ಲಲಿತಾ ತ್ರಿಶತೀ - 6. ಓಂ ಕಲಾವತ್ಯೈ ನಮಃ Get link Facebook X Pinterest Email Other Apps December 14, 2016 ದೇವಿಯ ಭಕ್ತರ ಧ್ಯಾನಕ್ಕೆ ಗೋಚರವಾಗುವ ದೇವಿಯ ಮೂರ್ತಿಯಲ್ಲಿ ಶಿರಸ್ಸು-ಪಾಣಿ ಮುಂತಾದ ಅವಯವಗಳು, ವಿದ್ಯಾರೂಪವಾದ ಚತುಃ ಷಷ್ಟಿ ಕಲೆಗಳು ಅಥವಾ ಚಂದ್ರಕಲೆ ಇವುಗಳಿರುವುದರಿಂದ ದೇವಿಯು ಕಲಾವತಿ ಎನಿಸಿರುವಳು. (ಮುಂದುವರೆಯುವುದು...) Get link Facebook X Pinterest Email Other Apps Comments
'ಓಂ ಗಂ ಗಣಪತಯೇ ನಮಃ' April 25, 2016 ಓಂ|| ಗಣಾದಿಂ ಪೂರ್ವಮುಚ್ಚಾರ್ಯ ವರ್ಣಾದಿಂ ತದನಂತರಮ್ | ಅನುಸ್ವಾರಃ ಪರತರಃ | ಅರ್ಧೇಂದುಲಸಿತಮ್ | ತಾರೇಣ ರುದ್ಧಮ್ | ಏತತ್ತವ ಮನುಸ್ವರೂಪಮ್ | ಗಕಾರಃ ಪೂರ್ವ ರೂಪಮ್ | ಅಕಾರೋ ಮಧ್ಯಮರೂಪಮ್ | ಅನುಸ್ವಾರಶ್ಚಾಂತ್ಯ ರೂಪಮ್ | ಬಿಂದುರುತ್ತರರೂಪಮ್ | ನಾದಃ ಸಂಧಾನಮ್ | ಸಂಹಿತಾ ಸಂಧಿಃ | ಸೈಷಾ ಗಣೇಶವಿದ್ಯಾ | ಗಣಕಋಷಿಃ | ನಿಚೃದ್ ಗಾಯತ್ರೀ ಛಂದಃ | ಶ್ರೀ ಮಹಾಗಣಪತಿರ್ದೇವತಾ | ಓಂ ಗಂ ಗಣಪತಯೇ ನಮಃ || - ಗಣಪತ್ಯುಪನಿತ್ತು-7 ಭಾವಾರ್ಥ : ಗ್ ಎಂಬ ಅಕ್ಷರವನ್ನು ಮೊದಲು, ಅನಂತರ ಆಕಾರ, ಆಮೇಲೆ ಅಧೇಂದುಲಸಿತವಾದ ಅನುಸ್ವಾರ- ಹೀಗೆ ಧ್ವನಿಯಿಂದ ನೆಲೆಗೊಂಡ 'ಗಂ' ಎಂಬುದು ನಿನ್ನ ಸ್ವರೂಪವು, ಇದರಲ್ಲಿ ಗ್ ಎಂಬಿದು ಪೂರ್ವರೂಪವು. ಅ ಎಂಬಿದು ಮಧ್ಯಮರೂಪವು. ಮ್ ಎಂಬೀ ಅನುಸ್ವಾರವು ಕೊನೆಯದು. ಬಿಂದುವು ಉತ್ತರರೂಪವು. ನಾದವೇ ಸಂಧಾನವು. ಗಕಾರಾದಿಗಳ ಕೊಡುವಿಕೆಯೇ ಸಂಧಿ. ಇದೇ ಗಣೇಶವಿದ್ಯೆಯು. ಗಣಕನೆಂಬವನೇ ಇದರ ಋಇಯು. ಛಂದಸ್ಸು ನಿಚೃದ್ಗಾಯತ್ರೀ- ಎಂಬಿದು. ಮಹಾಗಣಪತಿಯೇ ದೇವತೆಯು. 'ಓಂ ಗಂ ಗಣಪತಯೇ ನಮಃ' ಎಂಬಿದು ಮೂಲಮಂತ್ರವು. ... Read more
ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ February 25, 2017 #ವೈಕುಂಠ_ಏಕಾದಶಿ #ಶುಭಾಶಯಗಳು ವೆಂಕಟೇಶೋ ವಾಸುದೇವೋ ಪ್ರದ್ಯುಮ್ನೋ ಅಮಿತವಿಕ್ರಮಃ | ಸಂಕರ್ಷಣೋ ಅನಿರುಧ್ಧಶ್ಚ ಶೇಷಾದ್ರಿಪತಿರೇವ ಚ || 1 || ಜನಾರ್ಧನಃ ಪದ್ಮನಾಭೋ ವೆಂಕಟಾಚಲವಾಸನಃ | ಸೃಷ್ಟಿಕರ್ತಾ ಜಗನ್ನ... Read more
ಆದಿ ಶಂಕರರ ಸ್ತೋತ್ರ ಸಾಹಿತ್ಯ February 01, 2016 ಭಾರತಮಾತೆಯ ಉದರದಲ್ಲಿ ಜನಿಸಿ, ಸರ್ವಶ್ರೇಷ್ಠ ಯತಿಗಳಾಗಿ, ವೈರಾಗ್ಯ ಚಕ್ರವರ್ತಿಗಳಾಗಿ, ಜಗದ್ಗುರುಗಳಾಗಿ, ಜಗದ್ವಂದ್ಯರಾಗಿ, ಜಗನ್ಮಾನ್ಯರಾಗಿ, ಮಹಾಕವಿಗಳಾಗಿ, ಮಹಾದಾರ್ಶನಿಕರಾಗಿ, ಯುಗಪುರುಷರಾಗಿ, ಧರ್ಮೋಪದೇಶಕರಾಗಿ ಬೆಳಗಿದ ಅಸಾಮಾನ್ಯ ಚೇತನ ಶ್ರೀ ಶಂಕರಾಚಾರ್ಯರು ಅವರಂತೆ ತಮ್ಮ ಅಲ್ಪಾಯುಷ್ಯದಲ್ಲಿ ಕಲ್ಪವನ್ನು ಸಾಧಿಸಿದ ಇನ್ನೊಬ್ಬ ಯೋಗಿಯಿಲ್ಲ ನಿರ್ಗುಣ ಬ್ರಹ್ಮವನ್ನು ಪ್ರತಿಪಾದಿಸಿದರೂ ಅವರಷ್ಟು ಸಗುಣ ದೇವತಾ ಸ್ತೋತ್ರಗಳನ್ನು ರಚಿಸಿದ ಇನ್ನೊಬ್ಬ ಋಷಿ ಕವಿಯಿಲ್ಲ. "ನಾನೃಷಿಃ ಕುರುತೇ ಕಾವ್ಯಂ ಋಷಿಶ್ಚ ಕಿಲ ದರ್ಶನಾತ್, ದರ್ಶನಾತ್ ವರ್ಣನಾಚ್ಛೈವ ರೂಢಾ ಲೋಕೇ ಕವಿಶ್ರುತಿಃ" ಎಂಬತೆ, ದಾರ್ಶನಿಕ ಪ್ರಜ್ಞೆಯುಳ್ಳವನೇ ಋಷಿ. ತಾನು ಕಂಡ ದರ್ಶನವನ್ನು ಬೇರೆಯವರಿಗೂ ಕಣ್ಣಿಗೆ ಕಟ್ಟುವಂತೆ ವರ್ಣಿಸಬಲ್ಲವನೇ ಋಷಿಕವಿಯೆನಿಸುತ್ತಾನೆ. ಇಂತಹ ಋಷಿಕವಿಗಳಾದ ಆಚಾರ್ಯ ಶಂಕರರು ಕಾವ್ಯ ರಚನೆಯನ್ನೇ ಮುಖ್ಯ ಗುರಿಯಾಗಿ ಇಟ್ಟುಕೊಂಡಿದ್ದರೆ ವಾಲ್ಮೀಕಿ, ಕಾಳಿದಾಸಾದಿಗಳ ಸ್ಥಾನದಲ್ಲೇ ನಿಲ್ಲುತ್ತಿದ್ದರು ಎಂಬಲ್ಲಿ ಸಂಶಯವಿಲ್ಲ ಅವರೊಬ್ಬ ವರಕವಿಗಳೇ ಹೊರತು ನರಕವಿಗಳಲ್ಲ ಅವರ ಕಾವ್ಯಲಹರಿಯ ಸವಿಯುಂಡಾಗ "ನಿನ್ನಾಂಗ ಆಡಾಕ, ನಿನ್ನಾಂಗ ಹಾಡಾಕ ಪಡೆದು ಬಂದಿರಬೇಕೋ ಗುರುದೇವ" ಎಂಬ ಬೇಂದ್ರೆಯವರ ವಾಕ್ಯ ನೆನಪಾಗುತ್ತದೆ. ನಿರ್ಗುಣ ಬ್ರಹ್ಮೋಪಾಸನೆಗೆ ಸಗುಣ ಬ್ರಹ್ಮೋಪಾಸನೆಯೂ ಸಾದನ. ಇದನ್ನರಿತೇ ಶಂಕರರು ಅದ್ವೈತಿಗಳಾದರೂ ನ... Read more
Comments
Post a Comment