ಶನೈಶ್ಚರ ವಿರಚಿತ ಶ್ರೀಲಕ್ಷ್ಮೀನರಸಿಂಹ ಸ್ತೋತ್ರ

ಗ್ರಹ ಗೋಚಾರ ಪೀಡೆಗಳಲ್ಲಿ ಶನೈಶ್ಚರ ಗೋಚಾರ ಕಷ್ಟಕರವಾದದ್ದು. ಶನಿಗ್ರಹ ಹೆಸರು ಕೇಳುತ್ತಲೆ ಜನರು ಭಯಪಡುತ್ತಾರೆ. ಜ್ಯೋತಿಷಿಗಳು ಶನಿಕಾಟವು ಸದವಕಾಶವೇನೋ ಎಂಬಂತೆ ಜನರನ್ನು ಮತ್ತಿಷ್ಟು ಹೆದರಿಸುತ್ತಿರುತ್ತಾರೆ. ಜನ ವಿಶ್ವಾಸ-ಅಂಧವಿಶ್ವಾಸ, ಭಯ, ಬೆದರಿಕೆ, ಅಜ್ಞಾನ ಮುಂತಾದವುಗಳ ಪ್ರಭಾವಕ್ಕೊಳಗಾಗಿ ಕಂಗಾಲಾಗುತ್ತಾರೆ. ಶನಿದೇವನು ನಮ್ಮ ಜಾತಕದಲ್ಲಿ ಮತ್ತು ಗೋಚಾರದಲ್ಲಿ ಅನೇಕ ವಿಷಯಗಳ ಕಾರಕನಾಗಿರುತ್ತಾನೆ. ಶನೈಶ್ಚರನು ಕರ್ಮಫಲದಾಯಕನಾಗಿರುತ್ತಾನೆ. ಪ್ರತಿಯೊಬ್ಬ ಜೀವನು ತಾನು ಮಾಡಿರುವ ಶುಭಾಶುಭ ಕರ್ಮದ ಫಲಗಳನ್ನು ಭೋಗಿಸಿಯೇ ತೀರಿಸಬೇಕು. ಶನಿದಶೆ, ಶನಿಗೋಚಾರಗಳು ನಮ್ಮ ಕರ್ಮಪ್ರಾರಬ್ಧವನ್ನು ಭೋಗಿಸಲು ವಿಧಿಯಿಂದ ನಿರ್ಮಿತ ವ್ಯವಸ್ಥೆಯಾಗಿದೆ. ಎಲ್ಲ ಗ್ರಹಗಳ ತುಲನೆಯಲ್ಲಿ ಶನಿಯ ಗತಿಯು ಬಹಳ ಮಂದವಾಗಿರುತ್ತದೆ, ಆದ್ದರಿಂದ ಪ್ರಭಾವದ ಕಾಲವ್ಯಾಪ್ತಿಯೂ ಹೆಚ್ಚಿನದಾಗಿರುತ್ತದೆ. ಹನ್ನೆರಡು ರಾಶಿಗಳನ್ನು ಪೂರ್ಣವಾಗಿ ಸಂಚರಿಸಲು ಶನಿಗೆ ಅಂದಾಜು ಇಪ್ಪತ್ತೊಂಬತ್ತುವರೆ ವರ್ಷಗಳಷ್ಟು ಕಾಲ ಬೇಕು. ಒಂದು ರಾಶಿಯಲ್ಲಿ ಶನಿಸಂಚಾರ ಎರಡುವರೆ ವರ್ಷಗಳಷ್ಟು ಇರುತ್ತದೆ. ಈ ದೀರ್ಘ ಅವಧಿಯಿಂದಾಗಿಯೇ ಶನಿಪ್ರಭಾವವೂ ಸಹ ದ್ವಾದಶರಾಶಿಗಳ ಮೇಲೆ ದೀರ್ಘಕಾಲದವರೆಗೆ ಇರುತ್ತದೆ.

ಶನಿ ಗೋಚಾರದಲ್ಲಿ ದ್ವಾದಶ, ಅಷ್ಟಮ, ಪಂಚಮ ಮತ್ತು ಚತುರ್ಥ ಗೋಚಾರಗಳು ವಿಪತ್ತಿಕಾರಕಗಳೆಂದು ಮಾನಿಸಲಾಗಿದೆ. ಜನ್ಮರಾಶಿಯಿಂದ ದ್ವಾದಶ-ಜನ್ಮ-ದ್ವಿತೀಯ ಹೀಗೆ ಏಳುವರೆ ವರ್ಷಗಳ ಗೋಚಾರವನ್ನು ಸಾಡೆಸಾತಿ ಅಥವಾ ಏಳರಾಟ ಶನಿಪೀಡೆಯೆಂದು ಕರೆಯಲಾಗಿದೆ. ಜನ್ಮರಾಶಿಯಿಂದ ಚತುರ್ಥದಲ್ಲಿ ಶನಿ ಗೋಚಾರವನ್ನು ಕಂಟಕ ಶನಿಯೆಂದು ಕರೆಯುತ್ತಾರೆ. (ಶನಿ ಗೋಚಾರದ ಹೆಚ್ಚಿನ ಮಾಹಿತಿಗಳನ್ನು ಮುಂದೆ ದೀರ್ಘವಾಗಿ ಬರೆಯಲಿದ್ದೇನೆ.)

ಅಶುಭ ಸ್ಥಾನದಲ್ಲಿ ಶನಿ ಗೋಚಾರಕಾಲದಲ್ಲಿ ಪೀಡಾಪರಿಹಾರಕ್ಕಾಗಿ ಅನೇಕ ದೈವೋಪಾಯಗಳನ್ನು ಸೂಚಿಸಲಾಗಿದೆ. ಜಪ, ದಾನ, ಹೋಮ, ಪಾರಾಯಣ ಮೊದಲಾದ ಶಾಂತಿಕರ್ಮಗಳು ಬಹಳಷ್ಟು ಪ್ರಭಾವಶಾಲಿಯಾಗಿರುತ್ತವೆ. ಇಂತಹ ಅತ್ಯಂತ ಪ್ರಭಾವಶಾಲೀ ಉಪಾಯಗಳಲ್ಲಿ ಸ್ವತಃ ಶನಿದೇವನೇ ರಚಿಸಿರುವ ನರಸಿಂಹದೇವರ ಪ್ರಾರ್ಥನಾರೂಪವಾದ ಸ್ತೋತ್ರವು ಸಹ ಒಂದು. ಸುಂದರವಾದ ಈ ಸ್ತೋತ್ರವು ಭವಿಷ್ಯೋತ್ತರ ಪುರಾಣದಲ್ಲಿ ಶ್ರೀಕೃಷ್ಣನಿಂದ ಯುಧಿಷ್ಟಿರನಿಗೆ ಹೇಳಲ್ಪಟ್ಟಿದೆ. ಸ್ವತಃ ಶನಿದೇವನಿಂದ ವಿರಚಿತವಾದ ಶ್ರೀನರಸಿಂಹ ದೇವರಿಂದ ಅನುಗ್ರಹೀತವಾದ ಮತ್ತು ಶ್ರೀಕೃಷ್ಣನಿಂದ ಮಾನಿಸಲ್ಪಟ್ಟ ಮತ್ತು ಪುನಃ ಉಪದೇಶಿಸಲ್ಪಟ್ಟ ಸ್ತೋತ್ರವಿದು. ಅದುದರಿಂದ ಈ ಸ್ತೋತ್ರದ ಮಹತ್ವವು ಅನನ್ಯಸಾಧಾರಣವಾದದ್ದು. ಈ ಸ್ತೋತ್ರಪ್ರಭಾವದ ಅನುಭವವು ಅನೇಕರಿಗೆ ಆಗಿರುತ್ತದೆ.

ಶನಿದೇವನು ಶ್ರೀನರಸಿಂಹ ಸ್ವಾಮಿಯನ್ನು ಪ್ರಾರ್ಥಿಸುತ್ತ ಬೇಡಿಕೊಳ್ಳುತ್ತಾನೆ –

ನೃಸಿಂಹ ತ್ವಂ ಮಯಿ ಕೃಪಾಂ ಕುರು ದೇವ ದಯಾನಿಧೇ |
ಮದ್ವಾಸರಸ್ತವ ಪ್ರೀತಿಕರಸ್ಸ್ಯಾದ್ದೇವತಾಪತೇ || 
ಮತ್‍ಕೃತಂ ತ್ವತ್‍ಪರಂ ಸ್ತೋತ್ರಂ ಶೃಣ್ವಂತಿ ಚ ಪಠಂತಿ ಚ | 
ಸರ್ವಾನ್ ಕಾಮಾನ್ ಪೂರಯೇಥಾಃ ತೇಷಾಂ ತ್ವಂ ಲೋಕಭಾವನ ||
ದಯಾನಿಧಿಯಾದ ಹೇ ನರಸಿಂಹದೇವನೇ ನನ್ನ ಮೇಲೆ ಕೃಪೆಯನ್ನು ಮಾಡು, ದೇವತೆಗಳ ಒಡೆಯನೇ ನನ್ನ ವಾರವಾದ ಶನಿವಾರ ನಿನಗೆ ಪ್ರೀತಿಕರವಾಗಲಿ. ನನ್ನಿಂದ ಮಾಡಲ್ಪಟ್ಟ ನಿನ್ನ ಪರವಾದ ಸ್ತೋತ್ರವನ್ನು ಪಠಿಸುವವರು ಮತ್ತು ಶ್ರವಣಮಾಡುವವರ ಎಲ್ಲ ಮನೋಕಾಮನೆಗಳನ್ನು ಲೋಕರಕ್ಷಕನಾದ ನರಸಿಂಹನೇ ನೀನು ಪೂರ್ಣಮಾಡು.

ಪ್ರಾರ್ಥನೆಯಿಂದ ಪ್ರಸನ್ನನಾದ ಶ್ರೀನರಸಿಂಹದೇವನು ಶನಿದೇವನ ಮೇಲೆ ಅನುಗ್ರಹ ಮಾಡುತ್ತಾ –
ತಥೈವಾಸ್ತು ಶನೇಽಹಂ ವೈ ರಕ್ಷೋಭುವನಸಂಸ್ಥಿತಃ | 
ಭಕ್ತಕಾಮಾನ್ ಪೂರಯಿಷ್ಯೇ ತ್ವಂ ಮಮೈಕಂ ವಚಃ ಶೃಣು || 
ತ್ವತ್‍ಕೃತಂ ಮತ್‍ಪರಂ ಸ್ತೋತ್ರಂ ಯಃ ಪಠೇತ್ ಶೃಣುಯಾಚ್ಚ ಯಃ | 
ದ್ವಾದಶಾಷ್ಟಮಜನ್ಮಸ್ಥಾತ್‍ತ್ವದ್ಭಯಂ ಮಾಸ್ತು ತಸ್ಯ ವೈ ||  
ಹೇ ಶನಿದೇವನೇ ತಥಾಸ್ತು, ನಿನ್ನ ಪ್ರಾರ್ಥನೆಯಂತೆಯೇ ಆಗಲಿ. ನಾನು ಎಲ್ಲ ಭಕ್ತರ ಕಾಮನೆಗಳನ್ನು ಪೂರೈಸುತ್ತೇನೆ, ಅಲ್ಲದೇ ನನ್ನ ಒಂದು ಮಾತನ್ನು ಸಹ ಕೇಳು. ನಿನ್ನಿಂದ ರಚಿತವಾದ ನನ್ನ ಸ್ತುತಿರೂಪವಾದ ಸ್ತೋತ್ರವನ್ನು ಯಾರು ಪಠಿಸುತ್ತಾರೋ ಮತ್ತು ಕೇಳುತ್ತಾರೋ ಅವರಿಗೆ ದ್ವಾದಶ-ಅಷ್ಟಮ-ಜನ್ಮಸ್ಥಾನಗಳಲ್ಲಿ ನಿನ್ನ ಗೋಚಾರನಿಮಿತ್ತವಾದ ಭಯವು (ಆಪತ್ತು) ಉಂಟಾಗದಿರಲಿ.

ಹೀಗೆ ಪ್ರಭಾವಶಾಲಿಯಾದ ಮಹಿಮಾನ್ವಿತವಾದ ಪೀಡಾಪರಿಹಾರಕವಾದ ಶ್ರೀಶನಿದೇವನಿಂದ ವಿರಚಿತವಾದ ಶ್ರೀಲಕ್ಷ್ಮೀನೃಸಿಂಹ ಸ್ತೋತ್ರವನ್ನು ಪ್ರತಿನಿತ್ಯ ಪಠಿಸಿ ಎಲ್ಲ ಕಷ್ಟಗಳಿಂದ ಮುಕ್ತರಾಗೋಣ. 

ಶನೈಶ್ಚರಕೃತಾ ಶ್ರೀಲಕ್ಷ್ಮೀನೃಸಿಂಹಸ್ತೋತ್ರಮ್

ಶ್ರೀಕೃಷ್ಣ ಉವಾಚ –

ಸುಲಭೋ ಭಕ್ತಿಯುಕ್ತಾನಾಂ ದುರ್ದರ್ಶೋ ದುಷ್ಟಚೇತಸಾಮ್ |
ಅನನ್ಯಗತಿಕಾನಾಂ ಚ ಪ್ರಭುರ್ಭಕ್ತೈಕವತ್ಸಲಃ || ೧ ||

ಶನೈಶ್ಚರಸ್ತತ್ರ ನೃಸಿಂಹದೇವಸ್ತುತಿಂ ಚಕಾರಾಽಮಲಚಿತ್ತವೃತ್ತಿಃ |
ಪ್ರಣಮ್ಯ ಸಾಷ್ಟಾಂಗಮಶೇಷಲೋಕಕಿರೀಟನೀರಾಜಿತಪಾದಪದ್ಮಮ್ || ೨ ||

ಶ್ರೀಶನಿರುವಾಚ –

ಯತ್ಪಾದಪಂಕಜರಜಃ ಪರಮಾದರೇಣ
ಸಂಸೇವಿತಂ ಸಕಲಕಲ್ಮಷರಾಶಿನಾಶಮ್ |
ಕಲ್ಯಾಣಕಾರಕಮಶೇಷನಿಜಾನುಗಾನಾಂ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೩ ||

ಸರ್ವತ್ರ ಚಂಚಲತಯಾ ಸ್ಥಿತಯಾ ಹಿ ಲಕ್ಷ್ಮ್ಯಾ
ಬ್ರಹ್ಮಾದಿವಂದ್ಯಪದಯಾ ಸ್ಥಿರಯಾ ನ್ಯಸೇವಿ |
ಪಾದಾರವಿಂದಯುಗಲಂ ಪರಮಾದರೇಣ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೪ ||

ಯದ್ರೂಪಮಾಗಮಶಿರಃ ಪ್ರತಿಪಾದ್ಯಮಾದ್ಯ-
ಮಾಧ್ಯಾತ್ಮಿಕಾದಿಪರಿತಾಪಹರಂ ವಿಚಿಂತ್ಯಮ್ |
ಯೋಗೀಶ್ವರೈರಪಗತಾಽಖಿಲದೋಷಸಂಘೈಃ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೫ ||

ಪ್ರಹ್ಲಾದಭಕ್ತವಚಸಾ ಹರಿರಾವಿರಾಸ
ಸ್ತಂಭೇ ಹಿರಣ್ಯಕಶಿಪುಂ ಯ ಉದಾರಭಾವಃ |
ಊರ್ವೋರ್‌ನಿಧಾಯ ತದುದರೋ ನಖರೈರ್‌ದದಾರ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೬ ||

ಯೋ ನೈಜಭಕ್ತಮನಲಾಂಬುಧಿಭೂಧರೋಗ್ರ-
ಶೃಂಗಪ್ರಪಾತವಿಷದಂತಿಸರೀಸೃಪೇಭ್ಯಃ |
ಸರ್ವಾತ್ಮಕಃ ಪರಮಕಾರುಣಿಕೋ ರರಕ್ಷ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೭ ||

ಯನ್ನಿರ್ವಿಕಾರಪರರೂಪವಿಚಿಂತನೇನ
ಯೋಗೀಶ್ವರಾ ವಿಷಯವೀತಸಮಸ್ತರಾಗಾಃ |
ವಿಶ್ರಾಂತಿಮಾಪುರವಿನಾಶವತೀಂ ಪರಾಖ್ಯಾಂ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೮ ||

ಯದ್ರೂಪಮುಗ್ರಪರಿಮರ್ದನಭಾವಶಾಲಿ
ಸಂಚಿಂತನೇನ ಸಕಲಾಘವಿನಾಶಕಾರಿ |
ಭೂತಜ್ವರಗ್ರಹಸಮುದ್ಭವಭೀತಿನಾಶಂ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೯ ||

ಯಸ್ಯೋತ್ತಮಂ ಯಶ ಉಮಾಪತಿಪದ್ಮಜನ್ಮ-
ಶಕ್ರಾದಿದೈವತಸಭಾಸು ಸಮಸ್ತಗೀತಮ್ |
ಶಕ್ತ್ಯೈವ ಸರ್ವಶಮಲಪ್ರಶಮೈಕದಕ್ಷಂ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೧೦ ||

ಇತ್ಥಂ ಶ್ರುತ್ವಾ ಸ್ತುತಿಂ ದೇವಃ ಶನಿನಾ ಕಲ್ಪಿತಾಂ ಹರಿಃ |
ಉವಾಚ ಬ್ರಹ್ಮವೃಂದಸ್ಥಂ ಶನಿಂ ತಂ ಭಕ್ತವತ್ಸಲಃ || ೧೧ ||

ಶ್ರೀನೃಸಿಂಹ ಉವಾಚ –

ಪ್ರಸನ್ನೋಽಹಂ ಶನೇ ತುಭ್ಯಂ ವರಂ ವರಯ ಶೋಭನಮ್ |
ಯಂ ವಾಂಛಸಿ ತಮೇವ ತ್ವಂ ಸರ್ವಲೋಕಹಿತಾವಹಮ್ || ೧೨ ||

ಶ್ರೀಶನಿರುವಾಚ –

ನೃಸಿಂಹ ತ್ವಂ ಮಯಿ ಕೃಪಾಂ ಕುರು ದೇವ ದಯಾನಿಧೇ |
ಮದ್ವಾಸರಸ್ತವ ಪ್ರೀತಿಕರಸ್ಸ್ಯಾದ್ದೇವತಾಪತೇ || ೧೩ ||

ಮತ್‍ಕೃತಂ ತ್ವತ್‍ಪರಂ ಸ್ತೋತ್ರಂ ಶೃಣ್ವಂತಿ ಚ ಪಠಂತಿ ಚ |
ಸರ್ವಾನ್ ಕಾಮಾನ್ ಪೂರಯೇಥಾಃ ತೇಷಾಂ ತ್ವಂ ಲೋಕಭಾವನ || ೧೪ ||

ಶ್ರೀನೃಸಿಂಹ ಉವಾಚ –

ತಥೈವಾಸ್ತು ಶನೇಽಹಂ ವೈ ರಕ್ಷೋಭುವನಸಂಸ್ಥಿತಃ |
ಭಕ್ತಕಾಮಾನ್ ಪೂರಯಿಷ್ಯೇ ತ್ವಂ ಮಮೈಕಂ ವಚಃ ಶೃಣು || ೧೫ ||

ತ್ವತ್‍ಕೃತಂ ಮತ್‍ಪರಂ ಸ್ತೋತ್ರಂ ಯಃ ಪಠೇತ್ ಶೃಣುಯಾಚ್ಚ ಯಃ |
ದ್ವಾದಶಾಷ್ಟಮಜನ್ಮಸ್ಥಾತ್‍ತ್ವದ್ಭಯಂ ಮಾಸ್ತು ತಸ್ಯ ವೈ || ೧೬ ||

ಶನಿರ್ನರಹರಿಂ ದೇವಂ ತಥೇತಿ ಪ್ರತ್ಯುವಾಚ ಹ |
ತತಃ ಪರಮಸಂತುಷ್ಟಾಃ ಜಯೇತಿ ಮುನಯೋಽವದನ್ || ೧೭ ||

ಶ್ರೀಕೃಷ್ಣ ಉವಾಚ – (ಧರ್ಮರಾಜಂ ಪ್ರತಿ)

ಇತ್ಥಂ ಶನೈಶ್ಚರಸ್ಯಾಥ ನೃಸಿಂಹದೇವ-
ಸಂವಾದಮೇತತ್ ಸ್ತವನಂ ಚ ಮಾನವಃ |
ಶೃಣೋತಿ ಯಃ ಶ್ರಾವಯತೇ ಚ ಭಕ್ತ್ಯಾ
ಸರ್ವಾಣ್ಯಭೀಷ್ಟಾನಿ ಚ ವಿಂದತೇ ಧ್ರುವಮ್ || ೧೮ ||

|| ಇತಿ ಶ್ರೀಭವಿಷ್ಯೋತ್ತರಪುರಾಣೇ ರಕ್ಷೋಭುವನಮಾಹಾತ್ಮ್ಯೇ ಶ್ರೀಕೃಷ್ಣಯುಧಿಷ್ಠಿರಸಂವಾದೇ ಶನೈಶ್ಚರಕೃತಂ ನೃಸಿಂಹಸ್ತೋತ್ರಂ ಸಂಪೂರ್ಣಮ್ ||
|| ಶ್ರೀ ಕೃಷ್ಣಾರ್ಪಣಮಸ್ತು ||

Comments

  1. ಮನಸ್ಸಿಗೆ ನೆಮ್ಮದಿ ಸಿಕ್ಕಿದೆ ಧನ್ಯವಾದ.

    ReplyDelete

Post a Comment

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ