಷ್ಮೀಸಮೇತ ವಿಷ್ಣುನನ್ನು ಕಂಡಿದ್ದಾರೆ ಸೌಂದರ್ಯ ವರ್ಣನೆ ದಾಸರಿಗೆ ಅತ್ಯಂತ ಪ್ರಿಯವಾದ ಆಸಕ್ತಿ. 'ಶ್ರೀದೇವಿಗೆ ಯೌವನವರೆಯಹುದೆಂದು ರವಿಶಶಿಗಳ ನೀ ಪಡೆದೆ .... ಇಂದ್ರಾದಿಗಳ ನೀನೇ ಪಡೆದೆ ವಾಯು ವಿರಂಚಿ ಮೊದಲಾದವರ ಪಡೆದೆ ಶ್ರೀದೇವಿಯನೆದೆಗೇರಿಸಿಕೊಂಡೆ .....ಪೇರ ಧರಿಸಿಕೊಂಡೆ' ಎಂಬ ಈ ಉಗಾಭೋಗದಲ್ಲಿ ಈ ಎರಡೂ ಲಕ್ಷಣಗಳಿರುವುದನ್ನು ನೋಡಬಹುದು.     ದಾಸರು ಲಕ್ಷ್ಮಿಯನ್ನು ಕುರಿತು ರಚಿಸಿರುವ ಎರಡೇ ಕೃತಿಗಳೂ ಅತ್ಯಂತ ಮಧುರವಾಗಿವೆ. 'ಅಂತು ಸಿಂಗರವ ಮಾಡಿ' ಮತ್ತು 'ಗಾಡಿ ಎತ್ತಲಿಂದ ಬಂದದೇ' ಈ ಎರಡೂ ಲಕ್ಷ್ಮಿಯ ಸೌಂದರ್ಯ ವರ್ಣನೆಯನ್ನೇ ಹೇಳುತ್ತವೆ. ದಾಸರು ರಚಿಸಿರುವ ಒಂದೇ ಒಂದು ನಿಂದಾಸ್ತುತಿ ಭಕ್ತನೊಬ್ಬನ ಆಧ್ಯಾತ್ಮಶಕ್ತಿಯು ದ್ಯೋತಕವಾಗಿ ಬಂದಿದೆ. ಶ್ರೀಹರಿಯನ್ನು ವರ್ಣಿಸುವಲ್ಲಿ ತೋರಿದ ಸೌಂದರ್ಯಪ್ರಿಯತೆಯನ್ನೇ ಅವಗುಣವಾಗಿಸಿ ದೇವರನ್ನು ಜಗ್ಗಿಸುವಪರಿ ಅದ್ಭುತವಾದ ಪ್ರತಿಮಾ ಲೋಕವನ್ನು ಸೃಷ್ಟಿಸುತ್ತದೆ. ಲೋಕನೀತಿಯನ್ನು ಕುರಿತ ಕೀರ್ತನೆಗಳೂ ವೈಕುಂಠದಾಸರಲ್ಲಿದ್ದು ಆ ಮೂಲಕ ಅ...

ದಕ್ಷಿಣಾಮೂರ್ತಿಸ್ತೋತ್ರ - 7. ಆತ್ಮಪ್ರತ್ಯಯ

ಬಾಲ್ಯಾದಿಷ್ವಪಿ ಜಾಗ್ರದಾದಿಷು ತಥಾ ಸರ್ವಾಸ್ವವಸ್ಥಾಸ್ವಪಿ ವ್ಯಾವೃತ್ತಾಸ್ವನುವರ್ತಮಾನಮಹಮಿತ್ಯನ್ತಃಸ್ಫುರನ್ತಂ ಸದಾ | ಸ್ಮಾತ್ಮಾನಂ ಪ್ರಕಟೀಕರೋತಿ ಭಜತಾಂ ಯೋ ಮುದ್ರಯಾ ಭದ್ರಯಾ ತಸ್ಮೈಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ||     'ಬಾಲ್ಯವೇ ಮುಂತಾದ ಮತ್ತು ಎಚ್ಚರವೇ ಮುಂತಾದ ಎಲ್ಲಾ ಅವಸ್ಥೆಗಳೂ ಬೇರೆಬೇರೆಯಾಗುತ್ತಿರುವಲ್ಲಿ ಅನುಸರಿಸಿಕೊಂಡೇ ಬರುತ್ತಿರುವ 'ನಾನು' ಎಂದು ಒಳಗೆ ಸ್ಫುರಿಸುತ್ತಿರುವ ತಮ್ಮ ಆತ್ಮನನ್ನು ಭಜಿಸುತ್ತಿರುವವರಿಗೆ ತನ್ನನ್ನು ಭದ್ರಮುದ್ರೆಯಿಂದ ಯಾವನು ಪ್ರಕಟಗೊಳಿಸುತ್ತಿರುವನೋ ಅಂಥ ಶ್ರೀಗುರುಮೂರ್ತಿಯಾದ ಶ್ರೀದಕ್ಷಿಣಾಮೂರ್ತಿಗೆ ನಮಸ್ಕಾರ!' - ಎಂದು ಶ್ಲೋಕದ ಅಕ್ಷರಾರ್ಥ.     ಹಿಂದಿನ ಶ್ಲೋಕದಲ್ಲಿ ಆತ್ಮನು ಸವಿಶೇಷನಾಗಿಯೂ ನಿರ್ವಿಶೇಷನಾಗಿಯೂ ಇದಾನೆಂದು ತೋರುತ್ತಿದ್ದರೂ ನಿರ್ವಿಶೇಷಸನ್ಮಾತ್ರನಾಗಿರುವದೇ ಅವನ ಸ್ವರೂಪವೆಂದೂ ತಿಳಿಸಲಾಗಿತ್ತು. ಈಗ ಆ ಸ್ವರೂಪವನ್ನು ಯಾವ ಪ್ರಕಾರದಿಂದ ವಿಚಾರ ಮಾಡಿ ತಿಳಿದುಕೊಳ್ಳಬೇಕೆಂಬುದನ್ನು ತಿಳಿಸಲಾಗುತ್ತದೆ. ದೇಹಾದಿಗಳಲ್ಲಿ ಆತ್ಮನೆಂಬ ಬುದ್ಧಿಯಿರುವದು ಅಜ್ಞರ ಸ್ವಭಾವ, ಮಾಯೆಗೆ ಒಳಗಾಗಿ ಅವರು ಆತ್ಮನನ್ನು ಬಗೆಬಗೆಯಾಗಿ ವಿಕಲ್ಪಿಸುವರು ಎಂದು ಐದನೆಯ ಶ್ಲೋಕದಲ್ಲಿ ಹೇಳಿತ್ತಷ್ಟೆ? ಮಾಯೆಯ ಹುಸಿತೋರಿಕೆಯನ್ನು ಕೈಬಿಟ್ಟು ನಿಜವಾದ ಆತ್ಮಸ್ವರೂಪನನ್ನೇ ಗೊತ್ತುಮಾಡುವದು ಹೇಗೆಂಬುದನ್ನು ಇಲ್ಲಿ ತಿಳಿಸಲಾಗುವದು.   ...