ನಮಸ್ತೇ ರುದ್ರ 2

ಯಾ ತ ಇಷುಶ್ಯಿವತಮಾ ಶಿವಂ ಬಭೂವ ತೇ ಧನುಃ |
ಶಿವಾ ಶರವ್ಯಾ ಯಾ ತವ ತಯಾ ನೋ ರುದ್ರ ಮೃಡಯ ||2||

"ಎಲೈ ರುದ್ರನೆ, ಯಾವ ನಿನ್ನ ಹಿಂಸಾಕಾರಣವಾದ ಬಾಣವೂ ಧನುಸ್ಸೂ ಶಾಂತವಾದವೋ ಅವುಗಳಿಂದ ನಮ್ಮನ್ನು ಸುಖಗೊಳಿಸುವವನಾಗು"

    ಇಲ್ಲಿ ಭಕ್ತನು ಭಗವಂತನನ್ನು ತನಗೆ ಸುಖವನ್ನುಂಟುಮಾಡುವಂತೆ ಪ್ರಾರ್ಥಿಸುತ್ತಿದ್ದಾನೆ. "ಮೊದಲು ಪಾಪಿಷ್ಠನಾಗಿದ್ದ ನನ್ನ ವಿಷಯದಲ್ಲಿ ಎಲೈ ಭಗವಂತನೆ, ನೀನು ಧನುರ್ಬಾಣಗಳನ್ನು ಎತ್ತಿದ್ದೆಯಷ್ಟೆ! ಅನಂತರ ನನ್ನ ಪ್ರಾರ್ಥನೆಯನ್ನು ಮನ್ನಿಸಿ ಅವುಗಳನ್ನು ಶಾಂತಗೊಳಿಸಿರುತ್ತೀಯೆ. ಹೀಗೆ ಶಿವತಮವಾಗಿ ಮಾಡಲ್ಪಟ್ಟ ನಿನ್ನ ಬಾಣಗಳೂ ಧನುಸ್ಸೂ ನನಗೆ ಧೈರ್ಯವನ್ನುಂಟುಮಾಡಿವೆ. ಆದರೂ ಮುಂದೆಯೂ ಅವು ಎಂದೂ ನನ್ನನ್ನು ಭಯಗೊಳಿಸಿದಂತೆಯೂ ಅವೇ ನನಗೆ ಅಭಯವನ್ನುಂಟುಮಾಡುವಂತೆಯೂ ಮಾರ್ಪಡಿಸಿ ನನಗೆ ಸುಖವನ್ನುಂಟುಮಾಡು" ಎಂಬಿದು ಈ ಮಂತ್ರದ ಒಟ್ಟರ್ಥ. ಭಗವಂತನಿಗೆ 'ಮೃಡ' ಎಂಬ ಹೆಸರೂ ಇದೆ. ಸುಖವನ್ನುಂಟು ಮಾಡುವದರಿಂದಲೇ ಅವನನ್ನು 'ಮೃಡಯ' - ಎಂದು ಇಲ್ಲಿ ಬೇಡಿಕೊಂಡಿದೆ. ಧನುರ್ಬಾಣಗಳ ಕಡೆಯಿಂದ ಸುಖವುಂಟಾಗುವದು ಹೇಗೆ? ಎಂದರೆ ಅವುಗಳು ಪರಮೇಶ್ವರನ ಕೈಗಳಿಂದ ಕೆಳಕ್ಕೆ ಇಳಿಸಲ್ಪಡಲಾಗಿ ಅವುಗಳನ್ನು ನೋಡಿದರೂ ಭಯವಾಗುವದಿಲ್ಲ; ಆತಂಕವೂ ಕಡಿಮೆಯಾಗುತ್ತದೆ. ಆದ್ದರಿಂದ ಹಾಗಂತ ಪ್ರಾರ್ಥಿಸಿದೆ.

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ