Posts

ಜೀವನ್ಮುಕ್ತಾನಂದ ಲಹರಿ

ಪುರೇ ಪೌರಾನ್ ಪಶ್ಯನ್ನರಯುವತಿನಾಮಾಕೃತಿಮಯಾನ್ ಸುವೇಷಾನ್ ಸ್ವರ್ಣಾಲಂಕರಣಕಲಿತಾಂಶ್ಚಿತ್ರಸದೃಶಾನ್ | ಸ್ವಯಂ ಸಾಕ್ಷೀ ದ್ರಷ್ಟೇತ್ಯಪಿ ಚ ಕಲಯಂಸ್ತೈಃ ಸಹ ರಮನ್ ಮುನಿರ್ನ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||1|| ಪುರದಲ್ಲಿ ಸ್ತ್ರೀಪುರುಷರೆಂಬ ನಾಮರೂಪಗಳಿಂದೊಡಗೂಡಿ ಉತ್ತಮ ವೇಷಗಳಿಂದಲೂ ಚಿನ್ನದ ಭೂಷಣಗಳಿಂದಲೂ ಕೂಡಿರುವ ಚಿತ್ರದಂತೆ ಕಾಣುತ್ತಿರುವ ಪುರಜನರನ್ನು ಕಾಣುತ್ತಾ, ತಾನು ಸಾಕ್ಷಿಯಾದ ದ್ರಷ್ಟೃವೆಂದು ತಿಳಿದುಕೊಂಡು ಅವರೊಡನೆ ಆಡುತ್ತಿರುವ, ಗುರುರೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ. ವನೇ ವೃಕ್ಷಾನ್ ಪಶ್ಯನ್ ದಲಫಲಭರಾನ್ನಮ್ರಸುಶಿಖಾನ್ ಘನಚ್ಛಾಯಾಚ್ಛನ್ನಾನ್ ಬಹುಲಕಲಕೂಜದ್ದ್ವಿಜಗಣಾನ್ | ಭಜನ್ ಘಸ್ರೇ ರಾತ್ರಾವವನಿತಲತಲ್ಪೈಕಶಯನೋ ಮುನಿರ್ವ ವ್ಯಾಮೋಹಂ ಭಜತಿ ಗುರುದೀಕ್ಷಾಕ್ಷತತಮಾಃ ||2|| ಅರಣ್ಯದಲ್ಲಿ ಎಲೆ, ಹಣ್ಣು - ಇವುಗಳಿಂದ ತುಂಬಿ, ಬಾಗಿರುವ ಕೊಂಬೆಗಳುಳ್ಳವಾಗಿ, ದಟ್ಟವಾದ ನೆರಳಿನಿಂದ ಮರೆಯಾಗಿರುವ, ಮರಗಳನ್ನು ಕಾಣುತ್ತಾ ಬಹಳ ಇಂಪಾಗಿ ದನಿಗೈಯುತ್ತಿರುವ ಪಕ್ಷಿಗಳ ಗುಂಪುಗಳನ್ನು ಸೇವಿಸುತ್ತಾ, ಹಗಲಲ್ಲೂ ರಾತ್ರೆಯಲ್ಲಿಯೂ ಭೂತಲವೆಂಬ ಒಂದೇ ಹಾಸಿಗೆಯಲ್ಲಿ ಮಲಗುತ್ತಿರುವನಾಗಿದ್ದರೂ ಗುರುದೀಕ್ಷೆಯಿಂದ ಅಜ್ಞಾನವನ್ನು ನೀಗಿಕೊಂಡಿರುವ ಮುನಿಯು ಭ್ರಾಂತಿಯನ್ನು ಹೊಂದುವದಿಲ್ಲ. ಕದಾಚಿತ್ ಪ್ರಾಸಾದೇ ಕ್ವಚಿದಪಿ ಚ ಸೌಧೇಷು ಧನಿನಾಂ ಕದಾ ಕಾಲೇ ಶೈಲೇ ಕ್ವಚಿದಪಿ ಚ ಕೂಲೇಷು ಸರಿತಾಮ್...

ಶ್ರೀರಾಮಹೃದಯ

ಯಃ ಪೃಥ್ವೀಭರವಾರಣಾಯ ದಿವಿಜೈಃ ಸಂಪ್ರಾರ್ಥಿತಶ್ಚಿನ್ಮಯಃ ಸಂಜಾತಃ ಪೃಥವೀತಲೇ ರವಿಕುಲೇ ಮಾಯಾಮನುಷ್ಯೋವ್ಯಯಃ ನಿಶ್ಚಕ್ರಂ ಹತರಾಕ್ಷಸಃ ಪುನರಗಾದ್ ಬ್ರಹ್ಮತ್ವಮಾದ್ಯಂ ಸ್ಥಿರಾಂ ಕೀರ್ತಿಂ ಪಾಪಹರಾಂ ವಿಧಾಯ ಜಗತಾಂ ತಂ ಜಾನಕೀತಂ ಭಜೇ ||1|| ಭೂಮಿಯ ಭಾರವನ್ನು ಇಳಿಸಿಕೊಡಬೇಕೆಂದು ದೇವತೆಗಳು ಪ್ರಾರ್ಥಿಸಲಾಗಿ ಯಾವ ಚಿತ್ಸ್ವರೂಪನಾದ ಪರಮಾತ್ಮನು ತಾನು ಅವ್ಯಯನಾಗಿದ್ದರೂ ಮಾಯೆಯಿಂದ ಮನುಷ್ಯನಾಗಿ ಈ ಭೂಮಂಡಲದಲ್ಲಿ ಸೂರ್ಯವಂಶದಲ್ಲಿ ಅವತರಿಸಿ ಚಕ್ರಾಯುಧವಿಲ್ಲದೆಯೇ ರಾಕ್ಷಸರನ್ನು ಕೊಂದು, ಲೋಕದ ಜನಗಳ ಪಾಪವನ್ನೆಲ್ಲ ಪರಿಹರಿಸುವಂಥ ಶಾಶ್ವತವಾದ ಕೀರ್ತಿಯನ್ನು ಇಲ್ಲಿಟ್ಟು ಮತ್ತೆ ಮೊದಲಿನ ತನ್ನ ಸ್ವರೂಪವನ್ನು ಹೊಂದಿದನೋ ಆ ಜಾನಕೀಶನನ್ನು ಭಜಿಸುತ್ತೇನೆ. ವಿಶ್ವೋದ್ಭವಸ್ಥಿತಿಲಯಾದಿಷು ಹೇತುಮೇಕಂ ಮಾಯಾಶ್ರಯಂ ವಿಗತಮಾಯಮಚಿನ್ತ್ಯಮೂರ್ತಿಮ್ | ಆನನ್ದಸಾನ್ದ್ರಮಮಲಂ ನಿಜಬೋಧರೂಪಂ ಸೀತಾಪತಿಂ ವಿದಿತತತ್ತ್ವಮಹಂ ನಮಾಮಿ ||2|| ಪ್ರಪಂಚದ ಹುಟ್ಟು, ಇರುವಿಕೆ, ಪ್ರಲಯ - ಮುಂತಾದ ಎಲ್ಲಾ ಆಗುಹೋಗುಗಳಿಗೂ ತಾನೊಬ್ಬನೇ ಕಾರಣವಾಗಿಯೂ ಮಾಯೆಗೆ ಆಸರೆಯನ್ನಿತ್ತಿದ್ದರೂ ಯಾವ ಮಾಯೆಯ ಸಂಬಂಧವೂ ತನ್ನಲ್ಲಿಲ್ಲದವನಾಗಿಯೂ ಇಂತೆಂದು ಮನಸ್ಸಿನಿಂದ ಆಲೋಚಿಸುವದಕ್ಕೆ ಕೂಡ ಆಗದಂಥ ಸ್ವರೂಪವುಳ್ಳವನಾಗಿಯೂ ಪರಮಾನಂದಸ್ವರೂಪವಾಗಿ, ನಿರ್ಮಲವಾಗಿ, ಸ್ವಾಭಾವಿಕವಾದ ಜ್ಞಾನಸ್ವರೂಪವಾಗಿರುವ ಸುಪ್ರಸಿದ್ಧ ತತ್ತ್ವವಾದ ಸೀತಾಪತಿಯನ್ನು ನಮಸ್ಕರಿಸುತ್ತೇನೆ. ಪಠನ್ತಿ ಯೇ ನಿತ್ಯಮನನ್ಯಚೇತಸಃ ಶೃ...

ವಿಜ್ಞಾನನೌಕಾಸ್ತುತಿ - (ಶ್ರೀಶಂಕರಾಚಾರ್ಯರವರ ಕೃತಿ)

Image
ತಪೋಯಜ್ಞದಾನಾದಿಭಿಃ ಶುದ್ಧ ಬುದ್ಧಿ- ರ್ವಿರಕ್ತೋ ನೃಪಾದೌ ಪದೇ ತುಚ್ಛಬುದ್ಧ್ಯಾ | ಪರಿತ್ಯಜ್ಯ ಸರ್ವಂ ಯದಾಪ್ನೋತಿ ತತ್ತ್ವಂ ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ  ||1|| ತಪಸ್ಸು, ಯಜ್ಞ, ದಾನ- ಮುಂತಾದವುಗಳಿಂದ ಚಿತ್ತಶುದ್ಧಿಯನ್ನು ಪಡೆದು ದೊರೆತನವೇ ಮುಂತಾದ ಪದವಿಯಲ್ಲಿ ಕೂಡ ತುಚ್ಛಬುದ್ಧಿಯುಳ್ಳವರಾಗಿ ವೈರಾಗ್ಯದಿಂದ ಎಲ್ಲವನ್ನೂ ಬಿಟ್ಟು ಯಾವ ತತ್ತ್ವವನ್ನು ಪಡೆಯುವರೋ ಆ ನಿತ್ಯವಾದ ಪರಬ್ರಹ್ಮವೇ ನಾನಾಗಿರುವೆನು. ದಯಾಲುಂ ಗುರುಂ ಬ್ರಹ್ಮನಿಷ್ಠಂ ಪ್ರಶಾನ್ತಂ ಸಮಾರಾಧ್ಯ ಮತ್ಯಾ ವಿಚಾರ್ಯ ಸ್ವರೂಪಮ್ | ಯದಾಪ್ನೋತಿ ತತ್ತ್ವಂ ನಿದಿಧ್ಯಾಸ್ಯ ವಿದ್ವಾನ್ ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ  ||2|| ಕರುಣಾಳುವೂ ಪರಮಶಾಂತಿಯುಳ್ಳಾತನೂ ಆಗಿರುವ ಬ್ರಹ್ಮನಿಷ್ಠನಾದ ಗುರುವನ್ನು ಸೇವಿಸಿ ಮಾಡಿದ ಮನನದಿಂದ ತನ್ನ ಸ್ವರೂಪವನ್ನು ಕುರಿತು ವಿಚಾರಮಾಡಿ ನಿದಿಧ್ಯಾಸನದಿಂದ ಜ್ಞಾನಿಯಾಗಿ ಯಾವ ತತ್ತ್ವವನ್ನು ಪಡೆದುಕೊಳ್ಳುತ್ತಾನೋ ಆ ನಿತ್ಯವಾದ ಪರಬ್ರಹ್ಮನೇ ನಾನಾಗಿರುವೆನು. ಯದಾನನ್ದರೂಪಂ ಪ್ರಕಾಶಸ್ವರೂಪಂ ನಿರಸ್ತಪ್ರಪಞ್ಚಂ ಪರಿಚ್ಛೇದಶೂನ್ಯಮ್ | ಅಹಂಬ್ರಹ್ಮವೃತ್ತ್ಯೈಕಗಮ್ಯಂ ತುರೀಯಂ ಪರಂ ಬ್ರಹ್ಮ ನಿತ್ಯಂ ತದೇವಾಹಮಸ್ಮಿ  ||3|| ಯಾವದು ಅನಂದಸ್ವರೂಪವಾಗಿಯೂ ಪ್ರಕಾಶರೂಪವಾಗಿಯೂ ಪ್ರಪಂಚರಹಿತವಾಗಿ ಯಾವ ಎಲ್ಲೆಕಟ್ಟೂ ಇಲ್ಲದೆ 'ನಾನು ಬ್ರಹ್ಮವು' ಎಂಬ ವ್ಯಕ್ತಿಯಿಂದಲೇ ಅರಿಯುವದಕ್ಕೆ ತಕ್ಕದ್ದಾಗಿರುವದೋ ಅವಸ್ಥಾತ್ರಯವನ್ನು ಮಿರಿದ ನ...

ಶ್ರೀ ವೆಂಕಟೇಶ ಭುಜಂಗ ಪ್ರಯಾತ ಸ್ತೋತ್ರ

ಶ್ರೀ ವೆಂಕಟೇಶ ಭುಜಂಗ ಪ್ರಯಾತ ಸ್ತೋತ್ರ (ಶ್ರೀ ಶಂಕರಾಚಾರ್ಯರಿಂದ ವಿರಚಿತವಾಗಿರುವ) ಮುಖೇ ಚಾರುಹಾಸಂ ಕರೇ ಶಂಖಚಕ್ರಂ ಗಲೇ ರತ್ನಮಾಲಾಂ ಸ್ವಯಂ ಮೇಘವರ್ಣಮ್ ತಥಾ ದಿವ್ಯಶಸ್ತ್ರಂ ಪ್ರಿಯಂ ಪೀತವಸ್ತ್ರಂ ಧರಂತಂ ಮುರಾರಿಂ ಭಜೇ ವೇಂಟೇಶಮ್ ||1|| ಸದಾಭೀತಿಹಸ್ತಂ ಮುದಾಜಾನುಪಾಣಿಂ ಲಸನ್ಮೇಖಲಂ ರತ್ನಶೋಭಾ ಪ್ರಕಾಶಮ್ ಜಗತ್ಪಾದಪದ್ಮಂ ಮಹತ್ಪದ್ಮನಾಭಂ ಧರತಂ ಮುರಾರಿ ಭಜೇ ವೇಂಕಟೇಶಮ್ ||2|| ಅಜಂ ನಿರ್ಮಲಂ ನಿತ್ಯಮಾಕಾಶರೂಪಂ ಜಗತ್ಕಾರಣಂ ಸರ್ವವೇದಾಂತ ವೇದ್ಯಮ್ ವಿಭುಂ ತಾಪಸಂ ಸಚ್ಚಿದಾನಂದರೂಪಂ ಧರಂತಂ ಮುರಾರಿಂ ಭಜೇ ವೇಕಮಟೇಶಮ್ ||3|| ಶ್ರಿಯಾವಿಷ್ಟಿತಂ ವಾಮವಕ್ಷಪ್ರಕಾಂತಂ ಸುರೈರ್ವಂದಿತಂ ಬ್ರಹ್ಮರುದ್ರಸ್ತುತಂ ತಮ್ ಶಿವಂ ಶಂಕರಂ ಸ್ವಸ್ತಿನಿರ್ವಾಣರೂಪಂ ಧರಂತಂ ಮುರಾರಿಂ ಭಜೇ ವೇಂಕಟೇಶಮ್ ||4|| ಮಹಾಯೋಗಸಾಧ್ಯಂ ಪರಿಭ್ರಾಜಮಾನಂ ಚಿರಂ ವಿಶ್ವರೂಪಂ ಸುರೇಶಂ ಮಹೇಶಮ್ ಅಹೋ! ಶಾಂತರೂಪಂ ಸದಾ ಧ್ಯಾನಗಮ್ಯಂ ಧರಂತಂ ಮುರಾರಿಂ ಭಜೇ ವೇಂಕಟೇಶಮ್ ||5|| ಅಹೋ! ಮತ್ಸ್ಯರೂಪಂ ತಥಾ ಕೂರ್ಮರೂಪಂ ಮಹಾ ಕ್ರೋಡರೂಪಂ ತಥಾ ನಾರಸಿಂಹಮ್ ಭಜೇ ಕುಬ್ಜರೂಪಂ ವಿಭುಂ ಜಾಮದಗ್ನ್ಯಂ ಧರಂತಂ ಮುರಾರಿಂ ಭಜೇ ವೇಂಕಟೇಶಮ್ ||6|| ಅಹೋ ಬುದ್ಧರೂಪಂ ತಥಾ ಕಲ್ಕಿರೂಪಂ ಪ್ರಭುಂ ಶಾಶ್ವತಂ ಲೋಕರಕ್ಷಾವಹಂತಮ್ ಪೃಥಕ್ಕಾಲಲಬ್ದಾತ್ಮ ಲೀಲಾವತಾರಂ ಧರಂತಂ ಮುರಾರಿಂ ಭಜೇ ವೇಂಕಟೇಶಮ್ ||7|| ಇತಿ ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಶ್ರೀಮಚ್ಚಂಕರಾಚಾರ್ಯ ವಿರಚಿತಂ ವೇಂಕಟೇಶ್ವರ (ಭುಜಂಗ ಪ್ರಯಾತ) ...

ಕಲಿಗಾಲ ಕಂಡ್ಯಾ

ಕೃಷ್ಣ ಕೃಷ್ಣಯೆಂದು ಕಾಮಿನಿ ಕರೆಯಲು ಅಕ್ಷಯ ವಸನಾಗಿ ಒದಗಿಯೊ ಅಂದು ||ಪ|| ದುಷ್ಟ ದುಶ್ಯಾಸನರ ಹಿಂಡುಹಿಂಡೇ ಇಂದು ಶಿಷ್ಟ ಮಾನಿನಿಯರ ಮಾನಗಳೆಯುತಿಹುದು ||ಅ.ಪ|| ಕಣ್ಮುಚ್ಚಿ ಬಾಯ್ಬಿಗಿದು ಹಾವಿನ್ಹಾಸಿನಲಿ ತಣ್ಣಗೆ ಕೈಕಟ್ಟಿ ಕುಳಿತಿಹೆಯಲ್ಲೋ ಬಣ್ಣನೆಯ ಮಾತಾಯೋ ಕಾಮಿಕೀಚಕರ ನಿಜ ಬಣ್ಣವನು ಬಯಲು ಮಾಡದೆ ನೀನು ||1|| ಗದ್ದೆ ಬಯಲು ಶಾಲೆ ಕಾಲೇಜುಗಳು ಶುದ್ಧ ಹಸುಮಗುವಿನ ಮೊದಲ ಶಾಲೆ ಹದ್ದುಮೀರಿದೆ ಅಲ್ಲೂ ಕಾಮುಕರ ಕಾಟ ನಿದ್ದೆ ಬಂದಿದೆಯೆ ನಿನಗೆ ಎದ್ದು ಬಾರದಷ್ಟು ||2|| ಬೇಡಿದರೆ ಕಾಡಿದರೆ ಬರುವನಲ್ಲ ನೀನು ನೋಡುತಿರು ಎಬ್ಬಟ್ಟಿ ಎಳೆತರುವೆ ನಾನು ಆಡುವೆಯ ಆಟಗಳ ನರಸಿಂಹಾವತಾರಿ ಮಾಡುವೆನು ತಕ್ಕುದು ಕಲಿಗಾಲ ಕಂಡ್ಯಾ ||3||

ವೃಕ್ಷರಾಜಃ ಅಶ್ವತ್ಥಃ

ಶ್ರೀಕೃಷ್ಣ ಪರಮಾತ್ಮ ಶ್ರೀಮದ್ಭಗವದ್ಗೀತೆಯ 10ನೇ ಅಧ್ಯಾಯವಾದ ವಿಭೂತಿ ಯೋಗದ ಇಪ್ಪತ್ತಾರನೇ ಶ್ಲೋಕದಲ್ಲಿ ಹೀಗೆ ಹೇಳಿದ್ದಾನೆ. ಅಶ್ವತ್ಥಃ ಸರ್ವವೃಕ್ಷಾಣಾಂ ದೇವರ್ಷೀಣಾಂ ಚ ನಾರದಃ | ಗಂಧರ್ವಾಣಾಂ ಚಿತ್ರರಥಃ ಸಿದ್ದಾನಾಂ ಕಪಿಲೋ ಮುನಿಃ || ಅಂದರೆ ಎಲ್ಲಾ ವೃಕ್ಷಗಳಲ್ಲಿ ಅಶ್ವತ್ಥವೃಕ್ಷವೂ, ದೇವರ್ಷಿಗಳಲ್ಲಿ ನಾರದಮುನಿಯೂ, ಗಂಧರ್ವರಲ್ಲಿ ಚಿತ್ರರಥನು ಮತ್ತು ಸಿದ್ದರಲ್ಲಿ ಕಪಿಲಮುನಿಯೂ ಆಗಿದ್ದೇನೆ ಎಂದಿದ್ದಾನೆ ಕೃಷ್ಣಪರಮಾತ್ಮ. ಕಾರಣ - ಅಶ್ವತ್ಥವೃಕ್ಷವು ಸಮಸ್ತ ವನಸ್ಪತಿಗಳಲ್ಲಿ ರಾಜನಾಗಿದೆ ಮತ್ತು ಪೂಜನೀಯವೆಂದು ತಿಳಿಯಲಾಗಿದೆ. ಅದಕ್ಕಾಗಿ ಭಗವಂತನು ಅಶ್ವತ್ಥವೃಕ್ಷವನ್ನು ತನ್ನ ಸ್ವರೂಪವೆಂದ ಹೇಳಿದ್ದಾನೆ. ಪುರಾಣಗಳಲ್ಲಿ ಅಶ್ವತ್ಥದ ಮಹಾತ್ಮೆಯು ಹೇರಳವಾಗಿ ಸಿಗುತ್ತದೆ. ಸ್ಕಂದ ಪುರಾಣದಲ್ಲಿ ಹೀಗ ಹೇಳಿದೆ - ಮೂಲೇ ವಿಷ್ಣುಃ ಸ್ಥಿತೋ ನಿತ್ಯಂ ಸ್ಕಂಧೇ ಕೇಶವ ಏವ ಚ | ನಾರಾಯಣಸ್ತು ಶಾಖಾಸು ಪತ್ರೇಷು ಭಗವಾನ್ ಹರಿಃ || ಫಲೇಚ್ಯುತೋ ನ ಸಂದೇಹಃ ಸರ್ವದೇವೈಃ ಸಮನ್ವಿತಃ | ಸ ಏವ ವಿಷ್ಣುರ್ದ್ರುಮ ಏವ ಮೂರ್ತೌ ಮಹಾತ್ಮಭಿಃ ಸೇವಿತಪುಣ್ಯಮೂಲಃ | ಯಸ್ಯಾಶ್ರಮ ಪಾಪಸಹಸ್ರಹಂತಾ ಭವೇನ್ನೃಣಾಂ ಕಾಮದುಘೋ ಗುಣಾಢ್ಯಃ || ಅಶ್ವತ್ಥದ ಮೂಲದಲ್ಲಿ ವಿಷ್ಣುವು, ಕಾಂಡದಲ್ಲಿ ಕೇಶವನೂ, ರೆಂಬೆಗಳಲ್ಲಿ ನಾರಾಯಣನೂ, ಎಲೆಗಳಲ್ಲಿ ಭಗವಾನ್ ಶ್ರೀಹರಿಯು ಮತ್ತು ಫಲದಲ್ಲಿ ಎಲ್ಲ ದೇವತೆಗಳೊಂದಿಗೆ ಅಚ್ಚುತನು ಸದಾ ವಾಸಮಾಡುತ್ತಾರೆ. ಇದರಲ್ಲಿ ಯಾವ ಸಂ...

ವೈಕುಂಠದವರೂ ಕೈಲಾಸದವರೂ

# ವೇದಾಂತ_ಸಣ್ಣ_ಕಥೆ ಪರೋಕ್ಷಾಸತ್ಫಲಂ ಕರ್ಮ ಜ್ಞಾನಂ ಪ್ರತ್ಯಕ್ಷಸತ್ಫಲಮ್ | ಜ್ಞಾನಮೇವಾಭ್ಯಸೇತ್ತಸ್ಮಾದಿತಿ ವೇದಾನ್ತಡಿಣ್ಡಿಮಃ || ಹಿಂದೆ ನಗರವೆಂಬ ರಾಜ್ಯದಲ್ಲಿ ಶಿವಪ್ಪನಾಯಕನೆಂಬ ಒಬ್ಬ ಅರಸ ಆಳುತ್ತಿದ್ದನು. ಆತನ ರಾಜ್ಯದಲ್ಲಿ ವೀರಶೈವರಿಗೆ ಹೆಚ್ಚಿನ ಆಶ್ರಯವಿರುತ್ತಿದ್ದದ್ದರಿಂದ ಕೆಲವು ಜನ ಮೂಢರು ವೈಷ್ಣವಮತನಿಂದೆಯನ್ನು ಮಾಡುವದು ಅರಸನ ಮೆಚ್ಚುಗೆಗೆ ಕಾರಣವೆಂದು ಭಾವಿಸಿದ್ದರು. ಒಂದು ದಿನ ಒಬ್ಬ ಜಂಗಮಯ್ಯನ ಸಭೆಯಲ್ಲಿ ದೊರೆಯನ್ನು ಏಕವಚನದಿಂದಲೇ ಸಂಬೋಧಿಸುವದಕ್ಕೆ ಪ್ರಾರಂಭಿಸಿ "ಶಿವಗಾ, ಕೈಲಾಸದ ವರ್ಣನೆಯನ್ನು ಹೇಳುತ್ತೇನೆ, ಕೇಳು - ಅಲ್ಲಿ ಶ್ರೀಮಹಾದೇವನ ಪಾದಗಳನ್ನು ವಿಷ್ಣುವೇ ಒತ್ತುತ್ತಿರುವನು; ಲಕ್ಷ್ಮಿಯೇ ಆತನಿಗೆ ಬೀಸಣಿಗೆ ಹಾಕುತ್ತಿರುವಳು; ಬ್ರಹ್ಮಾದಿಗಳು 'ನಮಗೇನಾದರೂ ಊಳಿಗವು ಸಿಕ್ಕೀತೇ?' ಎಂದು ಕಾದುಕೊಂಡಿರುವರು. ಸಣ್ಣ ಪುಣ್ಣ ದೇವತೆಗಳ ಪಾಡಂತೂ ಹೇಳತೀರದು, ಅವರೆಲ್ಲ ಅಲ್ಲಿ ಅಡಿಯಾಳುಗಳಾಗಿ ಮಹಾದ್ವಾರದ ಹೊರಗೆ ಇರುವರು. ಇನ್ನು ವಿಷ್ಣುವನ್ನು ನಂಬಿಕೊಂಡಿರುವ ಹಾರುವರಿಗೆ ಆ ಲೋಕಕ್ಕೆ ಪ್ರವೇಶವೇ ಇಲ್ಲವೆಂಬುದನ್ನು ಮತ್ತೆ ಹೇಳಬೇಕೆ?" ಎಂದು ವೀರಾವೇಷದಿಂದ ಹೇಳುತ್ತಿದ್ದನು. ದೊರೆಯು ನಿಜವಾಗಿ ಶಿವಭಕ್ತನಾದರೂ ದುರಭಿಮಾನಿಯಲ್ಲವಾದ್ದರಿಂದ ಇದನ್ನು ಕೇಳುವದಕ್ಕೂ ಮನಸ್ಸೊಪ್ಪದೆ, ಅಯ್ಯನ ಶಿವಭಕ್ತನೆಂಬುದರ ಮೇಲೆ ಇಂಥ ಮಾತನಡಬೇಡವೆಂದು ಹೇಳುವದಕ್ಕೂ ನಾಲಗೆ ಬರದೆ ಚಿಂತಿಸುತ್ತಿ...