ಧನುರ್ಮಾಸ ವಿಶೇಷ

ಕೋದಂಡಸ್ತೇ ಸವಿತರಿ ಮುದ್ಗಾನ್ನಂ ಯೋ ನಿವೇದಯೇತ್ |
ಸಹಸ್ರವಾರ್ಷೀಕೀಪೂಜಾ ದಿನೇನೈಕೇನ ಸಿದ್ಧ್ಯತಿ || ಆಗ್ನಿ ಪುರಾಣ

ಧನುರಾಶಿಯಲ್ಲಿ ಸೂರ್ಯನಿರುವಾಗ ಹರಿಗೆ ಹುಗ್ಗಿಯನ್ನು ಒಂದು ದಿನವಾದರೂ ಸಮರ್ಪಿಸುವ ಮನುಷ್ಯನು ಒಂದು ಸಾವಿರ ವರ್ಷಗಳವರೆಗೆ ಪೂಜೆಮಾಡಿದ ಫಲವನ್ನು ಪಡೆಯುವನು ಎನ್ನುವ ಅಗ್ನಿ ಪುರಾಣದ ವಚನವಿದೆ. ಆದುದರಿಂದ ಧನುರ್ಮಾಸದ ಒಂದು ತಿಂಗಳ ಕಾಲ ಪ್ರತಿದಿನ ಉಷಃಕಾಲದಲ್ಲಿ ಶ್ರೀಹರಿಗೆಮುದ್ಗಾನ್ನವನ್ನು (ಹುಗ್ಗಿಯನ್ನು) ವಿಷ್ಣುವಿಗೆ ಸಮರ್ಪಿಸಿ ಸಂತರ್ಪಣೆಮಾಡುವುದರಿಂದ ಶ್ರೀಹರಿಯು ಪ್ರೀತನಾಗುವನು.

ಧನುರ್ಮಾಸಪೂಜೆಯ ಕಾಲ :-

ಮುಖ್ಯಾರುಣೋದಯೇ ಪೂಜಾ ಮಧ್ಯಮಾ ಲುಪ್ತತಾರಕಾ |
ಅಧಮಾ ಸೂರ್ಯಸಹಿತಾ ಮಧ್ಯಾಹ್ನೇ ನಿಷ್ಫಲಾ ಭವೇತ್ ||

ಇಂತಹ ಪೂಜೆಗೆ ಮುಖ್ಯಕಾಲಅರುಣೋದಯ ಕಾಲವು ಉತ್ತಮ, ನಕ್ಷತ್ರಗಳು ಕಾಣದಿರುವಾಗ ಮಾಡುವುದುಮಧ್ಯಮ, ಸೂರ್ಯನು ಉದಯಿಸಿದ ಮೇಲೆ ಮಾಡುವುದು ಅಧಮ.ಮಧ್ಯಾಹ್ನಕಾಲದಲ್ಲಿ ಮಾಡುವುದು ನಿಷ್ಫಲ. ಆದುದರಿಂದ ಈ ಧನುರ್ಮಾಸದಲ್ಲಿ ಭಗವಂತನ ಪೂಜೆಯನ್ನು ಉಷಃಕಾಲದಲ್ಲಿಯೇ ಮಾಡಬೇಕು.
ಹೇಗೆನಿತ್ಯದಲ್ಲಿಯೂ ಭಗವಂತನಿಗೆ ಷೋಡೋಶೋಪಚಾರ ಪೂಜೆಯನ್ನು ಸಲ್ಲಿಸಿ, ಭಗವಂತನಿಗೆನೈವೇದ್ಯಾದಿಗಳನ್ನು ಸಮರ್ಪಿಸುತ್ತೇವೆಯೋ ಹಾಗೆಯೇ ಧನುರ್ಮಾದಲ್ಲಿ ವಿಶೇಷವಾಗಿ ಅರುಣೋದಯಕಾಲದಲ್ಲಿಯೇ ಹುಗ್ಗಿಯನ್ನು ಮಾಡಿ ಭಗವಂತನಿಗೆ ಸಮರ್ಪಿಸಬೇಕು.ಹುಗ್ಗಿಯನ್ನು ಹೇಗೆ ಮಾಡಬೇಕೆಂಬುದನ್ನೂ ಪುರಾಣವೇ ತಿಳಿಸುತ್ತಿದೆ, ಹೀಗೆ -

ಮುದ್ಗಂ ತಂಡುಲಮಾನಂ ಸ್ಯಾದುತ್ತಮೋತ್ತಮಮುಚ್ಯತೇ |
ಮಧ್ಯಮಂ ತಂಡುಲಾದರ್ಧಂ ತದರ್ಧಮಧಮಂ ಭವತ್ ||
ಮುದ್ಗಂದ್ವಿಗುಣಂ ಕೇಚಿತ್ ಪ್ರಶಂಸಂತಿ ಮುನೀಶ್ವರಾಃ |
ಯಥಾ ಬಲಂಪ್ರಕುರ್ವೀತ ನ ಹೀಯೇತ್ತಂಡುಲಾರ್ಧತಃ ||

ಅಂದರೆ - ಅಕ್ಕಿಯಷ್ಟೇ ಪ್ರಮಾಣದಲ್ಲಿ ಹೆಸರುಬೇಳೆಯನ್ನು ಸೇರಿಸಿ ಮಾಡುವ ಹುಗ್ಗಿಯು ಉತ್ತಮೋತ್ತಮ. ಅಕ್ಕಿಯ ಪ್ರಮಾಣದ ಅರ್ಧದಷ್ಟು ಹೆಸರುಬೇಳೆಯನ್ನು ಸೇರಿಸಿದರೆ ಮಧ್ಯಮ. ಅಕ್ಕಿಯ ಪ್ರಮಾಣಕ್ಕಿಂತ ಕಾಲುಭಾಗ ಹಸರುಬೇಳೆಯನ್ನು ಸೇರಿಸಿದರೆ ಅಧಮ, ಅಕ್ಕಿಯ ಎರಡರಷ್ಟು ಪ್ರಮಾಣದಲ್ಲಿ ಹೆಸರುಬೇಳೆಯನ್ನು ಸೇರಿಸುವುದು ಇನ್ನೂ ಶ್ರೇಷ್ಠ ಎಂದು ಕೆಲವು ಮುನಿಗಳ ಅಭಿಪ್ರಾಯವಿದೆ. ಆದುದರಿಂದ ತನ್ನ ಶಕ್ತಿಯಿರುವಷ್ಟು ಶ್ರೇಷ್ಠ ರೀತಿಯಲ್ಲಿ ಹುಗ್ಗಿಯನ್ನು ತಯಾರಿಸಿ ಪರಮಾತ್ಮನಿಗೆ ನೈವೇದ್ಯವನ್ನು ಮಾಡಬೇಕು. ಎಂತಹ ಪ್ರಸಂಗದಲ್ಲಿಯೂ ಹೆಸರುಬೇಳೆಯ ಪ್ರಮಾಣವನ್ನು ಅಕ್ಕಿಯ ಪ್ರಮಾಣದ ಅರ್ಧಕ್ಕಿಂತ ಕಡಿಮೆಯಾಗದಂತೆ ಎಚ್ಚರವಹಿಸಬೇಕು. ಹೀಗೆ ಪರಮಾತ್ಮನನ್ನು ಪೂಜಿಸಬೇಕು ಎಂದು ಹೇಳುತ್ತಾ ಧನುರ್ಮಾಸದಲ್ಲಿ ಮತ್ತೇನೇನು ಮಾಡಬೇಕು ಎಂದು ಹೇಳುತ್ತಾರೆ. ಹೀಗೆ-
ತಸ್ಮಾತ್ ಸರ್ವಪ್ರಯತ್ನೇನ ಚಾಪಮಾಸೇ ದಿನೇ ದಿನೇ |
ಉಷಃಕಾಲೇ ತು ಸಂಪ್ರಾಪ್ತೇ ಅರ್ಚಯಿತ್ವಾ ಜನಾರ್ದನಂ ||
ಉಪಚಾರೈಃಷೋಡಶೀಭಿರ್ಮುದ್ಗಾನ್ನಂ ಚ ನಿವೇದಯೇತ್ |
ಯಥಾ ಸಂಕೋಚ್ಯ ಸತ್ಕರ್ಮ ಭುಂಕ್ತೇಲ್ಪದ್ವಾದಶೀ ದಿನೇ ||
ತಥಾಪ್ರಾತರ್ಧನುರ್ಮಾಸೇ ತ್ಯಕ್ತ್ವಾ ಕರ್ಮಾಣ್ಯರ್ಚಯೇಚ್ಚ ಮಾಂ ||

ಆದುದರಿಂದ ಸರ್ವಪ್ರಯತ್ನದಿಂದ ಧನುರ್ಮಾಸದಲ್ಲಿ ಪ್ರತಿದಿನವೂ ಉಷಃಕಾಲದಲ್ಲಿ ಪರಮಾತ್ಮನನ್ನುಷೋಡಶೋಪಚಾರಗಳಿಂದ ಪೂಜಿಸಿ ಹುಗ್ಗಿಯನ್ನು ಸಮರ್ಪಿಸಬೇಕು ಹೇಗೆ ಸಾಧನಾ ದ್ವಾದಶೀಯಂದು ಪ್ರಯತ್ನಪೂರ್ವಕವಾಗಿ ಜಪ-ತಪಾದಿಗಳನ್ನು ಸಂಕೋಚಗೊಳಿಸಿಪಾರಣೆಯನ್ನು ಮಾಡುತ್ತೇವೆಯೋ ಹಾಗೆಯೇ ಈ ಧನುರ್ಮಾಸದಲ್ಲಿಯೂ ಪ್ರತಿನಿತ್ಯ ಆಚರಿಸಬೇಕು. ಈ ರೀತಿಯಾಗಿ ಪೂಜೆ ಸಲ್ಲಿಸಿರುವುದರಿಂದ ಏನು ಫಲ ಬರುವುದೆಂದು ತಿಳಿಸುತ್ತಿದೆ ಪುರಾಣವು -

ದಧ್ಯಾದ್ರ್ರಕಂ ಚ ಮುದ್ಗಾನ್ನಂ ದದ್ಯಾಚ್ಚೈಲಾಗುಡೋಜ್ವಲಂ |
ಸುಸುಖೋಷ್ಣಂ ಸಕಂದಂ ಚ ವಿಷ್ಣವೇ ಯಃ ಸಮರ್ಪಯೇತ್ ||
ದೃಷ್ಟ್ವಾ ತಚ್ಛುಭಮುದ್ಗಾನ್ನಂ ಸಂತುಷ್ಟೋ ಭಕ್ತವತ್ಸಲಃ |
ದದಾತಿ ಸಕಲಾನ್ ಭೋಗಾನ್ ಮೋಕ್ಷಂ ಜಗದೀಶ್ವರಃ||

ಮೊಸರು, ಹಸಿಶುಂಠಿ, ಹೆಸರುಬೇಳೆ, ಬೆಲ್ಲ, ಕಂದಮೂಲ ಫಲಗಳಿಂದ ಕೂಡಿದ ಹುಗ್ಗಿಯನ್ನು ಪರಮಾತ್ಮನಿಗೆ ಸಮರ್ಪಿಸಿದರೆ ಭಕ್ತವತ್ಸಲನಾದ ಪರಮಾತ್ಮನು ತನ್ನ ಭಕ್ತರಿಗೆ ಸಕಲವಿಧವಾದ ಭೋಗಗಳನ್ನು, ಕೊನೆಗ ಮೋಕ್ಷವನ್ನೂ ಕೊಡುತ್ತಾನೆ.
ಹೀಗೆಪರಮಾತ್ಮನನ್ನು ಪೂಜಿಸಿದ ನಂತರ ಅವಶ್ಯವಾಗಿ ಶ್ರೀ ಲಕ್ಷ್ಮೀ ಸ್ತೋತ್ರವನ್ನು ಪಠಿಸಬೇಕು -

೧)  ಆದಿಲಕ್ಷ್ಮೀ –
ಸುಮನಸ ವ೦ದಿತ ಸು೦ದರಿ ಮಾಧವಿ ಚ೦ದ್ರ ಸಹೋದರಿ ಹೇಮಮಯೇ|
ಮುನಿಗಣ ಮ೦ಡಿತ ಮೋಕ್ಷಪ್ರದಾಯಿನಿ ಮ೦ಜುಳ ಭಾಷಿಣಿ ವೇದನುತೇ|
ಪ೦ಕಜವಾಸಿನಿ ದೇವಸುಪೂಜಿತೆ ಸದ್ಗುಣವರ್ಷಿಣಿ ಶಾ೦ತಿಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಆದಿಲಕ್ಷ್ಮೀ ಸದಾ ಪಾಲಯಮಾ೦||೧||

೨) ಧಾನ್ಯಲಕ್ಷ್ಮೀ –
ಅಯಿಕಲಿ ಕಲ್ಮಷನಾಶಿನಿ ಕಾಮಿನಿ ವೈದಿಕರೂಪಿಣಿ ವೇದಮಯೇ|
ಕ್ಷೀರ ಸಮುದ್ಭವ ಮ೦ಗಳರೂಪಿಣಿ ಮ೦ತ್ರನಿವಾಸಿನಿ ಮ೦ತ್ರನುತೇ|
ಮಗಳದಾಯಿನಿ ಅ೦ಬುಜವಾಸಿನಿ ದೇವಗಣಾಶ್ರಿತ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಧಾನ್ಯಲಕ್ಷ್ಮೀ ಸದಾ ಪಾಲಯಮಾ೦||೨|

೩) ಐಶ್ವರ್ಯಲಕ್ಷ್ಮೀ –
ಧಿಮಿ ಧಿಮಿ ಧಿ೦ಧಿಮಿ ಧಿ೦ಧಿಮಿ ಧಿ೦ಧಿಮಿ ದು೦ದುಭಿನಾದ ಸ೦ಪೂರ್ಣಮಯೇ|
ಘಮಘಮ ಘ೦ಘಮ ಘ೦ಘಮ ಘ೦ಘಮ ಶ೦ಖನಿನಾದ ಸುವಾದ್ಯನುತೇ|
ವೇದಪುರಾಣೇತಿಹಾಸ ಸುಪೂಜಿತೆ ವೈದಿಕಮಾರ್ಗ ಪ್ರದರ್ಶಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಧನಲಕ್ಷ್ಮೀ ಸದಾ ಪಾಲಯಮಾ೦||೩||

೪) ವಿದ್ಯಾಲಕ್ಷ್ಮೀ –
ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ ಶೋಕವಿನಾಶಿನಿ ರತ್ನಮಯೇ|
ಮಣಿಮಯಭೂಷಿತ ಕರ್ಣವಿಭೂಷಿಣಿ ಶಾ೦ತಿ ಸಮಾವೃತೆ ಹಾಸ್ಯಮುಖೇ|
ನವನಿಧಿ ದಾಯಿನಿ ಕಲಿಮಲಹಾರಿಣಿ ಕಾಮಿತಫಲಪ್ರದ ಹಸ್ತಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ವಿದ್ಯಾಲಕ್ಷ್ಮೀ ಸದಾ ಪಾಲಯಮಾ೦||೪||

೫) ವೀರಲಕ್ಷ್ಮೀ(ಧೈರ್ಯಲಕ್ಷ್ಮೀ) –
ಜಯವರವರ್ಷಿಣಿ ವೈಷ್ಣವಿ ಭಾರ್ಗವಿ ಮ೦ತ್ರಸ್ವರೂಪಿಣಿ ಮ೦ತ್ರಮಯೇ|
ಸುರಗಣಪೂಜಿತೆ ಶೀಘ್ರಫಲಪ್ರದೆ ಜ್ಜಾನವಿಕಾಸಿನಿ ಶಾಸ್ತ್ರನುತೇ|
ಭವಭಯಹಾರಿಣಿ ಪಾಪವಿಮೋಚಿನಿ ಸಾಧುಜನಾಶ್ರಿತ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಧೈರ್ಯಲಕ್ಷ್ಮೀ ಸದಾ ಪಾಲಯಮಾ೦||೫||

೬) ವಿಜಯ ಲಕ್ಷ್ಮೀ –
ಜಯ ಕಮಲಾಸಿನಿ ಸದ್ಗತಿದಾಯಿನಿ ಜ್ಜಾನವಿಕಾಸಿನಿ ಗಾನಮಯೇ|
ಅನುದಿನಮರ್ಚಿತ ಕು೦ಕುಮನೂಪುರ ಭೂಷಿತವಾಸಿತ ವಾದ್ಯನುತೇ|
ಕನಕಧಾರಾಸ್ತುತಿ ವೈಭವ ವ೦ದಿತೆ ಶ೦ಕರ ದೇಶಿಕ ಮಾನ್ಯಪದೇ|
ಜಯ ಜಯ ಹೇ ಮಧುಸೂದನ ಕಾಮಿನಿ ವಿಜಯಲಕ್ಷ್ಮೀ ಸದಾ ಪಾಲಯಮಾ೦||೬||

೭) ಗಜಲಕ್ಷ್ಮೀ –
ಜಯ ಜಯ ದುರ್ಗತಿನಾಶಿನಿ ಕಾಮಿನಿ ಸರ್ವಫಲಪ್ರದ ಶಾಸ್ತ್ರಮಯೇ|
ರಥಗಜತುರಗಪಾದಾತಿ ಸಮಾವೃತ ಪರಿಜನ ಮ೦ಡಿತ ಲೋಕನುತೇ|
ಹರಿಹರಬ್ರಹ್ಮ ಸುಪೂಜಿತೆ ಸೇವಿತೆ ತಾಪನಿವಾರಿಣಿ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಗಜಲಕ್ಷ್ಮೀ ಸದಾ ಪಾಲಯಮಾ೦||೭||

೮) ಸ೦ತಾನಲಕ್ಷ್ಮೀ –
ಅಯಿಖಗವಾಹಿನಿ ಮೋಹಿನಿ ಚಕ್ರಿಣಿ ರಾಗವಿವರ್ಧಿನಿ ಜ್ಜಾನಮಯೇ|
ಗುಣಗಣವಾರಿಧಿ ಲೋಕಹಿತೈಷಿಣಿ ಶಬ್ದವಿಭೂಷಿಣಿ ಗಾನನುತೇ|
ಸಕಲ ಸುರಾಸುರ ದೇವಮುನೀಶ್ವರ ಮಾನಸ ವ೦ದಿತ ಪಾದಯುತೇ|
ಜಯ ಜಯ ಹೇ ಮಧುಸೂದನ ಕಾಮಿನಿ ಸ೦ತಾನಲಕ್ಷ್ಮೀ ಸದಾ ಪಾಲಯಮಾ೦||೮||

Comments

Post a Comment

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ