ಗೋದಾಸ್ತುತಿಃ (ಸಂಗ್ರಹ) - 29

ಇತಿ ವಿಕಸಿತಭಕ್ತೇಃ ಉತ್ಥಿತಾಂ ವೆಂಕಟೇಶಾತ್
ಬಹುಗುಣರಮಣೀಯಾಂ ವಕ್ತಿಗೋದಾಸ್ತುತಿಂ ಯಃ |
ಸ ಭವತಿ ಬಹುಮಾನ್ಯಃ ಶ್ರೀಮತೋ ರಂಗಭರ್ತ್ತುಃ
ಚರಣಕಮಲಸೇವಾಂ ಶಾಶ್ವತೀಮಭ್ಯುಷ್ಯನ್ ||29||

ವಿಕಸಿತಭಕ್ತೀಃ = ಅರಳಿದ ಭಕ್ತಿಯುಳ್ಳ,
ವೇಂಕಟೀಶಾತ್ = ವೇಂಕಟನಾಥನೆಂಬ ಕವಿಯಿಂದ,
ಇತಿ = ಈ ಮೇಲೆ ಹೇಳಿರುವ (ರೀತಿಯಲ್ಲಿ) 28 ಶ್ಲೋಕಗಳಲ್ಲಿ,
ಉತ್ಥಿತಾಂ = ಹೊರ ಹೊಮ್ಮಿದ,
ಬಹುಗುಣರಮಣೀಯಾಂ = ಗೋದಾದೇವಿಯ ಅನೇಕ ವಿಧವಾದ ಕಲ್ಯಾಣಗುಣಗಳಿಂದ ಕೂಡಿ ಸುಂದರವಾಗಿರುವ,
ಗೋದಾಸ್ತುತಿಂ = ಗೋದಾಸ್ತುತಿಂ - ಹೆಸರುಳ್ಳ ಈ ಗೋದಾಸ್ತೋತ್ರವನ್ನು,
ಯಃ = ಯಾವನು,
ವಕ್ತಿ=ಹೇಳುತ್ತಾನೆಯೊ,
ಸ್ತಃ = ಅವನು,
ಶ್ರೀಮತಃ = ಶ್ರಿಯಃಪತಿಯಾದ,
ರಂಗಭರ್ತುಃ = ರಂಗನಾಥನ,
ಶಾಶ್ವತೀಂ = ಎಂದೆಂದಿಗೂ ಶಾಶ್ವತವಾದ,
ಚರಣಕಮಲಸೇವಾಂ = ಆಡಿದಾವರೆಗಳ ಕೈಂಕರ್ಯವನ್ನು,
ಅಭ್ಯುಪೈಷ್ಯನ್ = ಹೊಂದಿದವನಾಗಿ,
ಬಹುಮಾನ್ಯಃ = ಎಲ್ಲರಿಂದಲೂ ಗೌರವಕ್ಕೆ ಪಾತ್ರನಾಗಿ,
ಭವತಿ = ಆಗುತ್ತಾನೆ.

    ವಿಕಾಸಗೊಂಡ ಭಕ್ತಿಯುಳ್ಳ ವೆಂಕಟನಾಥರಿಂದ, ಈ ಮೇಲೆ ಹೇಳಿರುವ 28 ಪದ್ಯಗಳಲ್ಲಿ ಹೊರಹೊಮ್ಮಿದ, ಗೋದಾದೇವಿಯ ಅನೇಕ ವಿಧವಾದ ಕಲ್ಯಾಣ ಗುಣಗಳಿಂದ ಕೂಡಿ ಸುಂದರವಾಗಿರುವ ಈ ಗೋದಾಸ್ತುತಿಯನ್ನು ಯಾರು ಹೇಳುತ್ತಾರೆಯೋ ಅವರು ಶ್ರಿಯಃಪತಿಯಾದ ಶ್ರೀರಂಗನಾಥನ ಅಡಿದಾವರೆಗಳ ಕೈಂಕರ್ಯವನ್ನು ಎಂದೆಂದಿಗೂ ಶಾಶ್ವತವಾಗಿ ಹೊಂದಿ, ಭಗವಂತನ ಕೃಪೆಗೆ ಪಾತ್ರನಾಗಿ, ಎಲ್ಲರಿಂದಲೂ ಗೌರವಕ್ಕೆ ಪಾತ್ರನಾಗಿರುತ್ತಾನೆ.

ಇಲ್ಲಿ ಶ್ರೀಮದ್ವೇದಾಂತ ದೇಶಿಕರಿಂದ ರಚಿಸಲ್ಪಟ್ಟ ಗೋದಾಸ್ತುತಿಯು ಕನ್ನಡ ಪ್ರತಿಪಾದರ್ಥ ಮತ್ತು ತಾತ್ಪರ್ಯ ಸಹಿತವಾಗಿ ಮುಕ್ತಾಯವಾಗಿದೆ.
ನಿಷಿದ್ಯಾವಿದ್ಯಾನಾಂ ನಿಖಿಲಕುಮತಿವ್ಯಾಳಗರುಡಃ
ಸಭಾಸೌಭಾಗ್ಯಾನಾಂ ಸರಸಿಕವಿತಾಪದ್ಮಸವಿತಾ |
ಪ್ರಮಾಣಂ ಭಾಷ್ಯಸ್ಯ ಪ್ರಪದನಕಲಾಜನ್ಮಜಲಧಿಃ
ಕರೋತು ಕ್ಷೇಮಂ ನಃ ಕವಿಕಥಿಕಕಂಠೀರವಗುರುಃ ||
ಕವಿತಾರ್ಕಿಕಸಿಂಹಾಯ ಕಲ್ಯಾಣಗುಣಶಾಲಿನೇ |
ಶ್ರೀಮತೇ ವೇಂಕಟೇಶಾಯ ವೇದಾಂತಗುರವೇ ನಮಃ ||
ಶ್ರೀಮತೇ ನಿಗಮಾಂತ ಮಹಾದೇಶಿಕಾಯ ನಮಃ ||
||ಶ್ರೀ ಕೃಷ್ಟಾರ್ಪಣಮಸ್ತು||
 

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ