ಗೋದಾಸ್ತುತಿಃ (ಸಂಗ್ರಹ) - 14

ತ್ವದ್ಭುಕ್ತ ಮಾಲ್ಯಸುರಭೀಕೃತಚಾರುಮೌಳೇಃ
ಹಿತ್ವಾ ಭುಜಾಂತರಗತಾಮಪಿ ವೈಜಯಂತೀಮ್ |
ಪತ್ಯುಸ್ತವೇಶ್ವರಿ ಮಿಥಃ ಪ್ರತಿಘಾತಲೋಲಾಃ
ಬರ್ಹಾತಪತ್ರರುಚಿಮಾರಚಯಂತಿ ಭೃಂಗಾಃ ||14||

ಈಶ್ವರಿ = ಚೇತನಾಚೇತನ ವರ್ಗಗಳೆಲ್ಲಕ್ಕೂ ಸ್ವಾಮಿನಿಯಾದ ಗೋದಾ ದೇವಿಯೇ!,
ತ್ವದ್ಭುಕ್ತಮಾಲ್ಯ = ನೀನು ಮುಡಿದುಕೊಟ್ಟ ಮಾಲಿಕೆಗಳಿಂದ,
ಸುರಭೀಕೃತ = ಪರಿಮಳಗೊಂಡು,
ಚಾರು = ಸುಂದರವಾದ,
ಮೌಳೇಃ = ಶಿರಸ್ಸಿನಿಂದ ಕೂಡಿದ,
ತವ = ನಿನ್ನ,
ಪತ್ಯುಃ = ಪತಿಯ,
ಭುಜಾಂತರಗತಾಂ = ಎರಡು ಭುಜಗಳ ಮಧ್ಯದಲ್ಲಿರುವ ವಕ್ಷಸ್ಥಲದಲ್ಲಿರುವ,
ವೈಜಯಂತೀ ಅಪಿ = 'ವೈಜಯಂತಿ' ಎಂಬ ವನಮಾಲೆಯನ್ನೂ ಕೂಡ,
ಹಿತ್ವಾ = ತ್ಯಾಗಮಾಡಿ,
ಭೃಂಗಾಃ = ದುಂಬಿಗಳಾದರೋ (ನಿನ್ನ ಪತಿಯ ತಲೆಯಮೇಲೆ)
ಮಿಥಃ = ಪರಸ್ಪರ,
ಪ್ರತಿಘಾತಲೋಲಾಃ = ಒಂದಕ್ಕೊಂದು ತಗಲುತ್ತಾ ಆಟವಾಡುತ್ತಾ,
ಬರ್ಹಾ = ನವಿಲುಗರಿಯ,
ಆತಪತ್ರಂ = ಕೊಡೆಯ ರೂಪವನ್ನು,
ಅರಚಯಂತಿ = ಉಂಟುಮಡುತ್ತಿವೆ.

    ಚೇತನಾಚೇತನ ವರ್ಗಗಳೆಲ್ಲಕ್ಕೂ ಸ್ವಾಮಿನಿಯಾದ ಎಲೈ! ಗೋದಾ ದೇವಿಯೇ! ನೀನು ಮುಡಿದುಕೊಟ್ಟ ಮಾಲಿಕೆಗಳನ್ನು ತನ್ನ ತಲೆಯಲ್ಲಿ ಮುಡಿದಿರುವುದರಿಂದಲೇ ಪರಿಮಳಗೊಂಡು ಸುಂದರವಾದ ಶಿರಸ್ಸಿನಿಂದ ಕೂಡಿದ, ನಿನ್ನ ಪತಿಯ ವಕ್ಷಸ್ಥಲದಲ್ಲಿರುವ, 'ಸರ್ವಗಂಧಃ' ಎಂದು ಉಪನಿಷತ್ಪ್ರತಿಪಾದ್ಯನಾದ ಸರ್ವೇಶ್ವರನ ಸಂಸರ್ಗದಿಂದ ನಿರಂತರವಾದ ಪರಿಮಳಭರಿತವಾದ, 'ವೈಜಯಂತೀ' ಎಂಬ ವನಮಾಲೆಯನ್ನೂ ತ್ಯಾಗ ಮಾಡಿದ ದುಂಬಿಗಳಾದರೋ ನಿನ್ನ ಪತಿಯ ಶಿರಸ್ಸಿನ ಮೇಲೆ, ನೀನು ಮುಡಿದು ಕೊಟ್ಟ ಪುಷ್ಪದ ಮಧುವನ್ನು ಪಾನಮಾಡಲು, 'ತಾನು ಮೊದಲು, ತಾನು ಮೊದಲು' ಎಂದು ಪರಸ್ಪರ ಘರ್ಷಣೆ ಮಾಡುತ್ತಾ ಅಲೆಯುತ್ತಲೆ ನಿನ್ನ ಪ್ರಿಯನಿಗೆ ಸಪ್ತವರ್ಣಗಳಿಂದ ಕೂಡಿದ ನವಿಲುಗರಿಯ ಕೊಡೆಯೊಂದನ್ನು ಹಿಡಿದಿರುವಂತೆ ಮಾಡುತ್ತಿವೆ. (ಇದಾದರೋ ವಿವಾಹದ ಕಾಶಿಯಾತ್ರೆಯ ಸಮಯದಲ್ಲಿ ನಿನ್ನ ಪತಿ ಹಿಡಿದಿರುವ ಕೊಡೆಯಂತೆ ಕಾಣುತ್ತದೆ.) ||14||

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ