ಗೋದಾಸ್ತುತಿಃ (ಸಂಗ್ರಹ) - 10

ತಾತಸ್ತುತೇ ಮಧುಭಿದಃ ಸ್ತುತಿಲೇಶವಸ್ಯಾತ್
ಕರ್ಣಾಮೃತೈಃ ಸ್ತುತಿಶತೈರನವಾಪ್ತಪೂರ್ವಮ್ |
ತ್ವನ್ಮೌಳಿಗಂಧಸುಭಗಾಮುಪಹೃತ್ಯಮಾಲಾಂ
ಲೇಭೇಮಹತ್ತರಪದಾನುಗುಣಂ ಪ್ರಸಾದಮ್ ||10||

(ಎಲೈ ಗೋದಾದೇವಿಯೇ) ತೇ = ನಿನ್ನ,
ತಾತ = ತಂದೆಯಾದ ವಿಷ್ಣು ಚಿತ್ತರಾದರೋ,
ಸ್ತುತಿಲೇಶವಶ್ಯಾತ್ = ಅತ್ಯಲ್ಪವಾಗಿ ಸ್ತುತಿಸುವುದರಿಂದಲೇ ವಶನಾಗುವ,
ಮಧುಭಿದಃ = ಮಧುಸೂದನನಿಂದ,
ಕರ್ಣಾಮೃತೈಃ = (ಅವನ) ಕಿವಿಗಳಿಗೆ ಅಮೃತಪ್ರಾಯವಾದ,
ಸ್ತುತಿಶತೈಃ = ನೂರಾರು ಸ್ತೋತ್ರರೂಪವಾದ ಪದ್ಯಮಾಲಿಕೆಗಳನ್ನು ಹಾಡುವಿಕೆಯಿಂದಲೂ,
ಪೂರ್ವಂ = ಮೊದಲು,
ಅನವಾಪ್ತ = ಹೊಂದದಿದ್ದ,
ಮಹತ್ತರಪದಾನುಗುಣಂ = ಪೆರಿಯಾಳ್ವಾರೆಂಬ ಅತಿ ಮಹತ್ವದಿಂದ ಕೂಡಿದ ಪದವಿಯನ್ನು ಪಡೆಯಲು ಅನುಗುಣವಾದ,
ಪ್ರಸಾದಂ = ಅನುಗ್ರಹವನ್ನು,
ತ್ವನ್ಮೌಳಿ = ನಿನ್ನ ಮುಡಿಯ,
ಗಂಧ=ಪರಿಮಳದಿಂದ,
ಸುಭಗಾಂ = ಸುಂದರವಾದ,
ಮಾಲಾಂ = (ನೀನು ಮುಡಿದು ಕೊಟ್ಟ) ಮಾಲಿಕೆಯನ್ನು,
ಉಪಹೃತ್ಯ = ರಂಗನಾಥನಿಗೆ ತಂದುಕೊಟ್ಟು,
ಲೇಭೇ = ಪಡೆದರು.

    ಎಲೈ! ಗೋದಾದೇವಿಯೇ, ನಿನ್ನ ತಂದೆಯಾದ ವಿಷ್ಣುಚಿತ್ತರಾದರೋ, ಅತ್ಯಲ್ಪವಾದ ಸ್ತುತಿಗಳಿಗೆ ವಶನಾಗುವ ಆ ಮಧುಸೂದನನಿಂದ, ಅವನನ್ನು ಅವನ ಕಿವಿಗಿಂಪಾಗಿ ಅಮೃತಪ್ರಾಯವಾದ ನೂರಾರು ಪದ್ಯಗಳಿಂದ ಸ್ತುತಿಯೂ ಹಿಂದೆ (ಯಾವ ಒಬ್ಬ ಆಳ್ವಾರರೂ) ಪಡೆಯದಿದ್ದ 'ಪೆರಿಯಾಳ್ವಾರ್' ಎಂಬ ಮಹತ್ತರವಾದ ಪದವಿಯನ್ನು ಪಡೆಯಲು ಅನುಗುಣವಾದ, ಅವನ ಅನುಗ್ರಹವನ್ನು, ನಿನ್ನ ಮುಡಿಯ ಸಂಸರ್ಗದಿಂದ ಪರಿಮಳಗೊಂಡು ಮಹತ್ತ್ವದಿಂದ ಕೂಡಿದ, ನೀನು ಮುಡಿದುಕೊಟ್ಟ ಮಾಲಿಕೆಗಳನ್ನು ರಂಗನಾಥನಿಗೆ ತಂದುಕೊಟ್ಟುದುದರಿಂದ ಪಡೆದರು.


Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ