ಗೋದಾಸ್ತುತಿಃ (ಸಂಗ್ರಹ) - 11

ದಿಕ್‌ದಕ್ಷಿಣಾಪಿ ಪರಿಪಕ್ತ್ತಿಮ ಪುಣ್ಯಲಭ್ಯಾತ್
ಸರ್ವೋತ್ತರಾಭವತಿ ದೇವಿ ತವಾವತಾರಾತ್ |
ಯತ್ರೈವ ರಂಗಪತಿನಾ ಬಹುಮಾನಪೂರ್ವಂ
ನಿದ್ರಾಳುನಾಪಿ ನಿಯತಃ ನಿಹಿತಾಃ ಕಟಾಕ್ಷಾಃ ||11||

ದೇವಿ! = ಎಲೈ! ಗೋದಾದೇವಿಯೇ,
ದಕ್ಷಿಣಾದಿಕ್ ಅಪಿ = (ಯಾವ ಸುಭಕೆಲಸಗಳಿಗೂ ಅರ್ಹತೆಯಿಲ್ಲದ) ದಕ್ಷಿಣ ದಿಕ್ಕಾದರೋ,
ಪರಿಪಕ್ತ್ರಿಮ = ಪಕ್ವವಾದ,
ಪುಣ್ಯಲಭ್ಯಾತ್ = ಪುಣ್ಯಫಲಗಳನ್ನು ಹೊಂದಿದುದರಿಂದ
ತವ = ನಿನ್ನ,
ಅವತಾರಾತ್ = ಅವತಾರವು ಆ ದಿಕ್ಕಿನಲ್ಲಾದುದರಿಂದ,
ಸರ್ವೋತ್ತರಾ = ಎಲ್ಲ ದಿಕ್ಕುಗಳಿಗಿಂತಲೂ ಮೇಲ್ಮೈಯುಳ್ಳದುದಾಗಿ (ಉತ್ತರದಿಕ್ಕಿಗಿಂತಲೂ ಮಹತ್ವ ಉಳ್ಳದುದಾಗಿ),
ಭವತಿ = ಆಗಿದೆ,
ಯತ್ರೈವ = ಯಾವ ನಿನ್ನ ಅವತಾರವಾದ ದಕ್ಷಿಣ ದಿಕ್ಕಿನಲ್ಲಾದರೋ,
ನಿದ್ರಾಳುನಾ = ಉಭಯ ವಿಭೂತಿಗಳ ರಕ್ಷಣೆಯನ್ನು ಚಿಂತಿಸುತ್ತಾ ನಿದ್ರಿಸುವವನಂತಿರುವ,
ರಂಗಪತಿನಾ ಅಪಿ = ಶ್ರೀರಂಗನಾಥನಿಂದಲೂ,
ಬಹುಮಾನಪೂರ್ವಂ = ಅತ್ಯಾದರದಿಂದ,
ನಿಹಿತಾಃ = ಬೀರುವ,
ಕಟಾಕ್ಷಾಃ = ವೀಕ್ಷಣೆಯಾದರೋ,
ನಿಯತಃ = ಕಟ್ಟಲ್ಪಟ್ಟಿದೆ.

    ಎಲೈ! ಗೋದಾದೇವಿಯೇ, "ಪ್ರಾಚೀನಮುದೀಚೀನಂಮೇಧ್ಯಂ ಪ್ರತೀಚೀನಂದಕ್ಷಿಣಾಮೇಧ್ಯಂ" ಎಂದು ಶ್ರುತಿಯಲ್ಲೇ ಅಪವಿತ್ರವೆಂದು ಪ್ರತಿಪಾದಿತವಾಗಿ, ಶುಭಕೆಲಸಗಳಿಗೆ ಅನರ್ಹವಾದ ದಕ್ಷಿಣದಿಕ್ಕದರೋ ತನ್ನ ಪರಿಪಕ್ವವಾದ ಪುಣ್ಯಫಲದಿಂದ, ನೀನು ಆ ದಿಕ್ಕಿನಲ್ಲಿ ಅವತರಿಸುವಂತಾದುದರಿಂದ, ಎಲ್ಲ ದಿಕ್ಕುಗಳಿಗಿಂತಲೂ ಮೇಲ್ಮೈಯನ್ನು ಪಡೆಯಿತು ಅದೇನೆಂದರೆ, ಶ್ರೀರಂಗಕ್ಷೇತ್ರದಲ್ಲಿ ಬಿಜಯಮಾಡಿಸಿರುವ ರಂಗನಾಥನಾದರೋ ಆದಿಶೇಷನ ಮೇಲೆ ಮಲಗಿಕೊಂಡು ತನ್ನ ಉಭಯ ವಿಭೂತಿಗಳ ರಕ್ಷಣೆಯ ಚಿಂತನೆ ಮಾಡುತ್ತಾ ನಿದ್ರಿಸುವಂತಿದ್ದರೂ ನಿನ್ನ ಅವತಾರ ಸ್ಥಳವಾದ ಶ್ರೀ ವಿಲ್ಲಿಪುತ್ತೂರಿರುವ ದಕ್ಷಿಣ ದಿಕ್ಕಿಗೆ ತಿರುಗಿ ಮಲಗಿ ತನ್ನ ಕಟಾಕ್ಷವನ್ನು ಬೀರುತ್ತಿದ್ದಾನೆ ಈ ರೀತಿಯಾದ ಭಗವಂತನ ಕಟಾಕ್ಷವನ್ನು ಪಡೆಯುವ ಭಾಗ್ಯವೆಂಬ ಮೇಲ್ಮೈ ಬೇರೆ ಯಾವ ದಿಕ್ಕಿಗೂ ಸಿಗಲಿಲ್ಲ ಇದು ಕೇವಲ ನಿನ್ನ ಅವತಾರದಿಂದಲೇ ದಕ್ಷಿಣ ದಿಕ್ಕಿಗೆ ಬಂದ ಭಾಗ್ಯವಿಶೇಷವು.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ