ಗೋದಾಸ್ತುತಿಃ (ಸಂಗ್ರಹ) - 9

ಮಾತಃ ಸಮುತ್ಥಿತಮತೀಮಧಿವಿಷ್ಣುಚಿತ್ತಂ
ವಿಶ್ವೋಪಜೀವ್ಯಮಮೃತಂ ವಚಸಾ ದುಹಾನಾಮ್ |
ತಾಪಚ್ಛಿದಂ ಹಿಮರುಚೇರಿವ ಮೂರ್ತಿತಮನ್ಯಾಂ
ಸನ್ತಃ ಪಯೋಧಿದುಹಿತುಃ ಸಹಜಾಂ ವಿದುಸ್ತ್ವಾಮ್ ||9||

ಮಾತಃ = ಎಲೈ! ತಾಯಿಯೇ!
ಅಧಿವಿಷ್ಣುಚಿತ್ತಂ = ವಿಷ್ಣುಚಿತ್ತರನ್ನಾಶ್ರಯಿಸಿ (ಅವರ ಮನೆಯಲ್ಲಿ),
ಸಮುತ್ಥಿತವತೀಂ = ಅವತರಿಸಿ ತೋರಿಕೊಂಡ,
ವಿಶ್ವೋಪಜೀವ್ಯಂ = ಯಾವ ಭೇದಭಾವವೂ ಇಲ್ಲದೆ ಪ್ರಪಂಚದಲ್ಲಿನ ಎಲ್ಲ ಚೇತನರೂ ಉಜ್ಜೀವಿಸಲು (ಮಾಡಲೇಬೇಕಾದ 'ಶರಣಾಗತಿ' ಎಂಬ),
ಅಮೃತಂ = ಜನ್ಮಪುರಣರಾಹತ್ಯವನ್ನುಂಟುಮಾಡುವ ಅಮೃತಪ್ರಾಯವಾದ ಉಪಾಯಾನುಷ್ಠಾನಕ್ರಮವನ್ನು,
ವಚಸಾ = ಮಾತಿನಿಂದ (ನಿನ್ನ ಶ್ರೀ ಸೂಕ್ತಿಗಳಿಂದ),
ದುಹಾನಾಮ್ = ಕರೆದ (ಪ್ರಕಾಶಪಡಿಸಿದ),
ತಾಪಚ್ಛಿದಂ = ತಾಪವನ್ನು ಹೋಗಲಾಡಿಸುವ,
ಹಿಮರುಚೇಃ = ಶೀತಕಾರಣನಾದ ಚಂದ್ರನ,
ಅನ್ಯಾಂ = ಬೇರೊಂದು,
ಮೂರ್ತಿಮಿವ = ಮೂರ್ತಿಯಂತಿರುವ,
ತ್ವಾಂ = ನಿನ್ನನ್ನು,
ಸನ್ತಃ = ಸತ್ಪುರುಷರು,
ಪಯೋಧಿದುಹತುಃ = ಸಮುದ್ರರಾಜನ ಮಗಳಾದ ಮಹಾಲಕ್ಷ್ಮಿಯ,
ಸಹಜಾಂ = ಜೊತೆಯಲ್ಲಿಯೇ ಹುಟ್ಟಿದವಳೆಂದು,
ವಿದುಃ = ತಿಳಿದಿದ್ದಾರೆ.

    ವಿಷ್ಣುಚಿತ್ತರ ಮನೆಯಲ್ಲಿ ಅವತರಿಸಿದ ಗೋದಾದೇವಿಯಾದರೋ, ಪ್ರಪಂಚದಲ್ಲಿನ ಎಲ್ಲ ಚೇತನರೂ ಉಜ್ಜೀವಿಸಿ ಪರಿಪೂರ್ಣ ಬ್ರಹ್ಮಾನಂದವನ್ನು ಪಡೆಯಲು ಮಾಡಲೇಬೇಕಾದ, ಅತಿ ಸುಲಭವಾಗಿಯೂ ಸುಕರವಾಗಿಯೂ ಇರುವ 'ಶರಣಾಗತಿ' - ಎಂಬ ಉಪಾಯ ಮತ್ತು ಅದರ ಅನುಷ್ಠಾನಕ್ರಮವನ್ನು ತನ್ನ ಶ್ರೀ ಸೂಕ್ತಿಗಳ ಮುಖಾಂತರ ಪ್ರಕಾಶಪಡಿಸಿದ್ದಾಳೆ. ಈ ಶರಣಾಗತ್ಯನುಷ್ಠಾನದಿಂದ ಆಧಿಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕವೆಂಬ ತಾಪತ್ರಯಗಳೂ ನೀಗಿ ಶರಣಾಗತನಾದ ಚೇತನನು ಸಂತೋಷದಿಂದಿರುತ್ತಾನೆ. ಹಿಂದೊಮ್ಮೆ ದೇವಾಸುರರು ಅಮೃತವನ್ನು ಪಡೆಯಲು ಜಲಧಿಮಥನವನ್ನು ಮಾಡುವಾಗ ಮಹಾಲಕ್ಷ್ಮಿಯು ಉತ್ಪನ್ನಳಾದ ಬಳಿಕ ಶೀತಕಿರಣನಾದ ಚಂದ್ರನೂ ಉತ್ಪನ್ನನಾದನು ಎಲ್ಲರ ತಾಪವನ್ನೂ ಹೊಗಲಾಡಿಸುವ ಮಹಾಲಕ್ಷ್ಮಿಯ ಉತ್ಪನ್ನಳಾದ ಬಳಿಕ ಅದೇ ಗರ್ಭದಿಂದಲೇ ಚಂದ್ರನೂ ಉತ್ಪನ್ನನಾದುದರಿಂದಲೇ, ಚಂದ್ರನು ಆಕೆಗೆ ತಮ್ಮನೆಂದೂ ಮತ್ತು ಅವಳ ತಾಪಹಾರಕವಾದ ಗುಣ ಇವನಲ್ಲಿಯೂ ಸಂಕ್ರಾಂತವಾಗಿ ಲೋಕದಲ್ಲಿ ದುಃಖದಿಂದಿರುವ ವ್ಯಕ್ತಿಗಳು ಚಂದ್ರನನ್ನು ನೋಡಿದಾಗ, ಅವರ ದುಃಖವನ್ನು ದೂರ ಮಾಡಿ ಅವರಿಗೆ ಆಹ್ಲಾದವನ್ನುಂಟುಮಾಡಿತ್ತಾನೆ. ಈ ರೀತಿಯಾಗಿ ಚಂದ್ರನು ಮಹಾಲಕ್ಷ್ಮಿಯ ಸಹೋದರನಾದ ಮಾತ್ರದಿಂದಲೇ ಲೌಕಿಕವಾದ ತಾಪವನ್ನು ತಾತ್ಕಾಲಿಕವಾಗಿ ಹೋಗಲಾಡಿಸಿದರೆ ಗೋದೆಯಾರೋ ತನ್ನ ಶ್ರೀ ಸೂಕ್ತಿಯ ಮುಖಾಂತರ, ಲೋಕದಲ್ಲಿನ ಎಲ್ಲ ಚೇತನರ ಸರ್ವವಿಧವಾದ ತಾಪತ್ರಯಗಳನ್ನೂ ಮುಂದೆಂದೂ ತಲೆಯೆತ್ತದಂತೆ ಕಿತ್ತೊಗೆದು, ಅನಂತವಾದ ಆನಂದವನ್ನನುಗ್ರಹಿಸುವವಳಾದುದರಿಂದ, ಈಕೆಯೂ ಸಮುದ್ರ ರಾಜನ ಮುಳಾದ ಮಹಾಲಕ್ಷ್ಮಿಯ ತಂಗಿ (ಸಹೋದರಿ)ಯೇ ಆಗಿರುತ್ತಾಳೆ ಎಂದು ಮಹಾತ್ಮರು ತಿಳಿಯುತ್ತಾರೆ

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ