ಗೋದಾಸ್ತುತಿಃ (ಸಂಗ್ರಹ) - 21

ರಂಗೇಶ್ವರಸ್ಯ ತವ ಚ ಪ್ರಣಯಾನುಬಂಧಾತ್
ಅನ್ಯೋನ್ಯಮೂಲ್ಯಪರಿವೃತ್ತಿಮಭಿಷ್ಟುವಂತಃ |
ವಾಚಾಲಯಂತಿ ವಸುಧೇ ರಸಿಕಾ ಸ್ತ್ರೀಲೋಕಿಂ
ನ್ಯೂನಾಧಿಕತ್ವಸಮತಾವಿಷಯೈರ್ವಿವಾದೈಃ ||21||
***
ವಸುಧೇ=ಎಲೈ ಭೂದೇವಿಯ ಅವತಾರಗಳಾದ ಗೋದಾದೇವಿಯೇ!
ರಂಗೇಶ್ವರಸ್ಯ = ಶ್ರೀರಂಗನಾಥನ,
ಚ = ಮತ್ತು,
ತವ = ನಿನ್ನ,
ಪ್ರಣಯಾನು = ಬಂಧಾತ್ = ಪ್ರೇಮಪಾಶದಿಂದ,
ಅನ್ಯೋನ್ಯ = ಪರಸ್ಪರ,
ಮಾಲ್ಯಪರಿವೃತ್ತಿಂ = ಮಾಲಿಕೆಗಳನ್ನು ಬದಲಾಯಿಸಿಕೊಳ್ಳುವಿಕೆಯನ್ನು,
ಅಭಿಷ್ಟುವಂತಃ = ಸ್ತೋತ್ರಮಾಡುತ್ತಿದ್ದ,
ರಸಿಕಾಃ = ಶೃಂಗಾರರಸವನ್ನು ಅನುಭವಿಸುವ ರಸಿಕರಾದರೋ,
ನ್ಯೂನ = (ನಿಮ್ಮಿಬ್ಬರಲ್ಲಿ ಒಬ್ಬರು) ಕಡಿಮೆಯೆಂದೂ,
ಅಧಿಕ = ಒಬ್ಬರು ಅಧಿಕರೆಂದು,
ಸಮತಾ = ಇಬ್ಬರೂ ಸಮರೆಂದೂ,
ವಿಷಯೈಃ = ಹೇಳುವ ವಿಷಯಗಳಿಂದ ಕೂಡಿದ, ವಿವಾಧೈಃ = ವಾದವಿವಾದದ ಮಾತುಗಳಿಂದ
ತ್ರಿಲೋಕೀಂ = ಮೂರು ಲೋಕಗಳನ್ನೂ,
ವಾಚಾಲಯಂತಿ = ಮಾತಾಡುವಂತೆ ಮಾಡುತ್ತಿದ್ದರು ||21||
       
    ಎಲೈ! ಭೂದೇವಿಯ ಅವತಾರಳಾದ ಗೋದಾದೇವಿಯೇ, ಪರಸ್ಪರ ಪ್ರೇಮದಿಂದ ನಡೆದ ನಿನ್ನ ಮತ್ತು ರಂಗನಾಥನ ವಿವಾಹದ ಮಾಲಿಕಾರೋಪಣ ಪ್ರಸಂಗದಲ್ಲಿ, ನೀವಿಬ್ಬರೂ ಪ್ರೇಮಪಾಶದಿಂದ ಮಾಲಿಕೆಗಳನ್ನು ಬದಲಾಯಿಸಿ ಕೊಳ್ಳುವುದನ್ನು ಸ್ತೋತ್ರಮಾಡುತ್ತಿದ್ದ, ಪ್ರಿಯಪ್ರೇಯಸಿಯರ ಪ್ರೇಮ ಭಾವವನ್ನೇ ಸ್ಥಾಯಿಭಾವವಾಗಿವುಳ್ಳ ಶೃಂಗಾರರಸೈಕಲೋಲರಾದ ರಸಿಕರು,
ಸೌಂದರ್ಯ, ವಿಭವ, ಐಶ್ವರ್ಯ ಮತ್ತು ಪ್ರೇಮಭಾವದಿಂದ ಕೂಡಿದ ನಿಮ್ಮಿಬ್ಬರಲ್ಲಿ ಬಾಲ್ಯದಿಂದಲೂ ಪರಮಾತ್ಮನನ್ನೇ ವಿವಾಹವಾಗಬೇಕೆಂದು ದೃಢ ಸಂಕಲ್ಪ ಮಾಡಿ, ತನ್ನ ಪ್ರೇಮಪಾಶದಿಂ್ ಪ್ರಿಯನನ್ನು ಕಟ್ಟಿಹಾಕಿ ವಿವಾಹವಾದ ಗೋದಾದೇವಿಯೇ, ರಂಗನಾಥನಿಗಿಂತಲೂ ಅಧಿಕಳೆಂದು ಕೆಲವರು ಹೇಳಿದರೆ, ಕೆಲವರು ತನ್ನ ಪ್ರಿಯನಾದ ರಂಗನಾಥನಿಗೋಸ್ಕರ ಹಾತೊರೆಯುತ್ತಿದ್ದ ಗೋದೆಯ ಮೇಲೆ ವಿಶೇಷ ಕರುಣೆಯನ್ನು ತೋರಿ, ಬಂದು ವಿವಾಹವಾದ ಉಭಯ ವಿಭೂತಿ ನಾಯಕನಾದರೂ, ಕರುಣೆಯೇ ಮೂರ್ತಿವೆತ್ತಂತಿರುವ ರಂಗನಾಥನೇ ಅಧಿಕನೆಂದೂ, ಮತ್ತೆ ಕೆಲವರು ಜಗತ್ತಿನ ಮಾತಾಪಿತೃಗಳಾದ ಗೋದಾ ರಂಗನಾಥರಿಬ್ಬರೂ ಪರಸ್ಪರ, ಒಬ್ಬರ ಪ್ರೇಮಕ್ಕೆ ಮತ್ತೊಬ್ಬರ ಕರುಣೆ ಸಾಟಿಯಾಗಿರುವುದರಿಂದ ಸಮರೆಂದೂ, ಮಾತನಾಡುತ್ತಿದ್ದ ವಾದವಿವಾದಗಳಿಂದ ಮೂರು ಲೋಕದವರೂ ಇದರಲ್ಲಿ ಪಾಲ್ಗೊಂಡು ಮಾತನಾಡುವಂತೆ ಮಾಡಿದರು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ