ಗೋದಾಸ್ತುತಿಃ (ಸಂಗ್ರಹ) - 5

ಅಸ್ಮಾದೃಶಾಮಪಕೃತೌ ಚಿರದೀಕ್ಷಿತಾನಾಂ
ಅಹ್ನಾಯ ದೇವಿ ದಯತೇ ಯದಸೌ ಮುಕುಂದಃ |
ತನ್ನಿಶ್ಚಿತಂ ನಿಯಮಿತಃ ತಪಮೌಳಿದಾಮ್ನಾ
ತಂತ್ರೀನಿನಾದಮಧುರೈಶ್ಚಗಿರಾಂ ನಿಗುಮ್ಭೈಃ ||5||

ದೇವಿ = ಎಲೈ! ಗೋದಾದೇವಿಯೇ,
ಯತ್ = ಯಾವ,
ಅಪಕೃತೌ = ಅಪಚಾರವನ್ನೆಸಗುವದರಲ್ಲಿಯೇ,
ಚಿರದೀಕ್ಷಿತಾನಾಂ = ಚಿರಕಾಲದಿಂದ ದೀಕ್ಷಾ ಬದ್ಧರಾಗಿರುವ,
ಅಸ್ಮಾದೃಶಾಂ = ನಮ್ಮ ವಿಷಯದಲ್ಲಿಯೂ
ಅಸೌ = ಈ ದಂಡಧರನಾದ,
ಮುಕುಂದಃ = ಶ್ರೀಯಃಪತಿಯು,
ಅಹ್ನಾಯ = ಕೂಡಲೆ (ಇದ್ದಕ್ಕಿದ್ದ ಹಾಗೆ)
ದಯತೆ = ದಯೆ ತೋರುತ್ತಾನೆಯೋ,
ತತ್ = ಅದಾದರೋ,
ನಿಶ್ಚಿತಂ = ನಿಶ್ಚಯವಾಗಿಯೂ,
ತವ = ನಿನ್ನ,
ಮೌಳಿದಾಮ್ನಾ = ಮುಡಿಯಲ್ಲಿ ಮುಡಿದಿದ್ದ ಪುಷ್ಪಮಾಲಿಕೆಯಿಂದಲೂ,
ಚ = ಮತ್ತು,
ಗಿರಾಂ = ನಿನ್ನ ಮಾತಿನ,
ವೀಣೇಯ ಧ್ವನಿಯಂತೆ ಇಂಪಾಗಿರುವ,
ನಿಗುಂಭೈಃ = ಕೂಡಿ ಸಲ್ಪಟ್ಟಿರುವ ಶಬ್ದಗಳಿಂದಲೂ,
ನಿಯಮಿತಃ = ಕಟ್ಟುಹಾಕಲ್ಪಟ್ಟಿರುವನಾಗಿರುವುದರಿಂದಲೇ (ಆದುದು).

    ಪರಮಾತ್ಮನು ದಂಢಧರ, ಚೇತನರು ಮಾಡುವ ಪುಣ್ಯಪಾಪ ಕರ್ಮಗಳಿಗನುಗುಣವಾಗಿ ಅವರಿಗೆ ಫಲವನ್ನು ನೀಡುವನು ಹೀಗಿರುವಲ್ಲಿ ಅನಾದಿ ಕಾಲದಿಂದ ನಾನಾ ರೀತಿಯಾದ ಭಗವಂತನ ನಿಗ್ರಹಕ್ಕೆ ಪಾತ್ರರಾಗುವ ನಿರಂತರವಾದ ಕೆಟ್ಟ ಕೆಲಸಗಳನ್ನೇ ಮಾಡುತ್ತಿರುವ ನಾವು ಪರಮಾತ್ಮನನ್ನು ನಮಸ್ಕರಿಸಲು ಹೋದಾಗ, ಆ ಪರಮಾತ್ಮನು - ಗೋದೆಯ ಅವತಾರ ಕಾಲದಲ್ಲಿಯೇ ಅವಳು ಮುಡಿದುಕೊಟ್ಟ ಮಾಲಿಕೆಯಲ್ಲಿ ವಿಶೇಷವಾದ ಆದರವನ್ನು ತೋರಿದವನು ಈಗಲೂ ಪಕ್ಕದಲ್ಲಿಯೇ ನಿಂತಿರುವ ಗೋದೆಯ ಮುಡಿಯಲ್ಲಿದ್ದ ಮಾಲಿಕೆಗಳ ಪರಿಮಳದ ಸೊಬಗನ್ನು ಅನುಭವಿಸುತ್ತಲೂ ಮತ್ತು ವೀಣೆಯ ಧ್ವನಿಯಂತೆ ಇಂಪಾದ ಶಬ್ಧಗಳನ್ನೇ ಕೂಡಿಸಿ ಮಾತಾಡುವ ಗೋದೆಯ ಮಾತಿಗೂ ಮನಸೋತು, ತಾನು ದಂಡಧರನೆಂಬುದನ್ನೂ ಮರೆತು, ತನ್ನಲ್ಲಿಗೆ ಬಂದಿರುವ ಸಾಪರಾಧನಾದ ಚೇತನನನ್ನೂ ಕರುಣೆಯಿಂದಲೇ ಕಟಾಕ್ಷಿಸಿ ಅನುಗ್ರಹಿಸುತ್ತಾನೆ.

    ಚೇತನರು ಎಷ್ಟೇ ಅಪರಾಧಗಳನ್ನೆಸಗಿದ್ದರೂ, ಗೋದೆಯು ತನ್ನ ಅವತಾರ ಕಾಲದಲ್ಲಿ, ಲಲಿತವಾದ ಮಧುರವಾದ ಪದಗಳನ್ನು ಕೂಡಿಸಿ ರಚಿಸಿ ಕೊಟ್ಟಿರುವ ಪದ್ಯಮಾಲಿಕೆಗಳನ್ನೂ,, ಭಗವಂತನಲ್ಲಿಗೆ ಹೋದಾಗ ಅನುಸಂಧಾನ ಮಾಡುತ್ತಲಿದ್ದರೆ ಆ ಗೋದೆಯ ಶ್ರೀ ಸೂಕ್ತಿಗಳ ಶ್ರವಣದಿಂದ ಮನಸೋತ ಪರಮಾತ್ಮನು ನಮ್ಮ ಅಪರಾಧವನ್ನು ಗಣನೆಗೇ ತೆಗೆದುಕೊಳ್ಳದೆ, ಅವನ ನಿಗ್ರಹಕ್ಕೆ ಪಾತ್ರರಾಗಬೇಕಾದ ನಮ್ಮನ್ನೂ ದಯೆಯಿಂದ ವೀಕ್ಷಿಸಿ ತನ್ನ ಅನುಗ್ರಹಕ್ಕೆ ಪಾತ್ರರನ್ನಾಗಿಸುತ್ತಾನೆ ಎಂಬ ಭಾವವೂ ಇಲ್ಲಿ ಧ್ವನಿತವಾಗುತ್ತದೆ. ಆದುದರಿಂದಲೇ ಪ್ರತಿನಿತ್ಯವೂ ಭಗವದಾರಾಧನದ ಕೊನೆಯಲ್ಲಿ 'ಶಾತ್ತುವೊರೈ' (ಮೊರೈ = ಪ್ರಾರ್ಥನೆಯನು, ಶಾತ್ತುವುದು = ವಿಜಾ ಪಿಸುವುದು) ಸಮಯದಲ್ಲಿ ಗೋದೆ ಹಾಡಿಕೊಟ್ಟಿರುವ ತಿರುಪ್ಪಾವೈ ಗ್ರಂಥದ ಕೊನೆಯ ಎರಡು ಪದ್ಯಗಳನ್ನು ಹಾಡುವುದು ನಮ್ಮ ಸಂಪ್ರದಾಯದಲ್ಲಿ ಬೆಳೆದುಕೊಂಡು ಬಂದಿದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ