Posts

ಶ್ರೀ ಗಾಯತ್ರೀ ಸ್ತೋತ್ರಮ್

ನಮಸ್ತೇ ದೇವಿ ಗಾಯತ್ರಿ ಸಾವಿತ್ರಿ ತ್ರಿಪದೇsಕ್ಷರೇ | ಅಜರೇ ಅಮರೇ ಮಾತತ್ರಾಹಿ ಮಾಮ್ ಭವಸಾಗರಾತ್ ||೧||     ಹೇ! ತಾಯೇ; ಈ ಭವ ಸಾಗರದಿಂದ ನನ್ನನ್ನು ಕಾಪಾಡು.ಮೂರು ಅಕ್ಷರಗಳಿರುವ ನೀನು ಗಾಯತ್ರಿಯೂ,ಸಾವಿತ್ರಿಯೂ ಆಗಿದ್ದು ಮುಪ್ಪಿಲ್ಲದವಳೂ ಆಗಿರುವುದಲ್ಲದೆ ಅಮರಳೂ ಆಗಿರುವೆ. ಮಾತೆಯೇ ನಿನಗಿದೋ ಪ್ರಣಾಮಗಳು. ನಮಸ್ತೇ ಸೂರ್ಯಸಂಕಾಶೇ ಸೂರ್ಯಸಾವಿತ್ರಿಕೆಮಾತೃಕೇ | ಬ್ರಹ್ಮವಿದ್ಯೆ ಮಹಾವಿದ್ಯೆ ವೇದಮಾತೇನಮೋಸ್ತುತೇ ||೨||     ತಾಯಿಯೇ;ವೇದಮಾತೆಯೇ,ಮಹಾವಿದ್ಯಾಪ್ರದಾಯಿನಿಯೇ,ಬ್ರಹ್ಮ ವಿದ್ಯಾಪಾರಂಗತಳೇ,ಸೂರ್ಯನೊಡನೆ ಸದಾ ಇರುವ ಮಾತೆಯೇ ನಿನಗಿದೋ ಪ್ರಣಾಮಗಳು. ಅನಂತಕೋಟಿ ಬ್ರಹ್ಮಾಂಡವ್ಯಾಪಿನಿ ಬ್ರಹ್ಮಚಾರಿಣಿ | ನಿತ್ಯಾನಂದೇ ಮಹಾಮಾಯೇ ಪರೇಶಾನಿ ನಮೋಸ್ತುತೇ ||೩||     ಹೇ! ಅಮ್ಮಾ; ಬ್ರಹ್ಮಚಾರಿಣಿಯೇ,ಬ್ರಹ್ಮಾಂಡವನ್ನು ವ್ಯಾಪಿಸಿರುವವಳೇ,ನಿರಂತರ ಆನಂದ ದಾಯಕಿಯಾಗಿ ಮಾಯಾಸ್ವರೂಪಿಣಿಯೂ ಆಗಿರುವ ಮಾತೆಯೇ, ನಿನಗಿದೋ ಪ್ರಣಾಮಗಳು. ತ್ವಂ ಬ್ರಹ್ಮಾ ತ್ವಂ ಹರಿ: ಸಾಕ್ಷಾದ್ ರುದ್ರಸ್ತ್ವಮಿಂದ್ರ ದೇವತಾ | ಮಿತ್ರಸ್ತ್ವಂ ವರುಣಸ್ತ್ವಂ ಚ ತ್ವಮ್ ಅಗ್ನಿರಶ್ವಿನೌ ಭಗ: ||೪||     ಹೇ! ಅಮ್ಮಾ: ನೀನು ಬ್ರಹ್ಮ ಸ್ವರೂಪಿಯು. ನೀನು ಹರಿ ಸ್ವರೂಪಳು.ಸಾಕ್ಷಾತ್ ರುದ್ರ ಸ್ವರೂಪಿಣಿಯೂ ಇಂದ್ರ ದೇವತೆಯೂ ಆಗಿರುವೆ.ನೀನೇ ಸೂರ್ಯ,ಚಂದ್ರ, ಅಗ್ನಿ,ವರುಣ,ಅಶ್ವಿನೀ ದೇವತೆಯರೂ ಆಗಿರುವೆ.ತಾಯ...

ನದೀ ತಾರತಮ್ಯ ಸ್ತೋತ್ರಮ್ - ಶ್ರೀ ರಾಘವೇಂದ್ರಯತಿಕೃತ

ವಿಷ್ಣುಪಾದಾಬ್ಜ ಸಂಭೂತಾ ಗಂಗಾ ಸರ್ವಾಧಿಕಾ ಮತಾ | ತತೋ ಗೋದಾವರೀ ನ್ಯೂನಾ ಕೃಷ್ಣವೇಣೀ ತತೋsಧಮಾ || 1 || ಸ್ವಾಮಿ ಚಂದ್ರಾ ಪುಷ್ಕರಿಣ್ಯೌ ಮಾನಸಂ ಚ ಸರೋವರಂ | ಕೃಷ್ಣವೇಣ್ಯಾ ಸಮಸ್ತಾಭ್ಯ ಕಾವೇರೀ ಚ ಸರಸ್ವತೀ || 2 || ಹಿನೇsನ್ಯೋನ್ಯಸಮೇ ತಾಭ್ಯಾಮೂನಾ ಚ ಸರಯೂ ತಥಾ | ತುಂಗಭದ್ರಾ ಸಮಾ ತಸ್ಯಾಃ ಕಾಲಿಂದ್ಯೂನಾ ತತೋsಧಮೇ || 3 || ನರ್ಮದಾಸಿಂಧುಸರಿತೌ ತತ್ಸಮಾ ಭವನಾಶಿನೀ | ತತಃ ಕುಮುದ್ವತೀನೀಚಾ ತತೋ ನೀಚಾ ಮಲಾಪಹಾ || 4 || ತಾಮ್ರಪರ್ಣೀ ಭೀಮರಥೀ ವಂಜುಲಾ ಚ ಪಿನಾಕಿನೀ | ಪೃಥಕ್ ಸಾಗರಗಾಮಿನ್ಯೋ ನದ್ಯೋ ಭೀಮರಥೀಸಮಾಃ || 5 || ತತೋsನ್ಯಾಃ ಸರಿತೋ ನೀಚಾಸ್ತಟಾಕಾಶ್ಚ ತತೋsಧಮಾಃ | ತತೋ ನೀಚಾಃ ಪುಷ್ಕರೀಣ್ಯೋ ದೇವಖಾತಾಶ್ಚ ತತ್ಸಮಾಃ || 6 || ತತೋ ವಾಪ್ಯೋsಧಮಾಸ್ತಾಭ್ಯಃ ಕೂಪಾಃ ಸವಾಧಮಾ ಮತಾಃ| ಸ್ವೋತ್ತಮಾರ್ಘ್ಯಂ ಪ್ರದಾತವ್ಯಂ ಅವರಾಸು ನ ಚಾನ್ಯಥಾ || 7 || ರಾಘವೇಂದ್ರೇಣ ಯತಿನಾ ಬ್ರಹ್ಮಾಂಡಾಖ್ಯಂ ಪುರಾಣಗಃ | ಇತ್ಯಧ್ವ್ರತಃ ಸಾರಭಾಗೋ ನದೀ ನೀಚೋಚ್ಚ ಸೂಚಕಃ || 8 || || ಇತಿ ಶ್ರೀ ರಾಘವೇಂದ್ರಯತಿಕೃತ ನದೀತಾರತಮ್ಯಸ್ತೋತ್ರಂ ||

ನವಗ್ರಹ ಸ್ತೋತ್ರಮ್

ನಮ: ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ | ಗುರುಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮ: ||     ನವಗ್ರಹರಾದ ಸೂರ್ಯ,ಚಂದ್ರ, ಕುಜ,ಬುಧ,ಗುರು,ಶುಕ್ರ,ಶನಿ ರಾಹು ಮತ್ತು ಕೇತು ಗ್ರಹಗಳಿಗೆ ಪ್ರಣಾಮಗಳು. ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ | ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಮ್ ||೧||     ದಾಸವಾಳ ಪುಷ್ಪದ ಸಾದೃಶ್ಯವುಳ್ಳವನೂ, ಕಶ್ಯಪ ತನಯನೂ, ಮಹಾ ಕಾಂತಿಯಿಂದ ಕೂಡಿದವನೂ,ಕತ್ತಲಿನ ವೈರಿಯೂ, ಸರ್ವ ಪಾಪಗಳ ವಿನಾಶಕನೂ ಆಗಿರುವ ಸೂರ್ಯ ದೇವನಿಗೆ ನಮಸ್ಕರಿಸುವೆ. ದಧಿ ಶಂಖ ತುಷಾರಾಭಂ ಕ್ಷೀರೋದಾರ್ಣವ ಸಂಭವಮ್ | ನಮಾಮಿ ಶಶಿನಂ ಸೋಮಂ ಶಂಭೋರ್ಮುಕುಟ ಭೂಷಣಂ ||೨||     ಮೊಸರು,ಶಂಖ,ಹಾಗೂ ಮಂಜಿನಹನಿಗಳವರ್ಣವುಳ್ಳವನೂ,ಕ್ಷೀರಸಾಗರದಿಂದ ಉದ್ಭವಿಸಿದವನೂ,ಪರಶಿವನ ಶಿರೋಭೂಷಣನೂ ಆಗಿರುವ ಸೌಮ್ಯಸ್ವರೂಪಿಯಾಗಿರುವ ಚಂದ್ರನಿಗೆ ನಾನು ನಮಸ್ಕರಿಸುವೆ. ಧರಣೀಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಮ್ | ಕುಮಾರಂ ಶಕ್ತಿಹಸ್ತಂಚ ಮಂಗಲಂ ಪ್ರಣಮಾಮ್ಯಹಮ್ ||೩||     ಪೃಥ್ವಿಯ ಗರ್ಭ ಸಂಜಾತನೂ,ವಿದ್ಯುತ್ತಿನ ಪ್ರಕಾಶ ಸದೃಶವಾದ ಬೆಳಕನ್ನು ಹೊಂದಿರುವವನೂ,ಕುಮಾರನೂ ಶಕ್ತಿಹಸ್ತನೂ ಆಗಿರುವ ಮಂಗಲದಾಯಕನಾದ ಕುಜನಿಗೆ ನಾನು ನಮಸ್ಕರಿಸುವೆ. ಪ್ರಿಯಂಗುಕಲಿಕಾಶ್ಯಾಮಂ ರೂಪೇಣಾಪ್ರತಿಮಂ ಬುಧಮ್ | ಸೌಮ್ಯಂ ಸೌಮ್ಯಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್ ||೪||   ...

ವಿಷ್ಣುಸೂಕ್ತ

ಓಂ ಅತೋ ದೇವಾ ಅವಂತು ನೋ ಯತೋ ವಿಷ್ಣುರ್ವಿಚಕ್ರಮೇ | ಪೃಥಿವ್ಯಾಃ ಸಪ್ತಧಾಮಭಿಃ ||1||     ವಿಷ್ಣುವು ಅಸುರರ ವಶದಲ್ಲಿದ್ದ ಭೂಮಿಯೇ ಮೊದಲಾದ ಏಳು ಲೋಕಗಳನ್ನು ಆಕ್ರಮಿಸಿ ದೇವತೆಗಳನ್ನು ಅವರಿಗೆ ಯೋಗ್ಯವಾದ ಸ್ಥಾನಗಳಲ್ಲಿ ಸ್ಥಾಪಿಸಿದ್ದಾನೆ. ಅಂಥಹ ದೇವತೆಗಳು ನಮ್ಮನ್ನು ರಕ್ಷಿಸಲಿ. ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಂ | ಸಮೂಹ್ಳಮಸ್ಯ ಪಾಂಸುರೇ ||2||     ವಿಷ್ಣುವು ಕೇವಲ ಮೂರು ಹೆಜ್ಜೆಗಳನ್ನು ಇಟ್ಟು ಇಡೀ ವಿಶ್ವವನ್ನೇ ಆಕ್ರಮಿಸಿದನು. ವಿಶ್ವವು ವಿಷ್ಣುವಿನ ಪಾದದಲ್ಲಿ ಧೂಳಿನಂತೆ ಶೋಭಿಸಿತು. ತ್ರೀಣಿ ಪದಾ ವಿಚಕ್ರಮೇ ವಿಷ್ಣುರ್ಗೋಪಾ ಅದಾಭ್ಯಃ | ತತೋ ಧರ್ಮಾಣಿ ಧಾರಯನ್ ||3||     ಅಮಿತ ಶಕ್ತಿಯುಳ್ಳ ವಿಷ್ಣುವು ಮೂರು ಲೋಕಗಳನ್ನು ಮೀರಿ ನಿಂತವನು. ಅವುಗಳಿಗೆ ಆತ ರಕ್ಷಕನಾಗಿರುವನು. ವಿಶ್ವಧಾರಕನೂ ಆಗಿರುವುದರಿಂದ ದೇವತೆಗಳಿಗೂ ಅವನೇ ಧಾರಕನಾಗಿರುವನು. ವಿಷ್ಣೋಃ ಕರ್ಮಾಣಿ ಪಶ್ಯತ ಯತೋ ವ್ರತಾನಿ ಪಸ್ಪಶೇ | ಇಂದ್ರಸ್ಯ ಯುಜ್ಯಸ್ಸಖಾ ||4||     ವಿಷ್ಣುವು ಮಾಡುವ ಲೀಲೆಗಳನ್ನು ನೋಡಿರಿ. ಜೀವಿಗಳ ಎಲ್ಲ ಕಾರ್ಯಗಳೂ ಅವನಿಂದಲೇ ನಡೆಯುತ್ತಿವೆ. ಅವನು ಇಂದ್ರ ಮತ್ತುವಾಯುವಿಗೆ ಸದಾ ಜೊತೆಯಲ್ಲಿರುವ ಮಿತ್ರನಾಗಿದ್ದಾನೆ. ತದ್ವಿಷ್ಣೋಃ ಪರಮಂ ಪದಂ ಸದಾ ಪಶ್ಯಂತಿ ಸೂರಯಃ | ದಿವೀವ ಚಕ್ಷುರಾತತಮ್ ||5||     ಆ ವಿಷ್ಣುವಿನ ಶ್ರೇಷ್ಠವಾದ ಸ್ವರೂಪ...

ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತಾ ಸದಾಚಾರಸ್ಮೃತಿಃ

ವೈಷ್ಣವರ ಕರ್ಮಾಚರಣೆಯ ವಿಧಿವಿಧಾನಗಳನ್ನು ಶ್ರುತಿಸ್ಮೃತಿಗಳ ಅನುಸಾರವಾಗಿ ಶಿಷ್ಯರಿಗೆ ಬೋಧಿಸಿ ಉದ್ಧರಿಸಲಿಕ್ಕಾಗಿ ಶ್ರೀಮಧ್ವಾಚಾರ್ಯರು ರಚಿಸಿರುವ ಸುಮಾರು 39 ಶ್ಲೋಕಗಳ ಅತ್ಯಂತ ಮಹತ್ವವಾದ ಚಿಕ್ಕ ಗ್ರಂಥವೇ ಸದಾಚಾರಸ್ಮೃತಿ. ಮೊದಲಿಗೆ ಅಚ್ಯುತನ ಸ್ಮರಣೆಯೊಂದಿಗೆ ಶ್ರೀಮದಾಚಾರ್ಯರು ಈ ಕೃತಿಯನ್ನು ಪ್ರಾರಂಭಿಸುತ್ತಿದ್ದಾರೆ. ಯಸ್ಮಿನ್ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮ ಚೇತಸಾ | ನಿರಾಶೀರ್ನಿಮಮೋ ಯಾತಿ ಪರಂ ಜಯತಿ ಸೋsಚ್ಯುತಃ || 1 ||     ಚತುರ್ವಿಧ ನಾಶರಹಿತನಾದ ಅಚ್ಯುತನು ಸವೋತ್ಕೃಷ್ಣನು. ಪರಮಾತ್ಮನ ಬಗ್ಗೆ ಈ ರೀತಿಯ ಜ್ಞಾನವನ್ನು ಹೊಂದಿದ ಸಾಧಕನು ಮಮಕಾರ ಮತ್ತು ಅಹಂಕಾರಗಳನ್ನು ತ್ಯಜಿಸಿ, ಯಾವುದೇ ಐಹಿಕ ಆಸೆ ಆಕಾಂಕ್ಷೆಗಳನ್ನು ಹೊಂದದೆ ತಾನು ಮಾಡುವ ಎಲ್ಲ ಕರ್ಮಗಳೂ ಸ್ವತಂತ್ರನಾದ ಪರಮಾತ್ಮನಿಂದಲೇ ಆಗುತ್ತಿವೆ, ತಾನು ಕೇವಲ ಉಪಕರಣ ಎಂದು ಭಾವಿಸಿ, ಎಲ್ಲ ಕರ್ಮಗಳನ್ನೂ ಪರಮಾತ್ಮನಿಗೆ ಭಕ್ತಿಯಿಂದ ಸಮರ್ಪಿಸಬೇಕು. ಹೀಗೆ ಮಾಡುವುದೇ ಗೀತೋಕ್ತ ನಿಷ್ಕಾಮ ಕರ್ಮ. ಇದರಿಂದ ಅಪರೋಕ್ಷಜ್ಞಾನ ದ್ವಾರಾ ಪರಮಾತ್ಮನ ಪರಮಪ್ರಸಾದವಾದ ವೋಕ್ಷಪ್ರಾಪ್ತಿ ಎಂಬ ಪ್ರಮೇಯವನ್ನು ಶ್ರೀಮದಾಚಾರ್ಯರು ಈ ಮಂಗಲ ಶ್ಲೋಕದಲ್ಲಿ ತಿಳಿಸಿದ್ದಾರೆ. ಸ್ಮೃತ್ವಾ ವಿಷ್ಣುಂ ಸಮುತ್ಥಾಯ ಕೃತಶೌಚೋ ಯಥಾವಿಧಿ | ಧೌತದಂತಃ ಸಮಾಚಮ್ಯ ಸ್ನಾನಂ ಕುರ್ಯಾದ್ವಿಧಾನತಃ || 2 ||     ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿಯೇ ಹಾಸಿಗೆಯಿಂದ ಮೇಲಕ್...

ಶ್ರೀ ರಾಘವೇಂದ್ರತೀರ್ಥಕೃತ ಶ್ರೀರಾಮಚಾರಿತ್ರ್ಯ ಮಂಜರೀ

Image
ಶ್ರೀಮಾನ್ ಪೂರ್ವಂ ಪ್ರಜಾತೋ ದಶರಥನೃಪತೇ ರಾಮನಾಮಾsಥ ನೀತೋ | ವಿಶ್ವಾಮಿತ್ರೇಣ ಮಂತ್ರಾಹೃದನುಜಸಹಿತಸ್ತಾಟಕಾಘಾತುಕೋsಸ್ತ್ರಮ್ | ಬ್ರಹ್ಮಾದ್ಯಂ ಪ್ರಾಪ್ಯ ಹತ್ವಾ ನಿಶಿಚರನಿಕರಂ ಯಜ್ಞಪಾಲೋ ವಿಮೋಚ್ಯಾ - ಹಲ್ಯಾಮ್ ಶಾಪಂ ಚ ಭಂಕ್ತ್ವಾಶಿವಧನುರುಪಯನ್ ಜಾನಕೀಂನಃ ಪ್ರಸೀದೇತ್ | 1 |     ಶ್ರೀಮನ್ನಾರಾಯಣನು ದಶರಥ-ಕೌಸಲ್ಯ ರಾಜದಂಪತಿಗಳ ಪುತ್ರನಾಗಿ "ರಾಮ"ನೆಂಬ ಹೆಸರಿನಿಮದವತರಿಸಿ, ವಿಶ್ವಾಮಿತ್ರರೊಂದಿಗೆ ಯಜ್ಞ ರಕ್ಷಣೆಗಾಗಿ ಸಿದ್ಧಾಶ್ರಮವನ್ನು ಕುರಿತು ಹೊರಟು ತಾಟಕೀ ಎಂಬ ರಾಕ್ಷಸಿಯನ್ನು ಸಂಹರಿಸಿ, ವರ ಪಡೆದ ನಿಶಾಚರರಾದ ಸುಬಾಹು ಮೊದಲಾದ ರಾಕ್ಷಸರ ಸಮೂಹವನ್ನೇ ನಿಗ್ರಹಿಸಿ ಯಜ್ಞವನ್ನು ರಕ್ಷಿಸಿ ಗೌತಮರ ಪತ್ನಿಯಾದ ಅಹಲ್ಯೆಯ ಶಾಪ ವಿಮೋಚನೆ ಮಾಡಿ, ಶಿವಧನಸ್ನು ಮುರಿದು ಜನಕರಾಜನ ಪುತ್ರಿಯಾದ ಜಾನಕಿಯನ್ನು ವಿವಾಹವಾದ ಶ್ರೀಮನ್ನಾರಾಯಣನು ನಮಗೆ ಪ್ರಸನ್ನನಾಗಲಿ. ಆಯನ್ ರಾಮಸ್ಸಭಾರ್ಯೋsಧ್ವನಿ ನಿಜಸಹಜೈರ್ಭಾರ್ಗವೇಷ್ವಾಸರೋಪಾತ್ ತದ್ಗಂ ಹತ್ವಾ ಸುರಾರಿಂ ಪುರಗ ಉತ ನುತಸ್ತಾಪಸೈರ್ಭೋಪಪೃಷ್ಟ್ಯೈಃ | ಕಲ್ಯಾಣಾನಂತಧರ್ಮೋsಗುಣಲವಹರಿತಃ ಪ್ರಾಣಿನಾಮಂತರಾತ್ಮೇ - ತ್ಯಾದ್ಯುಕ್ತಶ್ಚಾಭಿಷೇಕೇ ಪುರಜನಮಹಿತೋ ಮಹ್ಯತಾಂ ಮೇ ವಚೋಭಿಃ || 2 ||     ಪತ್ನೀ ಸಮೇತನಾಗಿ, ಲಕ್ಷ್ಮಣಾದಿಗಳೊಡನೆ, ರಾಮಚಂದ್ರದೇವರು, ಅಯೋಧ್ಯೆಯನ್ನು ಕುರಿತು ಹೊರಡುವಾಗ ಮಾಗಮಧ್ಯದಲ್ಲಿ ತನ್ನದೇ ರೂಪವಾದ ಭಾರ್ಗವರಾಮ (ಪರಶುರಾಮ)ನನ್ನು ಸಂಧಿಸಿ ಅವನು...

ಪುರುಷಸೂಕ್ತ

||ಸಹಸ್ರಶೀರ್ಷಾ ನಾರಾಯಣೋ ಋಷಿಃ ಪುರುಷೋ ದೇವತಾ  ಅನುಷ್ಟುಪ್ ಛಂದಃ ಅಂತ್ಯಾ ತ್ರಿಷ್ಟುಪ್ ಮಹಾಭಿಷೇಕೇ ವಿನಿಯೋಗಃ || ಓಂ ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರ ಪಾತ್ | ಸಃ ಭೂಮಿಂ ವಿಶ್ವತೋ ವೃತ್ತ್ವಾsತ್ಯತಿಷ್ಟದ್ದಶಾಂಗುಲಮ್ ||1||     ಪುರುಷ ಶಬ್ದದಿಂದ ಮುಖ್ಯತಃ ವಾಚ್ಯನಾದ ನಾರಾಯಣನ ಶಿರಸ್ಸುಗಳು, ಕಣ್ಣುಗಳು, ಪಾದಗಳು, ಉಪಲಕ್ಷಣಯಾ ತೊಡೆ ಮೊದಲಾದ ಎಲ್ಲ ಅಂಗಗಳೂ ಅನಂತವಾಗಿವೆ. ಇಲ್ಲಿ ಸಹಸ್ರ ಶಬ್ದವು ಅನಂತವನ್ನು ಹೇಳುತ್ತದೆ. ಈ ಪುರಷನು ಭೂಮಿ ಶಬ್ದದಿಂದ ವಾಚ್ಯವಾದ ಬ್ರಹ್ಮಾಂಡದೊಳಗಿನ ಸಮಸ್ತ ಜಗತ್ತನ್ನು ಬಹಳವಾಗಿ ವ್ಯಾಪಿಸಿದ್ದರೂ ಅಂಗುಷ್ಟ ಗಾತ್ರದ ಹೃದಯದಲ್ಲಿಯೂ ಇರುತ್ತಾನೆ. ಅಂದರೆ ಅಲ್ಪವಾದ ಹೃದಯದಲ್ಲಿದ್ದು ಅಚಿಂತ್ಯ ಶಕ್ತಿಯಿಂದ ಇಡೀ ಬ್ರಹ್ಮಾಂಡವನ್ನು ವ್ಯಾಪಿಸಿರುತ್ತಾನೆ. ಪುರುಷ ಏವೇದಂ ಸರ್ವಂ ಯದ್ಭೂತಂ ಯಚ್ಚ ಭವ್ಯಮ್ | ಉತಾಮೃತತ್ವಾಸ್ಯೇಶಾನೋ ಯದನ್ನೇನಾತಿರೋಹತಿ ||2||     ಹಿಂದೆ ಆಗಿಹೋದ, ಈಗಿರುವ ಮತ್ತು ಮುಂದೆ ಬರಲಿರುವ ಸಕಲ ಜಗತ್ತು ಸದಾ ಕಾಲದಲ್ಲಿಯೂ ಈ ಪುರುಷನ ಅಧೀನವೇ ಆಗಿರುವುದು. ಆತನೇ ಮುಕ್ತರಿಗೂ ಅಮುಕ್ತರಿಗೂ ಮತ್ತು ಮುಕ್ತಿಗೂ ಸ್ವಾಮಿಯು. ಅಂದರೆ ಮುಕ್ತರಿಗೂ ಅಮುಕ್ತರಿಗೂ ಆಶ್ರಯನು. ಈ ಪುರುಷನು ಅನ್ನ ಶಬ್ದದಿಂದ ವಾಚ್ಯಳಾದ ಶ್ರೀರಮಾದೇವಿಯನ್ನೂ ಮೀರಿನಿಂತಿರುವನು. ಏತಾವಾನಸ್ಯ ಮಹಿಮಾsತೋ ಜ್ಯಾಯಾಂಶ್ಚ ಪೂರುಷಃ | ಪಾದೋsಸ್ಯ ವಿಶ್ವಾಭೂತಾನಿ ತ್ರಿಪಾದಸ್ಯ...