ಅಹಂ ತೇಭ್ಯೋಕರಂ ನಮಃ - 4

ವಿಜ್ಯಂ ಧನುಃ ಕಪರ್ದಿನೋ ವಿಶಲ್ಯೋ ಬಾಣವಾಗ್ಂ ಉತ |
ಅನೇಶನ್ನಸ್ಯೇಷವ ಅಭುರಸ್ಯ ನಿಷಂಗಥಿಃ ||12

    ಕಪರ್ದಿಯಾದ (ಪರಮೇಶ್ವರನ) ಧನುಸ್ಸು ಜ್ಯಾ (ಹಗ್ಗ)ವಿಲ್ಲದ್ದಾಗಲೀ! ಬಾಣಗಳುಳ್ಳ (ಚೀಲವೂ) ವಿಶಲ್ಯ (ಬಾಣಗಳಿಲ್ಲದ್ದು)ವಾಲಿ! ಇವನ ಬಾಣಗಳು ಹೊಡೆಯುವದಕ್ಕೆ ತಕ್ಕದ್ದಲ್ಲದಂತಾಗಲಿ! ಮತ್ತು ಖಡ್ಗದ ಚೀಲವೂ ಅದನ್ನು ಧಾರಣೆಮಾಡುವಷ್ಟು ಮಾತ್ರ ಸಮರ್ಥವಾಗಲಿ!'


    ಈ ಮಂತ್ರದಲ್ಲಿ ಬಾಣಗಳು ಪರಾಙ್ಮುಖವಾದರೂ ಸಾಲದು. ಅವು ಮರೆಯಾಗಿಯೇ ಬಿಡಲಿ! ಎಂದು ಪ್ರಾರ್ಥಿಸಿದೆ ಏಕೆಂದರೆ ಬಾಣಗಳು, ಧನುಸ್ಸು, ಖಡ್ಗ - ಮುಂತಾದ ಆಯುಧಗಳನ್ನು ನೋಡಿದರೇ ಹೆದರಿಕೆಯಾಗುತ್ತದೆ ಇನ್ನು ಉಪಯೋಗಿಸುವಂಥವನ ಹತ್ತಿರದಲ್ಲಿಯೇ ಅವುಗಳು ಇದ್ದರಂತೂ ಮತ್ತಷ್ಟು ಭಯವು ಹೆಚ್ಚಾಗುತ್ತದೆ ಆದ್ದರಿಂದ ಅವು ನಮಗೆ ಕಾಣದಂತೆ ಮರೆಯಾಗಿಯೇ ಇರಲಿ - ಎಂದು ಕೇಳಿಕೊಳ್ಳಲಾಗಿದೆ. ಇನ್ನು ನಿಷಂಗಥಿ ಎಂಬ ಶಬ್ದದಿಂದ ಇಲ್ಲಿ ಖಡ್ಗವನ್ನಿಡುವ ಚೀಲವನ್ನು ಪ್ರಸ್ತಾಪಿಸಲಾಗಿದೆ ಅದನ್ನು ಅಭುಃ ಈಷತ್ಪ್ರಭುಃ ಅಸ್ತು - ಎಂದು ಕೇಳಲಾಗಿದೆ ಎಂದರೆ ಆ ಚೀಲವು ಪರಮೇಶ್ವರನಿಗೆ ತನ್ನ ಆಯುಧಗಳನ್ನಿಡಲು ಉಪಯೋಗವಾಗುವಷ್ಟು ಮಾತ್ರ ಸಾಕು ಅದರಿಂದ ಖಡ್ಗವನ್ನು ಹೊರಗೆಳೆಯುವ ಪ್ರಸಂಗವು ಬಾರದಂತೆ ಕೇವಲ ಅಲಂಕಾರವಾಗಿರಲಿ! ಎಂದಭಿಪ್ರಾಯ.

    ಆಯುಧಗಳನ್ನಿಟ್ಟುಕೊಂಡಮಾತ್ರದಿಂದ ಯಾವನೂ ಪರಮೇಶ್ವರನಿಗೆ ಸಮಾನನಾಗಲಾರನು ಏಕೆಂದರೆ ಯಾವಯಾವ ಆಯುಧಗಳನ್ನು ಹೇಗೆಹೇಗೆ ಎಷ್ಟರಮಟ್ಟಿಗೆ ಎಲ್ಲೆಲ್ಲಿ ಪ್ರಯೋಗಿಸಬೇಕೆಂಬುದು ಸರ್ವಜ್ಞನೂ ಸರ್ವಶಕ್ತನೂ ಆದ ಮಹಾದೇವನೊಬ್ಬನಿಗೇ ಗೊತ್ತಿರುತ್ತದೆ ಅಲ್ಲದೆ ಆಯುಧಗಳನ್ನು ಬಳಸುವ ಶಕ್ತಿಯೂ ಅವನೊಬ್ಬನಿಗೇ ಮಿಸಲಾಗಿದೆ ಇಂಥ ಶಸ್ತ್ರಧಾರಿಯು ಆತನು ಅಂತೂ ಈ ಮಂತ್ರಗಳಲ್ಲಿ ಆಯುಧಗಳ ಪ್ರಸ್ತಾಪವಿರುವದರಿಂದ ಭಗವಂತನ ಆಯುಧಗಳನ್ನು ಅವನ ಶಕ್ತಿಯ ಕುರುಹಾಗಿ ಭಾವಿಸಿ ಪೂಜಿಸಬೇಕೆಂದೂ ಏರ್ಪಡುತ್ತದೆ. ಮಹಾನವಮಿ ದಿನ ಮಾಡುವ ಆಯುಧ ಪೂಜೆಯ ರಹಸ್ಯವು ಇದೇ ಇರಬಹುದೆ?

Comments

Popular posts from this blog

'ಓಂ ಗಂ ಗಣಪತಯೇ ನಮಃ'

ಶ್ರೀಮದ್ವೇಂಕಟೇಶ ಮಹಾತ್ಮೇ ಶ್ರೀ ವೇಂಕಟೇಶ ಸ್ತೋತ್ರಂ

ಕನಕದಾಸರ ಮೋಹನತರಂಗಿಣಿ