ಶ್ರೀ ಕೇದಾರೇಶ್ವರ ವ್ರತ ಶುಭಾಶಯಗಳು

 
ಮಂಗಳವ ಹಾಡಿರೆ ಶ್ರೀ ಕೇದಾರೇಶಗೆ
ಆರತಿಯ ಬೆಳಗಿರೆ ದೇವಗೆ ।।

ಪಾರ್ವತಿಯ ಅರ್ಧ ದೇಹ ಪಡೆದಂತ ದೇವಗೆ
ಪ್ರಥಮಗೈಯೇ ಸಕಲ ಭಾಗ್ಯ ಕೊಡುವಂತ ಈಶಗೆ ।
ನಂದಿ - ಸ್ಕಂದ - ಗಣಪರೊಡನೆ ಕೈಲಾಸದಿ ಇರುವಗೆ
ಕೇದಾರ ಕ್ಷೇತ್ರದಲ್ಲಿ ನೆಲಸಿ ನಿಂತ ಸ್ವಾಮಿಗೆ ।।ಮಂಗಳವ।।

ನಂಜನುಂಡು ಲೋಕ ಹಿತವ ಬಯಸಿದಂತ ಹರನಿಗೆ
ತಾಪತಣಿಸೆ ಚಂದ್ರನನ್ನು ಉಳಿದಂತ ಶಿವನಿಗೆ ।
ಭಕ್ತಿಯಿಂದ ಬೇಡೇ ಒಡನೆ ಓಡಿಬರುವ ಈಶಗೆ
ಕರುಣೆಯಿಂದ ಕಾಯುವಂತ ರುದ್ರಾಕ್ಷಿ ಮಾಲೆಗೆ ।।ಮಂಗಳವ।।

ವ್ರತವಗೈಯೇ ಮಾಂಗಲ್ಯದ ಭಾಗ್ಯ ಕೊಡುವ ಸ್ವಾಮಿಗೆ
ಭಜಿಸಿ ಬೇಡೇ ಸಂತಾನವ ಕೊಡುವ ಅಮಿತಗೆ ।
ಕರವ ಮುಗಿವೆ ಕಷ್ಟ ಕಳೆದು ಕಾವಂತ ದಿವ್ಯಗೆ
ದಕ್ಷ ಯಜ್ಞ ನಾಶಗೈವ ಮಾರ್ತಾಂಡನ ಪಿತನಿಗೆ ।।ಮಂಗಳವ।।

ಕೋಟಿ ಕೋಟಿ ಜೀವಗಳಿಗೆ ಅನ್ನ ನೀಡೋ ದಾತಗೆ
ಉಪವಾಸದ ವ್ರತವಗೈಯೇ ಒಲಿದು ಬರುವ ಈಶಗೆ ।
"ಓಂ ನಮಃ ಶಿವಾಯ" ಎಂದು ನುಡಿಸೆ ನಲಿವ ಹರನಿಗೆ
ಭಕ್ತಿಯಿಂದ ಪೂಜೆ ನೀಡಿ ಮಣಿಯಿರವನ ಕಾಲಿಗೆ ।।ಮಂಗಳವ।।


ನಾದಲೋಲ ನಾಟ್ಯರಾಜ" ಓಂ"ಕಾರದ ರೂಪಗೆ
ಲಿಂಗರೂಪ ಧರಿಸಿ ನಿಂತ ದಿವ್ಯರೂಪ ಹರನಿಗೆ ।
ನಂದಿ ಅರ್ಧ ರೂಪದಲ್ಲಿ ಕೇದಾರದಿ ಇರುವಗೆ
ಪಾಂಡವರ ಭಕ್ತಿಗೊಲಿದ ಕೇದಾರದ ಸ್ವಾಮಿಗೆ ।।ಮಂಗಳವ।।

"ಓಂ ನಮಃ ಶಿವಾಯ" ಓಂ ಕೇದಾರದ ಲಿಂಗಗೆ
ಮಂಗಳದ ದೀಪ ಬೆಳಗಿ ಶ್ರೀ ಗೌರಿರಮಣಗೆ ।
"ಓಂ ನಮಃ ಶಿವಾಯ" ಓಂ ಗಣಪನ ಪ್ರಿಯ ಪಿತನಿಗೆ
ಶುಭಮಂಗಳವೆನ್ನಿರೇ ಶ್ರೀ ಸ್ಕಂದನ ಜನಕಗೆ ।।ಮಂಗಳವ।।

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ