ಗೋದಾಸ್ತುತಿಃ (ಸಂಗ್ರಹ) - 16

ತ್ವನ್ಮೌಳಿದಾಮನಿ ವಿಭೋಃ ಶಿರಸಾ ಗೃಹೀತೇ
ಸ್ವಚ್ಛಂದಕಲ್ಪಿತ ಸಪೀತಿರಸಪ್ರಮೋದಾಃ |
ಮಂಜಸ್ವನಾ ಮಧುಲಿಹೋ ವಿದಧುಃ ಸ್ವಯಂತೇ
ಸ್ವಾಯಂವರಂ ಕಮಪಿ ಮಂಗಳತೂರ್ಯ ಘೋಷಮ್ ||16||

(ಎಲೈ! ಗೋದಾದೇವಿಯೇ) ವಿಭೋಃ = ವಿಭುವಾದ ನಿನ್ನ ಪತಿಯ
ಶಿರಸಾ = ತಲೆಯಿಂದ,
ಗೃಹೀತೇ = ಧರಿಸಲ್ಪಟ್ಟಿರುವ,
ತ್ವತ್ = ನಿನ್ನ,
ಮೌಳಿದಮನಿ = ಮುಡಿಯಲ್ಲಿ ಧರಿಸಿದ್ದ ಮಾಲಿಕೆಗಳಲ್ಲಿ,
ಸ್ವಚ್ಛಂದಕಲ್ಪಿತ = ತನ್ನ ಇಷ್ಟಬಂದಂತೆ ಕಲ್ಪಿಸಿಕೊಂಡು,
ಸಪೀತಿರಸಪ್ರಮೋದಾಃ = ಮಧುಪಾನ ಮಾಡಿರುವುದರಿಂದ ಸಂತುಷ್ಟಗೊಂಡಿರುವ,
ಮಧುಲಿಹಃ = ದುಂಬಿಗಳಾದರೋ,
ಮಂಜುಸ್ವನಾಃ = ಇಂಪಾಗಿ ಧ್ವನಿಗೈಯುತ್ತಾ,
ತೇ = ನಿನ್ನ,
ಸ್ವಾಯಂವರಂ = ಸ್ವಯಂವರ ಮಹೋತ್ಸವದ ಸಮಯದಲ್ಲಿ,
ಕಮಪಿ = ವರ್ಣಿಸಲಸದಳವಾದ ಆದ್ವಿತೀಯವಾದ,
ಮಂಗಳತೂರ್ಯ ಘೋಷಮ್ = ಮಂಗಳವಾದ್ಯ ಘೋಷವನ್ನು,
ಸ್ವಯಂ = ತಾವಾಗಿಯೇ,
ವಿದಧುಃ = ಮಾಡಿದುವು.

ಎಲೈ! ಗೋದಾದೇವಿಯೇ, ವಿಭುವಾದ ಪರಮಾತ್ಮನು, ನೀನು ಮುಡಿದುಕೊಟ್ಟ ಮಾಲಿಕೆಯಲ್ಲಿ ಅತಿಯಾದ ಆಸೆಯುಳ್ಳವನಾಗಿ, ನಿನ್ನ ತಂದೆಗೆ, ಅದನ್ನು ತಂದುಕೊಡಬೇಕೆಂದು ಅಜ್ಞಾಪಿಸಿದನು. ಅಂತೆಯೇ ನಿನ್ನ ತಂದೆಯು ಆ ಮಾಲಿಕೆಗಳನ್ನು ತರಲು, (ಭಾವಿ ಮಾವನಾಗುವ) ಅವರಲ್ಲಿ ವಿಶೇಷವಾದ ಗೌರವದಿಂದ ತಲೆಬಾಗಿ, ಅವರಿಂದ ಆ ಮಾಲಿಕೆಗಳನ್ನು ಪಡೆದು ತನ್ನ ಶಿರಸ್ಸಿನಲ್ಲಿ ಧರಸಿಕೊಂಡನು. ಬಳಿಕ ನಿನ್ನನ್ನು ವಿವಾಹವಾಗಲು ನಿನ್ನ ಬಳಿಗೆ ಗೋದೆಯನ್ನು ಕರೆತರಲು ಅರಸನ ಮುಖಾಂತರ ಆಳ್ವಾರರಿಗೂ ಅಜ್ಞಾಪಿಸಲು ನಿನ್ನನ್ನು ಶ್ರೀರಂಗನಾಥನ ಸನ್ನಿಧಿಗೆ ಕರೆದೊಯ್ದಾಗ, ನೀನು ಆತನನ್ನು ವರಿಸುವ ಸಮಯದಲ್ಲಿ ಸ್ವಯಂವರ ಮಂಟಪದಲ್ಲಿ, ಆ ರಂಗನಾಥನು ನೀನು ಮುಡಿದುಕೊಟ್ಟ ಮಾಲಿಕೆಗಳನ್ನು ತಲೆಯಲ್ಲಿ ಧರಿಸಿದವನಾಗಿ ಬರುತ್ತಿರಲು, ಆ ಪುಷ್ಪಮಾಲಿಕೆಗಳಲ್ಲಿದ್ದ ಮಧುವನ್ನು ಯಥೇಷ್ಟವಾಗಿ ಪಾನಮಾಡಿ ಮದಿಸಿದ ದುಂಬಿಗಳು ತಮ್ಮ ಇಂಪಾದ ಧ್ವನಿಯಿಂದ, ವರ್ಣಿಸಲಸದಳವಾದ ಮಂಗಳವಾದ್ಯ ಘೋಷವನ್ನು ಸಂತೋಭರದಲ್ಲಿ ಯಾರೂ ಪ್ರೇರಿಸದೆ ತಾವಾಗಿಯೇ ಮಾಡಿದುವು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ