ಅಂಧಕಾಸುರ ವಧೆ

ಅಂಧಕಾಸುರ ಎನ್ನುವ ಒಬ್ಬ ರಾಕ್ಷಸನು ಅಸುರೀ ವಂಶದಲ್ಲಿ ಹುಟ್ಟುತ್ತಾನೆ.ಆದರೆ ಆತ ಅನಾಥನಾಗಿರುವ ಕಾರಣ ಆಸುರ ರಾಜನಾದ ಹಿರಣ್ಯಾಕ್ಷನು ಆತನನ್ನು ದತ್ತು ತೆಗೆದುಕೊಂಡು ಪೋಷಿಸುತ್ತಾನೆ.ಹಿರಣ್ಯಾಕ್ಷ ನ ಮರಣಾನಂತರ ಅಂಧಕಾಸುರ ಪಟ್ಟಕ್ಕೆ ಬರುತ್ತಾನೆ.ಆದರೆ ತನ್ನ ಬಂಧುಗಳು ತನ್ನ ಹತ್ಯೆಗೆ ಮುಂದಾಗಿರುವುದನ್ನು ತಿಳಿದು,ರಾಜ್ಯವನ್ನೇ ಬಿಟ್ಟರು ಕಾಡಿಗೆ ತಪಸ್ಸಿಗೆ ತೆರಳುತ್ತಾನೆ.
ಅಲ್ಲಿ ಲಕ್ಷಾಂತರ ವರುಷಗಳ ವರೆಗೆ ಒಂಟಿ ಕಾಲಲ್ಲಿ ನಿಂತು ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾನೆ.ಇದರಿಂದ ಸುಪ್ರೀತನಾದ ಬ್ರಹ್ಮ ಪ್ರತ್ಯಕ್ಷನಾಗಿ ವರ ಕೇಳುವಂತೆ ತಿಳಿಸಿದಾಗ ತನಗೆ ಮರಣವೇ ಬರಬಾರದೆಂದೂ,ಒಂದು ವೇಳೆ ತಾನು ತನ್ನ ತಾಯಿಯ ಮೇಲೆಯೇ ಕೆಟ್ಟ ಕಣ್ಣು ಹಾಕಿದಾಗ ಮಾತ್ರ ತನಗೆ ಮರಣ ಬರಬೇಕೆಂದು ಪ್ರಾರ್ಥಿಸುತ್ತಾನೆ.ಬ್ರಹ್ಮ ಅಂತೆಯೇ ವರ ನೀಡುತ್ತಾನೆ.
ಅಂಧಕಾಸುರ ತನ್ನ ರಾಜ್ಯಕ್ಕೆ ಮರಳುತ್ತಾನೆ ಮತ್ತು ಲೋಕಕಂಟಕನಾಗಿ ಬದಲಾಗುತ್ತಾನೆ.ಒಮ್ಮೆ ಶಿವ-ಪಾರ್ವತಿಯರು ಭೂಲೋಕದಲ್ಲಿ ವಿಹರಿಸುತ್ತಿದ್ದಾಗ ಅವರನ್ನು ಅಂಧಕಾಸುರನ ಭಟರು ನೋಡುತ್ತಾರೆ ಮತ್ತು ಅಂಧಕಾಸುರನಿಗೆ ಸುದ್ದಿ ತಿಳಿಸುತ್ತಾರೆ.ಅಂಧಕಾಸುರನು ಪಾರ್ವತಿಯ ರೂಪಕ್ಕೆ ಮನಸೋತು ಆಕೆಯನ್ನು ತನಗೆ ಕೊಡುವಂತೆ ಶಿವನನ್ನು ಪೀಡಿಸುತ್ತಾನೆ.ಆದರೆ ಶಿವ ಒಪ್ಪುವುದಿಲ್ಲ.
ಇದರಿಂದ ಸಿಟ್ಟಿಗೆದ್ದ ಅಂಧಕಾಸುರ ಶಿವನ ಮೇಲೆ ಯುದ್ಧ ಸಾರುತ್ತಾನೆ .ಮಿಲಿಯಗಟ್ಟಲೆ ವರುಷ ಯುದ್ಧ ನಡೆಯುತ್ತದೆ .ಕೊನೆಗೆ ಶಿವನು ತನ್ನ ತ್ರಿಶೂಲದಿಂದ ಆತನನ್ನು ಸಂಹರಿಸುತ್ತಾನೆ.ಹೀಗೆ ತನ್ನ ತಾಯಿಯಾದ ಪಾರ್ವತಿಯ ಮೇಲೆಯೇ ಕೆಟ್ಟ ಕಣ್ಣು ಹಾಕಿ ತನ್ನ ಸಾವಿಗೆ ತಾನೇ ಕಾರಣನಾಗುತ್ತಾನೆ.

ಅಂಧಕಾಸುರನೆಂಬ ಕಾಮವನ್ನು ಜ್ಞಾನವೆಂಬ ಶಿವನೇ ಸುಡಲಿ...

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ