ಗೋದಾಸ್ತುತಿಃ (ಸಂಗ್ರಹ) - 17

ವಿಶ್ವಾಯಮಾನರಜಸಾ ಕಮಲೇನ ನಾಭೌ
ವಕ್ಷಃಸ್ಥಲೇ ಚ ಕಮಲಾಸ್ತನ ಚಂದನೇನ |
ಆಮೋದಿತೋಪಿ ನಿಗಮೈರ್ವಿಭುರಂಘ್ರಿಯುಗ್ಮೇ
ಧತ್ತೇ ನತೇನ ಶಿರಸಾ ತವ ಮಾಳಿಮಾಲಾಮ್ ||17||

ವಿಭುಃ = ವಿಭುತ್ವವುಳ್ಳ ಶ್ರೀರಂಗನಾಥನು,
ವಿಶ್ವಾಯಮಾನರಜಸಾ = ಇಡೀ ಪ್ರಪಂಚವನ್ನೇ ತನ್ನ ಪರಾಗಗಳಾಗಿವುಳ್ಳ,
ಕಮಲೇನ = ಕಮಲದ ಹೂವಿನಿಂದ,
ನಾಭೌ = ಹೊಕ್ಕಳು ಪ್ರದೇಶದಲ್ಲಿಯೂ,
ವಕ್ಷಃಸ್ಥಲೇ = ಎದೆಯಲ್ಲಿ,
ಕಮಲಾಸ್ತನಚಂದನೇನ = ಮಹಾಲಕ್ಷ್ಮಿಯ ಸ್ತನಕಲಷಗಳ ಮೇಲಿನ ಶ್ರೀಗಂಧದಿಂದ,
ಅಂಘ್ರಿಯುಗ್ಮೆ = ಪಾದಗಳೆರಡರಲ್ಲಿಯೂ,
ನಿಗಮೈಃ = ವೇದಗಳಿಂದಲೂ,
ಆಮೋದಿತೋಪಿ = ಪರಿಮಳಗೊಂಡಿದ್ದರೂ,
ತವ = ನಿನ್ನ,
ಮೌಳಿಮಾಲಾಂ = ತಲೆಯಲ್ಲಿ ಮುಡಿದ ಮಾಲೆಯನ್ನು,
ನತೇನ = ಬಗ್ಗಿದ,
ಶಿರಸಾ = ತಲೆಯಿಂದ,
ಧತ್ತೆ = ಧರಿಸುತ್ತಾನೆ. ||17||

    ಎಲೈ! ಗೋದಾದೇವಿಯೇ!, ವಿಭುವಾದ ಶ್ರೀರಂಗನಾಥನು, ಇಡೀ ವಿಶ್ವವನ್ನೇ ತನ್ನ ಪರಾಗಗಳಾಗಿವುಳ್ಳ ಕಮಲದಿಂದ ತನ್ನ ನಾಭಿದೇಶದಲ್ಲಿಯೂ, ವಕ್ಷಸ್ಥಲದಲ್ಲಿ ಮಹಾಲಕ್ಷ್ಮಿಯನ್ನು ಆಲಿಂಗನ ಮಾಡಿಕೊಂಡಾಗ, ಅವಳ ಸ್ತನಕಲಷಗಳ ಮೇಲೆ ಲೇಪನ ಮಾಡಿಕೊಂಡಿದ್ದ ಶ್ರೀಗಂಧವು ಅಂಟಿಕೊಂಡಿರುವುದರಿಂದಲೂ, ಎರಡು ಅಡಿದಾವರೆಗಳಲ್ಲಿಯೂ ನಿರಂತರವಾಗಿ ವೇದಮಾತೆಯು ಬಂದು ಸೇವೆ ಮಾಡುವುದರಿಂದಲೂ ಪರಿಮಳಗೊಂಡಿದ್ದರೂ, ನಿನ್ನ ವಿವಾಹ ಸಂಬಂಧವಾದ ಮಾಲಿಕಾರೋಪಣ ಮಹೋತ್ಸವದ ಸಮಯದಲ್ಲಿ ನಿನ್ನ ತಲೆಯಲ್ಲಿ ಮುಡಿದ ಮಾಲೆಯನ್ನು ಅವನ ಕತ್ತಿನಲ್ಲಿ ಹಾಕುವ ಸಮಯದಲ್ಲಿ, ಅದನ್ನು ಅತ್ಯಾದರದಿಂದ ತಲೆಭಾಗಿ ಧರಿಸಿದನು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಆದಿ ಶಂಕರರ ಸ್ತೋತ್ರ ಸಾಹಿತ್ಯ