ಶಿವವೇದಪಾದಸ್ತವಃ (ಜೈಮಿನಿ ಮಹರ್ಷಿಗಳು)

ನಮಾಮಿ ನಿತ್ಯಂ ತ್ರಿಪುರಾರಿಮೇನಂ
ಯಮಾನ್ತಕಂ ಷಣ್ಮುಖತಾತಮಿಶಮ್ |
ಲಲಾಟನೇತ್ರಾರ್ದಿತಪುಷ್ಪಚಾಪಂ
ವಿಶ್ವಂ ಪುರಾಣಂ ತಮಸಃ ಪರಸ್ತಾತ್ ||1||

    ತ್ರಿಪುರರೆಂಬ ದಾನವರ ಶತ್ರುವೂ ಯಮನಿಗೂ ಯಮನೂ ಷಣ್ಮುಖನ ತಂದೆಯೂ ಎಲ್ಲಕ್ಕೂ ಒಡೆಯನೂ ಆದ, ಹಣೆಗಣ್ಣಿನ (ಅಗ್ನಿಯಿಂದ) ನಾಶಗೊಳಿಸಲ್ಪಟ್ಟ ಮನ್ಮಥನುಳ್ಳವನೂ ವ್ಯಾಪಕನೂ ಪುರಾಣನೂ ಕತ್ತಲೆಯ ಅಚೆಯಿರುವವನೂ ಆದ ಪರಮೇಶ್ವರನನ್ನು ನಾನು ಯಾವಾಗಲೂ ನಮಸ್ಕರಿಸುವೆನು.

ಅನನ್ತಮವ್ಯಕ್ತಮಚಿನ್ತ್ಯಮೇಕಂ
ಹರಂ ತಮಾಶಾಂಬರಮಂಬರಾಭಮ್ |
ಅಜಂ ಪುರಾಣಂ ಪ್ರಣಮಾಮಿ ಯೋಯಮ್
ಅಣೋರಣೀಯಾನ್ ಮಹತೋ ಮಹೀಯಾನ್ ||2||

    ತುದಿಯಿಲ್ಲದವನೂ ಅವ್ಯಕ್ತನೂ, ಚಿಂತಿಸಲು ಬಾರದವನೂ ಪಾಪಹರನೂ ದಿಗಂಬರನೂ ಆಕಾಶದ ಹೋಲಿಕೆಯುಳ್ಳವನೂ ಆದ ಅವನನ್ನು - (ಎಂದರೆ) ಯಾವ ಆತನು ಚಿಕ್ಕದರಲ್ಲೆಲ್ಲ ಚಿಕ್ಕವನೂ ದೊಡ್ಡದರಲ್ಲೆಲ್ಲ ದೊಡ್ಡವನೂ ಆಗಿರುವನೋ ಆ ಜನ್ಮರಹಿತನಾದ ಪುರಾಣನಾದ ದೇವನನ್ನು ನಮಸ್ಕರಿಸುವೆನು.

ಅನ್ತಸ್ಥಮಾತ್ಮಾನಮಜಂ ನ ದೃಷ್ಟ್ವಾ
ಭ್ರಮನ್ತಿ ಮೂಢಾ ಗಿರಿಗಹ್ವರೇಷು |
ಪಶ್ಚಾದುದಗ್ ದಕ್ಷಿಣತಃ ಪುರಸ್ತಾತ್
ಅಧಸ್ವಿದಾಸೀದುಪರಿಸ್ವಿದಾಸೀತ್ ||3||

    ಹೃದಯಾಂತರಾಳದಲ್ಲಿರುವ ಜನ್ಮರಹಿತನಾದ ಆತ್ಮನಾದ (ಶಿವನನ್ನು) ಕಾಣದೆ ಮೂಢರು ಕಾಡು ಮತ್ತು ಗುಹೆಗಳಲ್ಲಿ ಹಿಂದಕ್ಕೂ ಮುಂದಕ್ಕೂ ಬಲಕ್ಕೂ ಎಡಕ್ಕೂ ಮೇಲಕ್ಕೂ ಕೆಳಕ್ಕೂ ತಿರುಗುತ್ತಾ ಎಲ್ಲಿದಾನೆಂದು (ಹುಡುಕುತ್ತಿರುವರು.)

ಇಮಂ ನಮಾಮಿಶ್ವರಮಿನ್ದುಮೌಳಿಂ
ಶಿವಂ ಮಹಾನನ್ದಮಶೋಕದುಃಖಮ್ |
ಹೃದಂಬುಜೇ ತಿಷ್ಠತಿ ಯಃ ಪರಾತ್ಮಾ
ಪರೀತ್ಯ ಸರ್ವಾಃ ಪ್ರದಿಶೋ ದಿಶಶ್ಚ ||4||

    ಈಶ್ವರನೂ ಚಂದ್ರಶೇಖರನೂ ಮಂಗಳಸ್ವರೂಪನೂ ಆನಂದಮಯನೂ ದುಃಖಶೋಕಗಳಿಲ್ಲದವನೂ ಆದ, ಯಾವ ಈ ಪರಮಾತ್ಮನು ದಿಕ್ಕುದಿಕ್ಕುಗಳನ್ನೆಲ್ಲ ವ್ಯಾಪಿಸಿಕೊಂಡು ಹೃದಯಕಮಲದಲ್ಲಿಯೇ ಇದ್ದುಕೊಂಡಿರುವನೋ, ಇವನನ್ನು ನಮಸ್ಕರಿಸುವೆನು.

ರಾಗಾದಿಕಾಪಥ್ಯಸಮುದ್ಭವೇನ
ಭಗ್ನಂ ಭವಾಖ್ಯೇನ ಮಹಾಭಯೇನ |
ವಿಲೋಕ್ಯ ಮಾಂ ಪಾಲಯ ಚಂದ್ರಮೌಳೇ
ಭಿಷಕ್ತಮಂ ತ್ವಾ ಭಿಷಜಾಂ ಶೃಣೋಮಿ ||5||

    ಕಾಮನೇ ಮುಂತಾದ ಅಪಥ್ಯಗಳಿಂದ ಉಂಟಾದ ಸಂಸಾರವೆಂಬ ಮಹಾ ಭಯದಿಂದ ಹೊಡೆಯಲ್ಪಟ್ಟು (ಅರ್ತನಾಗಿರುವ) ನನ್ನನ್ನು ಎಲೈ ಚಂದ್ರಮೌಳಿಯೆ, ನೋಡಿ ಕಾಪಾಡು! ನೀನು ವೈದ್ಯರುಗಳಲ್ಲೆಲ್ಲ ಉತ್ತಮವೈದ್ಯನೆಂತ ಕೇಳಿದ್ದೇನೆ.

ದುಃಖಾಂಬುರಾಶಿಂ ಸುಖಲೇಶಹೀನ
ಮಸ್ಪೃಷ್ಟಪುಣ್ಯಂ ಬಹುಪಾತಕಂ ಮಾಮ್ |
ಮೃತ್ಯೋಃ ಕರಸ್ಥಂ ಭವಸರ್ಪಭೀತಂ
ಪಶ್ಚಾತ್ ಪುರಸ್ತಾದಧರಾದುದಕ್ ಸ್ಥಾತ್ ||6||

    ದುಃಖವೆಂಬ ನೀರಿನ ಸಮುದ್ರದಂತಿರುವ, ಸುಖದ ಲೇಶವು ಇಲ್ಲದ, ಪುಣ್ಯವನ್ನೇ ಮಾಡದಿರುವ ಬಹಳ ಪಾಪಿಯಾದ, ಮೃತ್ಯುವಿಗೆ ವಶನಾಗಿರುವ, ಸಂಸಾರವೆಂಬ ಹಾವಿನಿಂದ ಭಯಗೊಂಡಿರುವ ನನ್ನನ್ನು ಹಿಂದಕ್ಕೂ ಮುಂದಕ್ಕೂ ಕೆಳಕ್ಕೂ ಪಕ್ಕಕ್ಕೂ (ಎಲ್ಲೆಲ್ಲೂ ಕಾಪಾಡು)

ಆಗಚ್ಛತಾತ್ರಾಂಶು ಮುಮುಕ್ಷವೋ ಯೇ
ಯೂಯಂ ಶಿವಂ ಚಿನ್ತಯತೋನ್ತರಾಬ್ಜೇ |
ಧ್ಯಾಯನ್ತಿ ಮುಕ್ತ್ಯರ್ಥಮಿಮಂ ಹಿ ನಿತ್ಯಂ
ವೇದಾನ್ತವಿಜ್ಞಾನಸುನಿಶ್ಚಿತಾರ್ಥಾಃ ||7||

    ಮುಮುಕ್ಷುಗಳು ಯಾರು ಇದ್ದೀರೋ ಇಲ್ಲಿ ಬನ್ನಿರಿ; ನೀವು ಹೃದಯ ಕಮಲದಲ್ಲಿ ಶಿವನ್ನು ಧ್ಯಾನಿಸಿರಿ. ವೇದಾಂತವಿಜ್ಞಾನದಲ್ಲಿ ಚೆನ್ನಾಗಿ ಪಳಗಿದ ಜ್ಞಾನಿಗಳು ಮುಕ್ತಿಗಾಗಿ ಇವನನ್ನೇ ಧ್ಯಾನಮಾಡುತ್ತಾರಲ್ಲವೆ?

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ