ಕನಕದಾಸರ ಪ್ರಾರಂಭದ ಕೃತಿ ಭೋಗಮೂಲವಾದ ಶೃಂಗಾರವೇ ವಸ್ತು ಇದು ಭಕ್ತಿ ಸಾಹಿತ್ಯ ಪರಂಪರೆಗೆ ಸೇರಿದ್ದಲ್ಲ 42 ಸಂಧಿಗಳಿವೆ ಸಾಂಗತ್ಯಗಳಿರುವುದು 2700 ಇದರ ಇನ್ನೊಂದು ಹೆಸರು ಕೃಷ್ಣಚರಿತೆ ಶ್ರೀ ಕೃಷ್ಣರುಕ್ಮಿಣಿ ರತಿಮನ್ಮಥ ಉಷಾಅನಿರುದ್ಧರ ಪ್ರೇಮಗಥೆಯನ್ನು ದಾಸರು ಅತ್ಯಂತ ಸೊಗಸಾಗಿ ನಿರೂಪಿಸಿದ್ದಾರೆ. ದೈವೀಪಾತ್ರಗಳನ್ನು ಶೃಂಗಾರಕಾವ್ಯಗಳಲ್ಲಿ ಜೀವಂತವಾಗಿರಿಸಿದ ಶ್ರೇಯಸ್ಸು ಇವರದ್ದು, ಮೋಹನತರಂಗಿಣಿಗೆ ಕಥಾ ವಸ್ತುವನ್ನು ಆಯ್ದುಕೊಂಡಿರುವುದು ಮಹಾಭಾರತ ಭಾಗವತ ಮತ್ತು ಪುರಾಣಗಳಿಂದ ವಿಜಯನಗರದ ಸಮಕಾಲೀನ ಜೀವನವನ್ನು ನಮ್ಮ ಕಣ್ಮುಂದೆ ಪೌರಾಣಿಕ ಪಾತ್ರಗಳ ಹಿನ್ನೆಲೆಯಲ್ಲಿ ಇರಿಸಿರುವುದರಿಂದ ಅವರನ್ನು ಅಕಾಲದ ಚರಿತ್ರೆಕಾರರ ಸಾಲಿಗೆ ಸೇರಿಸಿದೆ ವಿಜಯನಗರದ ಸಾಮ್ರಾಜ್ಯದ ಸುವರ್ಣ ಯುಗದಲ್ಲಿ ಈ ಕೃತಿ ರಚಿಸಿಸ್ಪಟ್ಟಿತು ಎಂಬುದು ಗಮನಿಸಬೇಕಾದ ಸಂಗತಿ. ಮೋಹನತರಂಗಿಣಿಯಲ್ಲಿನ ಶ್ರೀ ಕೃಷ್ಣನ ದ್ವಾರಕೆ ಮತ್ತು ವಿದೆ ಶ್ರೀಪ್ರವಾಸಿಗಳ ವಿಜಯನಗರದ ವರ್ಣನೆ ಇವುಗಳಲ್ಲಿನ ಸಾಮ್ಯತೆಯನ್ನು ನಾವು ಗುರುತಿಸಬಹುದು. ಪುರಾಣಪುರುಷ ಶ್ರೀ ಕೃಷ್ಣನ್ನು ವಿಜಯನಗರದ ಶ್ರೀಕೃಷ್ಣದೆ ವರಾಯನೊಂದಿಗೆ ಕಾವ್ಯದಲ್ಲಿ ಹೋಲಿಸಿದ್ದಾರೆ ಶ್ರೀಕೃಷ್ಣದೇವರಾಯನನ್ನು ಸ್ತುತಿಸಲೆಂದೇ ಕನಕದಾಸರು ಮೋಹನತರಿಂಗಿಣಿ ರಚಿಸಿದರೆಂದು ಹೇಳುವವರಿದ್ದಾರೆ ಡಾ. ಜಿ ವರದರಾಜರಾವ್ ಅವರು ಪೌರಾಣಿಕವಾದ ಕಥಾವಸ್ತುವನ್ನು ಜನಪ್ರಿಯವಾದ ಧಾಟಿಯಲ್ಲಿ ಕಾವ್ಯಮಯವಾದ ಶೈಲಿಯಲ್ಲಿ ನಿರೂಪಿಸಿರು
Comments
Post a Comment