ಗೋದಾಸ್ತುತಿಃ (ಸಂಗ್ರಹ) - 4

ಕೃಷ್ಣಾನ್ವಯೇನ ದಧತೀಂ ಯಮುನಾನುಭಾವಂ
ತೀರ್ಥೈರ್ಯಥಾವದವಗಾಹ್ಯ ಸರಸ್ವತೀಂ ತೇ |
ಗೋದೇ ವಿಕಸ್ವರಧಿಯಾಂ ಭವತೀ ಕಟಾಕ್ಷಾತ್
ವಾಚಃ ಸ್ಫುರಂತಿ ಮಕರಂದಮುಚಃ ಕವೀನಾಮ್ ||4||

ಗೋದೇ= ಎಲೈ! ಗೋದಾದೇವಿಯೇ,
ಕೃಷ್ಣಾನ್ವಯೇನ = ಕೃಷ್ಣನ ಸಂಬಂಧದಿಂದ ಕೂಡಿದ,
ತೀರ್ಥೈಃ = ತೀರ್ಥದಿಂದ ಕೂಡಿದ,
ಯಮುನಾನು ಭಾವಂ = ಯಮುನೆಯ ಅನುಭವವನ್ನು ಹೊಂದಿರುವ,
ತೇ = ನಿನ್ನ,
ಸರಸ್ವತೀಂ = ಮಾತಿನಲ್ಲಿ,
ತೀರ್ಥೈ = ಆಚಾರ್ಯಾದಿಗಳಿಂದ ಕಾಲಕ್ಷೇಪ ಮಾಡಿ,
ಯಥಾವತ್ = ನೀನು ಹೇಳಿರುವಂತೆಯೇ,
ಅವಗಾಹ್ಯ = ಮುಳುಗಿ,
ಭವತೀ = ನಿನ್ನ,
ಕಟಾಕ್ಷಾತ್ = ವೀಕ್ಷಣದಿಂದ,
ವಿಕಸ್ವರಧಿಯಾಂ = ಅರಳಿದ ಬುದ್ಧಿಯಿಂದ (ವಿಕಸಿತವಾದ ಜ್ಞಾನದಿಂದ) ಕೂಡಿದ,
ಕವೀನಾಂ = ಕವಿಗಳ,
ವಾಚಃ = ಮಾತಾದರೋ,
ಮಕರಂದಮುಚಃ = ಮಧುವನ್ನು ಸ್ರವಿಸುತ್ತಿರುವದಾಗಿ,
ಸ್ಫುರಂತಿ = ಪ್ರಕಾಶಿಸುತ್ತಿದೆ.

    ಯಾವ ವಸ್ತುವೇ ಆಗಲೀ, ತಾನೂ ಜನ್ಮಮರಣ ಚಕ್ರದಿಂದ ಕೂಡಿದ ಸಂಸಾರ ಸಾಗರವನ್ನು, ಸ್ವತಃ ದಾಟುವ ಸಾಮರ್ಥ್ಯವನ್ನು ಹೊಂದಿರುವುದೇ ಅಲ್ಲದೆ ಮತ್ತೊಬ್ಬರನ್ನೂ ಸುಲಭವಾಗಿ ದಾಟಿಸುವಂತಹ ಸಾಮರ್ಥ್ಯವನ್ನು ಹೊಂದಿದ್ದರೆ ಆ ವಸ್ತುವನ್ನು - 'ತೀರ್ಥವೆನ್ನುತ್ತಾರೆ ಯಮುನಾನದಿಯ ಜಲದಲ್ಲಿ ಶ್ರೀಕೃಷ್ಣನು ತನ್ನ ಜಲಕ್ರೀಡೆ, ರಾಸಕ್ರೀಡೆಗಳನ್ನು ಆಡುತ್ತಿದ್ದನು ಆಗ ಇವನ ದಿವ್ಯದೇಹದ ಸಂಬಂಧದಿಂದ ಆ ಜಲವು ತೀರ್ಥವಾಯಿತು ಈ ರೀತಿಯಾದ ತೀರ್ಥದಿಂದ ತುಂಬಿರುವುದರಿಂದ ಯಮುನಾನದಿಗೇ ಒಮದು ಮಹತ್ವವೇರ್ಪಟ್ಟಿತು ಇದರಿಂದಲೇ ಕೃಷ್ಣಾನುಭವ ಮಾಡುವ ಭಾಗ್ಯವೂ ಲಭಿಸಿತು ಅಂತೆಯೇ ಗೋದಾದೇವಿಯು ಹಾಡಿಕೊಟ್ಟಿರುವ ಪದ್ಯಗಳಲ್ಲಿಯೂ ಶ್ರೀಕೃಷ್ಣನ ದಿವ್ಯವಾದ ಕಲ್ಯಾಣಗುಣಗಳ ವರ್ಣಗಳು ತುಂಬಿರುವುದರಿಂದ ತೀರ್ಥತ್ವವನ್ನು ಹೊಂದಿ (ಓದುಗರಿಗೆ) ಕೃಷ್ಣಾನುಭವವುಂಟುಮಾಡುತ್ತದೆ ನಮ್ಮನ್ನು ಸಂಸಾರದಿಂದ ದಾಟಿಸುವ ಸಾಮರ್ಥ್ಯವುಳ್ಳ ತೀರ್ಥ ಶಬ್ದ ವಾಚ್ಯರಾದ ಆಚಾರ್ಯರ ಕಾಲಕ್ಷೇಪಗಳಿಂದ ಗೋದೆಯ ಪದ್ಯಮಾಲಿಕೆಗಳೆಂಬ ತೀರ್ಥದಲ್ಲಿ ಇಳಿದು ಸ್ನಾನಮಾಡಿದ ಕವಿಗಳಾದರೋ ಗೋದೆಯ ವಿಶೇಷವಾದ ಕಟಾಕ್ಷದಿಂದ ಸಂಕುಚಿತವಾದ ಅವರ ಜ್ಞಾನವು ವಿಕಸಿತವಾಗಿ ಪರಮಾತ್ಮನನ್ನೂ ಮತ್ತು ತಾಯಿಯನ್ನೂ ನೋಡಿ ಅವರ ಕಲ್ಯಾಣ ಗುಣಗಳನ್ನು ಹಾಡುತ್ತಾರೆ ಆಗ ಕೇವಲ ಪ್ರಾಕೃತವಾದ ವಸ್ತುವನ್ನು ವರ್ಣಿಸುವ ಕವಿಗಳ ವಾಣಿಯಂತಿಲ್ಲದೆ ಇವರ ವಾಣಿಯು ಪರಮಾತ್ಮನ ಕಲ್ಯಾಣ ಗುಣವೆಂಬ ಮಕರಂದವನ್ನು ಸ್ರವಿಸುವುದಾಗಿ ಪ್ರಕಾಶಿಸುತ್ತದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ